Homeಸಾಹಿತ್ಯ-ಸಂಸ್ಕೃತಿಕಥೆಸ್ವರ್ಗಕ್ಕೆ ಸ್ವಾಗತ.

ಸ್ವರ್ಗಕ್ಕೆ ಸ್ವಾಗತ.

- Advertisement -
- Advertisement -

ಭಾರತದ ರಾಜಕಾರಣಿಯೊಬ್ಬ ವಾಯುವಿಹಾರಕ್ಕಾಗಿ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾರೊಂದು ಗುದ್ದಿ ಸಾವನ್ನಪ್ಪಿದರು. ಅವರ ಆತ್ಮವು ಸ್ವರ್ಗದೊಳಗೆ ಆಗಮಿಸುತ್ತದೆ. ಪ್ರವೇಶ ದ್ವಾರದ ಬಳಿ ಚಿತ್ರಗುಪ್ತ ಅವರನ್ನು ಬರಮಾಡಿಕೊಂಡರು.  “ಸ್ವರ್ಗಕ್ಕೆ ಸ್ವಾಗತ” ಎಂದು ಹೇಳಿ, “ಇಲ್ಲಿ ನೀವು ನೆಲೆಗೊಳ್ಳುವುದಕ್ಕಿಂತ ಮುಂಚೆ ಇಲ್ಲಿನ ಎಲ್ಲವೂ ಅಧಿಕೃತವಾಗಿ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ನೀವೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ, ಅದಕ್ಕಾಗಿ ಒಂದು ದಿನ ಸ್ವರ್ಗದಲ್ಲಿಯೂ, ಇನ್ನೊಂದು ನರಕದಲ್ಲಿಯೂ ಇದ್ದು ನಿಮಗೆ ಸೂಕ್ತವಾದುದ್ದನ್ನು ಆರಿಸಿಕೊಳ್ಳಬಹುದೆಂದು ಚಿತ್ರಗುಪ್ತ ಹೇಳಿದರು. ಆಗ ರಾಜಕಾರಣಿ “ಸಮಸ್ಯೆ ಇಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ, ನನಗೆ ಇಷ್ಟ ಆಯಿತು. ನರಕ ನೋಡುವ ಅಗತ್ಯವಿಲ್ಲ, ಸ್ವರ್ಗದಲ್ಲೇ ಇರುತ್ತೇನೆ ಒಳಗೆ ಹೋಗೋಣ” ಎಂದು ಹೇಳಿದರು.

ಆಗ ಚಿತ್ರಗುಪ್ತ “ಕ್ಷಮಿಸಿ, ನಮಗೆ ನಮ್ಮದೇ ಆದ ನಿಯಮಗಳಿವೆ, ನಾನು ಮೇಲಿನವರಿಂದ ಆದೇಶಗಳನ್ನು ಹೊಂದಿದ್ದೇನೆ, ಹಾಗಾಗಿ ನೀವು ಇದನ್ನು ಪಾಲಿಸಲೇಬೇಕೆಂದು ಮನವಿ ಮಾಡಿದನು. ಆಗ ರಾಜಕಾರಣಿ ಇರಲಿ ಒಂದು ದಿನ ತಾನೇ ನರಕ ಹೇಗಿರುತ್ತೆ ಅಂತ ನೋಡೇ ಬಿಡೋಣ ಎಂದು ಒಪ್ಪಿಕೊಂಡರು. ಆಗ ಚಿತ್ರಗುಪ್ತ ಮತ್ತೆ ಕೇಳಿದನು ಮೊದಲು ನರಕಕ್ಕೆ ಹೋಗೋಣವೋ ಅಥವಾ ಸ್ವರ್ಗಕ್ಕೆ ಹೋಗೋಣವೋ ಅಂದಾಗ, ರಾಜಕಾರಣಿ ಮೊದಲು ನರಕವೇ ಇರಲಿ ಎಂದನು.

