Homeಕರ್ನಾಟಕಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

ಅನಂತ್ಮಾಣಿ v/s ಸೂಲಿಬೆಲೆ, ಇದು ಟಿಕೆಟ್ ಕೈತಪ್ಪಿದ ಕದನ

- Advertisement -
- Advertisement -

| ಶುದ್ಧೋದನ |

ಉತ್ತರಕನ್ನಡದ ಸೋಶಿಯಲ್ ಮೀಡಿಯಾದಲ್ಲೀಗ ಕೇಸರಿ ಕುಮಾರರಿಬ್ಬರ ಗುದಮುರಗಿ ಜೋರು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಮತ್ತು ಕೇಸರಿ ಭಾಷಣ`ಕೋರ’ ಚಕ್ರವರ್ತಿ ಸೂಲಿಬೆಲೆ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಿರೋದು ರೋಚಕವಿದೆ. ಹಾಗೆ ನೋಡಿದರೆ ಮೊನ್ನೆ ಮುಗಿದ ಇಲೆಕ್ಷನ್ ಸಂದರ್ಭದಲ್ಲೇ ಮಾಣಿಗೆ ಟಿಕೆಟ್ ಕೊಡಬಾರದೆಂದು ದೊಡ್ಡ ಕೂಗೆದ್ದಿತ್ತು. ಆತನ ಬದಲಿಗೆ ನಮೋ ಬ್ರಿಗೇಡ್‍ನ ಪ್ರೊಪ್ರೇಟರ್ ಚಕ್ರವರ್ತಿ ಸೂಲಿಬೆಲೆ ಹೆಸರು ತೇಲಿ ಬಂದಿತ್ತು. ಸ್ಥಳೀಯ ಆರೆಸ್ಸೆಸ್-ಹಿಂಜಾವೇ ಪಡೆಯೇ ಮಾಣಿ ವಿರುದ್ಧ ಮುರಕೊಂಡು ಬಿದ್ದಿತ್ತು. ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ತಿರಸ್ಕಾರ, ತಾತ್ಸಾರಕ್ಕೆ ತುತ್ತಾಗಿರುವ ಮಾಣಿಗೆ ಟಿಕೆಟ್ ಕೊಡಬಾರದೆಂದು ಉತ್ತರ ಕನ್ನಡದ ಆರೆಸ್ಸೆಸ್‍ನ ಒಂದು ತಂಡ ಪ್ರಬಲ ಹೋರಾಟ ಮಾಡಿತ್ತು. ಉತ್ತರ ಕನ್ನಡ ಸಂಘಪರಿವಾರದ ಕಲ್ಲಡ್ಕ, ಹನ್ಮಂತ ಶಾನಭಾಗ್ ಎರಡೂ ಕಡೆ “ಆಟ” ಆಡಿದ್ದರು.

ಅಂತಿಮವಾಗಿ ಮಾಣಿಗೇ ಟಿಕೆಟ್ ಸಿಕ್ಕಿತು. ಆತ ಗೆದ್ದೂ ಬಿಟ್ಟ. ಆದರೆ ಬಿಜೆಪಿ ಒಳಮನೆಯ ಬೇಗುದಿ ಕಮ್ಮಿ ಆಗಲಿಲ್ಲ. ಸೂಲಿಬೆಲೆ ಟೀಮಂತೂ ಮೋದಿ ಮತ ಭಿಕ್ಷೆಯಿಂದ ಗೆದ್ದಿರುವ ಮಾಣಿ ಧೀಮಾಕಿಂದ ಬೀಗುವುದು ಬೇಕಾಗಿಲ್ಲ ಎಂಬ ರಹಸ್ಯ ಅಭಿಯಾನವನ್ನೇ ಹುಟ್ಟುಹಾಕಿತು! ಮಾಣಿ ಮಾಡಿದ ಜನದ್ರೋಹದ ಪಾಪಕ್ಕೇ ಮಂತ್ರಿಯಾಗದೆ ಮೂಲೆ ಪಾಲಾಗಿದ್ದಾನೆಂದು ಆತನ ವಿರೋಧಿ ಬಳಗ ತಿವಿಯತೊಡಗಿತ್ತು. ಇದೆಲ್ಲದರಿಂದ ಮಾಣಿ ಕೊತಕೊತ ಕುದಿಯುತ್ತಲೇ ಇದ್ದ. ತನಗೆ ಅಡ್ಡಗಾಲು ಹಾಕಿದವರನ್ನೆಲ್ಲಾ ಒಬ್ಬೊಬ್ಬರಾಗಿ ಸಂಹರಿಸಲು ಆತ ಸ್ಕೆಚ್ ರೆಡಿಮಾಡಿಕೊಂಡಿದ್ದ. ಸಂಘಪರಿವಾರದಲ್ಲಿ ತನಗಿರುವ ಸಂಪರ್ಕ ಬಳಸಿಕೊಂಡು ಮಾಣಿ ಈಗ ಜಿಲ್ಲಾ ಚೆಡ್ಡಿ ಪಡೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದಾನೆ. ತನಗೆ ವಿರೋಧ ಮಾಡಿದ ಜಿಲ್ಲಾ ಆರೆಸ್ಸೆಸ್, ಹಿಂಜಾವೇ ಮುಖಂಡರನ್ನು ಸಂಘಟನೆಯ ಹುದ್ದೆಗಳಿಂದ ಕಿತ್ತುಹಾಕಿಸುತ್ತಿದ್ದಾನೆ. ಈಗಾಗಲೇ ಜಿಲ್ಲಾಮಟ್ಟದ ಒಬ್ಬ ಕಾರ್ಯವಾಹಕ ಮತ್ತು ಭಟ್ಕಳದ ಆರೆಸ್ಸೆಸ್ ಲೀಡರ್‍ಗೆ ಸ್ಥಾನ ಚ್ಯುತಿ ಮಾಡಲಾಗಿದೆ. ಎಲ್ಲಾ ತಾಲ್ಲೂಕಿನ ಬಿಜೆಪಿ-ಆರೆಸ್ಸೆಸ್‍ನಲ್ಲಿ ಮಾಣಿ ಮಾರಿಹಬ್ಬ ನಡೆಯಲಿದೆ!

