Homeಸಾಮಾಜಿಕಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

ಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು |

ಇದುವರೆಗೆ ನಾವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಯಾಲಾಜಿಕಲ್ ಆಧಾರದ ಬಗ್ಗೆ ಮಾತನಾಡಿದ್ದೇವೆ, ಅದರೊಂದಿಗೆ ಟ್ರಾನ್ಸ್ಜೆಂಡರ್ ಮತ್ತು ಇಂಟರ್‌ಸೆಕ್ಸ್ ಮಧ್ಯೆ ಇರುವ ವ್ಯತ್ಯಾಸ ಹಾಗೂ ಹೋಲಿಕೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈಗ ಆ ವ್ಯಕ್ತಿಗಳು ಬಾಲ್ಯದಿಂದ ಹಿಡಿದು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಎಂತಹ ಸಾಮಾಜಿಕ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ ಎನ್ನುವುದನ್ನು ಚರ್ಚಿಸೋಣ. ಇಂಟರ್‌ಸೆಕ್ಸ್ ಆಗಿರಲು ಜೈವಿಕವಾದ ಕಾರಣವಿದೆ ಎಂಬುದನ್ನು ನೋಡಿದ್ದೇವೆ. ಅದರಲ್ಲೂ ಈ ವ್ಯಕ್ತಿಗಳಲ್ಲಿ ಮೇಲ್ತೋರಿಕೆಗೇ ಅದು ಕಂಡುಬಂದರೂ ಸಹ ಅವರ ಸಾಮಾಜಿಕ ಅನುಭವದಲ್ಲಿ ಸಮಸ್ಯೆಗಳು ಏಕೆ ತಲೆದೋರುತ್ತವೆ? ಏಕೆಂದರೆ, ಗಂಡು ಅಥವಾ ಹೆಣ್ಣಿನ ದೇಹಕ್ಕಿರುವ ಸಾಮಾಜಿಕ ನಿರೀಕ್ಷೆಗಳಿಗಿಂತ ಅವರು ಭಿನ್ನವಾಗಿರುತ್ತಾರೆ ಮತ್ತು ನೀವು ನಿರ್ದಿಷ್ಟ ಜೆಂಡರ್‌ನ ಗುರುತಿನೊಂದಿಗೇ ಇರಬೇಕು ಎಂದು ಒತ್ತಾಯಿಸುವ ಸಾಮಾಜಿಕ ಮತ್ತು ವೈದ್ಯಕೀಯ ಒತ್ತಡಗಳು ಅವರನ್ನು ಕಾಡುತ್ತವೆ.

ವೈದ್ಯರು ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ ಪೋಷಕರಿಗೆ ನೀಡುವ ಸಲಹೆಯೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅವರು ಆ ಮಗುವನ್ನು ಒಂದು ನಿರ್ದಿಷ್ಟ ಜೆಂಡರ್‌ಗೆ (ಜನನದ ಸಮಯದಲ್ಲಿ ವೈದ್ಯರು ನಿರ್ಧರಿಸಿದ ಜೆಂಡರ್) ಒತ್ತಾಯಪೂರ್ವಕವಾಗಿ ಒಳಗೊಳ್ಳುವಂತೆ ಸೂಚಿಸುತ್ತಾರೆ. ಹಾಗೂ ಕೆಲಸಲ ಅದಕ್ಕಿಂತ ಮುಂದೆ ಹೋಗಿ ಆ ಮಕ್ಕಳ ಜೀವನವನ್ನೇ ಬದಲಿಸಬಹುದಾದಂತಹ ಯಾತನಾಮಯ ಹಾಗೂ ಜೀವನದುದ್ದಕ್ಕೂ ಗಾಯದ ಕಲೆಗಳನ್ನು ಮಾಡಬಹುದಾದ ಶಸ್ತ್ರಚಿಕಿತ್ಸೆ ಮಾಡುವಂತೆಯೂ ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಆ ಮಕ್ಕಳ ದೇಹಗಳು ಅವರಿಗೆ ನೀಡಿದ ಜೆಂಡರ್‌ಗೆ ಅನುಗುಣವಾಗಿ ಬದಲಿಸಬಹುದು ಎನ್ನುವ ನಂಬಿಕೆಯಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮುಂಬಯಿಯಲ್ಲಿ ಇಂಟರ್‌ಸೆಕ್ಸ್ ಮಗುವಿನ ಮೇಲೆ ಇಂತಹ ಒಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂಟರ್‌ಸೆಕ್ಸ್ ಆಗಿರುವ ವಯಸ್ಕರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗೊಳ್ಳುವಂತೆ ಮಾಡುವುದನ್ನು ತಾವು ಒಪ್ಪುವುದಿಲ್ಲ ಹಾಗೂ ತಂದೆತಾಯಿಗಳು ತಮ್ಮ ಇಂಟರ್‌ಸೆಕ್ಸ್ ಮಕ್ಕಳಿಗೆ ಅವರ ವಾಸ್ತವವನ್ನು ಮುಚ್ಚುಮರೆಯಿಲ್ಲದೇ ಹೇಳಬೇಕು ಹಾಗೂ ಅದರಿಂದ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಬಹುದು ಹಾಗೂ ತಮ್ಮ ಮನಸ್ಸನ್ನೂ ಅರ್ಥೈಸಿಕೊಳ್ಳಬಹುದು ಹಾಗೂ ತಾವು ಇತರರಿಗಿಂತ ಹೇಗೆ ಭಿನ್ನ ಮತ್ತು ಹೇಗೆ ಸಮಾನ ಎನ್ನುವುದನ್ನು ತಿಳಿಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆ ಮಕ್ಕಳು ಬೆಳೆದ ನಂತರ ಯಾವ ಜೆಂಡರ್‌ನೊಂದಿಗೆ ತಮ್ಮನ್ನು ತಾವು ಜೆಂಡರ್‌ನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವರು ಎಂದು, ಅದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕೆ ಮುಂಚೆಯೇ ಯಾರಿಗೂ ಹೇಳಲಾಗುವುದಿಲ್ಲ.

ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳ ಪೋಷಕರು ಮತ್ತು ವೈದ್ಯರು ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ತಪ್ಪು ಮಾಹಿತಿಯ ಆಧಾರದ ಮೇಲೆ ಆ ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಜನನೇಂದ್ರೀಯದ ಶಸ್ತ್ರಚಿಕಿತ್ಸೆ ಮಾಡಲು ಆತುರಪಡಬಾರದು. ಹಾಗೆ ಮಾಡಿ ಆ ಮಗುವಿನ ಜೆಂಡರ್ ಅನ್ನು ಬದಲಿಸಲು ಪ್ರಯತ್ನ ಮಾಡಬಾರದು. ನೀವು ನಿಮ್ಮ ಇಂಟರ್‌ಸೆಕ್ಸ್ ಮಗುವನ್ನೂ ಇತರೆ ಮಕ್ಕಳಂತೆ ಒಪ್ಪಿಕೊಳ್ಳಿ, ಅಷ್ಟೇ ಪ್ರೀತಿಸಿ ಹಾಗೂ ಅವರನ್ನು ವಯಸ್ಕರಾಗಲು ಬಿಡಿ. ಆಗ ಮಾತ್ರ ಅವರು ತಾವು ಗುರುತಿಸಿಕೊಳ್ಳಲು ಇಚ್ಛಿಸುವ ಜೆಂಡರ್ ಬಗ್ಗೆ ನಿರ್ಣಯ ತಾವೇ ತೆಗೆದುಕೊಳ್ಳುವರು. ಅದರೊಂದಿಗೆ ತಮ್ಮ ದೇಹವನ್ನು ಮಾರ್ಪಡಿಸಲು ವೈದ್ಯಕೀಯ ನೆರವು ಅಗತ್ಯವೋ ಇಲ್ಲವೋ ಎಂತಲೂ ತಾವೇ ನಿರ್ಣಯಿಸಬಹುದು. ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ, ಅಂದರೆ ಯಾರ ದೇಹ ಪುರುಷ ಅಥವಾ ಸ್ತ್ರೀಯರ ದೇಹಕ್ಕೆ ಪೂರಕವಾಗಿರುವುದಿಲ್ಲವೋ ಅಂತಹ ಮಕ್ಕಳ ತಂದೆತಾಯಿಗಳು ಆ ಮಕ್ಕಳನ್ನು ಪರಿತ್ಯಜಿಸಿ ಬಿಡುತ್ತಾರೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಇಂತಹ ಒಂದು ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳಲಿ ಎಂದು ಆ ಮಗುವಿನ ಪೋಷಕರು ಬಿಟ್ಟಿದ್ದು ವರದಿಯಾಗಿತ್ತು. ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳಿಗೆ ತಮ್ಮ ಉಳಿವಿಗಾಗಿ ಹಾಗೂ ತಾರತಮ್ಯದ ವಿರುದ್ಧದ ಹೆಣಗಾಟ ಹುಟ್ಟಿದ ಸಮಯದಿಂದಲೇ ಪ್ರಾರಂಭವಾಗುವುದು ಅತ್ಯಂತ ದುಃಖಕರ ಸಂಗತಿ.

