Homeಅಂಕಣಗಳುಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

ಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

- Advertisement -
- Advertisement -

ದಷ್ಟಪುಷ್ಟವಾಗಿ ಬೆಳೆದ ಹಳ್ಳಿಕಾರ ಹೋರಿಯ ಬೀಜದಂತೆ ಕಾಣುವ ಈ ಸರಕಾರವನ್ನು ನೋಡಿದ ಬಿಜೆಪಿ ನರಿಗಳು ಖುಷಿಯಿಂದ ಊಳಿಡುತ್ತಿರಬೇಕಾದರೆ, ಅತ್ತ ದೇವೇಗೌಡರು ಮತ್ತು ಕುಮಾರಣ್ಣನವರು ಶೃಂಗೇರಿಯ ಶಾರದಾಂಬೆಯ ಆವರಣದಲ್ಲಿ ರವಿಕೆ ಹಾಕದ ವಡ್ಡರಂತೆ ಕುಳಿತು ಅದೇನೇನೋ ಮಾಡುತ್ತಿರುವ ದೃಶ್ಯ ನೋಡಿ ಫೋನು ಮಾಡಿ ಕೇಳಬೇಕೆನಿಸಿತ್ತಲ್ಲಾ. ಕೂಡಲೇ ಫೋನ್ ಮಾಡಲಾಗಿ ಕುಮಾರಣ್ಣನ ಫೋನ್ ರಿಂಗಾಯ್ತು.
ರಿಂಗ್ ಟೋನ್- “ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮ…………..

ಹಲೋ ಯಾರ್ರಿ ಮಾತಾಡದು”
“ತಾವ್ಯಾರು ಸಾರ್”
“ನಾನು ಭೋಜೆಗೌಡ.”
“ಭೋಜೆಗೌಡ್ರೆ ಕುಮಾರಣ್ಣನಿಗೆ ಫೋನ್ ಕೊಡಿ ನಾನು ಯಾಹೂ.”
“ಕೊಟ್ಟೆ ಮಾತಾಡಿ.”
“ನಮಸ್ಕಾರ ಕುಮಾರಣ್ಣರಿಗೆ ನಾನು ಯಾಹೂ.”
“ಏನೇಳ್ರಿ ಯಾಹೂ ಟೈಮಿಲ್ಲ.”
“ಒಂದೆರಡು ಮಾತು ಸಾರ್.”
“ಕೇಳಿ.”
“ಶೃಂಗೇರಿಲಿ ನಿಮ್ಮನ್ನ ಅಂಥ ಆಕಾರದಲ್ಲಿ ನೋಡಿ ಬಾಳ ಖುಷಿಯಾಯ್ತು ಸಾರ್. ಪೂಜೆ ಚೆನ್ನಾಗಿತ್ತಾ?”
“ಚೆನ್ನಾಗಿತ್ತು ಕಂಡ್ರಿ, ಕರ್ನಾಟಕ ಸರಕಾರದ ಕೆಲಸ ಮಾಡದರ ಜೊತೆಗೆ ಆಗಾಗ್ಗೆ ಬಂದು ಶಾರದಾಂಬೆ ಪೂಜೆ ಮಾಡತಕ್ಕಂತ ಪರಿಪಾಠವನ್ನ ಇಟ್ಟುಗೊಬೇಕು ಅಂತ ಅನ್ನಸ್ತು.”
“ಅದು ಸಹಜ ಸಾರ್, ವಿದ್ಯೆ ಬುದ್ಧಿಯ ಕೊರತೆ ಇದ್ದೋರು ಶಾರದೆ ಪೂಜೆ ಮಾಡ್ತಾರೆ.”
