Homeಪ್ರಪಂಚ'ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ' - ನ್ಯೂಯಾರ್ಕ್ ಟೈಮ್ಸ್

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

- Advertisement -
(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ)
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಅಡಿಪಾಯದಲ್ಲಿ ಸದಾ ಸನ್ನದ್ಧವಾಗಿರುವ ಅದರ ಅಂಗಸಂಸ್ಥೆಗಳಾದ ಕೋಮುವಾದಿ ಸಂಘಟನೆಗಳು, ಉಗ್ರ ರಾಷ್ಟ್ರೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುತ್ತಿರುವಾಗ ಮಾತ್ರ ಮೋದಿಯವರ ಬಾಯಿ ಕಟ್ಟಿಬಿಡುತ್ತದೆ, ಅವರ ಧ್ವನಿ ಹೊರಡುವುದೇ ಇಲ್ಲ. ಕಳೆದ ಜನವರಿಯಲ್ಲಿ ಜಮ್ಮುವಿನ ಎಂಟು ವರ್ಷದ ಬಾಲಕಿಯನ್ನು ಆರು ಜನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು… ಇಂಥಾ ಭಯಾನಕ ಘಟನೆಗೆ ಕಾರಣರಾದವರನ್ನು ಸಮರ್ಥಿಸಲು ನರೇಂದ್ರ ಮೋದಿಯವರ ಪಕ್ಷದ ಮಂತ್ರಿಗಳೇ ಮೆರವಣಿಗೆ ಹೊರಟರು. ಭಾರತದ ಜನ ತಮ್ಮದೇ ಸರಕಾರದ ಈ ಕಠೋರ ನಿಲುವನ್ನು ಖಂಡಿಸಿ ಈಗ ಬೀದಿಗಿಳಿದಿದ್ದಾರೆ. ಆದರೆ ಮಿಸ್ಟರ್ ಮೋದಿ ಮಾತ್ರ ಈ ಹೀನ ಪ್ರಕರಣಗಳ ಹಿಂದಿರುವ ತಮ್ಮದೇ ಬೆಂಬಲರಿಗರ ಕುರಿತು ಮಾತನಾಡುತ್ತಲೇ ಇಲ್ಲ.
…. ಅಲೆಮಾರಿ ಕುರಿಗಾಹಿ ಸಮುದಾಯವನ್ನು ಹೆದರಿಸಿ ಓಡಿಸಲು ಆ ಎಂಟು ವರ್ಷದ ಬಾಲಕಿ ಆಸೀಫಾಳನ್ನು ಜನವರಿಯಲ್ಲಿ ಅಪಹರಿಸಲಾಗಿತ್ತು. ಆಕೆಯನ್ನು ಒಂದು ಹಿಂದೂ ದೇವಾಲಯದಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕಿ ಅತ್ಯಾಚಾರ ಮಾಡಿ ನಂತರ ಕೊಂದು ಹಾಕಲಾಯಿತು. ಈ ಕೃತ್ಯ ಮಾನವನ ನೈತಿಕ ಭ್ರಷ್ಟತೆಯ ಅಧಃಪತನವನ್ನು ಸಂಕೇತಿಸುತ್ತದೆ. ಇಷ್ಟೆಲ್ಲ ನಡೆದರೂ, ಜನ ಬೀದಿಗೆ ಇಳಿಯುವವರೆಗೂ ಮೋದಿ ಈ ಭಯಾನಕ ಕೃತ್ಯದ ಕುರಿತು ಬಾಯಿಬಿಡಲು ಸಿದ್ಧರಿರಲಿಲ್ಲ.
…. ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಕ್ಷದ ಇಬ್ಬರು ಮಂತ್ರಿಗಳು ಈ ಬಂಧಿತ ಆಪಾದಿತರ ಪರವಾಗಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡು ಬೀದಿಗಿಳಿದರು. ಆಪಾದಿತರ ಪರವಾದ ಈ ರ್ಯಾಲಿಗಳ ಮುಖ್ಯ ಉದ್ದೇಶ, ಈ ಪ್ರಕರಣದ ತನಿಖೆಯನ್ನ ಸ್ಥಳೀಯ ಆಡಳಿತದಲ್ಲಿರುವ ಮುಸ್ಲಿಂ ಅಧಿಕಾರಿಗಳಿಗೆ ವಹಿಸದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಐಗೆ ವಹಿಸಬೇಕು ಎಂಬುದೇ ಆಗಿತ್ತು. ಪೊಲೀಸರು ಸದರಿ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಮತ್ತು ಕೋರ್ಟಿನಲ್ಲಿ ಚಾರ್ಜ್‍ಷೀಟ್ ಹಾಕುವುದನ್ನೂ ಅಲ್ಲಿನ ಹಿಂದೂ ವಕೀಲರು ತಡೆದಿದ್ದರು….
