ಆಗಸ್ಟ್ 5 ರಿಂದ ಪ್ರಾರಂಭವಾಗಲಿರುವ ಅಯೋಧ್ಯ ಭೂಮಿ ಪೂಜೆಯ ಬಗ್ಗೆ ನರೇಂದ್ರ ಮೋದಿ ಸರ್ಕಾರ ಟೀಕೆಗಳನ್ನು ಎದುರಿಸುತ್ತಲೇ ಇದೆ. ಈ ನಡುವೆಯೇ ಜಾಗತಿಕ ಸಾಂಕ್ರಾಮಿಕ ಸಂದರ್ಭದಲ್ಲಿ ರಾಮ ಮಂದಿರದತ್ತ ಗಮನ ಹರಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯನ್ನು ಥಳಿಸಲಾಯಿತು ಎಂದು ವರದಿಯಾಗಿದೆ.
ಎಸ್ಎಫ್ಐ ಬೆಂಬಲಿಗರಾದ ಅಮೃತ್ ಆರ್ಯ ಅವರನ್ನು ಥಳಿಸಲಾಯಿತು ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಸಾವಿರಾರು ಜನರು ಕೊರೊನಾದಿಂದ ಸಾಯುತ್ತಿರುವಾಗ ಸಮಾರಂಭವನ್ನು ನಡೆಸುವುದು ಸೂಕ್ತವೇ ಎಂದು ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು.
ಕೂಚ್ ಬೆಹಾರ್ನ ತುಫಂಗಂಜ್ ಪಟ್ಟಣದ ನಿವಾಸಿ, ಅಮೃತ್ ಆರ್ಯ ಕೋಲ್ಕತ್ತಾದ ಎನ್ಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಲಾಕ್ ಡೌನ್ ನಿಂದ ಅವರ ತವರಿನಲ್ಲಿದ್ದರು.
ಈ ಕುರಿತು ತನ್ನ ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಬೇಕೆಂದು ಬಿಜೆಪಿ ಬೆಂಬಲಿಗರು ಒತ್ತಾಯಿಸಿದರು ಎಂದು ಅಮೃತ್ ಆರ್ಯ ತಿಳಿಸಿದ್ದಾರೆ.
ಈ ಹಲ್ಲೆಯನ್ನು ವಿರೋಧಿಸಿ ಹಲವಾರು ವಿದ್ಯಾರ್ಥಿಗಳು ತುಫಂಗಂಜ್ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ರಾಮ ಜನ್ಮಭೂಮಿ ಕಟ್ಟಡದ ಅರ್ಚಕ ಪ್ರದೀಪ್ ದಾಸ್ ಮತ್ತು 14 ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ದೃಢಪಟ್ಟಿದೆ. ದೇಶವು ಹೆಚ್ಚಿನ ಕೊರೊನಾ ಪ್ರಕರಣಗಳು ಮತ್ತು ಸಾವುಗಳನ್ನು ಎದುರಿಸುತ್ತಿರುವಾಗ ಇಂತಹ ಬೃಹತ್ ಮತ್ತು ದುಬಾರಿ ಸಮಾರಂಭ ಬೇಕಿತ್ತೆ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.
ಗಂಭೀರ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸುವುದು ಎಲ್ಲರ ಕರ್ತವ್ಯ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
Lol! So it’s okay for the Ram temple to be built in the middle of a pandemic that we’re losing to? Priorities, you said?? What’s your take on this?
— Tuchiya Bhakt (@TuchiyaB) July 23, 2020
At the peak of Pandemic Modi was dismantling elected governments and planning to build Ram temple in Ayodhya….
— Manuel Jasper (@jasmvk) July 29, 2020
ASSAM/BIHAR r facing the worst flood. millions of people r in trouble. the country is facing pandemic situation but the prime minister will be available only for the Ram temple foundation stone.
— Ashok parmar (@Aks_1964) July 27, 2020
ಇದನ್ನೂ ಓದಿ: ಅಯೋಧ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣವಾಗಲಿ ಎಂದು ಕಾಂಗ್ರೆಸ್ ಬಯಸುತ್ತದೆ: ಸಚಿನ್ ಪೈಲಟ್