Homeಸಾಹಿತ್ಯ-ಸಂಸ್ಕೃತಿಕಥೆಸ್ವರ್ಗಕ್ಕೆ ಸ್ವಾಗತ.

ಸ್ವರ್ಗಕ್ಕೆ ಸ್ವಾಗತ.

- Advertisement -
- Advertisement -

ಭಾರತದ ರಾಜಕಾರಣಿಯೊಬ್ಬ ವಾಯುವಿಹಾರಕ್ಕಾಗಿ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾರೊಂದು ಗುದ್ದಿ ಸಾವನ್ನಪ್ಪಿದರು. ಅವರ ಆತ್ಮವು ಸ್ವರ್ಗದೊಳಗೆ ಆಗಮಿಸುತ್ತದೆ. ಪ್ರವೇಶ ದ್ವಾರದ ಬಳಿ ಚಿತ್ರಗುಪ್ತ ಅವರನ್ನು ಬರಮಾಡಿಕೊಂಡರು.  “ಸ್ವರ್ಗಕ್ಕೆ ಸ್ವಾಗತ” ಎಂದು ಹೇಳಿ, “ಇಲ್ಲಿ ನೀವು ನೆಲೆಗೊಳ್ಳುವುದಕ್ಕಿಂತ ಮುಂಚೆ ಇಲ್ಲಿನ ಎಲ್ಲವೂ ಅಧಿಕೃತವಾಗಿ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ನೀವೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ, ಅದಕ್ಕಾಗಿ ಒಂದು ದಿನ ಸ್ವರ್ಗದಲ್ಲಿಯೂ, ಇನ್ನೊಂದು ನರಕದಲ್ಲಿಯೂ ಇದ್ದು ನಿಮಗೆ ಸೂಕ್ತವಾದುದ್ದನ್ನು ಆರಿಸಿಕೊಳ್ಳಬಹುದೆಂದು ಚಿತ್ರಗುಪ್ತ ಹೇಳಿದರು. ಆಗ ರಾಜಕಾರಣಿ “ಸಮಸ್ಯೆ ಇಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ, ನನಗೆ ಇಷ್ಟ ಆಯಿತು. ನರಕ ನೋಡುವ ಅಗತ್ಯವಿಲ್ಲ, ಸ್ವರ್ಗದಲ್ಲೇ ಇರುತ್ತೇನೆ ಒಳಗೆ ಹೋಗೋಣ” ಎಂದು ಹೇಳಿದರು.

ಆಗ ಚಿತ್ರಗುಪ್ತ “ಕ್ಷಮಿಸಿ, ನಮಗೆ ನಮ್ಮದೇ ಆದ ನಿಯಮಗಳಿವೆ, ನಾನು ಮೇಲಿನವರಿಂದ ಆದೇಶಗಳನ್ನು ಹೊಂದಿದ್ದೇನೆ, ಹಾಗಾಗಿ ನೀವು ಇದನ್ನು ಪಾಲಿಸಲೇಬೇಕೆಂದು ಮನವಿ ಮಾಡಿದನು. ಆಗ ರಾಜಕಾರಣಿ ಇರಲಿ ಒಂದು ದಿನ ತಾನೇ ನರಕ ಹೇಗಿರುತ್ತೆ ಅಂತ ನೋಡೇ ಬಿಡೋಣ ಎಂದು ಒಪ್ಪಿಕೊಂಡರು. ಆಗ ಚಿತ್ರಗುಪ್ತ ಮತ್ತೆ ಕೇಳಿದನು ಮೊದಲು ನರಕಕ್ಕೆ ಹೋಗೋಣವೋ ಅಥವಾ ಸ್ವರ್ಗಕ್ಕೆ ಹೋಗೋಣವೋ ಅಂದಾಗ, ರಾಜಕಾರಣಿ ಮೊದಲು ನರಕವೇ ಇರಲಿ ಎಂದನು.

ನಂತರ ಚಿತ್ರಗುಪ್ತ ಅವರನ್ನು ಲಿಫ್ಟಿಗೆ ಹತ್ತಿಸಿಕೊಂಡನು. ಲಿಪ್ಟು ಅವರನ್ನು ಹೊತ್ತು ಕೆಳಕ್ಕೆ ಹೋಯಿತು. ಅದು ಎಷ್ಟು ಆಳಕ್ಕೆ ಹೋಗುತ್ತಿದೆ ಎಂದು ಗಾಬರಿಗೊಳ್ಳುವಷ್ಟರಲ್ಲೇ ಅವರು ನರಕದಲ್ಲಿದ್ದರು. ಬಾಗಿಲು ತೆರೆದಾಗ ರಾಜಕಾರಣಿ ಸುತ್ತಲೂ ವಿಶಾಲವಾದ ಗಾಲ್ಫ್ ಮೈದಾನವಿತ್ತು. ದೂರದಲ್ಲಿ ಕಾಣುತ್ತಿದ್ದ ಅಂಗಳದಲ್ಲಿ ಅವನ ಸ್ನೇಹಿತರು ಮತ್ತು ಜತೆಗೆ ಕೂಡಿ ಕೆಲಸ ಮಾಡಿದ್ದ ರಾಜಕಾರಣಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಮೊಗದಲ್ಲೂ ಮಂದಹಾಸ, ಶುಭ್ರ ಬಟ್ಟೆಗಳು ಮನ ತಣಿಸುತ್ತಿದ್ದವು. ಅವರೆಲ್ಲರೂ ಓಡಿಬಂದು ತಮ್ಮ ಗೆಳೆಯನಿಗೆ ಶುಭ ಕೋರಿ, ಕೈಕುಲುಕಿದರು. ಬದುಕಿದ್ದಾಗ ಜನರನ್ನು ತುಳಿದು ತಾವು ಹೇಗೆ ಸಿರಿವಂತರಾದೆವು ಎಂಬ ನೆನಪುಗಳನ್ನು ಮೆಲುಕು ಹಾಕಿದರು.

ಎಲ್ಲರೂ ಸೇರಿ ಒಂದು ಸುತ್ತು ಗಾಲ್ಫ್ ಆಡಿ, ಅಲ್ಲಿದ್ದ ಬಗೆಬಗೆಯ ಕಡಲ ತಿನಿಸುಗಳನ್ನು ಸವಿದರು. ಬಳಿಕ, ದ್ರಾಕ್ಷಾರಸ ಅವರೆಲ್ಲರನ್ನು ಉಲ್ಲಸಿತರನ್ನಾಗಿ ಮಾಡಿತು. ಔತಣಕೂಟದಲ್ಲಿ ವಿದೂಷಕನೊಬ್ಬನು ಥರೇವಹಾರಿ ಜೋಕ್ಸ್ ಮಾಡುತ್ತಾ ನಗುತ್ತಾ, ನಗಿಸುತ್ತಾ ಅವರೊಡನೆ ಸಂತಸದ ಕ್ಷಣಗಳಿಗೆ ಸಾಕ್ಷಿಯಾದನು. ಇವರೆಲ್ಲರೂ ಸಂತೋಷ ಕೂಟದಲ್ಲಿ ಮೈಮರೆತಿದ್ದಾಗ, ರಾಜಕಾರಣಿಗೆ ಅರಿವಾಯಿತು. “ಒಂದು ದಿನ ಮುಗೀತು ಇದು ಹೊರಡುವ ಸಮಯ”. ಪ್ರತಿಯೊಬ್ಬರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು, ಲಿಫ್ಟ್ ಮೇಲಕ್ಕೆ ಹೋಯಿತು.

ಲಿಫ್ಟ್ ಮೇಲಕ್ಕೆ, ಮತ್ತಷ್ಟು ಮೇಲಕ್ಕೆ ಹೋಗಿ ಸ್ವರ್ಗದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಶಾಂತತೆ ಇರುತ್ತದೆ. ಅವರು ಮೋಡಗಳಿಂದ ಮೋಡಕ್ಕೆ ನೆಗೆಯುತ್ತಾರೆ, ತಂತಿವಾದ್ಯಗಳನ್ನು ನುಡಿಸುತ್ತಾರೆ, ಗಿಟಾರ್‍ರನ್ನು ಬಾರಿಸುತ್ತಾರೆ, ಹಾಡು ಹೇಳುತ್ತಾರೆ. ಅವರು ಬಹಳ ಸಂತೋಷದಿಂದ ಸಮಯವನ್ನು ಕಳೆಯುತ್ತಾರೆ ಮತ್ತು ಆಗಷ್ಟೇ ಅವರಿಗೆ ಹೊಳೆಯುತ್ತದೆ 24 ಗಂಟೆಗಳು ಮುಗಿದು ಹೋಗಿದೆ ಎಂದು. ಮತ್ತೆ ಚಿತ್ರಗುಪ್ತ ರಾಜಕಾರಣಿಯ ಬಳಿ ಬರುತ್ತಾರೆ, “ನೀವು ಒಂದು ದಿನ ನರಕದಲ್ಲೂ ಮತ್ತೊಂದು ದಿನ ಸ್ವರ್ಗದಲ್ಲೂ ಕಳೆದಿದ್ದೀರಾ. ಈಗ ನಿಮ್ಮ ಶಾಶ್ವತ ನೆಲೆಯನ್ನು ಆಯ್ಕೆ ಮಾಡಿ”.

