Homeಅಂಕಣಗಳುಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

ಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಈ ದೇಶ ಕಂಡ ಅತ್ಯುತ್ತಮ ಕಮಂಗಿ ಆಡಳಿತಗಾರ ಪಕೋಡತಾತನು ದೇಶವನ್ನಾಳಿದ ಪ್ರಧಾನಿಗಳ ಪ್ರತಿಮೆಗಳನ್ನು ಇಡಲು ಮ್ಯೂಸಿಯಂ ಸ್ಥಾಪನೆಗೆ ಮುಂದಾಗಿದ್ದು, ಈ ಮ್ಯೂಸಿಯಂನಲ್ಲಿ ನೆಹರು ಬಿಟ್ಟು ಉಳಿದೆಲ್ಲ ಪ್ರಧಾನಿಗಳ ಪ್ರತಿಕೃತಿಗಳು ಇರಲಿವೆಯಂತೆ. ನೆಹರು ಹೆಸರು ಕೇಳಿದರೆ ಮೂಲವ್ಯಾಧಿ ಪೀಡಿತರಂತೆ ಬುಳುಬುಳು ನರಳುವ ಸನಾತನಿಗಳ ಈ ಹೊಚ್ಚಹೊಸ ನವರಂಗಿ ನಾಟಕ ಕಂಡು ಕೈ ಪಕ್ಷದವರು ರೊಚ್ಚಿಗೆದ್ದಿದ್ದಾರೆ. ಪಾರ್ಲಿಮೆಂಟ್ ಡಿಸ್ಕೊಡ್ಯಾನ್ಸರ್ ಆಗಿರುವ ಪಕೋಡತಾತನ ಪ್ರತಿಮೆಯನ್ನು ಯಾವ ಬಗೆಯಲ್ಲಿ ಕೆತ್ತಬೇಕೆಂದು ಶಿಲ್ಪಿಗಳು ತಲೆಕೆಡಿಸಿಕೊಂಡಿದ್ದು, ಕನ್ಹಯ್ಯ ಕುಮಾರನ ಸಲಹೆಯಂತೆ “ಬಂಡೆ ಮೇಲೆ ಹೊಟ್ ಮಕಾಡೆ ದಬಾಕೊಂಡಿರೋ ಪಕೋಡತಾತನ” ವಿಗ್ರಹ ಕೆತ್ತಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪಟ್ಟುಬಿಡದ ಕನ್ಹಯ್ಯ.. ‘ಬಂಡೆ ಮೇಲ್ ಮಕಾಡೆ’ ವಿಗ್ರಹ ಕೆತ್ತಲಾಗದಿದ್ದರೆ, ಪಕೋಡತಾತ ಪುಕ್ಕಲನಂತೆ ಬುಳುಬುಳನೆ ಅಳುತ್ತಾ ಭಾಷಣ ಬಿಗಿಯುತ್ತಿರುವ ವಿಗ್ರಹ ಕೆತ್ತಿ, ಪ್ರತಿಮೆಯ ಕಣ್ಣಿಂದ ಕಣ್ಣೀರು ಬರಲು ಎರಡೂ ಕಣ್ಣಿಗೆ ಗೋಮೂತ್ರದ ಪೈಪುಗಳನ್ನು ಫಿಕ್ಸು ಮಾಡಿ ಎಂದು ಇನ್ನೂ ಆಗ್ರಹಿಸಿಲ್ಲ ಎಂದು ವರದಿಯಾಗಿದೆ.
