Homeಮುಖಪುಟಒಂದು whistle blowers ಪಡೆ ಹುಟ್ಟು ಹಾಕೋಣ

ಒಂದು whistle blowers ಪಡೆ ಹುಟ್ಟು ಹಾಕೋಣ

- Advertisement -
- Advertisement -
  • ದೇವನೂರ ಮಹಾದೇವ |

ಈಗ ಚುನಾವಣೆ ನಮ್ಮ ಮುಂದಿದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ದೊಡ್ಡದೊಡ್ಡ ನಾಯಕರು ಆಡುವ ಮಾತುಗಳನ್ನು ಕೇಳಿದರೆ ಚುನಾವಣೆ ಅಂದರೆ ಅದು ನಾಡು ಕಟ್ಟುವ ಕೆಲಸ ಅಂದುಕೊಂಡಿಲ್ಲ, ಬದಲಾಗಿ ರಣರಂಗ ಅಂದ್ಕೊಂಡಿದ್ದಾರೆ. ಅದಕ್ಕಾಗಿ ಠೇಂಕಾರದ ಮಾತಾಡ್ತಾರೆ. ಜೊತೆಗೆ – ಜಾದೂ ಭಾಷೇಲಿ ಮಾತಾಡ್ತಾರೆ, ಹರಾಜು ಹಾಕುವ ಭಾಷೇಲಿ ಮಾತಾಡ್ತಾರೆ. ಒಟ್ಟಿನಲ್ಲಿ ಇವರೆಲ್ಲ ಮರಳಲ್ಲಿ ಮನೆ ಕಟ್ಟುತ್ತಿರುವವರಂತೆ ಕಾಣಿಸ್ತಾರೆ.

ಒಂದೇ ಉದಾಹರಣೆ ಸಾಕು, ಬಿಜೆಪಿ ಪದೇ ಪದೇ ಹೇಳ್ತಾ ಇದೆ- “ನಾವು ಕಾಂಗ್ರೆಸ್‍ಮುಕ್ತ ಕರ್ನಾಟಕ ಮಾಡ್ತೇವೆ” ಅಂತ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಕೂಡ ಹೇಳ್ತಾ ಇದೆ- ‘ನಾವು ಬಿಜೆಪಿಮುಕ್ತ ಕರ್ನಾಟಕ ಮಾಡ್ತೇವೆ’ ಅಂತ. ಇವರು ಏನನ್ನು ಮುಕ್ತ ಮಾಡ್ತಾ ಇದ್ದಾರೆ? ತಾನು ಕೂತ ಮರದ ಕೊಂಬೆಯನ್ನೇ ಕತ್ತರಿಸುವವನ ಮೂರ್ಖತನವಲ್ಲವೆ ಇದು? ಜನತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ವಿಧ್ವಂಸಕ ಕೃತ್ಯವಲ್ಲವೆ ಇದು? – ಇದು ಹೊಣೆಗೇಡಿ ರಾಜಕಾರಣ.

ನಾಡಿಗೆ ತುರ್ತಾಗಿ ಬೇಕಾಗಿರುವುದು ಬರಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ. ನಾವು ಈ ಹೊಣೆಗೇಡಿ ರಾಜಕಾರಣಕ್ಕೆ ಇದನ್ನು ನೆನಪಿಸಬೇಕಾಗಿದೆ.

ಈ ಹೊಣೆಗೇಡಿ ರಾಜಕಾರಣದ ಜೊತೆಗೆ ಅಪ್ರಬುದ್ಧ ರಾಜಕಾರಣವೂ ವಿಜೃಂಭಿಸುತ್ತಿದೆ. ಉದಾಹರಣೆಗೆ ‘ವಿಶ್ವೇಶ್ವರಯ್ಯ ಹೆಸರು ಉಚ್ಚಾರಣೆ ಮಾಡೋ ಕೆಲವರಿಗೆ ಬರೋಲ್ಲ’ ಅಂತ ಇವರು ಹೇಳ್ತಾರೆ, ‘ಇವರಿಗೆ ಬಳ್ಳಾರಿ ಹೆಸರು ಉಚ್ಚಾರಣೆ ಮಾಡೋಕೆ ಬರೋಲ್ಲ’ ಅಂತ ಅವರು ಹೇಳ್ತಾರೆ! ಇಂಥವೇ ಮಾತುಗಳು. ನನಗೂ ಉಚ್ಚಾರಣೆ ಬರಲ್ಲಪ್ಪ, ಏನೀಗ? ಇದೇನು ಘನಂದಾರಿ ಚರ್ಚೆಯೆ? ಇಂಥವರಿಗೆ ಏನೆಂದು ಹೇಳಬೇಕು? ‘ನಿಮಗೆಲ್ಲ ವಯಸ್ಸಾಗಿದೆ, ನಿಜ. ಆದರೆ ನೀವು ಪ್ರೈಮರಿ ಶಾಲೆಯಲ್ಲಿ ಇರಬೇಕಾದವರು’ ಎಂದು ಹೇಳಬೇಕಾಗಿದೆ. ಮಾಧ್ಯಮಗಳು ಇಂಥ ಕ್ಷುಲ್ಲಕವನ್ನೆಲ್ಲಾ ಚರ್ಚಿಸಬಾರದು, ದಯವಿಟ್ಟು.

ಮೊನ್ನೆ ಮೊನ್ನೆ ತಾನೇ ಮೈಸೂರಿನಲ್ಲಿ – ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆಯವರು ಪ್ರವಾಸದಲ್ಲಿದ್ದ ನಮ್ಮ ಪ್ರಧಾನಿಗೆ ಒಂದು ಪ್ರಶ್ನೆ ಕೇಳಿದರು- ‘ಕಳೆದ ಲೋಕಸಭಾ ಚುನಾವಣೆಯಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದಿರಿ. ಕಿಂಚಿತ್ತೂ ಈಡೇರಲಿಲ್ಲ. ಈ ಬಗ್ಗೆ ಮಾತಾಡಿ’ ಅಂತ. ಇದಕ್ಕೆ ಉತ್ತರಿಸಬೇಕಾದ್ದು ಮಾತು ಕೊಟ್ಟ ಪ್ರಧಾನಿಯವರ ಹೊಣೆಗಾರಿಕೆ. ಆದರೆ ಅವರು ಉತ್ತರಿಸಲಿಲ್ಲ. ಬದಲಾಗಿ, ಮುಂದಿನ ಸಭೆಯಲ್ಲಿ ಅವರು ಆಡಿದ ಮಾತುಗಳು ಏನು ಗೊತ್ತೆ?- ‘ನಾವು ಕಾಮ್‍ಧಾರಿಗಳು, ಅವರು (ಅಂದರೆ ವಿರೋಧ ಪಕ್ಷದವರು) ನಾಮ್‍ಧಾರಿಗಳು’ ಅಂತ! ನುಣುಚಿಕೊಳ್ಳುವ ಇದು ದ್ರೋಹವಲ್ಲವೆ? ಇದು ಮಹಾದ್ರೋಹ. ಇವರು ನಾಡನ್ನು ಕಟ್ಟುತ್ತಿದ್ದಾರೋ ಅಥವ ಪದಗಳನ್ನು ಕಟ್ಟುತ್ತಿದ್ದಾರೋ? ಈ ರಾಜಕಾರಣ ನೋಡುತ್ತಿದ್ದರೆ ಜಿಗುಪ್ಸೆಯಾಗುತ್ತದೆ. ಭಯವೂ ಆಗುತ್ತದೆ.