ತನ್ನದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಇನ್ನೊಂದು ಪ್ರಭಾವಿ ರಾಜ್ಯವಾದ ಉತ್ತರ ಪ್ರದೇಶದ ಉನ್ನಾವೋದಲ್ಲಿ ತನ್ನದೇ ಪಕ್ಷದ ಶಾಸಕನೊಬ್ಬ ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಆಪಾದಿತನಾಗಿದ್ದರೂ ಮಿಸ್ಟರ್ ಮೋದಿ ಮಾತನಾಡಲು ಬಯಸಲಿಲ್ಲ…. ತನ್ನ ಮೇಲೆ ಸದರಿ ಶಾಸಕ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆ ಪುಟ್ಟ ಹುಡುಗಿ ಪೊಲೀಸರಿಗೆ ದೂರು ನೀಡಲು ಹೋದರೂ ಸಂಬಂಧಿಸಿದ ಠಾಣಾಧಿಕಾರಿ ಆ ಶಾಸಕನ ವಿರುದ್ಧದ  ದೂರನ್ನು ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ. ಇಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಸುಳ್ಳು ಕೇಸಿನ ಮೇಲೆ ಅರೆಸ್ಟ್ ಮಾಡಲಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿಯ ತಂದೆಯನ್ನು ಅತ್ಯಾಚಾರಿ ಶಾಸಕ ಮತ್ತು ಅವನ ತಮ್ಮ ಹೊಡೆದು ಸಾಯಿಸಿದರು.
ಹಲವು ವಾರಗಳ ನಂತರ, ಮೊನ್ನೆ ಶುಕ್ರವಾರ ಮೋದಿ `ಈ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ, ಇವು ಅತ್ಯಂತ ನಾಚಿಕೆಗೇಡಿನ ಪ್ರಕರಣಗಳು, ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂಬ ಲೋಕಾಭಿರಾಮದ ಮಾತುಗಳನ್ನು ಆಡಿದ್ದಾರೆ. ಗಾಳಿಯಲ್ಲಿ ಕಡ್ಡಿಯಾಡಿಸಿದಂತಹ ಮೋದಿಯ ಮಾತುಗಳು ಈ ಕ್ರೂರ ಹಿಂಸೆಯ ಪ್ರಕರಣಗಳನ್ನು ಸಾಮಾನ್ಯ ಕ್ರೈಮ್ ಮಟ್ಟಕ್ಕೆ ಇಳಿಸಿದ್ದವು. ಬಿಜೆಪಿ ಪಕ್ಷದ ಅಂಗಸಂಘಟನೆಗಳಾದ ಹಿಂದೂ ಮಿಲಿಟಂಟ್ ಗುಂಪುಗಳಿಗೆ ಸೇರಿದ ಹಂತಕರು, ತಾವು ಪವಿತ್ರವೆಂದು ಭಾವಿಸುವ ಹಸುಗಳನ್ನು ಕೊಂದು ತಿಂದಿದ್ದಾರೆ ಎಂದು ಭಾರತದ ಶ್ರೇಣೀಕರಣದ ಕೆಳಹಂತದಲ್ಲಿರುವ ದಲಿತರ ಮೇಲೆ ಮತ್ತು ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಿ ಅನೇಕರನ್ನು ಕೊಂದು ಹಾಕಿದ್ದಾರೆ. ಇಂತಹ ಭೀಕರ ಹಿಂಸಾ ಕೃತ್ಯಗಳು ನಡೆದರೂ ಮೋದಿ ತಮ್ಮ ದಿವ್ಯ ಮೌನದ ಆಚೆಗೆ ಬರುವುದಿಲ್ಲ.