******
ಕಳ್ಳಕಾಕರು, ಮನೆಹಾಳ ರಾಜಕಾರಣಿಗಳನ್ನು ಕಂಡರೆ ಛಂಗನೆ ಎಗರಿ ಪಾದಕ್ಕೆ ಬೀಳುವ ಪೊಲೀಸರು ಜನಸಾಮಾನ್ಯರು, ಹೋರಾಟಗಾರರನ್ನು ಕಂಡರೆ ಮೂಗಿನೊಳಗೆ ಎರೆಹುಳ ಹೊಕ್ಕಂತಾಡುವುದು ಗೊತ್ತೇ ಇದೆ. ಇದಕ್ಕೆ ಹೊಸ ಉದಾಹರಣೆ ರಾಯಚೂರಿನಿಂದ ಬಂದಿದೆ. ಕಾರ್ಮಿಕರ ಪೀಡಕರ ವಿರುದ್ಧ ಮತ್ತು ವಿದ್ಯಾರ್ಥಿಗಳ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದ ರಾಯಚೂರಿನ ಮಾನ್ವಿ ನಗರದ ಎಸ್.ಎಫ್.ಐ ಸಂಘಟನೆಯ ಹೋರಾಟಗಾರರನ್ನು ಅಲ್ಲಿನ ಹೇತ್ಲಾಂಡಿ ಪೊಲೀಸರು ಯಾವ ವಿಚಾರಣೆಯಿಲ್ಲದೆ ರೌಡಿಪಟ್ಟಿಗೆ ಸೇರಿಸಿದ್ದಾರೆ. ಇನ್ನೊಂದು ಕಡೆ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಯ ಅಧ್ಯಕ್ಷನನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಅಲ್ಲಿನ ಮೇಯರ್ ಮತ್ತು ಪೊಲೀಸರು ಹುನ್ನಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಮ್ಮ ಅಸಲಿ ಸಾಹುಕಾರರು ನಡೆಸೋ ಗಂಡಾಗುಂಡಿ ಯವಾರಗಳ ತಂಟೆಗೆ ಯಾರೇ ಬಂದರೂ ಪ್ಯಾಂಟೇರಿಸಿಕೊಂಡು ಹೊರಡುವ ಈ ಟೋಪಿಧಾರಿ ಸರ್ಕಾರಿ ಗೂಂಡಾಗಳು, ಅಪ್ಲೈ ಆಗದ ಕಾನೂನುಗಳನ್ನು ಹೋರಾಟಗಾರರ ಮೇಲೆ ಸುರಿದು ಮೀಸೆಗಳನ್ನು ತಿರುವಿಕೊಳ್ಳುತ್ತಿದ್ದಾರೆ. ಪೊಲೀಸರು ತಮ್ಮ ಆಳುವ ಯಜಮಾನರುಗಳು ಕಾಲಲ್ಲಿ ತಳ್ಳುವ ಡಾಗ್ ಬಿಸ್ಕತ್ತುಗಳನ್ನು ನಾಲಿಗೆಯಲ್ಲಿ ಎತ್ತಿಕೊಂಡು ಸಂಭ್ರಮಿಸುತ್ತಿರುವುದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ ಎಂದು ಮಾಜಿ ಹಾಸ್ಯನಟ ಶಾಂಗ್ಲಿಯಾನ ಒಂದೇ ಉಸಿರಿನಲ್ಲಿ ಒದರಿದ್ದಾರೆಂದು ತಿಳಿದು ಬಂದಿದೆ.
