Homeಮುಖಪುಟಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

ಜಗಳ ತಡೆಯಲು, ವ್ಯಾಜ್ಯಗಳನ್ನು ಪರಿಹರಿಸಲು ಇರುವ ವೈಜ್ಞಾನಿಕ ವಿಧಾನಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-16

ಪರಸ್ಪರ ವೈಯ್ಯುಕ್ತಿಕ ವ್ಯಾಜ್ಯಗಳ ಪರಿಹಾರ

ಜನರು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಪರಸ್ಪರ ವೈಯ್ಯುಕ್ತಿಕ ಮತಭೇದ ಮತ್ತು ವ್ಯಾಜ್ಯಗಳು ಸ್ವಾಭಾವಿಕ, ಹಾಗೂ ಸರ್ವೇ ಸಾಮಾನ್ಯ. ಎಲ್ಲಾ ಸಂಬಂಧಗಳು ಈ ದಾರಿಯಿಂದಲೇ ಸಾಗಿ ಪರಿಪಕ್ವವಾಗಬೇಕು. ವ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಂದ ಆತಂಕಗಳು ಕಡಿಮೆಯಾಗಿ, ಬೆಳವಣಿಗೆಗೂ ಸಹಕಾರಿಯಾಗುತ್ತದೆ.

ವ್ಯಾಜ್ಯ ಎಂದ ಕೂಡಲೇ ಇದನ್ನು ಭೀಕರ ಕಾಳಗ, ಹೊಡೆದಾಟ, ಬಡಿದಾಟ ಎಂದೇ ಭಾವಿಸಬೇಕಿಲ್ಲ. ಇದು ಸಣ್ಣ ಮತಬೇಧದಿಂದ ಪ್ರಾರಂಭವಾಗಿ ಕೊನೆಗೆ ಹೊಡೆದಾಟ-ಬಡಿದಾಟಕ್ಕೂ ತಲುಪಬಹುದು. ಆದ್ದರಿಂದ ಇದನ್ನು ಸಣ್ಣದಾಗಿರುವಾಗಲೇ ಪರಿಹಾರ ಮಾಡುವುದು ಜಾಣತನದ ಕಲೆ. ತಂಡದಲ್ಲಿ ಜನರು ಕೆಲಸ ಮಾಡುತ್ತಿರುವಾಗ ಒಂದು ವ್ಯಕ್ತಿ ಅಥವಾ ಗುಂಪು ಒಟ್ಟಾಗಿ ಸೇರಿ, ಓರ್ವ ವ್ಯಕ್ತಿ ಅಥವಾ ಇನ್ನೊಂದು ಗುಂಪನ್ನು ಅದರ ಗುರಿ ತಲುಪದಂತೆ ಮಾಡಿದಾಗ ಉಂಟಾಗುವ ಸನ್ನಿವೇಶವನ್ನು ಸಂಸ್ಥೆಗಳ ಒಳವ್ಯಾಜ್ಯ ಎನ್ನಬಹುದು. ಈ ರೀತಿಯ ವ್ಯಾಜ್ಯಗಳಲ್ಲಿ ಮುಖ್ಯವಾಗಿ ಕಾಣುವುದು

· ವೈಯುಕ್ತಿಕ ಅಥವಾ ಸಂಬಂಧದ ತಿಕ್ಕಾಟ: ಇದರಲ್ಲಿ ಸ್ವ-ಪ್ರತಿಷ್ಠೆ, ನಿಷ್ಠೆ, ಅವಿಶ್ವಾಸ, ಅಗೌರವ ಮುಂತಾದ ಸಮಸ್ಯೆ ಇರುತ್ತದೆ.

· ವ್ಯವಸ್ಥೆಯ ತಿಕ್ಕಾಟ: ಇದರಲ್ಲಿ ಅವ್ಯವಸ್ಥೆ ಅಂದರೆ ಏಕ-ಕಾಲಕ್ಕೆ ಇಬ್ಬರು ಒಂದೇ ವಸ್ತುವಿನ ಉಪಯೋಗಕ್ಕೆ ಮುಂದಾಗುವುದು ಅಂದರೆ ವ್ಯವಸ್ಥೆಯಲ್ಲಿನ ಲೋಪ-ದೋಷಗಳಿಂದಾದ ವ್ಯಾಜ್ಯ.

· ಆಸಕ್ತಿಗಳ ಗುದ್ದಾಟ: ಇಬ್ಬರ ಅಥವಾ ಎರಡು ಗುಂಪಿನ ಆಸಕ್ತಿ, ಆದ್ಯತೆ ಇವುಗಳಲ್ಲಿ ಒಂದು ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿಂದಾಗುವ ವ್ಯಾಜ್ಯ.

ಇಲ್ಲಿ “ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಇಷ್ಟ” ಎಂಬ ಗಾದೆಯಂತೆ ಬರುವ ಐದು ಸನ್ನಿವೇಶಗಳು:

ಗೆಲುವು-ಸೋಲು: (Win-Lose) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ನಮ್ಮ ಪ್ರತಿಪಾದನೆಯೂ ಜಾಸ್ತಿಯಾದಾಗ ಮತ್ತು ಸಂಬಂಧಗಳಿಗೆ ಮಹತ್ವ ಕಡಿಮೆಯಾಗಿ ಸಹಕಾರವೂ ಇಲ್ಲದಾದಾಗ ಉಂಟಾಗುವ ಸನ್ನಿವೇಶವೇ ಪ್ರತಿಸ್ಪರ್ಧೆ. ಇದರಲ್ಲಿ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಮತ್ತು ನಾವು ಜಯಶಾಲಿಯಾಗಬೇಕು ಎನ್ನುವ ಹಂಬಲ. ಇದರಲ್ಲಿ ಒಂದು ಪಕ್ಷಕ್ಕೆ ಮಾತ್ರ ಜಯಕ್ಕೆ ಆಸ್ಪದವಿರುತ್ತದೆ.

ಸೋಲು-ಸೋಲು ಅಥವಾ ಹಿಂದೇಟು: (Lose – Lose) ಪದಾರ್ಥದ ಮೇಲೆ ನಮಗೆ ಆಸಕ್ತಿ ಇಲ್ಲವಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಮತ್ತು ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇಲ್ಲದೆ, ಸಹಕಾರದ ಕೊರತೆಯೂ ಇದ್ದಾಗ, ಸ್ಪರ್ಧೆಯಿಂದ ಹಿಂದೇಟು ಹಾಕಿ, ಉಮೇದುವಾರಿಕೆ ಹಿಂಪಡೆಯುವ ಸನ್ನಿವೇಶ. ಇದರಲ್ಲಿ ಇಬ್ಬರಿಗೂ ಸೋಲುವ ಸಾಧ್ಯತೆ/ಭೀತಿ, ಹಾಗಾಗಿ ಹಿಂದೇಟು. ಯಾರಿಗೂ ಜಯವಿಲ್ಲ. ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ನಡೆಯಲಿಲ್ಲ ಎಂಬ ವಿಷಾದ.

ರಾಜಿ: (Compromise) ಪದಾರ್ಥದ ಮೇಲೆ ನಮಗೆ ಆಸಕ್ತಿ ಮಧ್ಯಮವಾಗಿದ್ದು, ಪ್ರತಿಪಾದನೆಯೂ ಮಧ್ಯಮವಾದಾಗ ಹಾಗೂ ಸಂಬಂಧಗಳಿಗೆ ಮಹತ್ವ ಮಧ್ಯಮವಾಗಿದ್ದು, ಸಹಕಾರದ ಅಪೇಕ್ಷೆಯೂ ಮಧ್ಯಮವಾಗಿದ್ದಾಗ ಉಂಟಾಗುವ ಸನ್ನಿವೇಶವೇ ಪರಸ್ಪರ ರಾಜಿ/ಅಂಗೀಕಾರ. ಇಲ್ಲಿ ಮಾತು-ಕತೆಗೆ ಅವಕಾಶ. ಯಾರಿಗೂ ಸೋಲಿಲ್ಲ, ಯಾರಿಗೂ ಗೆಲುವು ಇಲ್ಲ. ಒಂದು ರೀತಿಯ ಶೂನ್ಯದ ಡ್ರಾ.

ಸೋತು ಗೆಲ್ಲುವುದು: (Accommodate) ಪದಾರ್ಥದ ಮೇಲೆ ನಮ್ಮ ಆಸಕ್ತಿ ಕಡಿಮೆಯಾಗಿ, ಪ್ರತಿಪಾದನೆಯೂ ಕಡಿಮೆಯಾದಾಗ ಹಾಗೂ ಸಂಬಂಧಗಳಿಗೆ ಅಧಿಕ ಬೆಲೆ ಇದ್ದು, ಸಹಕಾರದ ಸಾಧ್ಯತೆ ಹೆಚ್ಚಾದಾಗ ನಾವು ಸ್ಪರ್ಧೆಗೆ ಇಳಿಯದೆ, ಎದುರಾಳಿಗೆ ಆಟ ಬಿಟ್ಟುಕೊಡುವ ಮನಃಸ್ಥಿತಿಗೆ ಬರುತ್ತೇವೆ. ಇಲ್ಲಿಯೂ ಮೇಲ್ನೋಟಕ್ಕೆ ಎಲ್ಲವೂ ತಣ್ಣಗಿದ್ದರೂ ಆಟ ಬಿಟ್ಟುಕೊಟ್ಟವರು ತಮ್ಮ ಅವಕಾಶಕ್ಕೆ ಕಾಯುತ್ತಿರುತ್ತಾರೆ.

ಇಬ್ಬರಿಗೂ ಜಯ: (Win –Win) ಪದಾರ್ಥದ ಮೇಲೆ ನಮಗೆ ಹೆಚ್ಚಿನ ಆಸಕ್ತಿಯಿದ್ದು, ಪ್ರತಿಪಾದನೆಯೂ ಹೆಚ್ಚಾಗಿದ್ದರೂ ಸಹ, ಸಂಬಂಧಗಳಿಗೂ ಬೆಲೆ ಅಧಿಕವಾಗಿದ್ದು ಸಹಕಾರದ ಸಾಧ್ಯತೆಯೂ ಹೆಚ್ಚಾಗಿದ್ದಾಗ ಇಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ಇದು ಅತ್ಯಂತ ಅಪೇಕ್ಷಣೀಯ ಪರಿಹಾರ. ಇದಕ್ಕೆ ಯಾವಾಗಲೂ ಪ್ರಯತ್ನಿಸಬೇಕು.

ವ್ಯಾಜ್ಯಗಳ ಪರಿಹಾರ ಹೇಗೆ
ವ್ಯಾಜ್ಯವನ್ನು ಪರಿಹಾರ ಮಾಡಲು ಬೇಕಾಗುವ ಕಲೆಗಳು:

·         ಸಂವಹನ ಕಲೆ

·         ಭಾವನೆಗಳ ಅಥವಾ ಆತಂಕ (ಸ್ಟ್ರೆಸ್ಸ್) ನಿರ್ವಹಣೆ ಮತ್ತು ಅನುಭೂತಿ

·         ಸಮಸ್ಯೆಗಳ ಪರಿಹಾರ / ನಿರ್ಧಾರ ತೆಗೆದುಕೊಳ್ಳುವ ಕಲೆ

·         ತಂಡದಲ್ಲಿ ಕೆಲಸ ಮಾಡುವ ಕಲೆ.

ಪರಿಹಾರದ ಹೆಜ್ಜೆಗಳು:

·         ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

·         ಎದುರಾಳಿಯ ಜೊತೆ ಮಾತು-ಕತೆ ನಡೆಸುವುದು.

·         ಮಧ್ಯಸ್ತಿಕೆಯೂ ಸೇರಿದಂತೆ, ಪರಿಹಾರಕ್ಕೆ ಮಾರ್ಗಗಳನ್ನು ಹುಡುಕುವುದು.

·         ಸರಿಯಾದ ಪರ್ಯಾಯದ ಆಯ್ಕೆ.

·         ಭಾವನೆಗಳನ್ನು ನಿರ್ವಹಿಸುವುದು.

ವ್ಯಾಜ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ವ್ಯಾಜ್ಯಕ್ಕೆ ಮೂಲ ಕಾರಣ ಏನು ಎಂದು ತಿಳಿದು ಅದಕ್ಕೆ ಪರಿಹಾರ ಹುಡುಕಬೇಕು. ಇದಕ್ಕಾಗಿ ನಿಮ್ಮ ಮತ್ತು ಎದುರಾಳಿಯ ಇಬ್ಬರ ವಾದವೂ ಏನು ಎಂಬುದನ್ನು ಸ್ಪಷ್ಟವಾಗಿ ಇಡಬೇಕು. ಇಬ್ಬರ ಆಸಕ್ತಿ-ಆಸೆ-ಅಕಾಂಕ್ಷೆ-ಭೀತಿ ಏನು ಎಂಬುದನ್ನು ಅರಿಯಬೇಕು. ಇದನ್ನು ಅರಿಯಲು ಕೆಳಕಂಡ ಪ್ರಶ್ನೆಗಳು ಸಹಕಾರಿಯಾಗಬಹುದು:

ನಮ್ಮ ಆಸಕ್ತಿ ಏನು? ನಮ್ಮ ಮುಖ್ಯ ಅನುಮಾನ ಏನು? ಬೇಡಿಕೆ ಏನು? ಅವಶ್ಯಕತೆ ಏನು? ಆಕಾಂಕ್ಷೆ  ಮತ್ತು ಭೀತಿ ಏನು? ಇದೇ ರೀತಿ ಎದುರಾಳಿಯ ಮಾಹಿತಿಯನ್ನೂ ಪಡೆದು ಅದನ್ನೂ ಕೂಲಂಕಷವಾಗಿ ಅವಲೋಕಿಸಬೇಕು.

ಯಾವ ರೀತಿಯ ಸಂಧಾನಕ್ಕೆ ಬರಬಹುದು?

ಮೂರನೆಯ (ನಿಶ್ಪಕ್ಷ) ಪಕ್ಷವನ್ನು ಮಧ್ಯಸ್ಥಿಕೆ ವಹಿಸಲು ನೇಮಿಸಿದಲ್ಲಿ ನಮಗೆ ಸಂಧಾನಕ್ಕೆ ಬರಲು ಸಾಧ್ಯವೇ? ಇಬ್ಬರಿಗೂ ನ್ಯಾಯ ಸಿಕ್ಕಂತೆ ಆಗುತ್ತದೋ ಅಥವಾ ಇಬ್ಬರ ಜಗಳ ಮೂರನೆಯವರ ಲಾಭ ಆಗುತ್ತದೋ? ಯಾರು ಈ ಮೂರನೆಯ ಪಕ್ಷ? ಅವರು ಸಮಾಜದಲ್ಲಿ ಪ್ರತಿಷ್ಠಿತರೇ? ಸಂಧಾನ ಕಾನೂನಿನ ಚೌಕಟ್ಟಿನಲ್ಲಿರುತ್ತದೆಯೇ? ಅದನ್ನು ಯಾರು ಜಾರಿ ಮಾಡುವುದು ಮತ್ತು ನೋಡಿಕೊಳ್ಳುವುದು? ಖರ್ಚು ವೆಚ್ಚ ಯಾರು ಭರಿಸುವುದು? ಇಂತಹ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಬೇಕು.

ಕೆಲವೊಮ್ಮೆ ಇಬ್ಬರೂ ತಮ್ಮ ಪ್ರತಿಷ್ಠೆಯನ್ನೇ ದೊಡ್ಡದು ಮಾಡಿಕೊಂಡು, ನಿಜವಾಗಿ ಆಗುತ್ತಿರುವ ತಮ್ಮ ಆಸಕ್ತಿಯ ಹಾನಿಯನ್ನು ನಿರ್ಲಕ್ಷಿಸಿ, ತಮ್ಮ ಮುಖವನ್ನು ಉಳಿಸಿಕೊಳ್ಳುವ (ಸೇವಿಂಗ್ ದಿ ಫೇಸ್) ನಿಟ್ಟಿನಲ್ಲಿ,ನನಗೆ ಕನಿಷ್ಠ ಇಷ್ಟಾದರೂ ಸಿಗಬೇಕು ಎಂದು ಚೌಕಾಸಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ನಿಜವಾದ ಆಸಕ್ತಿ ಹಾನಿಯನ್ನು ಸಹಿಸಿಕೊಳ್ಳುತ್ತಾರೆ. ಆದ್ದರಿಂದ ಇಬ್ಬರ ಆಸಕ್ತಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ವ್ಯಾಜ್ಯ ಪರಿಹಾರ ಆಗುವ ತನಕ ಎರಡೂ ಪಕ್ಷಗಳು ತಮ್ಮ ಭಾವನಾತಿರೇಕಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ನೆನಪಿಡಿ, ಮಾತು ಬಲ್ಲವನಿಗೆ ಜಗಳವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...