Homeಅಂಕಣಗಳುಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

ಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

- Advertisement -
- Advertisement -

ದಷ್ಟಪುಷ್ಟವಾಗಿ ಬೆಳೆದ ಹಳ್ಳಿಕಾರ ಹೋರಿಯ ಬೀಜದಂತೆ ಕಾಣುವ ಈ ಸರಕಾರವನ್ನು ನೋಡಿದ ಬಿಜೆಪಿ ನರಿಗಳು ಖುಷಿಯಿಂದ ಊಳಿಡುತ್ತಿರಬೇಕಾದರೆ, ಅತ್ತ ದೇವೇಗೌಡರು ಮತ್ತು ಕುಮಾರಣ್ಣನವರು ಶೃಂಗೇರಿಯ ಶಾರದಾಂಬೆಯ ಆವರಣದಲ್ಲಿ ರವಿಕೆ ಹಾಕದ ವಡ್ಡರಂತೆ ಕುಳಿತು ಅದೇನೇನೋ ಮಾಡುತ್ತಿರುವ ದೃಶ್ಯ ನೋಡಿ ಫೋನು ಮಾಡಿ ಕೇಳಬೇಕೆನಿಸಿತ್ತಲ್ಲಾ. ಕೂಡಲೇ ಫೋನ್ ಮಾಡಲಾಗಿ ಕುಮಾರಣ್ಣನ ಫೋನ್ ರಿಂಗಾಯ್ತು.
ರಿಂಗ್ ಟೋನ್- “ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮ…………..

ಹಲೋ ಯಾರ್ರಿ ಮಾತಾಡದು”
“ತಾವ್ಯಾರು ಸಾರ್”
“ನಾನು ಭೋಜೆಗೌಡ.”
“ಭೋಜೆಗೌಡ್ರೆ ಕುಮಾರಣ್ಣನಿಗೆ ಫೋನ್ ಕೊಡಿ ನಾನು ಯಾಹೂ.”
“ಕೊಟ್ಟೆ ಮಾತಾಡಿ.”
“ನಮಸ್ಕಾರ ಕುಮಾರಣ್ಣರಿಗೆ ನಾನು ಯಾಹೂ.”
“ಏನೇಳ್ರಿ ಯಾಹೂ ಟೈಮಿಲ್ಲ.”
“ಒಂದೆರಡು ಮಾತು ಸಾರ್.”
“ಕೇಳಿ.”
“ಶೃಂಗೇರಿಲಿ ನಿಮ್ಮನ್ನ ಅಂಥ ಆಕಾರದಲ್ಲಿ ನೋಡಿ ಬಾಳ ಖುಷಿಯಾಯ್ತು ಸಾರ್. ಪೂಜೆ ಚೆನ್ನಾಗಿತ್ತಾ?”
“ಚೆನ್ನಾಗಿತ್ತು ಕಂಡ್ರಿ, ಕರ್ನಾಟಕ ಸರಕಾರದ ಕೆಲಸ ಮಾಡದರ ಜೊತೆಗೆ ಆಗಾಗ್ಗೆ ಬಂದು ಶಾರದಾಂಬೆ ಪೂಜೆ ಮಾಡತಕ್ಕಂತ ಪರಿಪಾಠವನ್ನ ಇಟ್ಟುಗೊಬೇಕು ಅಂತ ಅನ್ನಸ್ತು.”
“ಅದು ಸಹಜ ಸಾರ್, ವಿದ್ಯೆ ಬುದ್ಧಿಯ ಕೊರತೆ ಇದ್ದೋರು ಶಾರದೆ ಪೂಜೆ ಮಾಡ್ತಾರೆ.”
