Homeಸಾಹಿತ್ಯ-ಸಂಸ್ಕೃತಿಕಥೆಸ್ವರ್ಗಕ್ಕೆ ಸ್ವಾಗತ.

ಸ್ವರ್ಗಕ್ಕೆ ಸ್ವಾಗತ.

- Advertisement -
- Advertisement -

ಭಾರತದ ರಾಜಕಾರಣಿಯೊಬ್ಬ ವಾಯುವಿಹಾರಕ್ಕಾಗಿ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾರೊಂದು ಗುದ್ದಿ ಸಾವನ್ನಪ್ಪಿದರು. ಅವರ ಆತ್ಮವು ಸ್ವರ್ಗದೊಳಗೆ ಆಗಮಿಸುತ್ತದೆ. ಪ್ರವೇಶ ದ್ವಾರದ ಬಳಿ ಚಿತ್ರಗುಪ್ತ ಅವರನ್ನು ಬರಮಾಡಿಕೊಂಡರು.  “ಸ್ವರ್ಗಕ್ಕೆ ಸ್ವಾಗತ” ಎಂದು ಹೇಳಿ, “ಇಲ್ಲಿ ನೀವು ನೆಲೆಗೊಳ್ಳುವುದಕ್ಕಿಂತ ಮುಂಚೆ ಇಲ್ಲಿನ ಎಲ್ಲವೂ ಅಧಿಕೃತವಾಗಿ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿವೆಯೇ ಎಂದು ನೀವೊಮ್ಮೆ ಪರೀಕ್ಷಿಸಿಕೊಳ್ಳಬೇಕಿದೆ, ಅದಕ್ಕಾಗಿ ಒಂದು ದಿನ ಸ್ವರ್ಗದಲ್ಲಿಯೂ, ಇನ್ನೊಂದು ನರಕದಲ್ಲಿಯೂ ಇದ್ದು ನಿಮಗೆ ಸೂಕ್ತವಾದುದ್ದನ್ನು ಆರಿಸಿಕೊಳ್ಳಬಹುದೆಂದು ಚಿತ್ರಗುಪ್ತ ಹೇಳಿದರು. ಆಗ ರಾಜಕಾರಣಿ “ಸಮಸ್ಯೆ ಇಲ್ಲ, ಇಲ್ಲಿ ಎಲ್ಲ ಚೆನ್ನಾಗಿದೆ, ನನಗೆ ಇಷ್ಟ ಆಯಿತು. ನರಕ ನೋಡುವ ಅಗತ್ಯವಿಲ್ಲ, ಸ್ವರ್ಗದಲ್ಲೇ ಇರುತ್ತೇನೆ ಒಳಗೆ ಹೋಗೋಣ” ಎಂದು ಹೇಳಿದರು.

ಆಗ ಚಿತ್ರಗುಪ್ತ “ಕ್ಷಮಿಸಿ, ನಮಗೆ ನಮ್ಮದೇ ಆದ ನಿಯಮಗಳಿವೆ, ನಾನು ಮೇಲಿನವರಿಂದ ಆದೇಶಗಳನ್ನು ಹೊಂದಿದ್ದೇನೆ, ಹಾಗಾಗಿ ನೀವು ಇದನ್ನು ಪಾಲಿಸಲೇಬೇಕೆಂದು ಮನವಿ ಮಾಡಿದನು. ಆಗ ರಾಜಕಾರಣಿ ಇರಲಿ ಒಂದು ದಿನ ತಾನೇ ನರಕ ಹೇಗಿರುತ್ತೆ ಅಂತ ನೋಡೇ ಬಿಡೋಣ ಎಂದು ಒಪ್ಪಿಕೊಂಡರು. ಆಗ ಚಿತ್ರಗುಪ್ತ ಮತ್ತೆ ಕೇಳಿದನು ಮೊದಲು ನರಕಕ್ಕೆ ಹೋಗೋಣವೋ ಅಥವಾ ಸ್ವರ್ಗಕ್ಕೆ ಹೋಗೋಣವೋ ಅಂದಾಗ, ರಾಜಕಾರಣಿ ಮೊದಲು ನರಕವೇ ಇರಲಿ ಎಂದನು.