******
ರಾಜ್ಯವನ್ನು ಹರಿದು ಎರಡು ಭಾಗ ಮಾಡ್ತೀವಿ ಅಂತ ಹೊರಟಿದ್ದ ಛೀರಾಮುಲು & ಬ್ಲೂಜೆಪಿಯ ಸಿಳ್ಳೇಕ್ಯಾತಗಳು, ಜನರು ಕಾಲಲ್ಲಿದ್ದನ್ನು ಕಳಚಿ ಮೂತಿಗೆ ಪಟಪಟನೆ ಎಸೆಯಲು ಶುರು ಮಾಡುತ್ತಿದ್ದಂತೆ ಸುಯ್ ಟಪಕ್ ಅಂತ ಯೂ ಟರ್ನ್ ತೆಗೆದುಕೊಂಡಿರೋ ವರ್ತಮಾನ ಇದೀಗ ವರದಿಯಾಗಿದೆ. ರಾಜ್ಯಸಭಾ ಸದಸ್ಯತ್ವದ ಟಿಕೆಟುಗಳಲ್ಲಿ ಒಂದನ್ನೂ ಉತ್ತರ ಕರ್ನಾಟಕ ಭಾಗದವರಿಗೆ ಕೊಡದೆ ಆಂಧ್ರ, ಕೇರಳ, ತಮಿಳುನಾಡಿನ ಮುಷಂಡಿಗಳಿಗೆ ಹಾಫ್‍ರೇಟ್, ಚೀಪ್ ರೇಟಿನಲ್ಲಿ ಮಾರಿಕೊಂಡು ಯಂಜಾಯ್ ಮಾಡುತ್ತಿದ್ದ ಈ ಬ್ಲೂಜೆಪಿ ಭಡವ ರಾಸ್ಕಲ್‍ಗಳಿಗೆ ಇದೀಗ ಉತ್ತರ ಕರ್ನಾಟಕದ ಮೇಲೆ ಲವ್ವು ಕಿತ್ಕೊಂಡಿರುವುದು ನಾನಾ ಗುಮಾನಿಗೆ ಕಾರಣವಾಗಿದೆ. ಪಕ್ಷದಲ್ಲಿ ಇರುವ 17 ಸಂಸದರಲ್ಲಿ ಅರ್ಧಕ್ಕರ್ಧ ಮಂದಿ ಉತ್ತರ ಕರ್ನಾಟಕದವರೇ ಇದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಆ ಭಾಗದ ಅಭಿವೃದ್ಧಿಗೆ ಮೂರುಕಾಸಿನ ಕೆಲಸ ಮಾಡದೆ, ಓತ್ಲಾ ಹೊಡೆದುಕೊಂಡು ತಿರುಗುತ್ತಿದ್ದ ಈ ಬ್ಲೂಜೆಪಿ ದಂಢಪಿಂಡಗಳು ಇದೀಗ ತಾವೇ ಹಾರಿಸಿದ ಪ್ರತ್ಯೇಕ ರಾಜ್ಯದ ಗೂಬೆಯನ್ನು ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್ ಕುಮಾರಣ್ಣನ ತಲೆಗೆ ಕಟ್ಟಲು ಹುನ್ನಾರ ನಡೆಸಿರುವುದು ಬಹಿರಂಗವಾಗಿದೆ. ಗಡ್ಡದೊಳಗೇ ಮುಖ ಬಚ್ಚಿಟ್ಟುಕೊಂಡು ತಿರುಗುವ ಛೀರಾಮುಲು, ಇದೀಗ ಪ್ರತ್ಯೇಕ ರಾಜ್ಯದ ಬಗ್ಗೆ ಯಾರಾದ್ರು ಮಾತಾಡಿದ್ರೆ ಅವರ ಎರಡೂ ಕೆನ್ನೆ ಕಚ್ಚುತ್ತೇನೆಂದು ಧಮಕಿ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಒಟ್ಟಿನಲ್ಲಿ ರಾಜ್ಯದ ಜನರು ಇವರ ಸೆಗಣಿ ಬುರುಡೆಗಳತ್ತ ಗುರಿಯಿಟ್ಟು ಬೀಸಿದ ಹಳೇಕೆರಗಳು ಯಶಸ್ವಿಯಾಗಿ ಗುರಿ ತಲುಪಿವೆಯೆಂದು ತಲೆಗೆ ಬ್ಯಾಂಡೇಜು ಹಾಕಿಸಿಕೊಂಡ ಬ್ಲೂಜೆಪಿ ಮುಠ್ಠಾಳರು ಇನ್ನೂ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿಲ್ಲವೆಂದು ವರದಿಯಾಗಿದೆ.