ಕೆ.ಎಸ್.ಪುಟ್ಟಣ್ಣಯ್ಯ

ಇನ್ನೊಂದು ರಾಜಕಾರಣದ ಮಾತಿನ ಠೇಂಕಾರ; “ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ಭ್ರಷ್ಟರನ್ನೆಲ್ಲಾ ಜೈಲಿಗೆ ಅಟ್ಟುತ್ತೇವೆ”. ಈ ಮಾತಿಗೆ ನಮ್ಮ ಕೆಎಸ್ ಪುಟ್ಟಣ್ಣಯ್ಯ ಹೇಳ್ತಾ ಇದ್ದರು; “ವಿಧಾನಸೌಧದ ಬಾಗಿಲಿಗೆ ಒಂದು ‘ಭ್ರಷ್ಟರ ತಡೆ ಮಿಷಿನ್’ ಇಟ್ಟುಬಿಡೋಣ. ಭ್ರಷ್ಟರು ಬಂದರೆ ಆ ಬಾಗಿಲು ಆಟೋಮ್ಯಾಟಿಕ್ ಮುಚ್ಕೋಬೇಕು – ಅಂಥದ್ದು. ಆ ಮಿಷಿನ್ನೂ ಲಂಚ ಈಸ್ಕಂಡು ಒಳಿಕೆ ಬಿಡ್ದೇ ಇದ್ರೆ – ವಿಧಾನ ಸೌಧದ ಒಳೀಕೆ ಎಷ್ಟು ಜನರಪ್ಪ ಹೋಗೌರು?” ಅಂತಿದ್ದರು. ಇದು ರಾಜಕಾರಣದ ಇಂದಿನ ಪರಿಸ್ಥಿತಿ. ವ್ಯವಸ್ಥೇನೆ ಭ್ರಷ್ಟಗೊಂಡಿದೆ.

ಇಂಥ ದುರಂತ ರಾಜಕಾರಣದ ಸಂದರ್ಭದಲ್ಲಿ- ಸ್ವರಾಜ್ ಇಂಡಿಯಾ ತನ್ನ ಪ್ರಣಾಳಿಕೆ ಬಿಡುಗಡೆ ಮಾಡ್ತಾ ಇದೆ. ‘ಕೆಲವರಿಗೆ ಅಲ್ಲ; ಸಮುದಾಯಕ್ಕೆ ಎಲ್ಲಾ’ ಎಂಬ ಆಶಯದ ಸಸಿ ನೆಡುತ್ತಿದೆ. ಈ ಸ್ವರಾಜ್ ಪ್ರಣಾಳಿಕೆಗೆ ಕಾಪಿರೈಟ್ ಇಲ್ಲ. ಯಾರೇ ಪ್ರಕಟಿಸಬಹುದು. ದಯವಿಟ್ಟು ಚರ್ಚಿಸಿ, ಟೀಕೆ ಮಾಡಿ, ಸಲಹೆ, ಸೂಚನೆ, ಟಿಪ್ಪಣಿ ನೀಡಿ. ಇದು ಮುಕ್ತವಾಗಿದೆ.

ಕೊನೆಯದಾಗಿ, ನಾಡಿನ ಜಾಗೃತ ಪ್ರಜ್ಞೆಗೆ ಒಂದು ವಿನಂತಿ ಮಾಡುವೆ. ಅದೇನೆಂದರೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಆಶ್ವಾಸನೆಗಳು ಹಾಗೂ ರಾಜಕಾರಣಿಗಳು ನೀಡುವ ಭರವಸೆಗಳು- ಇವುಗಳನ್ನೆಲ್ಲಾ ನೆನಪಿಸುವ ಒಂದು ತಿhisಣಟe bಟoತಿeಡಿs ಪಡೆಯನ್ನು ಹುಟ್ಟು ಹಾಕಬೇಕಾಗಿದೆ. ರಾಜ್ಯಕ್ಕೆ ಹತ್ತು ಜನ ಸಾಕು. ಜಿಲ್ಲೆಗೆ ಮೂರು ಜನ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಆಶ್ವಾಸನೆಗಳು ಹಾಗೂ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ತಿಂಗಳಿಗೊಮ್ಮೆ ಅವರವರ ಮೂತಿಗೆ ಹಿಡಿಯುವ ಒಂದು ಜಾಗರೂಕ ಪಡೆ ಅತ್ಯಗತ್ಯವಾಗಿದೆ. ಇದರಿಂದ ಹೊಣೆಗೇಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಹೊಣೆಗಾರಿಕೆ ಬರಬಹುದು. ರಾಜಕಾರಣಕ್ಕೆ ಮಾನಮರ್ಯಾದೆ ತಂದುಕೊಡುವ ದಿಕ್ಕಲ್ಲಿ ಇದು ಮೊದಲ ಹೆಜ್ಜೆಯಾಗಲೂಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...