ವೈದ್ಯರು ಇಂಟರ್‌ಸೆಕ್ಸ್ ಮಕ್ಕಳಿಗೆ ಗಂಡು ಅಥವಾ ಹೆಣ್ಣು ಎನ್ನುವ ಒಂದು ಜೆಂಡರ್ ಅನ್ನು ನಿರ್ಣಯಿಸಿಬಿಡುತ್ತಾರೆ. ಆದರೆ ಇಂಟರ್‌ಸೆಕ್ಸ್ ಆಗಲು ಒಂದು ನಿರ್ದಿಷ್ಟ ಮೂಲಕಾರಣ ಹೊಂದಿದ ಮಕ್ಕಳು, ಹುಟ್ಟಿನ ಸಂದರ್ಭದಲ್ಲಿ ತಮಗೆ ಆರೋಪಿಸಲಾದ ಜೆಂಡರ್‌ಗೆ ಅನುಗುಣವಾಗಿ ಬೆಳೆಯದೇ ಇರಬಹುದು ಎನ್ನುವುದನ್ನು ಪರಿಗಣಿಸದೇ ಮಗುವಿನ ಜೆಂಡರ್ ನಿರ್ಣಯಿಸುತ್ತಾರೆ. ಒಂದು ವೇಳೆ ಆ ಇಂಟರ್‌ಸೆಕ್ಸ್ ಮಕ್ಕಳು ತಮಗೆ ವಹಿಸಿರುವ ಜೆಂಡರ್‌ದೊಂದಿಗೆ ಹೊಂದಾಣಿಕೆಯಾದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುವುದಿಲ್ಲ, ಅವರು ಸಿಸ್‌ಜೆಂಡರ್ ಆಗುತ್ತಾರೆ. ಹಾಗೂ ಒಂದು ವೇಳೆ ತಮಗೆ ನೀಡಿರುವ ಜೆಂಡರ್‌ನೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುತ್ತಾರೆ. ಹಾಗಾಗಿ ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎನ್ನುವ ಎರಡೂ ಬೇರೆಯ ಬಗೆಗಳೇ ಆಗಿದ್ದು, ಎರಡೂ ತನ್ನದೇ ಆದ ಆರ್ಥ ಮತ್ತು ಸಾಮಾಜಿಕ ಪಯಣಗಳನ್ನು ಹೊಂದಿರುತ್ತವೆ. ಆದರೆ ಕೆಲವರು ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎರಡೂ ಒಟ್ಟಿಗೇ ಆಗಿರಲೂ ಸಾಧ್ಯ.