******
ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳೋರನ್ನು ನೀವು ನೋಡಿರ್ತೀರಿ, ಆದ್ರೆ ಇರಲಾರದೆ ಚೆಡ್ಡಿಯೊಳಗೆ ಹೆಬ್ಬಾವು ಬಿಟ್ಕೊಳೋರನ್ನ ನೀವು ನೋಡಿರಲಿಕ್ಕಿಲ್ಲ. ಮೀಟ್ ಮಿಸ್ಟರ್ ರಾಮ್ಸೇವಕ್ ಶರ್ಮ, ದೂರಸಂಪರ್ಕ ಇಲಾಖೆ ಟ್ರಾಯ್ ನ ಮುಖ್ಯಸ್ಥ. ಈ ಅರುಳುಮರುಳು ಮುದುಕಪ್ಪ ತನ್ನ ಟ್ವಿಟರಿನಲ್ಲಿ ತನ್ನ ಆಧಾರ್ ಕಾರ್ಡ್ ನಂಬರ್ ಹಾಕಿ, ತಾಕತ್ತಿದ್ರೆ ಹ್ಯಾಕ್ ಮಾಡಿ ಅಂತ ಚಾಲೆಂಜು ಹಾಕಿತ್ತು. ತಮ್ ಪಾಡಿಗೆ ತಾವಿದ್ದ ಕಂಪ್ಯೂಟರ್ ಹ್ಯಾಕರ್ ಗಳು ಮುದುಕಪ್ಪನ ಚಾಲೆಂಜಿಗೆ ರೊಚ್ಚಿಗೆದ್ದು ಆತನ ಸರ್ವ ಜಾತಕವನ್ನೆಲ್ಲ ಹ್ಯಾಕ್ ಮಾಡಿ ಅದಕ್ಕೆ ಉಪ್ಪು ಹುಣಸೆಹಣ್ಣು ಸವರಿ ತಗೋ ನೆಕ್ಕೊ ಅಂತ ವಾಪಸ್ ಬಿಸಾಕಿದ್ದಾರೆ. ಆಧಾರ್ ಕಾರ್ಡ್ ನಂಬರ್ ಮೂಲಕ ಮುದುಕಪ್ಪನ ಪರ್ಸನಲ್ ಫೋನಿಗೇ ಕನ್ನ ಕೊರೆದು ವಾಟ್ಸಾಪ್ ಡೀಟೈಲ್ ಎತ್ತಾಕಿ, ಆತನ ಬ್ಯಾಂಕ್ ಅಕೌಂಟಿಗೂ ತೂತ ಕೊರೆದು ಒಂದು ರುಪಾಯಿ ಡೆಪಾಸಿಟ್ ಮಾಡಿ, ಆತನ ಕ್ರೆಡಿಟ್ ಕಾರ್ಡಿಂದಲೇ ಒಂದು ಫೋನು ಬುಕ್ ಮಾಡಿ, ಅವನ ಮಬೆ ಅಡ್ರೆಸ್ಸಿಗೇ ಕಳಿಸಿ, ಹ್ಯಾಕು ಸಾಕಾ, ಇಲ್ಲಾ ಇನ್ನೂ ಬೇಕಾ ಎಂದು ಮುದುಕಪ್ಪನ ಪಂಚೆಯೆಳೆದುಬಿಟ್ಟಿದ್ದಾರೆ. ಇಷ್ಟು ಸಾಲದೆಂದು ಹ್ಯಾಕರ್ ಗಳು ಪಿ.ಎಮ್ ಪಕೋಡಪ್ಪನಿಗೆ ನಿಂದೂ ಆಧಾರ್ ಕಾರ್ಡ್ ನಂಬರ್ ಇದ್ರೆ ಕೊಡು ಒಂದು ಕಡೆಯಿಂದ ಕೆತ್ತಿ ಬಿಸಾಕುತ್ತೇವೆಂದು ಹೊಸ ಚಾಲೆಂಜನ್ನು ಎಸೆದಿದ್ದಾರೆ. ಈ ಮೂಲಕ ಆಧಾರ್ ಕಾರ್ಡ್ ಮಾಹಿತಿಯನ್ನು ಯಾರೂ ಕದಿಯಲಾಗದು, ಅವನ್ನು ಏಳು ಸಮುದ್ರದಾಚೆ ಇರೋ ದ್ವೀಪದಲ್ಲಿರೋ ರಾಕ್ಷಸನ ಅಂಡಿನೊಳಗೆ ಭದ್ರವಾಗಿಟ್ಟಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದ ದ್ವೇಷಭಕ್ತ ಪಕೋಡಪ್ಪನ ಪಂಚೆಯು ಸಂತೆಯಲ್ಲಿ ಉದುರಿಹೋಗಿದೆ. ಯಾವುದೇ ಕಾರಣಕ್ಕು ತನ್ನ ಆಧಾರ್ ನಂಬರ್ ಹ್ಯಾಕರ್‍ಗಳ ಕೈಗೆ ಸಿಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿರೋ ಪಕೋಡಪ್ಪ ಅದೇನಾದರೂ ಲೀಕಾದರೆ ತಾನು ಕದ್ದುಮುಚ್ಚಿ ನೋಡೋ ಪಾರ್ನ್ ಸೈಟ್ ಡೀಟೈಲೆಲ್ಲ ಹೊರಬಿದ್ದು ಮಾನ ಹರಾಜಾಗುವ ಭಯದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