“ಅಂಗೇನು ಇಲ್ಲ. ನಮಿಗೆಲ್ಲಾ ಬುದ್ಧಿ ಕೊಡತಕ್ಕಂತ ಶಾರದೆ ನನ್ನ ಸರಕಾರದ ವಿರುದ್ಧ ಏನು ಅಪಸ್ವರಗಳಿಂದ ಮಾತನಾಡ್ತಾರೆ, ಅಂತವರಿಗೆಲ್ಲಾ ಒಳ್ಳೆ ಬುದ್ಧಿ ಕೊಡ್ಲಿ ಅಂತ ಹೇಳಿ ನಾನು ನಮ್ಮ ತಂದೆಯವರ ಸಲಹೆ ಮೇರೆಗೆ ಇಲ್ಲಿಗೆ ಬಂದು ಪೂಜೆ ಮಾಡಿ ಬೆಳಗಾವಿಗೆ ಹೋದೆ.”
“ಕುಮಾರಣ್ಣಂಗೆ ಬುದ್ಧಿ ಕೊಡುವವನು ಗಣೇಶ, ವಿದ್ಯೆ ಕೊಡೋಳು ಸರಸ್ವತಿ, ದುಡ್ಡು ಕೊಡೋಳು ಲಕ್ಷ್ಮಿ. ನಿಮಗೆ ಲಕ್ಷ್ಮಿ ಕೊರತೆ ಇಲ್ಲ ವಿದ್ಯೆ ಬುದ್ದಿ ಕೊರತೆ ಎದ್ದು ಕಾಣ್ತಾಯಿದೆ ಅಂತ ಕರ್ನಾಟಕದ ಜನ ಆಡಿಕೊಳ್ತ ಅವುರೆ.”
“ಆಡಿಕೊಳ್ತಕಂತ ಜನಗಳಿಗೆ ನಾವು ತಲೆ ಕೆಡಿಸಿಕೋಬೇಕಾಗಿಲ್ಲ ಅವರು ಸುಮ್ಮನಿದ್ರು ಆಡಿಕೊಳ್ತಾರೆ ಹೀಗೆ ಪೂಜೆ ಮಾಡಿದ್ರು ಆಡಿಕೊಳ್ತಾರೆ.”
“ಅಲ್ಲ ಸಾರ್, ಆ ಶೃಂಗೇರಿ ಬಿಜೆಪಿ ಪಾರ್ಟಿಯ ಬ್ರಾಂಚ್ ತರ ಕೆಲಸ ಮಾಡುತ್ತೆ. ಅವುರು ಏನೇ ಮಾಡಿದ್ರು ಅದು ಶ್ರೇಣೀಕೃತ ಸಮಾಜದ ಕಳಸದಂಗಿರೊ ಬ್ರಾಹ್ಮಣರಿಗಾಗಿ ಇರೊ ಮಠ ಗೊತ್ತ.”
“ನಿಮ್ಮ ಆಪಾದನೆ ನಾನು ಅಲ್ಲಗಳೀತಿನಿ.”
“ನೀವು ಅಲ್ಲಗಳೆಯೋದು ಸಹಜ. ದೇವಸ್ಥಾನದ ಹೊಸಿಲಲ್ಲೇ ಮೂರು ಕಮಲದ ಚಿತ್ರ ಕೆತ್ತಿದಾರೆ. ಆ ಕಮಲ ಬಿಜೆಪಿ ಸಿಂಬಲ್ಲು ಗೊತ್ತ.”
“ನಾನು ಹೊಸಲು ದಾಟಿಕೊಂಡೋದೆ ನೋಡಲಿಲ್ಲ.”
“ವಿದ್ಯೆ ಬುದ್ಧಿ ಕೊರತೆ ಇದ್ದಾಗ ಅಂಥವು ಅರಿವಿಗೇ ಬರದಿಲ್ಲ ಇರ್ಲಿ. ಈ ಹಿಂದೆ ಶಾರದಾಂಬೆನ ಬಂಡೆ ಮೇಲೆ ಕೂರಿಸಿದ ಚಿತ್ರ ಬರಿತಿದ್ರು.”
“ಹೌದೆ.”
“ಹೌದು ಸಾರ್ ವಿದ್ಯೆ ಬಂಡೆ ಇದ್ದಂಗೆ ನಾವು ಸಾಯೋವರಿಗೂ ಆ ಬಂಡೆ ಮೇಲೆ ಕೂತಗಂಡು ದೇಶ ಆಳಬಹುದು ಅನ್ನೊ ಸಂಕೇತ ಆ ಬಂಡೆ.”
“ಹೌದೆ.”
“ಈಗ ಬಿಜೆಪಿ ಆರ್ಟಿಸ್ಟುಗಳು ಏನು ಮಾಡ್ಯವುರೆ ಗೊತ್ತ ಸಾರ್, ಶೃಂಗೇರಿ ಶಾರದಾಂಬೆನ ಕಮಲದ ಮೇಲೆ ಕೂರಿಸಿದಾರೆ. ಅಷ್ಟೇ ಅಲ್ಲ, ಪೀಠದ ಮೇಲಿದ್ದ ಗಣಪತಿನೂ ಕಮಲದ ಮೇಲೆ ಕೂರಿಸಿದಾರೆ, ಇನ್ನು ಲಕ್ಷ್ಮಿಯಂತೂ ಯಾವಾಗ್ಲೂ ಕಮಲದ ಮೇಲಿದ್ಲು. ಅವುಳ ಅಂಗೇ ಬರದವುರೆ. ಇನ್ನ ಮುಂದೆ ಈ ಚೆಡ್ಡಿ ಕಲಾವಿದರು ನಮ್ಮ ಎಲ್ಲಾ ದೇವರುಗಳನ್ನ ಕಮಲದ ಮೇಲೆ ಕೂರುಸ್ತಾರೆ ಸಾರ್.”
“ಕೂರುಸ್ಲಿ ಬಿಡಿ.”
“ಅಲ್ಲ ಸಾರ್, ಈಗಾಗ್ಲೆ ಕಾರಿನ ಹಿಂಬದಿ ಗಾಜಿನಲ್ಲಿ ಮೆಡ್ಡಗಣ್ಣಿನ ಆಂಜನೇಯನ ಫೋಟಾ ಬರ್ಯೆಕತ್ತಾ ಅವುರೆ. ಪಾಪ ಆಂಜನೇಯನ ಆಕಾರನ ಹಾಳು ಮಾಡಿದ ಜನ, ಮುಂದೆ ಏನಾದ್ರೂ ಮಾಡ್ತಾರೆ. ನೀವು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದಿರಬೇಕು.”
“ಎಚ್ಚರಿಕೆ ಅಂದ್ರೆ.”
“ಆ ಶೃಂಗೇರಿಗ್ಯಾಕೊಯ್ತಿರಿ ಅದರ ಬದ್ಲು ಜಾರಕಿಹೊಳಿ ಮಾತಾಡಿಸಿ. ಎಂ.ಬಿ ಪಾಟೀಲ, ಬಿ.ಸಿ ಪಾಟೀಲನ ಮಾತಾಡಿಸಿ. ಅವುರ ಕೈಗೊಂದು ಉಂಗುರ ಕೊಡಿ, ಮುತ್ತು ಕೊಡಿ ಅದು ಬುಟ್ಟು ಆ ಶೃಂಗೇರಿ ಬ್ರಾಹ್ಮಣರಿಗೆ ಕೇಳಿದಷ್ಟು ಒಡವೆ ವಸ್ತ್ರ ಕೊಡ್ತಿರಲ್ಲಾ ಟಿಪ್ಪು ಸುಲ್ತಾನ್ ತರ, ನಿಮ್ಮ ಸರಕಾರ ಉಳಿತಾದ ಸಾರ್”
“ನಮ್ಮ ತಂದೆಯವರು ಹೇಳಿದ ಪ್ರಕಾರ ಶೃಂಗೇರಿ ಶಾರದಾಂಬೆ ಕೃಪೆಯಿಂದ ನಮ್ಮ ಸರಕಾರ ರಚನೆಯಾಯ್ತಂತೆ. ಆಕೆಯ ಅನುಗ್ರಹ ಇದ್ರೆ ಮುಂದೆ ಅವುಳೆ ಸರಕಾರನ ಕಾಪಾಡ್ತಳೆ ಅಂತ ಪೂಜೆ ಮಾಡಿಸಿದ್ದು. ಪೂಜೆ ಮಾಡದÀು ತಪ್ಪಾ.”
“ತಪ್ಪು ಸಾರ್, ನಿಮ್ಮ ಸರಕಾರ ರಚನೆ ಮಾಡಂಗೆ ಮಾಡಿದೋರು ಒಕ್ಕಲಿಗರು. ಅವುರು ಸಾಮೂಹಿಕವಾಗಿ ನಮ್ಮ ಕುಮಾರಣ್ಣನ ಮುಖ್ಯಮಂತ್ರಿ ಮಾಡಬೇಕು ಅಂತ ಓಟು ಮಾಡಿದ್ರು, ಶೃಂಗೇರಿ ಬ್ರಾಹ್ಮಣರಲ್ಲ. ನೀವು ಕೃತಜ್ಞತೆ ಸಲ್ಲಿಸಬೇಕಾದ್ದು ಜನಾಂಗದ ಮತದಾರರಿಗೆ, ಅದು ಬಿಟ್ಟು ಪುರೋಹಿತರ ದೇವರಿಗಲ್ಲ.”
“ಶಾರದಾಂಬೆ ಎಲ್ಲರಿಗೂ ದೇವರು ಗೊತ್ತ.”
“ಗೋಪಾಲಗೌಡ್ರು ಗೊತ್ತ ಸಾರ್”
“ಗೊತ್ತು ಅದೇ ಜಡಜು ಗೋಪಾಲಗೌಡ್ರು.”
“ಅವುರಲ್ಲ ಸಾರ್ ತೀರ್ಥಹಳ್ಳಿ-ಸಾಗರದಿಂದ ಮೂರು ಸಾರಿ ಗೆದ್ದು ಶಾಸಕರಾಗಿದ್ರು.”
“ಕೇಳಿದ್ದಿನಿ.”
“ಅವುರು ಮೂರು ಬಾರಿ ಶಾಸಕರಾಗಿದ್ರು ತೀರಿಕೊಂಡಾಗ ಒಂದು ಮನೆ ಇರಲಿಲ್ಲ, ಒಂದು ಸೈಟು ಇರಲಿಲ್ಲ, ಬ್ಯಾಂಕ್ ಅಕವುಂಟೇ ಇರಲಿಲ್ಲ.”
“ಪಾಪ ಯಾಕಂಗಿದ್ರು.”
“ಸೋಷಲಿಸ್ಟ್ ಪಾರ್ಟಿ ಕಟ್ಟೋರ ಸಿದ್ಧಾಂತ ಫಾಲೊ ಮಾಡಿ ಅಂಗಿದ್ರು. ಅವುರು ಹೇಳಿದ ಪ್ರಕಾರ ಕಾಗದವನ್ನ ಸರಸ್ವತಿ ಅನ್ನಕ್ಕಾಗಲ್ಲಾ ಈ ಬ್ರಾಹ್ಮಣರು ಹೊಟ್ಟೆಪಾಡಿಗೆ ಎಲ್ಲದಕ್ಕೂ ಒಂದು ಆಕಾರ ಕೊಟ್ಟು, ವಿಗ್ರಹ ಮಾಡಿ ಗರ್ಭಗುಡಿ ಮಾಡಿಕೊಂಡು ದಕ್ಷಿಣೆ ದತ್ತೀಲಿ ಜೀವನ ಮಾಡ್ತ ಅವುರಂತೆ, ಅಂತ ಜಾಗಕ್ಕೋಗಿ ಸರಕಾರ ಉಳಿಸಕ್ಕೆ ಪೂಜೆ ಮಾಡ್ತಾ ಸಮಯ ಹಾಳು ಮಾಡ್ತ ಕುಂತಿದ್ದೀರಲ್ಲಾ ಇದು ಸಂವಿಧಾನ ವಿರೋಧಿ ಕೆಲಸ ಅಲ್ಲವೆ?”
“ಪೂಜೆ ಮಾಡ್ತಕಂತ ವಿಷಯ ಏನಿದೆ ಅದು ನಮ್ಮ ಸಂವಿಧಾನದಲ್ಲೇ ಅದೆ ಕಂಡ್ರಿ.”
ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...