ರಾಜಕಾರಣಿ ಒಂದು ನಿಮಿಷ ಯೋಚಿಸಿ ಉತ್ತರ ನೀಡುತ್ತಾರೆ: “ನಾನು ಮುಂಚೆ ಸ್ವರ್ಗ ಸುಖಕರವಾಗಿಯೂ ನರಕ ಭಯಾನಕವಾಗಿಯೂ ಇರುತ್ತದೆ ಎಂದು ತಪ್ಪು ತಿಳಿದಿದ್ದೆ. ಆದರೆ ಇಲ್ಲಿ ಬಂದು ನೋಡಿದ ನಂತರ ಸ್ವರ್ಗಕ್ಕಿಂತ ನರಕವೇ ಅದ್ಭುತವಾಗಿದೆ ಅನ್ನಿಸುತ್ತಿದೆ. ಹಾಗಾಗಿ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದನು. ಇಂದು ಅಂತಿಮ ನಿರ್ಧಾರವೇ ಎಂದು ಚಿತ್ರಗುಪ್ತ ಕೇಳಿದರೆ ರಾಜಕಾರಣಿ ಯೆಸ್ 100% ಎಂದನು. ಸರಿ ಎಂದು ಚಿತ್ರಗುಪ್ತ ರಾಜಕಾರಣಿಯನ್ನು ನರಕಕ್ಕೆ ತಂದು ಬಿಡುತ್ತಾನೆ.

ಆಗ ರಾಜಕಾರಣಿ ಅವನ ಕಣ್ಣನ್ನು ಅವನೇ ನಂಬಲು ಸಿದ್ದವಿಲ್ಲ. ಏಕೆಂದರೆ ಅವನು ಬಂಜರು ಭೂಮಿಯ ಮಧ್ಯ ಭಾಗದಲ್ಲಿ ನಿಂತಿರುತ್ತಾನೆ. ಸುತ್ತಲೂ ತ್ಯಾಜ್ಯ, ಕಸ ತುಂಬಿ ಹೋಗಿರುತ್ತದೆ. ತನ್ನ ಎಲ್ಲಾ ಸ್ನೇಹಿತರು ಚಿಂದಿಬಟ್ಟೆ ತೊಟ್ಟು ಕಸ ಆಯ್ದು ಕಪ್ಪು ಚೀಲದಲ್ಲಿ ತುಂಬುತ್ತಿರುತ್ತಾರೆ. ಮೇಲಿನಿಂದ ಇನ್ನಷ್ಟು ಕಸ ಬೀಳುತ್ತಿರುತ್ತದೆ. ರೋಧನೆ, ನೋವಿನ ವಾತವರಣವಿರುತ್ತದೆ.

ಆತನ ಸ್ನೇಹಿತರು ಅವನನ್ನು ಕೂಗಿ, ಏನು ನೋಡುತ್ತಿದ್ದೀಯ ಬಾ ಕೆಲಸ ಮಾಡು ಅನ್ನುತ್ತಾರೆ. ಆಗ ರಾಜಕಾರಣಿ ಕಣ್ಣುಜ್ಜಿಕೊಂಡು “ನನಗೆ ಏನೊಂದು ಅರ್ಥವಾಗುತ್ತಿಲ್ಲ” ಎಂದು ತೊದಲುತ್ತಾ ಹೇಳುತ್ತಾನೆ.“ಮೊನ್ನೆ ದಿನ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ ಗಾಲ್ಫ್ ಕೋರ್ಟ್, ಕ್ಲಬ್ ಹೌಸ್ ಇತ್ತು. ನಾವು ಕಡಲನಳ್ಳಿ, ಮೀನಿನ ಚಟ್ನಿ, ದ್ರಾಕ್ಷಿಯ ಮದ್ಯವನ್ನು ಸೇವಿಸಿದ್ದೆವು. ನಾವೆಲ್ಲಾರೂ ಒಟ್ಟಿಗೆ ಕುಣಿದು, ತುಂಬಾ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಆದರೆ ಈಗ ಕೇವಲ ಪಾಳು ಭೂಮಿ ಮಾತ್ರ ಇದೆ. ಕಸದಿಂದ ತುಂಬಿ ಹೋಗಿದೆ, ನನ್ನ ಸ್ನೇಹಿತರು ಶೋಚನೀಯವಾಗಿ ಕಾಣುತ್ತಿದ್ದಾರೆ. ಏನು ಆಯಿತು?” ಎಂದು ವಿದೂಷಕನನ್ನು ಕೇಳುತ್ತಾನೆ.

ಆಗ ವಿದೂಷಕ ಅವನ ಕಡೆಗೆ ನಗೆ ಬೀರುತ್ತಾ  “ಮೊನ್ನೆ ದಿನ ನೀನು ಬಂದಾಗ ನಾವು ಚುನಾವಣಾ ಪ್ರಚಾರ ಮಾಡುತ್ತಿದ್ದೆವು. ಇವತ್ತು ನೀನು ನಮಗೆ ಓಟ್ ಮಾಡಿದೆ ಅಷ್ಟೇ” ಎಂದರು.

ನೀವೂ ಮೋಸಹೋಗಬೇಡಿ 2019ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಓಟ್ ಮಾಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...