ನಂತರ ಚಿತ್ರಗುಪ್ತ ಅವರನ್ನು ಲಿಫ್ಟಿಗೆ ಹತ್ತಿಸಿಕೊಂಡನು. ಲಿಪ್ಟು ಅವರನ್ನು ಹೊತ್ತು ಕೆಳಕ್ಕೆ ಹೋಯಿತು. ಅದು ಎಷ್ಟು ಆಳಕ್ಕೆ ಹೋಗುತ್ತಿದೆ ಎಂದು ಗಾಬರಿಗೊಳ್ಳುವಷ್ಟರಲ್ಲೇ ಅವರು ನರಕದಲ್ಲಿದ್ದರು. ಬಾಗಿಲು ತೆರೆದಾಗ ರಾಜಕಾರಣಿ ಸುತ್ತಲೂ ವಿಶಾಲವಾದ ಗಾಲ್ಫ್ ಮೈದಾನವಿತ್ತು. ದೂರದಲ್ಲಿ ಕಾಣುತ್ತಿದ್ದ ಅಂಗಳದಲ್ಲಿ ಅವನ ಸ್ನೇಹಿತರು ಮತ್ತು ಜತೆಗೆ ಕೂಡಿ ಕೆಲಸ ಮಾಡಿದ್ದ ರಾಜಕಾರಣಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಮೊಗದಲ್ಲೂ ಮಂದಹಾಸ, ಶುಭ್ರ ಬಟ್ಟೆಗಳು ಮನ ತಣಿಸುತ್ತಿದ್ದವು. ಅವರೆಲ್ಲರೂ ಓಡಿಬಂದು ತಮ್ಮ ಗೆಳೆಯನಿಗೆ ಶುಭ ಕೋರಿ, ಕೈಕುಲುಕಿದರು. ಬದುಕಿದ್ದಾಗ ಜನರನ್ನು ತುಳಿದು ತಾವು ಹೇಗೆ ಸಿರಿವಂತರಾದೆವು ಎಂಬ ನೆನಪುಗಳನ್ನು ಮೆಲುಕು ಹಾಕಿದರು.

ಎಲ್ಲರೂ ಸೇರಿ ಒಂದು ಸುತ್ತು ಗಾಲ್ಫ್ ಆಡಿ, ಅಲ್ಲಿದ್ದ ಬಗೆಬಗೆಯ ಕಡಲ ತಿನಿಸುಗಳನ್ನು ಸವಿದರು. ಬಳಿಕ, ದ್ರಾಕ್ಷಾರಸ ಅವರೆಲ್ಲರನ್ನು ಉಲ್ಲಸಿತರನ್ನಾಗಿ ಮಾಡಿತು. ಔತಣಕೂಟದಲ್ಲಿ ವಿದೂಷಕನೊಬ್ಬನು ಥರೇವಹಾರಿ ಜೋಕ್ಸ್ ಮಾಡುತ್ತಾ ನಗುತ್ತಾ, ನಗಿಸುತ್ತಾ ಅವರೊಡನೆ ಸಂತಸದ ಕ್ಷಣಗಳಿಗೆ ಸಾಕ್ಷಿಯಾದನು. ಇವರೆಲ್ಲರೂ ಸಂತೋಷ ಕೂಟದಲ್ಲಿ ಮೈಮರೆತಿದ್ದಾಗ, ರಾಜಕಾರಣಿಗೆ ಅರಿವಾಯಿತು. “ಒಂದು ದಿನ ಮುಗೀತು ಇದು ಹೊರಡುವ ಸಮಯ”. ಪ್ರತಿಯೊಬ್ಬರು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು, ಲಿಫ್ಟ್ ಮೇಲಕ್ಕೆ ಹೋಯಿತು.

ಲಿಫ್ಟ್ ಮೇಲಕ್ಕೆ, ಮತ್ತಷ್ಟು ಮೇಲಕ್ಕೆ ಹೋಗಿ ಸ್ವರ್ಗದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ. ಅಲ್ಲಿ ಪ್ರಶಾಂತತೆ ಇರುತ್ತದೆ. ಅವರು ಮೋಡಗಳಿಂದ ಮೋಡಕ್ಕೆ ನೆಗೆಯುತ್ತಾರೆ, ತಂತಿವಾದ್ಯಗಳನ್ನು ನುಡಿಸುತ್ತಾರೆ, ಗಿಟಾರ್‍ರನ್ನು ಬಾರಿಸುತ್ತಾರೆ, ಹಾಡು ಹೇಳುತ್ತಾರೆ. ಅವರು ಬಹಳ ಸಂತೋಷದಿಂದ ಸಮಯವನ್ನು ಕಳೆಯುತ್ತಾರೆ ಮತ್ತು ಆಗಷ್ಟೇ ಅವರಿಗೆ ಹೊಳೆಯುತ್ತದೆ 24 ಗಂಟೆಗಳು ಮುಗಿದು ಹೋಗಿದೆ ಎಂದು. ಮತ್ತೆ ಚಿತ್ರಗುಪ್ತ ರಾಜಕಾರಣಿಯ ಬಳಿ ಬರುತ್ತಾರೆ, “ನೀವು ಒಂದು ದಿನ ನರಕದಲ್ಲೂ ಮತ್ತೊಂದು ದಿನ ಸ್ವರ್ಗದಲ್ಲೂ ಕಳೆದಿದ್ದೀರಾ. ಈಗ ನಿಮ್ಮ ಶಾಶ್ವತ ನೆಲೆಯನ್ನು ಆಯ್ಕೆ ಮಾಡಿ”.

