Homeಅಂತರಾಷ್ಟ್ರೀಯನ್ಯೂಜಿಲೆಂಡ್: ಕೊರೊನಾ ವಿರುದ್ದದ ಸಮರದಲ್ಲಿ ಗೆಲುವಿನತ್ತ ದಾಪುಗಾಲು

ನ್ಯೂಜಿಲೆಂಡ್: ಕೊರೊನಾ ವಿರುದ್ದದ ಸಮರದಲ್ಲಿ ಗೆಲುವಿನತ್ತ ದಾಪುಗಾಲು

ಅಲ್ಲಿ ಕಳೆದ ಐದು ದಿನದಿಂದ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ ಹಾಗೂ ಪ್ರಸ್ತುತ ದೇಶದಲ್ಲಿ ಕೇವಲ 21 ಸೋಂಕಿತರಿದ್ದಾರೆ.

- Advertisement -
- Advertisement -

ನ್ಯೂಜಿಲೆಂಡ್‌ ದೇಶದಲ್ಲಿ ಸತತವಾಗಿ ಐದನೇ ದಿನ  ಶೂನ್ಯ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ನ್ಯೂಜಿಲೆಂಡ್ ದೇಶ ಕೊರೊನಾ ವಿರುದ್ದದ ಹೋರಾಟದಲ್ಲಿ ವಿಜಯದತ್ತ ಸಾಗುತ್ತಿದೆ.

ನ್ಯೂಜಿಲೆಂಡ್ ಆರೋಗ್ಯ ಮಹಾನಿರ್ದೇಶಕ ಆಶ್ಲೇ ಬ್ಲೂಮ್‌ಫೀಲ್ಡ್ ಇಂದು ದೇಶದಲ್ಲಿ ಯಾವುದೆ ಹೊಸ ಕೋವಿಡ್ -19 ಪ್ರಕರಣಗಳಿಲ್ಲ ಎಂದು ಬಹಿರಂಗ ಪಡಿಸಿದರು. ಕಳೆದ ಐದು ದಿನದಿಂದ ಶೂನ್ಯ ಪ್ರಕರಣಗಳನ್ನು ದಾಖಲಿಸುತ್ತಿದೆ ಹಾಗೂ ಪ್ರಸ್ತುತ ಕೇವಲ 21 ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳು ಇವೆ ಎಂದು ಅವರು ಹೇಳಿದರು.

ಅಲ್ಲಿ ಇದುವರೆಗೂ ಸಂಭವನೀಯ ಹಾಗೂ ದೃಡೀಕೃತ ಕೊರೊನಾ ಪ್ರಕರಣಗಳು ಸೇರಿ ಒಟ್ಟು 1,504 ಪ್ರಕರಣಗಳು ವರದಿಯಾಗಿದ್ದವು. ಅವುಗಳಲ್ಲಿ 1,462 ಜನರು ಸೋಂಕಿನಿಂದ ಗುಣಮುಖರಾಗಿದ್ದರು. 21 ಜನರು ಸೋಂಕಿನಿಂದ ಮೃತಪಟ್ಟಿದ್ದರೆ ಇನ್ನು ಕೇವಲ 21 ಜನರು ಮಾತ್ರ ಸೋಂಕಿನಿಂದ ಬಳಲುತ್ತಿದ್ದಾರೆ.

ನ್ಯೂಜಿಲೆಂಡ್ ಕೊರೊನಾವನ್ನು ಗೆಲ್ಲುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಿಗೆ ಶುಭಾಶಯಗಳ ಮಳೆಗೆರೆದಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ತಾರಾ ಕೃಷ್ಣಸ್ವಾಮಿ ಅವರು “ಪ್ರತಿ ದೇಶದಲ್ಲಿ ಅನೇಕ ಜಸಿಂಡಾ ಅರ್ಡೆರ್ನ್‌ಗಳಿದ್ದಾರೆ. ನಾವು ಅವರಿಗೆ ಮತ ಚಲಾಯಿಸಬೇಕಾಗಿದೆ.” ಸಂತಸ ವ್ಯಕ್ತ ಪಡಿಸಿದ್ದಾರೆ.

She did it!You know how often you see a picture like this?Seated female head of state!The win is a governance…

Posted by Tara Krishnaswamy on Tuesday, May 26, 2020

ಅಲ್ಲಿ ಇದುವರೆಗೂ 2.67 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿತ್ತು. ಮಾರ್ಚ್ 23 ರಂದು ಮೊದಲ ಬಾರಿಗೆ ಅಲ್ಲಿ ಕೊರೊನಾ ಪ್ರಕರಣ ವರದಿಯಾಗಿತ್ತು. ಎಪ್ರಿಲ್‌ 27 ರಂದು ನ್ಯೂಜಿಲೆಂಡ್ ಕೊರೊನಾ ವೈರಸ್ ಸಮುದಾಯದ ಹರಡುವಿಕೆಯ ವಿರುದ್ದ ಯುದ್ಧವನ್ನು ಗೆದ್ದಿದೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದರು.


ಓದಿ: ಕೊರೊನಾ ವಿರುದ್ದ ಹೋರಾಡಲು ಮಹಾರಾಷ್ಟ್ರಕ್ಕೆ ವೈದ್ಯರ ತಂಡ ಕಳುಹಿಸಲಿರುವ ಕೇರಳ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...