ಟ್ರಾನ್ಸ್ಜೆಂಡರ್ ಮಕ್ಕಳ ಅನುಭವಗಳೇನು? ಕೆಲವು ಟ್ರಾನ್ಸ್ಜೆಂಡರ್ ಮಕ್ಕಳು ತಮಗೆ ವಹಿಸಿದ ಜೆಂಡರ್‌ಗಿಂತ ತಾವು ಭಿನ್ನ ಎಂದು 3 ವರ್ಷದ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಬಿಡುತ್ತಾರೆ. ಇನ್ನಿತರರು ತಾವು ಪ್ರೌಢಾವಸ್ಥೆಗೆ ಬಂದಾಗ ಗುರುತಿಸುತ್ತಾರೆ ಹಾಗೂ ಇನ್ನೂ ಕೆಲವರು ಇನ್ನಷ್ಟು ತಡವಾಗಿಯೂ ಗುರುತಿಸುವುದುಂಟು. ಇಂತಹ ಒಂದು ಪ್ರಸಂಗವನ್ನು ಊಹಿಸಿ, ಒಬ್ಬ ಟ್ರಾನ್ಸ್ಜೆಂಡರ್ ಮಗು, ಆ ಮಗುವನ್ನು ಪೋಷಕರು ಗಂಡು ಎಂದು ನೋಡುತ್ತಿರುವ ಆ ಮಗು ಅಳುತ್ತ ಬಂದು ತನ್ನ ತಂದೆತಾಯಿಗಳಿಗೆ ತನ್ನ ಶಿಶ್ನವನ್ನು ತೆಗೆದುಹಾಕಬಹುದೇ ಎಂದು ಕೇಳುತ್ತದೆ ಅಥವಾ, ಹೆಣ್ಣುಮಗು ಎಂದು ನಿರ್ಧರಿಸಲಾದ ಆ ಮಗು, ತನ್ನ ತಂದೆತಾಯಿಗೆ ನಾಳೆ ನಾನು ನಿದ್ರೆಯಿಂದ ಎದ್ದಾಗ ಒಬ್ಬ ಹುಡುಗನಾಗಿ ಏಳಬಹುದೇ ಎಂದು ಕೇಳುತ್ತದೆ. ಇದರಿಂದ ತಂದೆತಾಯಿಗಳಿಗೆ ತುಂಬಾ ಗೊಂದಲವುಂಟಾಗಬಹುದು ಹಾಗೂ ಆ ಮಗುವಿನ ಬೆಳವಣಿಗೆಯ ಒಂದು ಹಂತ ಎಂತಲೋ ಅಥವಾ ಆ ಮಗುವಿನ ‘ಜೆಂಟರ್ ಐಡೆಂಟಿಟಿ ಡಿಸ್‌ಫೋರಿಯಾ’ ಎಂದು ಕರೆಯಲಾಗುವ ಕ್ಷೋಭೆ ತನ್ನಿಂತಾನೆ ಕಡಿಮೆಯಾಗಬಹುದು ಎಂದು ಭಾವಿಸುತ್ತಾರೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸರಿಯಾದ ವಾತಾವರಣ ಸಿಗದಾಗ ಆ ಮಕ್ಕಳು ತಮ್ಮ ಭಾವನೆಗಳನ್ನು ಪ್ರಕಟಿಸಿದೇ ತಮ್ಮಲ್ಲೇ ಹುದುಗಿಸಿಡಲು ಪ್ರಯತ್ನಿಸುತ್ತಾರೆ. ಹಾಗೂ ಅದರ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಡಿಸ್‌ಫೋರಿಯಾ ಹೊಂದಿರುವ ಕೆಲವು ಮಕ್ಕಳು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜೆಂಡರ್‌ನಂತೆ ತುಂಬಾ ತೀವ್ರವಾಗಿ ವರ್ತಿಸುತ್ತಾರೆ, ಹಾಗಾದಾಗ ಕೆಲವು ಪೋಷಕರು ಆ ಮಗುವಿನ ಜೆಂಡರ್ ಇದೇ ಇರಬಹುದು ಎಂದು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಗುವಿನೊಂದಿಗೆ ತುಂಬಾ ಅಹಿತವಾಗಿ ಹಾಗೂ ಕೆಲವು ಸಲ ಹಿಂಸಾತ್ಮಕವಾಗಿ ವರ್ತಿಸುತ್ತಾರೆ.

ಟ್ರಾನ್ಸ್ಜೆಂಡರ್ ಮಗುವೊಂದು ವಯಸ್ಕರಾಗುವ ಅನುಭವವನ್ನು ತಿಳಿದುಕೊಳ್ಳಲು ನಾವು ಈ ಡಿಸ್‌ಫೋರಿಯಾ ಅನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ. ಡಿಸ್‌ಫೋರಿಯಾ ಅಂದರೆ, ತನಗೆ ನೀಡಿರುವ ಜೆಂಡರ್‌ನೊಂದಿಗಿರುವ ಕ್ಷೋಭೆಯ ಭಾವನೆ ಅಥವಾ ಬೇರ್ಪಡಿಕೆ. ಈ ಡಿಸ್‌ಫೋರಿಯಾ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳಬಹುದು ಹಾಗೂ ಟ್ರಾನ್ಸ್ಜೆಂಡರ್ ಆಗಿ ಜೀವನ ಸಾಗಿಸುವ ಒಬ್ಬ ವ್ಯಕ್ತಿಯ ಅನುಭವ ಈ ಡಿಸ್‌ಫೋರಿಯಾದ ಅನುಭವವೇ ಆಗಿರುತ್ತದೆ. ನಮ್ಮ ಸಮಾಜವು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸದೇ ಈ ಸಮುದಾಯಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಚಿಂತಿಸಬೇಕಿದೆ.

(ಅನುವಾದ: ಡಾ.ರಾಜಶೇಖರ್ ಅಕ್ಕಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....