ನಂತರ ಚಿತ್ರಗುಪ್ತ ಅವರನ್ನು ಲಿಫ್ಟಿಗೆ ಹತ್ತಿಸಿಕೊಂಡನು. ಲಿಪ್ಟು ಅವರನ್ನು ಹೊತ್ತು ಕೆಳಕ್ಕೆ ಹೋಯಿತು. ಅದು ಎಷ್ಟು ಆಳಕ್ಕೆ ಹೋಗುತ್ತಿದೆ ಎಂದು ಗಾಬರಿಗೊಳ್ಳುವಷ್ಟರಲ್ಲೇ ಅವರು ನರಕದಲ್ಲಿದ್ದರು. ಬಾಗಿಲು ತೆರೆದಾಗ ರಾಜಕಾರಣಿ ಸುತ್ತಲೂ ವಿಶಾಲವಾದ ಗಾಲ್ಫ್ ಮೈದಾನವಿತ್ತು. ದೂರದಲ್ಲಿ ಕಾಣುತ್ತಿದ್ದ ಅಂಗಳದಲ್ಲಿ ಅವನ ಸ್ನೇಹಿತರು ಮತ್ತು ಜತೆಗೆ ಕೂಡಿ ಕೆಲಸ ಮಾಡಿದ್ದ ರಾಜಕಾರಣಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಮೊಗದಲ್ಲೂ ಮಂದಹಾಸ, ಶುಭ್ರ ಬಟ್ಟೆಗಳು ಮನ ತಣಿಸುತ್ತಿದ್ದವು. ಅವರೆಲ್ಲರೂ ಓಡಿಬಂದು ತಮ್ಮ ಗೆಳೆಯನಿಗೆ ಶುಭ ಕೋರಿ, ಕೈಕುಲುಕಿದರು. ಬದುಕಿದ್ದಾಗ ಜನರನ್ನು ತುಳಿದು ತಾವು ಹೇಗೆ ಸಿರಿವಂತರಾದೆವು ಎಂಬ ನೆನಪುಗಳನ್ನು ಮೆಲುಕು ಹಾಕಿದರು.

ಎಲ್ಲರೂ ಸೇರಿ ಒಂದು ಸುತ್ತು ಗಾಲ್ಫ್ ಆಡಿ, ಅಲ್ಲಿದ್ದ ಬಗೆಬಗೆಯ ಕಡಲ ತಿನಿಸುಗಳನ್ನು ಸವಿದರು. ಬಳಿಕ, ದ್ರಾಕ್ಷಾರಸ ಅವರೆಲ್ಲರನ್ನು ಉಲ್ಲಸಿತರನ್ನಾಗಿ ಮಾಡಿತು. ಔತಣಕೂಟದಲ್ಲಿ ವಿದೂಷಕನೊಬ್ಬನು ಥರೇವಹಾರಿ ಜೋಕ್ಸ್ ಮಾಡುತ್ತಾ ನಗುತ್ತಾ, ನಗಿಸುತ್ತಾ ಅವರೊಡನೆ ಸಂತಸದ ಕ್ಷಣಗಳಿಗೆ ಸಾಕ್ಷಿಯಾದನು. ಇವರೆಲ್ಲರೂ ಸಂತೋಷ ಕೂಟದಲ್ಲಿ ಮೈಮರೆತಿದ್ದಾಗ, ರಾಜಕಾರಣಿಗೆ ಅರಿವಾಯಿತು. “ಒಂದು ದಿನ ಮುಗೀತು ಇದು ಹೊರಡುವ ಸಮಯ”. ಪ್ರತಿಯೊಬ್ಬರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು, ಲಿಫ್ಟ್ ಮೇಲಕ್ಕೆ ಹೋಯಿತು.

ಲಿಫ್ಟ್ ಮೇಲಕ್ಕೆ, ಮತ್ತಷ್ಟು ಮೇಲಕ್ಕೆ ಹೋಗಿ ಸ್ವರ್ಗದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಶಾಂತತೆ ಇರುತ್ತದೆ. ಅವರು ಮೋಡಗಳಿಂದ ಮೋಡಕ್ಕೆ ನೆಗೆಯುತ್ತಾರೆ, ತಂತಿವಾದ್ಯಗಳನ್ನು ನುಡಿಸುತ್ತಾರೆ, ಗಿಟಾರ್‍ರನ್ನು ಬಾರಿಸುತ್ತಾರೆ, ಹಾಡು ಹೇಳುತ್ತಾರೆ. ಅವರು ಬಹಳ ಸಂತೋಷದಿಂದ ಸಮಯವನ್ನು ಕಳೆಯುತ್ತಾರೆ ಮತ್ತು ಆಗಷ್ಟೇ ಅವರಿಗೆ ಹೊಳೆಯುತ್ತದೆ 24 ಗಂಟೆಗಳು ಮುಗಿದು ಹೋಗಿದೆ ಎಂದು. ಮತ್ತೆ ಚಿತ್ರಗುಪ್ತ ರಾಜಕಾರಣಿಯ ಬಳಿ ಬರುತ್ತಾರೆ, “ನೀವು ಒಂದು ದಿನ ನರಕದಲ್ಲೂ ಮತ್ತೊಂದು ದಿನ ಸ್ವರ್ಗದಲ್ಲೂ ಕಳೆದಿದ್ದೀರಾ. ಈಗ ನಿಮ್ಮ ಶಾಶ್ವತ ನೆಲೆಯನ್ನು ಆಯ್ಕೆ ಮಾಡಿ”.