ಮೋದಿಯ ಈ ಮೌನ ಅತ್ಯಂತ ಗೊಂದಲಮಯ ಮತ್ತು ಅವರ ಶೋಚನೀಯ ಮನಃಸ್ಥಿತಿಯ ದ್ಯೋತಕ. 2012-13ರಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮೋದಿಗಿಂತ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಮುಖ್ಯಸ್ಥರು ಜನ ಬೀದಿಗಿಳಿಯುವ ಮುನ್ನವೇ ಘಟನೆಯನ್ನು ಖಂಡಿಸಿದ್ದರು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. ತಮ್ಮ ಹಿಂದಿನ ಸರ್ಕಾರದ ಒಳ್ಳೆಯ ನಡವಳಿಕೆಗಳನ್ನು ಮಿಸ್ಟರ್ ಮೋದಿ ಅನುಸರಿಸಲು ಮುಂದಾದ ಉದಾಹರಣೆಗಳೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಅನೇಕ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಮತ್ತು ಮೋದಿಯ ಬಿಜೆಪಿ ಪಕ್ಷ 2014ರ ಚುನಾವಣೆಯಲ್ಲಿ ಹಿಂದೆಂದೂ ಪಡೆಯದಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಹೊಣೆಗೇಡಿತನ, ಪ್ರಚ್ಛನ್ನ ಭ್ರಷ್ಟಾಚಾರಗಳನ್ನು ಟೀಕಿಸುತ್ತಲೇ ಮೋದಿ ಚುನಾವಣಾ ಪ್ರಚಾರ ಮಾಡಿದರು. ಮತ್ತು ಸಾಮಾನ್ಯ ಜನರ ಉತ್ತರದಾಯಿತ್ವವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎನ್ನುತ್ತಲೇ ಮಿಸ್ಟರ್ ಮೋದಿ ಅಧಿಕಾರಕ್ಕೆ ಬಂದರು.
ಆದರೆ ಇಂದು ಮಿಸ್ಟರ್ ಮೋದಿಯವರು ಒಂದು ಬಗೆಯ ಆತ್ಮವಂಚಕ ಮೌನಕ್ಕೆ ಮರೆಹೋಗಿದ್ದಾರೆ. ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶದ ಆರೋಗ್ಯವನ್ನು ಬಯಸುವ ಎಲ್ಲರೂ ಈ ಕಾರಣಕ್ಕಾಗಿ ಚಿಂತಿತರಾಗಿದ್ದಾರೆ.
ಮಿಸ್ಟರ್ ಮೋದಿ ತನ್ನ ಬೆಂಬಲಿಗರು ನಡೆಸುವ ಎಲ್ಲ ಅಪರಾಧಗಳ ಕುರಿತು ಮಾತಾಡಲೇಬೇಕೆಂದೇನೂ ಇಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಕೃತ್ಯಗಳು ಮತ್ತು ಅತ್ಯಾಚಾರಗಳು ವೈಯಕ್ತಿಕ ದ್ವೇಷಗಳಿಂದ ನಡೆದಂತವುಗಳಲ್ಲ ಮತ್ತು ನಿತ್ಯ ನಡೆಯಬಹುದಾದ ಮಾಮೂಲು ಕ್ರಿಮಿನಲ್ ಕೃತ್ಯಗಳೂ ಅಲ್ಲ. ಈ ಹಿಂಸಾಚಾರಗಳು ಯೋಜನಾಬದ್ಧ ಸಂಘಟಿತ ಅಪರಾಧ ಕೃತ್ಯಗಳು. ಈ ಕೃತ್ಯಗಳ ಹಿಂದೆ ಉಗ್ರ ರಾಷ್ಟ್ರವಾದಿ ಗುಂಪುಗಳ ಸ್ಪಷ್ಟ ಕೈವಾಡಗಳಿವೆ. ಈ ಸಂಘಟಿತ ಜನವಿರೋಧಿ ಗುಂಪುಗಳು ಮಹಿಳೆಯರಲ್ಲಿ, ದಲಿತರಲ್ಲಿ, ಮುಸ್ಲಿಮರಲ್ಲಿ ಮತ್ತು ಬಡವರಲ್ಲಿ ಭಯದ ವಾತಾವರಣವನ್ನು ಮೂಡಿಸಲೆಂದೇ ಕಾರ್ಯಾಚರಣೆಗಿಳಿದಿವೆ.
ಮಿಸ್ಟರ್ ಪ್ರಧಾನ ಮಂತ್ರಿಯವರು ಸುತ್ತಲು ನೆರೆದಿರುವ ತನ್ನ ರಾಜಕೀಯ ಬೆಂಬಲಿಗರ ಕೃತ್ಯಗಳನ್ನು ನೋಡಿ ಸುಮ್ಮನಿರುವುದಲ್ಲ, ದೇಶದ ಎಲ್ಲ ಜನರ ಹಿತ ಕಾಪಾಡಲು ಮಾತಾಡಬೇಕಿದೆ ಮತ್ತು ಮುಂದಾಗಬೇಕಿದೆ.
ಸಂಪಾದಕೀಯ ಮಂಡಳಿ
ನ್ಯೂಯಾರ್ಕ್ ಟೈಮ್ಸ್, ಅಮೆರಿಕ
ಅನುವಾದ: ಎ ಎಸ್ ಪ್ರಭಾಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...