ಇನ್ನೊಂದೆಡೆ ಮಾಣಿ ಬಂಡವಾಳ ಬಯಲು ಮಾಡುವ ಆನ್‍ಲೈನ್ ಕಸರತ್ತು ನಡೆಯಲಾರಂಭಿಸಿದೆ. ಚಕ್ರವರ್ತಿ ಸೂಲಿಬೆಲೆ, ಮಾಣಿ ಅಯೋಗ್ಯತೆಯನ್ನು ವ್ಯವಸ್ಥಿತವಾಗಿ ಜಗಜ್ಜಾಹೀರು ಮಾಡುತ್ತಿದ್ದಾನೆ. ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಯ ಸೋಷಿಯಲ್ ಮೀಡಿಯಾ ಅಭಿಯಾನ ತನ್ನ ತೇಜೋವಧೆ ಮಾಡುವ ಹಿಕಮತ್ತೆಂಬ ಭಾವನೆ ಮಾಣಿಯದು. ಆಸ್ಪತ್ರೆ ಆಗದಿರುವುದು ಸಂಸದನ ಅಸಾಮಥ್ರ್ಯ ಬಿಂಬಿಸುತ್ತಿದೆ ಎಂಬಂತೆ ಪ್ರಚಾರ ಮಾಡಲಾಗಿತ್ತು. ಇದರ ಹಿಂದೆ ತನ್ನ ಹಿತಶತೃ ಸೂಲಿಬೆಲೆ ಇದ್ದಾನೆಂಬ ಖಚಿತ ನಂಬಿಕೆ ಮಾಣಿಯದು. ಹಾಗಾಗಿ ಆತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಇಡುವವರನ್ನೇ ತನ್ನ ಟ್ವಿಟರ್ ಖಾತೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಅಷ್ಟೇ ಅಲ್ಲ, ಆಸ್ಪತ್ರೆಗಾಗಿ ಮನವಿ ಹಿಡಿದುಕೊಂಡು ಬಂದ ಹುಡುಗರಿಗೆ ರೇಗಿ ಸೋಷಿಯಲ್ ಮೀಡಿಯಾದವರಿಂದಲೇ ಆಸ್ಪತ್ರೆ ಮಾಡಿಸಿಕೊಳ್ಳಿ ಎಂದಬ್ಬರಿಸಿದ್ದ.

ಈ ಜಗಳ ಸೂಲಿಬೆಲೆ ಮತ್ತು ಅನಂತ್ಮಾಣಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಚಾಮಗೋಚರವಾಗಿ ಬೈದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಇವರ ಕಾಲೆಳೆದಾಟ ಫೇಸ್ಬುಕ್, ವಾಟ್ಸಾಪ್‍ನಲ್ಲಿ ಕದನ ಕುತೂಹಲ ಕೆರಳಿಸಿದೆ. ಗೆದ್ದವರ ಈ ಗದ್ದಲ ವಿರೋಧ ಪಕ್ಷಗಳಿಗೆ ಮಜಾ ನೀಡುತ್ತಿದ್ದರೆ, ಬಿಜೆಪಿಯಲ್ಲಿ ಮುಜುಗರ ಮೂಡಿಸಿದೆ.