ರಾಜಕಾರಣಿ ಒಂದು ನಿಮಿಷ ಯೋಚಿಸಿ ಉತ್ತರ ನೀಡುತ್ತಾರೆ: “ನಾನು ಮುಂಚೆ ಸ್ವರ್ಗ ಸುಖಕರವಾಗಿಯೂ ನರಕ ಭಯಾನಕವಾಗಿಯೂ ಇರುತ್ತದೆ ಎಂದು ತಪ್ಪು ತಿಳಿದಿದ್ದೆ. ಆದರೆ ಇಲ್ಲಿ ಬಂದು ನೋಡಿದ ನಂತರ ಸ್ವರ್ಗಕ್ಕಿಂತ ನರಕವೇ ಅದ್ಭುತವಾಗಿದೆ ಅನ್ನಿಸುತ್ತಿದೆ. ಹಾಗಾಗಿ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದನು. ಇಂದು ಅಂತಿಮ ನಿರ್ಧಾರವೇ ಎಂದು ಚಿತ್ರಗುಪ್ತ ಕೇಳಿದರೆ ರಾಜಕಾರಣಿ ಯೆಸ್ 100% ಎಂದನು. ಸರಿ ಎಂದು ಚಿತ್ರಗುಪ್ತ ರಾಜಕಾರಣಿಯನ್ನು ನರಕಕ್ಕೆ ತಂದು ಬಿಡುತ್ತಾನೆ.

ಆಗ ರಾಜಕಾರಣಿ ಅವನ ಕಣ್ಣನ್ನು ಅವನೇ ನಂಬಲು ಸಿದ್ದವಿಲ್ಲ. ಏಕೆಂದರೆ ಅವನು ಬಂಜರು ಭೂಮಿಯ ಮಧ್ಯ ಭಾಗದಲ್ಲಿ ನಿಂತಿರುತ್ತಾನೆ. ಸುತ್ತಲೂ ತ್ಯಾಜ್ಯ, ಕಸ ತುಂಬಿ ಹೋಗಿರುತ್ತದೆ. ತನ್ನ ಎಲ್ಲಾ ಸ್ನೇಹಿತರು ಚಿಂದಿಬಟ್ಟೆ ತೊಟ್ಟು ಕಸ ಆಯ್ದು ಕಪ್ಪು ಚೀಲದಲ್ಲಿ ತುಂಬುತ್ತಿರುತ್ತಾರೆ. ಮೇಲಿನಿಂದ ಇನ್ನಷ್ಟು ಕಸ ಬೀಳುತ್ತಿರುತ್ತದೆ. ರೋಧನೆ, ನೋವಿನ ವಾತವರಣವಿರುತ್ತದೆ.

ಆತನ ಸ್ನೇಹಿತರು ಅವನನ್ನು ಕೂಗಿ, ಏನು ನೋಡುತ್ತಿದ್ದೀಯ ಬಾ ಕೆಲಸ ಮಾಡು ಅನ್ನುತ್ತಾರೆ. ಆಗ ರಾಜಕಾರಣಿ ಕಣ್ಣುಜ್ಜಿಕೊಂಡು “ನನಗೆ ಏನೊಂದು ಅರ್ಥವಾಗುತ್ತಿಲ್ಲ” ಎಂದು ತೊದಲುತ್ತಾ ಹೇಳುತ್ತಾನೆ.“ಮೊನ್ನೆ ದಿನ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ ಗಾಲ್ಫ್ ಕೋರ್ಟ್, ಕ್ಲಬ್ ಹೌಸ್ ಇತ್ತು. ನಾವು ಕಡಲನಳ್ಳಿ, ಮೀನಿನ ಚಟ್ನಿ, ದ್ರಾಕ್ಷಿಯ ಮದ್ಯವನ್ನು ಸೇವಿಸಿದ್ದೆವು. ನಾವೆಲ್ಲಾರೂ ಒಟ್ಟಿಗೆ ಕುಣಿದು, ತುಂಬಾ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಆದರೆ ಈಗ ಕೇವಲ ಪಾಳು ಭೂಮಿ ಮಾತ್ರ ಇದೆ. ಕಸದಿಂದ ತುಂಬಿ ಹೋಗಿದೆ, ನನ್ನ ಸ್ನೇಹಿತರು ಶೋಚನೀಯವಾಗಿ ಕಾಣುತ್ತಿದ್ದಾರೆ. ಏನು ಆಯಿತು?” ಎಂದು ವಿದೂಷಕನನ್ನು ಕೇಳುತ್ತಾನೆ.

ಆಗ ವಿದೂಷಕ ಅವನ ಕಡೆಗೆ ನಗೆ ಬೀರುತ್ತಾ  “ಮೊನ್ನೆ ದಿನ ನೀನು ಬಂದಾಗ ನಾವು ಚುನಾವಣಾ ಪ್ರಚಾರ ಮಾಡುತ್ತಿದ್ದೆವು. ಇವತ್ತು ನೀನು ನಮಗೆ ಓಟ್ ಮಾಡಿದೆ ಅಷ್ಟೇ” ಎಂದರು.

ನೀವೂ ಮೋಸಹೋಗಬೇಡಿ 2019ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಓಟ್ ಮಾಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...