“ಸುದ್ದಿ ವಾಹಿನಿಗಳು ಸತ್ಯವನ್ನು, ನಿಜವಾದ ಸುದ್ದಿಯನ್ನು ತೋರಿಸುವುದನ್ನು ನಿಲ್ಲಿಸಿವೆ. ಅವು ಕೇವಲ ಸುಳ್ಳು ಹೇಳುತ್ತಿವೆ. ಸತ್ಯವನ್ನು ತೋರಿಸದಿರುವುದು ಸಹ ಸುಳ್ಳಿಗೆ ಸಮ ಮತ್ತು ನಾನು ಈ ಸುಳ್ಳಿಗೆ ವಿರೋಧಿಯಾಗಿದ್ದೇನೆ, ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ….” ಇವು ABP ಚಾನೆಲ್ ಹಿರಿಯ ವರದಿಗಾರ ರಕ್ಷಿತ್ ಸಿಂಗ್ ರವರ ಮಾತುಗಳು.
ಇಂದು ಮೀರತ್ನಲ್ಲಿ ನಡೆಯುತ್ತಿದ್ದ ರೈತರ ಮಹಾಪಂಚಾಯತ್ನ ವೇದಿಕೆಯೇರಿ ಮಾತನಾಡಿದ ಅವರು ಸುದ್ದಿ ಚಾನೆಲ್ಗಳು ನಿಜವಾದ ಸುದ್ದಿಯನ್ನು ತೋರಿಸುತ್ತಿಲ್ಲ. ನಾನು ರೈತರ ಹೋರಾಟದ ಬಗ್ಗೆ ವರದಿ ಮಾಡಲು ಬಿಡುತ್ತಿಲ್ಲ ಎಂದು ತಮ್ಮ ಚಾನೆಲ್ಗೆ ರಾಜೀನಾಮೆ ನೀಡಿದ್ದಾರೆ.
Senior ABP News reporter resigns in the middle of Kisan Panchayat in UP. #FarmersProtest https://t.co/HHc5SyYhL6
— Mohammed Zubair (@zoo_bear) February 27, 2021
ರಕ್ಷಿತ್ ಸಿಂಗ್ರವರು ರೈತರ ಹೋರಾಟ ಬೆಂಬಲಿಸಿ ರಾಜೀನಾಮೆ ನೀಡಿದ್ದಕ್ಕೆ, ಮತ್ತು ರೈತ ಹೋರಾಟದ ಭಾಗವಾಗಿದ್ದಕ್ಕೆ ಟ್ವಿಟರ್ ನಲ್ಲಿ ಬಹಳಷ್ಟು ಜನ ಅವರನ್ನು ಅಭಿನಂದಿಸಿದ್ದಾರೆ.
#ABP news के रिपोर्टर #RakshitSingh के पिता का देहान्त 10 साल पहले हो गया। 12 लाख के सालाना पैकेज वाला रक्षित घर का अकेला कमाऊ सदस्य है। लेकिन रक्षित ने कवरेज से नाराज़ हो कर किसान महापंचायत में अपना इस्तीफ़ा दे दिया। रक्षित जैसी रीढ़ काश संपादकों/एंकर की भी होती। pic.twitter.com/ejZy4K6Cie
— Vinod Kapri (@vinodkapri) February 27, 2021
“ಎಬಿಪಿ ಸುದ್ದಿ ವರದಿಗಾರ ರಕ್ಷಿತ್ ಸಿಂಗ್ ಅವರ ತಂದೆ 10 ವರ್ಷಗಳ ಹಿಂದೆ ನಿಧನರಾದರು. 12 ಲಕ್ಷ ರೂ ವಾರ್ಷಿಕ ಪ್ಯಾಕೇಜ್ ಹೊಂದಿರುವ ಮನೆಯಲ್ಲಿ ದುಡಿಯುವ ಏಕೈಕ ಸದಸ್ಯ ರಕ್ಷಿತ್. ಆದರೆ ರಕ್ಷಿತ್ ತಮ್ಮ ಚಾನೆಲ್ನ ಪ್ರಸಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಿಸಾನ್ ಮಹಾಪಂಚಾಯತ್ನಲ್ಲಿ ರಾಜೀನಾಮೆ ನೀಡಿದರು. ರಕ್ಷಿತ್ ಅವರಂತಹ ಸಂಪಾದಕರು/ನಿರೂಪಕರು ಹೆಚ್ಚಾಗಲಿ ಎಂದು ಹಾರೈಸುತ್ತೇನೆ” ಎಂದು ನಿರ್ದೇಶಕ ವಿನೋದ್ ಕಪಾರಿಯವರು ಟ್ವೀಟ್ ಮಾಡಿದ್ದಾರೆ.
ABP news Reporter #RakshitSingh while doing media coverage of Farmers Mahapanchayat resigned from GodiMedia and decided to join #Farmersprotest. He said he was not allowed to show true news.
Salute to him. #MazdoorKisanEktaDiwas— ਅੰਦੋਲਣਜੀਵੀ-ਕਿਸਾਨ-ਦਿਉਲ ? (@Savekisaan) February 27, 2021
“ನನಗೆ 4 ವರ್ಷದ ಮಗು ಇದೆ. ಅವನು ಮುಂದೆ ದೊಡ್ಡವನಾದಾಗ, 20 ವರ್ಷ ವಯಸ್ಸಿನವನಾದಾಗ ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿಯಾಗಿದ್ದಾಗ ನೀವು ಎಲ್ಲಿದ್ದೀರಿ ಎಂದು ನನ್ನನ್ನು ಕೇಳಿದರೆ, ಆಗ ನಾನು ಸತ್ಯ ಮತ್ತು ರೈತರೊಂದಿಗೆ ಇದ್ದೆ ಎಂದು ಹೇಳಬಹುದು” ಎಂದು ರಕ್ಷಿತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಟಿಪ್ಪು ಜಯಂತಿ ಕುರಿತ ಟ್ವೀಟ್: ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ ವಿರುದ್ಧ ದೂರು ಪರಿಗಣಿಸಲು ಹೈಕೋರ್ಟ್ ಸೂಚನೆ
ಬಹುತೇಕ ಎಲೆಕ್ಟ್ರಾನಿಕ್ಸ್ ಮುಖ್ಯ ವಾಹಿನಿಯ ಮಾಧ್ಯಮಗಳು, ಸುಳ್ಳು ಹೇಳುವುದರ ಜೊತೆಗೆ ಆಡಳಿತಾರೂಢರನ್ನು ವಾಚಾಮಗೋಚರವಾಗಿ ಹೊಗಳುತ್ತಾ, ಆಸ್ತಾನ ವಿದೂಶಕರ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ.