Homeಅಂಕಣಗಳುನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

ನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಮ್ಮ ಸುತ್ತ ನಡೆಯುತ್ತಿರುವ ಸಣ್ಣ ಸಂಗತಿಗಳನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಅವು ಬೃಹತ್ ವಿದ್ಯಮಾನದ ನೆರಳಿನಂತಿರುತ್ತವೆ. ಮೊನ್ನೆ ಧಾರವಾಡದ ಮೇ ಸಾಹಿತ್ಯದ ಕಾರ್ಯಕ್ರಮದಲ್ಲಿದ್ದೆ. ನನ್ನ ಪಕ್ಕ ಹಿರಿಯರೊಬ್ಬರು ಕೂತಿದ್ದರು. ನಿಧಾನ ಮಾತು ಆರಂಭಿಸಿದರು. ‘ನಿಮ್ಮ ಮಗಳಾ?’ ‘ಹೀಗೆ ಫೋಟೋ ತೆಗೆದು ಓಡಾಡಿ ಮುಂದೇನು ಮಾಡುತ್ತಾಳೆ?’ .. ಆ ಮಾತುಗಳಲ್ಲಿ ಮಮತೆ ಇರಲಿಲ್ಲ. ವ್ಯಂಗ್ಯವಿತ್ತು. ಪೇಚಿಗೆ ಸಿಲುಕಿಸುವ ಇರಾದೆಯಿತ್ತು. ನಾನು ‘ಗೊತ್ತಿಲ್ಲ’ ಎಂದೆ. ‘ಚಿತ್ರ ಗಿತ್ರ ತಗೀತಾಳಂತಲ್ಲ?’ ‘ಹೂಂ’. ‘ಓದೋದು ಬರೆಯೋದು?’ ‘ಅಂಥದೇನಿಲ್ಲ’… ನಾನು ಕುರ್ಚಿಯನ್ನು ಅತ್ತಿತ್ತ ಜರುಗಿಸಿಕೊಂಡು ಕೂತೆ. ಅವಳು ಬಂದಾಗ ‘ನೋಡು ಚಿತ್ರವೆಂದರೆ ಹೀಗೆ ತಗೀಬೇಕು’ ಎಂದು ಮೊಬೈಲ್‍ನಿಂದ ತೋರಿಸಿದರು. ಬಿಜೆಪಿ ಶಾಸಕರೊಬ್ಬರ ಚಿತ್ರ ಬಿಡಿಸಿದ ಕಲಾವಿದರೊಬ್ಬರ ಚಿತ್ರಗಳವು. ಇವಳು ತಲೆಯಾಡಿಸಿ ಎದ್ದುಹೋದಳು. ಧರ್ಮದ ಕುರಿತ ಗೋಷ್ಠಿಯಲ್ಲಿ ವೀರಶೈವ- ಲಿಂಗಾಯತ ಚರ್ಚೆ ಬಂತು. ಎಚ್.ಎಸ್.ಶಿವಪ್ರಕಾಶ್, ಎಸ್ ಜಿ. ಸಿದ್ದರಾಮಯ್ಯ, ರಂಜಾನ್ ದರ್ಗಾ ಚರ್ಚಿಸುತ್ತಿದ್ದರು. ‘ಇದೇನಿದು, ಸಾಹಿತ್ಯದ ಬಗ್ಗೆ ಮಾತಾ? ತಥ್.. ನೀವು ಇಂಗ್ಲಿಷ್ ಲಿಟರೇಚರ್ ಓದಿದ್ದೀರಾ ಮೇಡಂ? ಅಲ್ಲಿ ಹೀಗೆ ಮಾತಾಡುವುದನ್ನು ಮಾತಿನ ವಾಂತಿ ಅಂತಾರೆ’. ನನಗೆ ಕೋಪ ಬರುತ್ತಿತ್ತು. ‘ನಿಮಗೆ ಬೇಡವಾದರೆ ಎದ್ದು ಹೋಗಿ’ ಎಂದೆ. ‘ಇಲ್ಲ ಇಲ್ಲ ನಾನು ಕೇಳಲಿಕ್ಕೇ ಬಂದಿದ್ದು’ ಎಂದು ಉತ್ತರ ಬಂತು. ದಿನೇಶ್ ಅಮೀನ್‍ಮಟ್ಟು, ‘ಇಷ್ಟೆಲ್ಲ ಮಾಡುವ ಬದಲು ಇವಿಎಂ ಮಶಿನ್‍ಗಳನ್ನು ಹ್ಯಾಕ್ ಮಾಡುವವರನ್ನು ತಯಾರು ಮಾಡಿಕೊಂಡಿದ್ದರೆ ಸಾಕಾಗಿತ್ತು’ ಎಂದು ಪ್ರಜಾಪ್ರಭುತ್ವದ ಅಭದ್ರತೆಯ ಬಗ್ಗೆ ವ್ಯಂಗ್ಯದಿಂದ ಮಾತು ಆರಂಭಿಸಿದರು. ನನ್ನ ಪಕ್ಕದ ವ್ಯಕ್ತಿಗೆ ಸಿಟ್ಟು ನೆತ್ತಿಗೇರಿತ್ತು. ‘ಏನಿದು ಬಾಯಿಬಡುಕರ ಹಾಗೆ ಒದರಿದರೆ..? ವಿವಿಪ್ಯಾಟ್ ಲಗತ್ತಿಸಿಲ್ವಾ?’ ಈ ಬಾರಿ ಆಸಾಮಿ ನನ್ನ ಕಡೆ ಹೊರಳಿರಲಿಲ್ಲ. ಆ ಕಡೆಯ ವ್ಯಕ್ತಿಯ ಜತೆಗೆ ಮಾತಾಡುತ್ತಿತ್ತು. ಆ ಕ್ಷಣ ವಿವಿಪ್ಯಾಟ್ ಹಿಂದೆ ಹೀಗೆ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದೆ ಅನ್ನಿಸಿತು.

ಸಂಜೆಯ ಸಮಾರೋಪದಲ್ಲಿ ಮಾತನಾಡುತ್ತ ಸುನಂದಾ ಕಡಮೆ, ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋ ಫೇಸ್ ಬುಕ್ಕಿಗೆ ಹಾಕಿದಾಗ ಕೆಲ ದಿನ ನಿರಂತರವಾಗಿ ಕೆಟ್ಟ ಮೆಸೇಜ್‍ಗಳು ಬಂದಿದ್ದನ್ನು ಪ್ರಸ್ತಾಪಿಸಿದರು. ನನಗೆ ಗಾಬರಿಯಾಯಿತು. ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋಗಳನ್ನು ನನ್ನ ಗಂಡನೂ ಮಗಳೂ ಫೇಸ್ ಬುಕ್ಕಿಗೆ ಹಾಕಿದ್ದರು. ಮಗಳಿಗೆ ಪ್ರಕಾಶ್ ರೈ ಕುರಿತು ಕೆಲವು ಕೆಟ್ಟ ಕಮೆಂಟ್‍ಗಳು ಬಂದಿದ್ದವಂತೆ. ‘ನನಗೆ ಹೇಳಲಿಲ್ಲವಲ್ಲ’ಎಂದರೆ ‘ನಾನೇ ಓದ್ಲಿಲ್ಲ, ಹೀಗೆ ಅಂತ ಕಂಡ ತಕ್ಷಣ ಬ್ಲಾಕ್ ಮಾಡಿ ಒಗೆದೆ’ ಎಂದಳು ನಿಸೂರಾಗಿ. ಇವೆಲ್ಲ ಇಷ್ಟು ಉಪೇಕ್ಷಿಸುವ ಸಂಗತಿಗಳಲ್ಲ ಎಂದು ಅವಳಿಗೆ ತಿಳಿದಿರಲಿಲ್ಲ. ಪ್ರಕಾಶ್ ರೈ, ನಮ್ಮ ಮನೆಯಲ್ಲಿ ಕೆಲಗಂಟೆ ಕಳೆದು ಹೋದ ಮೇಲೆ ನಡೆದ ಸಂಗತಿಗಳನ್ನು ನೆನಪಿಸಿಕೊಂಡೆ. ಅಕ್ಕಪಕ್ಕದವರ ಕಣ್ಣು ಬೇರೆ ನಮೂನಿ ತೂಗತೊಡಗಿವೆ ಅನ್ನಿಸಿತ್ತು. ಎಲ್ಲರ ಹಾಗೆ ಬಾಗಿಲಿಗೆ ರಂಗೋಲಿ ಇಕ್ಕಿ, ಎಲ್ಲರ ಹಾಗೆ ಆಕಾಶಬುಟ್ಟಿ ತೂಗುಬಿಟ್ಟು, ಎಲ್ಲರ ಹಾಗೆ ಕಬ್ಬು ನಿಲ್ಲಿಸಿ ತುಳಸಿ ಪೂಜೆ ಮಾಡಿ… ಏನೆಲ್ಲಾ ಮಾಡಿದರೂ ಇವರು ನಮ್ಮಂತಿಲ್ಲ ಅಂತ ಸುತ್ತಲ ಜನ ಇರುಸು-ಮುರಸು ಅನುಭವಿಸುತ್ತಿದ್ದ ಹಾಗಿತ್ತು. ಅವರ ಬಗ್ಗೆ ಪಾಪ ಅನ್ನಿಸಿತು. ನಮ್ಮ ಕೆಲಸದವಳು, ಆವತ್ತು ಪ್ರಕಾಶ್ ರೈ ಅಡಿಗೆ ಮನೆ ಬಾಗಿಲವರೆಗೂ ಬಂದು ಅವಳೊಡನೊಂದು ಫೋಟೋ ಕೂಡ ತಗೊಂಡಿದ್ದರು. ಅವಳು ಆವತ್ತು ಪ್ರಕಾಶ್ ರೈ ಬಗ್ಗೆ ಫಿದಾ ಆಗಿದ್ದು ನಿಜ. ಆದರೆ ದಿನವೂ ಒಂದೊಂದು ಪ್ರಶ್ನೆಗಳನ್ನು ತರುತ್ತಿದ್ದಳು. ‘ಅವರಿಗೆ ಕಾಂಗ್ರೆಸ್ ಏಜೆಂಟ್ ಅಂತಾರಂತಲ್ಲ?’ ‘ಅವರಿಗೆ ಎರಡು ಮದುವೆಯಾಗಿದಾವಂತಲ್ಲ?’ ಹೀಗೆ. ತಿಳಿದಷ್ಟನ್ನು ಸಮಾಧಾನದಿಂದ ವಿವರಿಸಿದ್ದೆ. ಪ್ರಕಾಶ ರೈ ಭಾಷಣದ ತುಣುಕುಗಳನ್ನು ಕೇಳಿಸಿದೆ. ‘ ಹೌದ್ ಬಿಡ್ರೀ, ಸರಿ ಬಿಡ್ರೀ,’ ಅಂತ ಸುಮ್ಮನಾಗಿದ್ದಳು. ನಿಜಕ್ಕೂ ಅವಳ ಅಂತರಂಗದಲ್ಲಿ ಹೌದೆನ್ನಿಸಿತೇ ತಿಳಿಯಲಿಲ್ಲ. ದುಡಿದು ಬದುಕುವ ಇಂತಹ ಜನರ ಅನಕ್ಷರತೆ, ಮುಗ್ಧತೆಗಳನ್ನು ಕೋಮುವಾದ ಬಳಸಿಕೊಳ್ಳುವ ಪರಿ ದಂಗುಬಡಿಯುವಂಥದ್ದು. ಕಲ್ಬುರ್ಗಿಯವರ ಹತ್ಯೆಯ ನಂತರದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮನೆಗೆ ಬರುವಾಗ ಆಟೋ ಚಾಲಕ ಕೇಳಿದ್ದ-‘ ಅವ್ರು ನಮ್ದೇವ್ರ ಮೇಲೆ ಉಚ್ಚಿ ಹೊಯ್ಬಹುದು ಅಂದಿದ್ರಂತಲ್ಲ. ಅಂಥವರ ಸಂಬಂಧ ರ್ಯಾಲಿ ಮಾಡೀರಿ? ಹುಷಾರ್ರೀ ನಿಮ್ಮ ಮನಿಗೋಳ ಮ್ಯಾಲೂ ಕಲ್ ಬಿದ್ದಾವು’. ಹಿಂದುತ್ವದ ಅಜೆಂಡಾ ತುಂಬಾ ಪ್ರಬಲವಾಗಿ ಈ ಕೆಲಸ ಮಾಡುತ್ತಿದೆ. ಸಾಮಾಜಿಕ ವ್ಯವಸ್ಥೆಯ ತಳಹದಿಯಲ್ಲಿರುವ ಜೀವಿಗಳಲ್ಲಿ ತನ್ನ ನಂಬಿಕೆಯನ್ನು ಉತ್ಪಾದಿಸುತ್ತಿದೆ. ನಿಧಾನ ವಿಷದಂತೆ ದಿನವೂ ಸುಳ್ಳುಗಳು ತಪ್ಪುಗಳು ಅರೆ ಬರೆ ವ್ಯಾಖ್ಯಾನಗಳು ಅವರನ್ನು ತಲುಪುತ್ತವೆ. ಮರು ವಿಶ್ಲೇಷಿಸಬಹುದಾದ ಸುದ್ದಿಯಾಗಿಯಲ್ಲ, ನಂಬಿಕೆಯಾಗಿ. ಈ ನಂಬಿಕೆಯ ಲೇಹ್ಯದ ಕಟುತ್ವವನ್ನು ಯಾವ ವೈಚಾರಿಕತೆಯೂ ಮಾಗಿಸಲಾರದು ಎನ್ನುವಷ್ಟು ತೀವ್ರವಾಗಿ.

ಪ್ರಕಾಶ್ ರೈ ಬಂದುಹೋದ ಕೆಲ ದಿನಗಳಲ್ಲಿ, ಮಗಳು ತನ್ನ ಗೆಳತಿಯೊಂದಿಗೆ ಸಮೀಪದ ಪರಿಚಯದ ಪಾರ್ಲರಿಗೆ ಹೋಗಿದ್ದಳು ಕೂದಲು ಶೇಪ್‍ಲೆಸ್ ಆಗಿದೆ ಎಂದು ಗೊಣಗಿಕೊಳ್ಳುತ್ತ. ಬೇಡವೆಂದರೂ ಏನೋ ಮಹತ್ವದ್ದನ್ನು ಪಡೆಯುವ ಉಮೇದಿಯಲ್ಲಿ. ಬಂದಾಗ ಕೋಪದಿಂದ ಧುಮುಗುಡುತ್ತಿದ್ದಳು. ಆ ಪಾರ್ಲರಿನಲ್ಲಿ ಗಂಡಹೆಂಡತಿ ಇಬ್ಬರೂ ಇರುತ್ತಾರೆ. ಮಕ್ಕಳ ಕೂದಲನ್ನು ಶೇಪ್ ಮಾಡೋದು ಸಾಮಾನ್ಯವಾಗಿ ಗಂಡನೇ ಅಂತೆ. ಅವರ ಮಗಳು ಇವರ ಗೆಳತಿ ಕೂಡ. ಅವರು ತೆಲುಗು ಮಾತಾಡುವ ದಲಿತರು. ಬಹಳ ಕಾಲದಿಂದ ಇಲ್ಲೇ ಇರುವವರು. ಇವಳು ಕೂದಲು ಕೊಟ್ಟು ಕೂತಾಗ ಆತ ಕೇಳಿದನಂತೆ. ‘ನಿಮ್ಮನೆಗೆ ಹುಚ್ಚ ಬಂದಿದ್ದನಂತಲ್ಲ?’ ‘ಆಂ’? ‘ಆ ಪ್ರಕಾಶ ರೈ ಅನ್ನೋ ಹುಚ್ಚ ಬಂದಿದ್ದನಂತಲ್ಲ?’ ‘ಯಾಕ್ರಿ ಅಂಕಲ್, ಅನಂತಕುಮಾರ ಹೆಗಡೆ ಬಂದಿದ್ದರೆ ಹಾಗನ್ನಬಹುದಿತ್ತು. ಹೋಗಿ ಹೋಗಿ ಅಷ್ಟು ದೊಡ್ಡ ವ್ಯಕ್ತಿಗೆ ಹೀಗನ್ನುತ್ತೀರಲ್ರೀ.. ಏನ್ರೀ ನೀವು…?’ ಆತ ದಂಗಾದನಂತೆ. ಇಷ್ಟು ಸಣ್ಣ ಹುಡುಗಿ ಹೀಗೆ ಉತ್ತರಿಸಬಹುದೆಂದುಕೊಂಡಿರಲಿಲ್ಲವೇನೋ. ನಂತರದ್ದು ಇನ್ನೊಂದು ಬಗೆಯ ವಿಕಾರ. ಚೆಂದದ ಕೂದಲನ್ನು ಅಸಡ್ಡಾಳ ಕತ್ತರಿಸಿದ್ದ. ಕಣ್ಣೊರೆಸಿಕೊಳ್ಳುತ್ತ ಬಂದವಳು ಕೂದಲ ದುಃಸ್ಥಿತಿ ನೋಡಿ ಕೊರಗುತ್ತಲೇ ಇದ್ದಳು. ಆದರೆ, ಪ್ರಕಾಶ್ ರೈ ಜತೆ ಇದ್ದ ಬಿದ್ದ ಫೋಟೋಗಳನ್ನೆಲ್ಲ ಅಪ್ ಲೋಡ್ ಮಾಡಿದಳು. ನನಗೆ ಅರ್ಧ ಹೇರ್ ಕಟಿಂಗ್ ಮಾಡಿ ಹೊರದಬ್ಬಿಸಿಕೊಂಡಿದ್ದ ಹಿರೇಕೆರೂರಿನ ದಲಿತ ಯುವಕ ನೆನಪಾಗುತ್ತಿದ್ದ. ಅವನನ್ನು ಹೊರದಬ್ಬಲಾಗಿತ್ತು. ಇವಳು ಇನ್ನೊಂದು ರೀತಿಯಲ್ಲಿ ಹೊರಬಂದಿದ್ದಳು, ಇನ್ನೆಂದೂ ಅಲ್ಲಿ ಕಾಲಿಡಲಾರದಂತೆ. ಜಾತಿ, ಧರ್ಮ, ಲಿಂಗಗಳ ಜತೆಗೆ ವೈಚಾರಿಕತೆಯೂ ತೀವ್ರ ಒತ್ತುವರಿಗೆ ಒಳಗಾಗುತ್ತಿರುವ ಕಾಲವಿದು.

ರಾಜೇಂದ್ರ ಚೆನ್ನಿಯವರು ನಮ್ಮ ಈ ವರ್ತಮಾನವನ್ನು ಜಾರ್ಜ್ ಆರ್ವೆಲ್ 1984ರಲ್ಲಿ ಬರೆದ Thought police ವಿಧಾನದೊಂದಿಗೆ ಇಡುತ್ತಾರೆ. ಬಿಗ್ ಬ್ರದರ್ ತನ್ನ ಪ್ರಜೆಗಳ ಮೇಲೆ ನಿಗಾ ಇಡುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಪರದೆಯ ಮೇಲೆ ದೊಡ್ಡ ಭಾವಚಿತ್ರ ಮೂಡುತ್ತದೆ. ಯಾರು ನಮಸ್ಕರಿಸುವುದಿಲ್ಲವೋ ಅದು ದಾಖಲಾಗುತ್ತದೆ. ಅಂಥವರನ್ನು ಅರೆಸ್ಟ್ ಮಾಡಲಾಗುತ್ತದೆ. ಇದು ಸಲೀಸಾಗಿ ನಡೆಯುತ್ತದೆ. ಯಾಕೆಂದರೆ ಪ್ರಭುತ್ವಕ್ಕೆ ಅಪಥ್ಯವೆನ್ನಿಸುವ ಚರಿತ್ರೆಯ ನೆನಪುಗಳನ್ನು ಜನರ ಮನಸ್ಸಿನಿಂದ ಶಾಶ್ವತವಾಗಿ ಅಳಿಸಲಾಗಿದೆ. ನಮ್ಮ ಸುತ್ತ ನಡೆಯುತ್ತಿರುವ ಸಣ್ಣಸಣ್ಣ ಸಂಗತಿಗಳು ಅದೇ ಕರೆಗಂಟೆಗಳೇ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...