ಇದೆಲ್ಲದರಿಂದ ಒಂದು ಹಂತದಲ್ಲಿ ತಬ್ಬಿಬ್ಬಾದ ಸೂಲಿಬೆಲೆ ಜಗಳ ಸಾಕು, ಕೆಲಸ ಮಾಡೋಣ ಎಂಬ ಟ್ವೀಟ್ ಮಾಡಿದರೂ ಆರೋಪ-ಪ್ರತ್ಯಾರೋಪದ ಬಯಲಾಟ ಮಾತ್ರ ನಿಂತಿಲ್ಲ. ಮೋದಿ ಮತ ಭಿಕ್ಷೆಯಿಂದ ಗೆದ್ದ ಸಂಸದರು ಧಿಮಾಕು ತೋರಿಸದೆ ಕೆಲಸ ಮಾಡಬೇಕು ಎಂದು ಸೂಲಿಬೆಲೆ ಟ್ವಿಟಿಸಿದ್ದೇ ಬಿಜೆಪಿಯಲ್ಲಿ ಕಂಪನ ಸೃಷ್ಠಿಯಾಗಲು ಮೂಲಕಾರಣ. ಸದಾನಂದ ಗೌಡ, ಶೋಭಾ ಕರಂದ್ಲಾಜೆಯಂಥ ದೊಡ್ಡವರೆ ಸೂಲಿಬೆಲೆ ಮಾತಿಂದ ಕೆರಳಿ ಕೆಂಡವಾದರು. ನಮಗೆ ಬುದ್ಧಿ ಹೇಳಲು ಚಕ್ರವರ್ತಿ ಯಾರು? ಎಂದು ಎಗರಾಡಿದರು.

ತನಗೆ ಟಿಕೆಟ್ ತಪ್ಪಲು ಕಾರಣವಾದ ನಾಯಕರನ್ನು ನಿರ್ದಿಷ್ಟವಾಗಿ ಗುರಿಮಾಡಿಕೊಂಡೇ ಸೂಲಿಬೆಲೆ ಸಂಸದರ ಬಣ್ಣ ಬಯಲಾಗಿಸುತ್ತಿದ್ದಾನೆ. ಇದು ಬಿಜೆಪಿಯ ಅಧಿಕಾರಸ್ಥರ ಚೇಲಾಗಳನ್ನು ಕೆರಳಿಸಿದೆ. ಜನಪ್ರತಿನಿಧಿಗಳು ಕೆಲಸ ಮಾಡಲಿ ಎಂದು ಹೇಳೋದು ತಪ್ಪೇನಲ್ಲ. ಆದರೆ ಹಾಗೆ ಹೇಳಿದ್ದು ಸೂಲಿಬೆಲೆಯಾದ್ದರಿಂದ ಬಿಜೆಪಿಯಲ್ಲಿ ಬೆಂಕಿಹೊತ್ತಿಕೊಂಡಿತು. ತನ್ನಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆಂದು ಸೂಲಿಬೆಲೆ ಹೇಳಿದ್ದಾನೆಂದು ಕಿಡಿ ಹೊತ್ತಿಸಲಾಯಿತು. ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲವೆಂದು ಆತನ ಬೆಂಬಲಿಗ ನೆಟ್ಟಿಗರ ವಾದ. ಅಸಲಿಗೆ ಆತ ಹಾಗೆ ಹೇಳಿಯೂ ಇರಲಿಲ್ಲ, ಅಂಥ ಸಂದೇಶವೂ ಲಭ್ಯವಿಲ್ಲ. ಆರು ಸಲ ಸಂಸದರಾದವರಿಗೆ, ಎಂಟು ಸಲ ಮಂತ್ರಿಯಾದವರಿಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸಲಾಗದಾ? ಎಂದಾತ ಟ್ವಿಟಿಸಿದ್ದನಷ್ಟೇ. ಇದು ಮಾಣಿಗೆ ಚೆಡ್ಡಿಯೊಳಗೆ ಇರುವೆ ಕಡಿದಂತೆ ಚಡಪಡಿಕೆ ತಂದಿದೆ.

ಇದರ ಬೆನ್ನಿಗೇ ಕೊಡಗಿನಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಅದಕ್ಕೆ ಅಲ್ಲಿಯ ಸಂಸದ ತಕ್ಷಣ ಸ್ಪಂದಿಸಿದ್ದಾರೆ. ಉ.ಕನ್ನಡದ ಎಂಪಿ ಒಣ ರುಬಾಬು ಮಾಡುತ್ತ ತಲೆ ತಪ್ಪಿಸಿಕೊಳ್ಳುತ್ತಿದ್ದ. ಈ ಹೊತ್ತಲ್ಲಿ ಸೂಲಿಬೆಲೆ ಮಾಡಿದ ಟ್ವೀಟ್ ಮಾಣಿ ಬೆಂಬಲಿಗರಲ್ಲಿ ಆಕ್ರೋಶ ಮೂಡಿಸಿದೆ. ಈಗ ಟ್ರೋಲ್‍ಗಳು ಬರಪೂರ ನಡೆಯುತ್ತಿದೆ. ಬಿಜೆಪಿಯೊಳಗಿನ ಬಡಿದಾಟ ದಿನಕ್ಕೊಂದು ಆಯಾಮ ಪಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...