“ಅಂಗೇನು ಇಲ್ಲ. ನಮಿಗೆಲ್ಲಾ ಬುದ್ಧಿ ಕೊಡತಕ್ಕಂತ ಶಾರದೆ ನನ್ನ ಸರಕಾರದ ವಿರುದ್ಧ ಏನು ಅಪಸ್ವರಗಳಿಂದ ಮಾತನಾಡ್ತಾರೆ, ಅಂತವರಿಗೆಲ್ಲಾ ಒಳ್ಳೆ ಬುದ್ಧಿ ಕೊಡ್ಲಿ ಅಂತ ಹೇಳಿ ನಾನು ನಮ್ಮ ತಂದೆಯವರ ಸಲಹೆ ಮೇರೆಗೆ ಇಲ್ಲಿಗೆ ಬಂದು ಪೂಜೆ ಮಾಡಿ ಬೆಳಗಾವಿಗೆ ಹೋದೆ.”
“ಕುಮಾರಣ್ಣಂಗೆ ಬುದ್ಧಿ ಕೊಡುವವನು ಗಣೇಶ, ವಿದ್ಯೆ ಕೊಡೋಳು ಸರಸ್ವತಿ, ದುಡ್ಡು ಕೊಡೋಳು ಲಕ್ಷ್ಮಿ. ನಿಮಗೆ ಲಕ್ಷ್ಮಿ ಕೊರತೆ ಇಲ್ಲ ವಿದ್ಯೆ ಬುದ್ದಿ ಕೊರತೆ ಎದ್ದು ಕಾಣ್ತಾಯಿದೆ ಅಂತ ಕರ್ನಾಟಕದ ಜನ ಆಡಿಕೊಳ್ತ ಅವುರೆ.”
“ಆಡಿಕೊಳ್ತಕಂತ ಜನಗಳಿಗೆ ನಾವು ತಲೆ ಕೆಡಿಸಿಕೋಬೇಕಾಗಿಲ್ಲ ಅವರು ಸುಮ್ಮನಿದ್ರು ಆಡಿಕೊಳ್ತಾರೆ ಹೀಗೆ ಪೂಜೆ ಮಾಡಿದ್ರು ಆಡಿಕೊಳ್ತಾರೆ.”
“ಅಲ್ಲ ಸಾರ್, ಆ ಶೃಂಗೇರಿ ಬಿಜೆಪಿ ಪಾರ್ಟಿಯ ಬ್ರಾಂಚ್ ತರ ಕೆಲಸ ಮಾಡುತ್ತೆ. ಅವುರು ಏನೇ ಮಾಡಿದ್ರು ಅದು ಶ್ರೇಣೀಕೃತ ಸಮಾಜದ ಕಳಸದಂಗಿರೊ ಬ್ರಾಹ್ಮಣರಿಗಾಗಿ ಇರೊ ಮಠ ಗೊತ್ತ.”
“ನಿಮ್ಮ ಆಪಾದನೆ ನಾನು ಅಲ್ಲಗಳೀತಿನಿ.”
“ನೀವು ಅಲ್ಲಗಳೆಯೋದು ಸಹಜ. ದೇವಸ್ಥಾನದ ಹೊಸಿಲಲ್ಲೇ ಮೂರು ಕಮಲದ ಚಿತ್ರ ಕೆತ್ತಿದಾರೆ. ಆ ಕಮಲ ಬಿಜೆಪಿ ಸಿಂಬಲ್ಲು ಗೊತ್ತ.”
“ನಾನು ಹೊಸಲು ದಾಟಿಕೊಂಡೋದೆ ನೋಡಲಿಲ್ಲ.”
“ವಿದ್ಯೆ ಬುದ್ಧಿ ಕೊರತೆ ಇದ್ದಾಗ ಅಂಥವು ಅರಿವಿಗೇ ಬರದಿಲ್ಲ ಇರ್ಲಿ. ಈ ಹಿಂದೆ ಶಾರದಾಂಬೆನ ಬಂಡೆ ಮೇಲೆ ಕೂರಿಸಿದ ಚಿತ್ರ ಬರಿತಿದ್ರು.”
“ಹೌದೆ.”
“ಹೌದು ಸಾರ್ ವಿದ್ಯೆ ಬಂಡೆ ಇದ್ದಂಗೆ ನಾವು ಸಾಯೋವರಿಗೂ ಆ ಬಂಡೆ ಮೇಲೆ ಕೂತಗಂಡು ದೇಶ ಆಳಬಹುದು ಅನ್ನೊ ಸಂಕೇತ ಆ ಬಂಡೆ.”
“ಹೌದೆ.”
“ಈಗ ಬಿಜೆಪಿ ಆರ್ಟಿಸ್ಟುಗಳು ಏನು ಮಾಡ್ಯವುರೆ ಗೊತ್ತ ಸಾರ್, ಶೃಂಗೇರಿ ಶಾರದಾಂಬೆನ ಕಮಲದ ಮೇಲೆ ಕೂರಿಸಿದಾರೆ. ಅಷ್ಟೇ ಅಲ್ಲ, ಪೀಠದ ಮೇಲಿದ್ದ ಗಣಪತಿನೂ ಕಮಲದ ಮೇಲೆ ಕೂರಿಸಿದಾರೆ, ಇನ್ನು ಲಕ್ಷ್ಮಿಯಂತೂ ಯಾವಾಗ್ಲೂ ಕಮಲದ ಮೇಲಿದ್ಲು. ಅವುಳ ಅಂಗೇ ಬರದವುರೆ. ಇನ್ನ ಮುಂದೆ ಈ ಚೆಡ್ಡಿ ಕಲಾವಿದರು ನಮ್ಮ ಎಲ್ಲಾ ದೇವರುಗಳನ್ನ ಕಮಲದ ಮೇಲೆ ಕೂರುಸ್ತಾರೆ ಸಾರ್.”
“ಕೂರುಸ್ಲಿ ಬಿಡಿ.”
“ಅಲ್ಲ ಸಾರ್, ಈಗಾಗ್ಲೆ ಕಾರಿನ ಹಿಂಬದಿ ಗಾಜಿನಲ್ಲಿ ಮೆಡ್ಡಗಣ್ಣಿನ ಆಂಜನೇಯನ ಫೋಟಾ ಬರ್ಯೆಕತ್ತಾ ಅವುರೆ. ಪಾಪ ಆಂಜನೇಯನ ಆಕಾರನ ಹಾಳು ಮಾಡಿದ ಜನ, ಮುಂದೆ ಏನಾದ್ರೂ ಮಾಡ್ತಾರೆ. ನೀವು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದಿರಬೇಕು.”
“ಎಚ್ಚರಿಕೆ ಅಂದ್ರೆ.”
“ಆ ಶೃಂಗೇರಿಗ್ಯಾಕೊಯ್ತಿರಿ ಅದರ ಬದ್ಲು ಜಾರಕಿಹೊಳಿ ಮಾತಾಡಿಸಿ. ಎಂ.ಬಿ ಪಾಟೀಲ, ಬಿ.ಸಿ ಪಾಟೀಲನ ಮಾತಾಡಿಸಿ. ಅವುರ ಕೈಗೊಂದು ಉಂಗುರ ಕೊಡಿ, ಮುತ್ತು ಕೊಡಿ ಅದು ಬುಟ್ಟು ಆ ಶೃಂಗೇರಿ ಬ್ರಾಹ್ಮಣರಿಗೆ ಕೇಳಿದಷ್ಟು ಒಡವೆ ವಸ್ತ್ರ ಕೊಡ್ತಿರಲ್ಲಾ ಟಿಪ್ಪು ಸುಲ್ತಾನ್ ತರ, ನಿಮ್ಮ ಸರಕಾರ ಉಳಿತಾದ ಸಾರ್”
“ನಮ್ಮ ತಂದೆಯವರು ಹೇಳಿದ ಪ್ರಕಾರ ಶೃಂಗೇರಿ ಶಾರದಾಂಬೆ ಕೃಪೆಯಿಂದ ನಮ್ಮ ಸರಕಾರ ರಚನೆಯಾಯ್ತಂತೆ. ಆಕೆಯ ಅನುಗ್ರಹ ಇದ್ರೆ ಮುಂದೆ ಅವುಳೆ ಸರಕಾರನ ಕಾಪಾಡ್ತಳೆ ಅಂತ ಪೂಜೆ ಮಾಡಿಸಿದ್ದು. ಪೂಜೆ ಮಾಡದÀು ತಪ್ಪಾ.”
“ತಪ್ಪು ಸಾರ್, ನಿಮ್ಮ ಸರಕಾರ ರಚನೆ ಮಾಡಂಗೆ ಮಾಡಿದೋರು ಒಕ್ಕಲಿಗರು. ಅವುರು ಸಾಮೂಹಿಕವಾಗಿ ನಮ್ಮ ಕುಮಾರಣ್ಣನ ಮುಖ್ಯಮಂತ್ರಿ ಮಾಡಬೇಕು ಅಂತ ಓಟು ಮಾಡಿದ್ರು, ಶೃಂಗೇರಿ ಬ್ರಾಹ್ಮಣರಲ್ಲ. ನೀವು ಕೃತಜ್ಞತೆ ಸಲ್ಲಿಸಬೇಕಾದ್ದು ಜನಾಂಗದ ಮತದಾರರಿಗೆ, ಅದು ಬಿಟ್ಟು ಪುರೋಹಿತರ ದೇವರಿಗಲ್ಲ.”
“ಶಾರದಾಂಬೆ ಎಲ್ಲರಿಗೂ ದೇವರು ಗೊತ್ತ.”
“ಗೋಪಾಲಗೌಡ್ರು ಗೊತ್ತ ಸಾರ್”
“ಗೊತ್ತು ಅದೇ ಜಡಜು ಗೋಪಾಲಗೌಡ್ರು.”
“ಅವುರಲ್ಲ ಸಾರ್ ತೀರ್ಥಹಳ್ಳಿ-ಸಾಗರದಿಂದ ಮೂರು ಸಾರಿ ಗೆದ್ದು ಶಾಸಕರಾಗಿದ್ರು.”
“ಕೇಳಿದ್ದಿನಿ.”
“ಅವುರು ಮೂರು ಬಾರಿ ಶಾಸಕರಾಗಿದ್ರು ತೀರಿಕೊಂಡಾಗ ಒಂದು ಮನೆ ಇರಲಿಲ್ಲ, ಒಂದು ಸೈಟು ಇರಲಿಲ್ಲ, ಬ್ಯಾಂಕ್ ಅಕವುಂಟೇ ಇರಲಿಲ್ಲ.”
“ಪಾಪ ಯಾಕಂಗಿದ್ರು.”
“ಸೋಷಲಿಸ್ಟ್ ಪಾರ್ಟಿ ಕಟ್ಟೋರ ಸಿದ್ಧಾಂತ ಫಾಲೊ ಮಾಡಿ ಅಂಗಿದ್ರು. ಅವುರು ಹೇಳಿದ ಪ್ರಕಾರ ಕಾಗದವನ್ನ ಸರಸ್ವತಿ ಅನ್ನಕ್ಕಾಗಲ್ಲಾ ಈ ಬ್ರಾಹ್ಮಣರು ಹೊಟ್ಟೆಪಾಡಿಗೆ ಎಲ್ಲದಕ್ಕೂ ಒಂದು ಆಕಾರ ಕೊಟ್ಟು, ವಿಗ್ರಹ ಮಾಡಿ ಗರ್ಭಗುಡಿ ಮಾಡಿಕೊಂಡು ದಕ್ಷಿಣೆ ದತ್ತೀಲಿ ಜೀವನ ಮಾಡ್ತ ಅವುರಂತೆ, ಅಂತ ಜಾಗಕ್ಕೋಗಿ ಸರಕಾರ ಉಳಿಸಕ್ಕೆ ಪೂಜೆ ಮಾಡ್ತಾ ಸಮಯ ಹಾಳು ಮಾಡ್ತ ಕುಂತಿದ್ದೀರಲ್ಲಾ ಇದು ಸಂವಿಧಾನ ವಿರೋಧಿ ಕೆಲಸ ಅಲ್ಲವೆ?”
“ಪೂಜೆ ಮಾಡ್ತಕಂತ ವಿಷಯ ಏನಿದೆ ಅದು ನಮ್ಮ ಸಂವಿಧಾನದಲ್ಲೇ ಅದೆ ಕಂಡ್ರಿ.”
ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...