ರಾಜಕಾರಣಿ ಒಂದು ನಿಮಿಷ ಯೋಚಿಸಿ ಉತ್ತರ ನೀಡುತ್ತಾರೆ: “ನಾನು ಮುಂಚೆ ಸ್ವರ್ಗ ಸುಖಕರವಾಗಿಯೂ ನರಕ ಭಯಾನಕವಾಗಿಯೂ ಇರುತ್ತದೆ ಎಂದು ತಪ್ಪು ತಿಳಿದಿದ್ದೆ. ಆದರೆ ಇಲ್ಲಿ ಬಂದು ನೋಡಿದ ನಂತರ ಸ್ವರ್ಗಕ್ಕಿಂತ ನರಕವೇ ಅದ್ಭುತವಾಗಿದೆ ಅನ್ನಿಸುತ್ತಿದೆ. ಹಾಗಾಗಿ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದನು. ಇಂದು ಅಂತಿಮ ನಿರ್ಧಾರವೇ ಎಂದು ಚಿತ್ರಗುಪ್ತ ಕೇಳಿದರೆ ರಾಜಕಾರಣಿ ಯೆಸ್ 100% ಎಂದನು. ಸರಿ ಎಂದು ಚಿತ್ರಗುಪ್ತ ರಾಜಕಾರಣಿಯನ್ನು ನರಕಕ್ಕೆ ತಂದು ಬಿಡುತ್ತಾನೆ.

ಆಗ ರಾಜಕಾರಣಿ ಅವನ ಕಣ್ಣನ್ನು ಅವನೇ ನಂಬಲು ಸಿದ್ದವಿಲ್ಲ. ಏಕೆಂದರೆ ಅವನು ಬಂಜರು ಭೂಮಿಯ ಮಧ್ಯ ಭಾಗದಲ್ಲಿ ನಿಂತಿರುತ್ತಾನೆ. ಸುತ್ತಲೂ ತ್ಯಾಜ್ಯ, ಕಸ ತುಂಬಿ ಹೋಗಿರುತ್ತದೆ. ತನ್ನ ಎಲ್ಲಾ ಸ್ನೇಹಿತರು ಚಿಂದಿಬಟ್ಟೆ ತೊಟ್ಟು ಕಸ ಆಯ್ದು ಕಪ್ಪು ಚೀಲದಲ್ಲಿ ತುಂಬುತ್ತಿರುತ್ತಾರೆ. ಮೇಲಿನಿಂದ ಇನ್ನಷ್ಟು ಕಸ ಬೀಳುತ್ತಿರುತ್ತದೆ. ರೋಧನೆ, ನೋವಿನ ವಾತವರಣವಿರುತ್ತದೆ.

ಆತನ ಸ್ನೇಹಿತರು ಅವನನ್ನು ಕೂಗಿ, ಏನು ನೋಡುತ್ತಿದ್ದೀಯ ಬಾ ಕೆಲಸ ಮಾಡು ಅನ್ನುತ್ತಾರೆ. ಆಗ ರಾಜಕಾರಣಿ ಕಣ್ಣುಜ್ಜಿಕೊಂಡು “ನನಗೆ ಏನೊಂದು ಅರ್ಥವಾಗುತ್ತಿಲ್ಲ” ಎಂದು ತೊದಲುತ್ತಾ ಹೇಳುತ್ತಾನೆ.“ಮೊನ್ನೆ ದಿನ ನಾನು ಇಲ್ಲಿಗೆ ಬಂದಿದ್ದೆ. ಇಲ್ಲಿ ಗಾಲ್ಫ್ ಕೋರ್ಟ್, ಕ್ಲಬ್ ಹೌಸ್ ಇತ್ತು. ನಾವು ಕಡಲನಳ್ಳಿ, ಮೀನಿನ ಚಟ್ನಿ, ದ್ರಾಕ್ಷಿಯ ಮದ್ಯವನ್ನು ಸೇವಿಸಿದ್ದೆವು. ನಾವೆಲ್ಲಾರೂ ಒಟ್ಟಿಗೆ ಕುಣಿದು, ತುಂಬಾ ಸಂತೋಷದಿಂದ ಸಮಯವನ್ನು ಕಳೆದಿದ್ದೆವು. ಆದರೆ ಈಗ ಕೇವಲ ಪಾಳು ಭೂಮಿ ಮಾತ್ರ ಇದೆ. ಕಸದಿಂದ ತುಂಬಿ ಹೋಗಿದೆ, ನನ್ನ ಸ್ನೇಹಿತರು ಶೋಚನೀಯವಾಗಿ ಕಾಣುತ್ತಿದ್ದಾರೆ. ಏನು ಆಯಿತು?” ಎಂದು ವಿದೂಷಕನನ್ನು ಕೇಳುತ್ತಾನೆ.

ಆಗ ವಿದೂಷಕ ಅವನ ಕಡೆಗೆ ನಗೆ ಬೀರುತ್ತಾ  “ಮೊನ್ನೆ ದಿನ ನೀನು ಬಂದಾಗ ನಾವು ಚುನಾವಣಾ ಪ್ರಚಾರ ಮಾಡುತ್ತಿದ್ದೆವು. ಇವತ್ತು ನೀನು ನಮಗೆ ಓಟ್ ಮಾಡಿದೆ ಅಷ್ಟೇ” ಎಂದರು.

ನೀವೂ ಮೋಸಹೋಗಬೇಡಿ 2019ರ ಚುನಾವಣೆಯಲ್ಲಿ ಬುದ್ಧಿವಂತಿಕೆಯಿಂದ ಓಟ್ ಮಾಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...