******
ಬುದ್ದಿಜೀವಿಗಳಿಗೆ ಗುಂಡಿಟ್ಟು ಕೊಲ್ಲಿಸುತ್ತಿದ್ದೆ ಎಂದು ಕಯ್ಯಯ್ಯೋ ಅಂದ ಬಸನಘೋಡ ಪಾಟಿಲ್ ಮೇಲೆ ಕಾನೂನುಕ್ರಮ ಕೈಗೊಳ್ಳಲು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರೋ ಬೆರಕೆ ಸರ್ಕಾರ ಕಡೆಗೂ ಬಸನಘೋಡನನ್ನು ಕೊಚ್ಚೆ ಚರಂಡಿಯಲ್ಲಿ ಹೊರಳಾಡಲು ಬಿಟ್ಟು ತಾನೂ ಅವನೊಡನೆ ಉರುಳಾಡಲು ಯಾವ ಸಮಸ್ಯೆಯೂ ಇಲ್ಲವೆಂದು ಸ್ಪಷ್ಟಪಡಿಸಿದೆ. ಇನ್ನೊಂದು ಕಡೆಯಲ್ಲಿ ಹೈದರಾಬಾದಿನ ಬ್ಲೂಜೆಪಿ ಜನಪ್ರತಿನಿಧಿಯೊಬ್ಬ ಅಸ್ಸಾಂನಲ್ಲಿರೋ ವಲಸಿಗರ ಮೇಲೆ ಗುಂಡು ಹೊಡೆದು ಕೊಲ್ಲಲು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾನೆ. ಮುಳ್ಳಂದಿಯ ಮುಖಕ್ಕೆ ಮೀಸೆ ಅಂಟಿಸಿದಂತಿರೋ ಈ ಗುಡಾಣಗಢವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹೈದರಾಬಾದಿನ ಸರ್ಕಾರಕ್ಕೂ ನರದೌರ್ಬಲ್ಯದ ಕೊರತೆ ಕಾಡುತ್ತಿದೆಯಂತೆ. ಮಗದೊಂದು ಕಡೆ ಮೇಕೆ ದೇವರ ಪ್ರತಿರೂಪ, ಆದ್ದರಿಂದ ಯಾರೂ ಮಟನ್ ತಿನ್ನಬಾರದೆಂದು ದ್ವೇಷಭಕ್ತರ ಪಕ್ಷದ ರಾಜ್ಯಾಧ್ಯಕ್ಷನೊಬ್ಬ ಜನರ ಮೇಲೆ ಬೆದರಿಕೆ ಹಾಕಿದ್ದಾನೆ. ಇವರನ್ನೆಲ್ಲ ನೋಡುತ್ತಿದ್ದರೆ ಈ ದ್ವೇಷಭಕ್ತ ಕುನ್ನಿಗಳನ್ನೆಲ್ಲ ಬ್ಲೂಜೆಪಿ ಪಕ್ಷವು “ ಆಲ್ ಇಂಡಿಯ ಬೆಸ್ಟ್ ಮುಠ್ಠಾಳ್ಸ್ ಎಕ್ಸಾಂ” ನಡೆಸಿ ಅದರಲ್ಲಿ ಪಾಸಾದ ಅತ್ತುತ್ತಮ ಮೆಂಟ್ಲುಗಳಿಗೆ ಟಿಕೆಟು ಕೊಟ್ಟು ಎಲೆಕ್ಷನ್‍ಗೆ ಕಳಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಲೆಯಲ್ಲಿ ಮಿದುಳಿರುವ ಜನರನ್ನು ಕಂಡರೆ ಉರಿದುಬೀಳುವ ಈ ಸನಾತನ ಪೀಡೆಗಳು ಸೆಗಣಿ ತಿನ್ನೋ ಜ್ಞಾನದಲ್ಲಿ ಪಿಎಚ್.ಡಿ ಲೆವೆಲ್ಲಿಗೆ ಪಳಗಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...