Homeಸಾಹಿತ್ಯ-ಸಂಸ್ಕೃತಿಕಥೆಸ್ವರ್ಗಕ್ಕೆ ಸ್ವಾಗತ.

ಸ್ವರ್ಗಕ್ಕೆ ಸ್ವಾಗತ.

- Advertisement -
- Advertisement -

ಭಾರತದ ರಾಜಕಾರಣಿಯೊಬ್ಬ ವಾಯುವಿಹಾರಕ್ಕಾಗಿ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾರೊಂದು ಗುದ್ದಿ ಸಾವನ್ನಪ್ಪಿದರು. ಅವರ ಆತ್ಮವು ಸ್ವರ್ಗದೊಳಗೆ ಆಗಮಿಸುತ್ತದೆ. ಪ್ರವೇಶ ದ್ವಾರದ ಬಳಿ ಚಿತ್ರಗುಪ್ತ ಅವರನ್ನು ಬರಮಾಡಿಕೊಂಡರು.  “ಸ್ವರ್ಗಕ್ಕೆ ಸ್ವಾಗತ” ಎಂದು ಹೇಳಿ, “ಇಲ್ಲಿ ನೀವು ನೆಲೆಗೊಳ್ಳುವುದಕ್ಕಿಂತ ಮುಂಚೆ ಇಲ್ಲಿನ ಎಲ್ಲವೂ ಅಧಿಕೃತವಾಗಿ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ನೀವೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ, ಅದಕ್ಕಾಗಿ ಒಂದು ದಿನ ಸ್ವರ್ಗದಲ್ಲಿಯೂ, ಇನ್ನೊಂದು ನರಕದಲ್ಲಿಯೂ ಇದ್ದು ನಿಮಗೆ ಸೂಕ್ತವಾದುದ್ದನ್ನು ಆರಿಸಿಕೊಳ್ಳಬಹುದೆಂದು ಚಿತ್ರಗುಪ್ತ ಹೇಳಿದರು. ಆಗ ರಾಜಕಾರಣಿ “ಸಮಸ್ಯೆ ಇಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ, ನನಗೆ ಇಷ್ಟ ಆಯಿತು. ನರಕ ನೋಡುವ ಅಗತ್ಯವಿಲ್ಲ, ಸ್ವರ್ಗದಲ್ಲೇ ಇರುತ್ತೇನೆ ಒಳಗೆ ಹೋಗೋಣ” ಎಂದು ಹೇಳಿದರು.

ಆಗ ಚಿತ್ರಗುಪ್ತ “ಕ್ಷಮಿಸಿ, ನಮಗೆ ನಮ್ಮದೇ ಆದ ನಿಯಮಗಳಿವೆ, ನಾನು ಮೇಲಿನವರಿಂದ ಆದೇಶಗಳನ್ನು ಹೊಂದಿದ್ದೇನೆ, ಹಾಗಾಗಿ ನೀವು ಇದನ್ನು ಪಾಲಿಸಲೇಬೇಕೆಂದು ಮನವಿ ಮಾಡಿದನು. ಆಗ ರಾಜಕಾರಣಿ ಇರಲಿ ಒಂದು ದಿನ ತಾನೇ ನರಕ ಹೇಗಿರುತ್ತೆ ಅಂತ ನೋಡೇ ಬಿಡೋಣ ಎಂದು ಒಪ್ಪಿಕೊಂಡರು. ಆಗ ಚಿತ್ರಗುಪ್ತ ಮತ್ತೆ ಕೇಳಿದನು ಮೊದಲು ನರಕಕ್ಕೆ ಹೋಗೋಣವೋ ಅಥವಾ ಸ್ವರ್ಗಕ್ಕೆ ಹೋಗೋಣವೋ ಅಂದಾಗ, ರಾಜಕಾರಣಿ ಮೊದಲು ನರಕವೇ ಇರಲಿ ಎಂದನು.

ನಂತರ ಚಿತ್ರಗುಪ್ತ ಅವರನ್ನು ಲಿಫ್ಟಿಗೆ ಹತ್ತಿಸಿಕೊಂಡನು. ಲಿಪ್ಟು ಅವರನ್ನು ಹೊತ್ತು ಕೆಳಕ್ಕೆ ಹೋಯಿತು. ಅದು ಎಷ್ಟು ಆಳಕ್ಕೆ ಹೋಗುತ್ತಿದೆ ಎಂದು ಗಾಬರಿಗೊಳ್ಳುವಷ್ಟರಲ್ಲೇ ಅವರು ನರಕದಲ್ಲಿದ್ದರು. ಬಾಗಿಲು ತೆರೆದಾಗ ರಾಜಕಾರಣಿ ಸುತ್ತಲೂ ವಿಶಾಲವಾದ ಗಾಲ್ಫ್ ಮೈದಾನವಿತ್ತು. ದೂರದಲ್ಲಿ ಕಾಣುತ್ತಿದ್ದ ಅಂಗಳದಲ್ಲಿ ಅವನ ಸ್ನೇಹಿತರು ಮತ್ತು ಜತೆಗೆ ಕೂಡಿ ಕೆಲಸ ಮಾಡಿದ್ದ ರಾಜಕಾರಣಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಮೊಗದಲ್ಲೂ ಮಂದಹಾಸ, ಶುಭ್ರ ಬಟ್ಟೆಗಳು ಮನ ತಣಿಸುತ್ತಿದ್ದವು. ಅವರೆಲ್ಲರೂ ಓಡಿಬಂದು ತಮ್ಮ ಗೆಳೆಯನಿಗೆ ಶುಭ ಕೋರಿ, ಕೈಕುಲುಕಿದರು. ಬದುಕಿದ್ದಾಗ ಜನರನ್ನು ತುಳಿದು ತಾವು ಹೇಗೆ ಸಿರಿವಂತರಾದೆವು ಎಂಬ ನೆನಪುಗಳನ್ನು ಮೆಲುಕು ಹಾಕಿದರು.

ಎಲ್ಲರೂ ಸೇರಿ ಒಂದು ಸುತ್ತು ಗಾಲ್ಫ್ ಆಡಿ, ಅಲ್ಲಿದ್ದ ಬಗೆಬಗೆಯ ಕಡಲ ತಿನಿಸುಗಳನ್ನು ಸವಿದರು. ಬಳಿಕ, ದ್ರಾಕ್ಷಾರಸ ಅವರೆಲ್ಲರನ್ನು ಉಲ್ಲಸಿತರನ್ನಾಗಿ ಮಾಡಿತು. ಔತಣಕೂಟದಲ್ಲಿ ವಿದೂಷಕನೊಬ್ಬನು ಥರೇವಹಾರಿ ಜೋಕ್ಸ್ ಮಾಡುತ್ತಾ ನಗುತ್ತಾ, ನಗಿಸುತ್ತಾ ಅವರೊಡನೆ ಸಂತಸದ ಕ್ಷಣಗಳಿಗೆ ಸಾಕ್ಷಿಯಾದನು. ಇವರೆಲ್ಲರೂ ಸಂತೋಷ ಕೂಟದಲ್ಲಿ ಮೈಮರೆತಿದ್ದಾಗ, ರಾಜಕಾರಣಿಗೆ ಅರಿವಾಯಿತು. “ಒಂದು ದಿನ ಮುಗೀತು ಇದು ಹೊರಡುವ ಸಮಯ”. ಪ್ರತಿಯೊಬ್ಬರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು, ಲಿಫ್ಟ್ ಮೇಲಕ್ಕೆ ಹೋಯಿತು.

ಲಿಫ್ಟ್ ಮೇಲಕ್ಕೆ, ಮತ್ತಷ್ಟು ಮೇಲಕ್ಕೆ ಹೋಗಿ ಸ್ವರ್ಗದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಶಾಂತತೆ ಇರುತ್ತದೆ. ಅವರು ಮೋಡಗಳಿಂದ ಮೋಡಕ್ಕೆ ನೆಗೆಯುತ್ತಾರೆ, ತಂತಿವಾದ್ಯಗಳನ್ನು ನುಡಿಸುತ್ತಾರೆ, ಗಿಟಾರ್‍ರನ್ನು ಬಾರಿಸುತ್ತಾರೆ, ಹಾಡು ಹೇಳುತ್ತಾರೆ. ಅವರು ಬಹಳ ಸಂತೋಷದಿಂದ ಸಮಯವನ್ನು ಕಳೆಯುತ್ತಾರೆ ಮತ್ತು ಆಗಷ್ಟೇ ಅವರಿಗೆ ಹೊಳೆಯುತ್ತದೆ 24 ಗಂಟೆಗಳು ಮುಗಿದು ಹೋಗಿದೆ ಎಂದು. ಮತ್ತೆ ಚಿತ್ರಗುಪ್ತ ರಾಜಕಾರಣಿಯ ಬಳಿ ಬರುತ್ತಾರೆ, “ನೀವು ಒಂದು ದಿನ ನರಕದಲ್ಲೂ ಮತ್ತೊಂದು ದಿನ ಸ್ವರ್ಗದಲ್ಲೂ ಕಳೆದಿದ್ದೀರಾ. ಈಗ ನಿಮ್ಮ ಶಾಶ್ವತ ನೆಲೆಯನ್ನು ಆಯ್ಕೆ ಮಾಡಿ”.

ರಾಜಕಾರಣಿ ಒಂದು ನಿಮಿಷ ಯೋಚಿಸಿ ಉತ್ತರ ನೀಡುತ್ತಾರೆ: “ನಾನು ಮುಂಚೆ ಸ್ವರ್ಗ ಸುಖಕರವಾಗಿಯೂ ನರಕ ಭಯಾನಕವಾಗಿಯೂ ಇರುತ್ತದೆ ಎಂದು ತಪ್ಪು ತಿಳಿದಿದ್ದೆ. ಆದರೆ ಇಲ್ಲಿ ಬಂದು ನೋಡಿದ ನಂತರ ಸ್ವರ್ಗಕ್ಕಿಂತ ನರಕವೇ ಅದ್ಭುತವಾಗಿದೆ ಅನ್ನಿಸುತ್ತಿದೆ. ಹಾಗಾಗಿ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದನು. ಇಂದು ಅಂತಿಮ ನಿರ್ಧಾರವೇ ಎಂದು ಚಿತ್ರಗುಪ್ತ ಕೇಳಿದರೆ ರಾಜಕಾರಣಿ ಯೆಸ್ 100% ಎಂದನು. ಸರಿ ಎಂದು ಚಿತ್ರಗುಪ್ತ ರಾಜಕಾರಣಿಯನ್ನು ನರಕಕ್ಕೆ ತಂದು ಬಿಡುತ್ತಾನೆ.

ಆಗ ರಾಜಕಾರಣಿ ಅವನ ಕಣ್ಣನ್ನು ಅವನೇ ನಂಬಲು ಸಿದ್ದವಿಲ್ಲ. ಏಕೆಂದರೆ ಅವನು ಬಂಜರು ಭೂಮಿಯ ಮಧ್ಯ ಭಾಗದಲ್ಲಿ ನಿಂತಿರುತ್ತಾನೆ. ಸುತ್ತಲೂ ತ್ಯಾಜ್ಯ, ಕಸ ತುಂಬಿ ಹೋಗಿರುತ್ತದೆ. ತನ್ನ ಎಲ್ಲಾ ಸ್ನೇಹಿತರು ಚಿಂದಿಬಟ್ಟೆ ತೊಟ್ಟು ಕಸ ಆಯ್ದು ಕಪ್ಪು ಚೀಲದಲ್ಲಿ ತುಂಬುತ್ತಿರುತ್ತಾರೆ. ಮೇಲಿನಿಂದ ಇನ್ನಷ್ಟು ಕಸ ಬೀಳುತ್ತಿರುತ್ತದೆ. ರೋಧನೆ, ನೋವಿನ ವಾತವರಣವಿರುತ್ತದೆ.

ಆತನ ಸ್ನೇಹಿತರು ಅವನನ್ನು ಕೂಗಿ, ಏನು ನೋಡುತ್ತಿದ್ದೀಯ ಬಾ ಕೆಲಸ ಮಾಡು ಅನ್ನುತ್ತಾರೆ. ಆಗ ರಾಜಕಾರಣಿ ಕಣ್ಣುಜ್ಜಿಕೊಂಡು “ನನಗೆ ಏನೊಂದು ಅರ್ಥವಾಗುತ್ತಿಲ್ಲ” ಎಂದು ತೊದಲುತ್ತಾ ಹೇಳುತ್ತಾನೆ.“ಮೊನ್ನೆ ದಿನ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ ಗಾಲ್ಫ್ ಕೋರ್ಟ್, ಕ್ಲಬ್ ಹೌಸ್ ಇತ್ತು. ನಾವು ಕಡಲನಳ್ಳಿ, ಮೀನಿನ ಚಟ್ನಿ, ದ್ರಾಕ್ಷಿಯ ಮದ್ಯವನ್ನು ಸೇವಿಸಿದ್ದೆವು. ನಾವೆಲ್ಲಾರೂ ಒಟ್ಟಿಗೆ ಕುಣಿದು, ತುಂಬಾ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಆದರೆ ಈಗ ಕೇವಲ ಪಾಳು ಭೂಮಿ ಮಾತ್ರ ಇದೆ. ಕಸದಿಂದ ತುಂಬಿ ಹೋಗಿದೆ, ನನ್ನ ಸ್ನೇಹಿತರು ಶೋಚನೀಯವಾಗಿ ಕಾಣುತ್ತಿದ್ದಾರೆ. ಏನು ಆಯಿತು?” ಎಂದು ವಿದೂಷಕನನ್ನು ಕೇಳುತ್ತಾನೆ.

ಆಗ ವಿದೂಷಕ ಅವನ ಕಡೆಗೆ ನಗೆ ಬೀರುತ್ತಾ  “ಮೊನ್ನೆ ದಿನ ನೀನು ಬಂದಾಗ ನಾವು ಚುನಾವಣಾ ಪ್ರಚಾರ ಮಾಡುತ್ತಿದ್ದೆವು. ಇವತ್ತು ನೀನು ನಮಗೆ ಓಟ್ ಮಾಡಿದೆ ಅಷ್ಟೇ” ಎಂದರು.

ನೀವೂ ಮೋಸಹೋಗಬೇಡಿ 2019ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಓಟ್ ಮಾಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...