Homeಮುಖಪುಟಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

- Advertisement -
- Advertisement -

ನೀವೆಲ್ಲರೂ ಹಿಜಡಾ ಸಮುದಾಯದವರನ್ನು ಬಹಳ ಸಲ ನೋಡಿರುತ್ತೀರಿ. ಆದಾಗ್ಯೂ ನಮ್ಮ ಬಹುತೇಕ ಜನ ಈ ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‍ಜೆಂಡರ್, ಕ್ವೀರ್ (LGBTQ) ನಂತಹ ಪದಗಳು ಪಾಶ್ಚಾತ್ಯದಿಂದ ಈಗತಾನೇ ಭಾರತದ ಸಂಸ್ಕøತಿಯೊಳಕ್ಕೆ ಕಾಲಿಡುತ್ತಿರುವ ಹೊಸ ಪರಿಕಲ್ಪನೆಗಳು ಅಂತಲೇ ಭಾವಿಸಿದ್ದಾರೆ.
ನನ್ನ ಈ ಲೇಖನಗಳ ಸರಣಿಯಲ್ಲಿ ಜಾಗತಿಕ ಮಟ್ಟದ ಐಉಃಖಿಕಿ ಸಮುದಾಯಗಳಿಗೂ, ನಮ್ಮದೇ ನೆಲದ ಸಾಂಸ್ಕøತಿಕ ರಚನೆಗಳಾದ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಹಾಗೂ ಸಂಬಂಧಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ. ಇವುಗಳ ನಡುವಿನ ಸಂಬಂಧ ಏನು ಅಂತಂದ್ರೆ, ಈ ಪರ್ಯಾಯ ಲಿಂಗಿಗಳನ್ನು ವಿವರಿಸಲು ನಮ್ಮಲ್ಲಿ ಬಳಸುವ ಬಹಳಷ್ಟು ಪದಗಳು ಇಂಗ್ಲಿಷ್‍ನಲ್ಲಿ ಇದೇ ಉದ್ದೇಶಕ್ಕೆ ಬಳಸಲಾಗುವ ಪದಗಳು ನೀಡುವ ಅರ್ಥವನ್ನೇ ಪ್ರತಿಫಲಿಸುತ್ತವೆ. ಇನ್ನು ಆ ವಿದೇಶಿ ಸಮುದಾಯಗಳಿಗೂ ನಮ್ಮ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಅಂದ್ರೆ, ನಮ್ಮ ಭಾರತೀಯ ಸಂಸ್ಕøತಿಯು ಈ ಜಗತ್ತನ್ನು ಲೈಂಗಿಕ ಅಭಿವ್ಯಕ್ತಿಯ ಚೌಕಟ್ಟಿನಲ್ಲಿ ನೋಡದೇ ಲಿಂಗತ್ವದ ಆಧಾರದಲ್ಲೇ ನೋಡುವುದಾಗಿದೆ. ಇದನ್ನು ಮುಂದಿನ ಬರಹಗಳಲ್ಲಿ ಚರ್ಚಿಸುತ್ತೇನೆ. ಸದ್ಯ ಈಗ ನಾನು ಹೇಳೋದಿಷ್ಟೆ; ಒಬ್ಬ ವ್ಯಕ್ತಿಯ ಜೈವಿಕ ಲಿಂಗ (ದೇಹ), ಲಿಂಗತ್ವ (ಲಿಂಗಕ್ಕೆ ಅನುಗುಣವಾದ ಸಾಮಾಜಿಕ ಪಾತ್ರ) ಮತ್ತು ಲೈಂಗಿಕತೆ (ಆ ವ್ಯಕ್ತಿ ಆಕರ್ಷಣೆಗೊಳ್ಳುವ ಲಿಂಗ/ಗಳು) ಇವೆಲ್ಲವುಗಳು ಒಂದೇ ಅಲ್ಲ! ಇವುಗಳ ನಡುವೆ ಅಪಾರ ವ್ಯತ್ಯಾಸವಿದೆ.
ಮೊದಲು ನಮ್ಮ ಹಿಜಡಾ ಸಮುದಾಯವನ್ನು ಅರ್ಥ ಮಾಡಿಕೊಳ್ಳೋಣ. ಸಾಮಾನ್ಯ ಗ್ರಹಿಕೆಯಲ್ಲಿ ಹಿಜಡಾ ವ್ಯಕ್ತಿಗಳನ್ನು ಅನೇಕ ಸಲ `ತೃತೀಯ ಲಿಂಗಿಗಳು’ ಎಂದು ಪರಿಗಣಿಸಲಾಗುತ್ತೆ. ಒಂದು ಮಗು ಹುಟ್ಟಿದಾಗ ವೈದ್ಯರು ಆ ಮಗುವನ್ನು ಗಂಡು ಅಥವಾ ಹೆಣ್ಣು ಎಂದು ಗುರುತಿಸುತ್ತಾರೆ. ಎಲ್ಲಾ ಹಿಜಡಾ ಸದಸ್ಯರ ದೇಹಗಳು ಹುಟ್ಟುವ ಸಂದರ್ಭದಲ್ಲೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತಹ ದೇಹ ರಚನೆಯನ್ನು ಹೊಂದಿರುತ್ತಾರೆ ಅನ್ನೋದು ಸಾಮಾನ್ಯವಾಗಿ ನಾವೆಲ್ಲರು ತಿಳಿದಿರುವ ತಪ್ಪು ಕಲ್ಪನೆ. ಇಂತಹ ದೇಹರಚನೆಯನ್ನು ವಿವರಿಸಲು ಇಂಗ್ಲಿಷಿನಲ್ಲಿ `Iಟಿಣeಡಿsex’ ಎಂಬ ಪದವಿದೆ. ಈ `ಇಂಟರ್‍ಸೆಕ್ಸ್’ ಬಗೆಯವರು ಮಾತ್ರ ಗಂಡಿನ ಅಥವಾ ಹೆಣ್ಣಿನ, ನಿರ್ದಿಷ್ಟ ಲಿಂಗದ ದೇಹ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಬಹಳಷ್ಟು ಹಿಜಡಾ ಸದಸ್ಯರು `ಇಂಟರ್‍ಸೆಕ್ಸ್’ ಬಗೆಗೆ ಸೇರುವವರಲ್ಲ! ಅಂದರೆ, ಅವರು ಹುಟ್ಟಿದಾಗಿನ ದೇಹ ಲಕ್ಷಣಗಳನ್ನು ಗಮನಿಸುವ ಸ್ವತಃ ವೈದ್ಯರೇ ಆ ಮಗುವನ್ನು `ಗಂಡು ಮಗು’ ಎಂದೇ ಘೋಷಿಸುತ್ತಾರೆ. ಅವರ ಹುಟ್ಟು ಅಷ್ಟು ಸಹಜವಾಗಿರುತ್ತೆ. ಹುಟ್ಟಿದಾಗ ಗಂಡು ಮಗು ಅಂತಲೇ ಗುರುತಿಸಿರಲಿ ಅಥವಾ ಇಂಟರ್‍ಸೆಕ್ಸ್ ಎಂದೇ ಐಡೆಂಟಿಫೈ ಮಾಡಿರಲಿ, ಪ್ರಪಂಚದ ಯಾವುದೇ ಭಾಗದ ಹಿಜಡಾ ಸದಸ್ಯರು `ಲಿಂಗಪರಿವರ್ತಿತ ಮಹಿಳೆ’ (Transgender woman)ಯ ಬದುಕನ್ನು ಹಾದು ಬರಲೇಬೇಕಾಗುತ್ತದೆ.
ಹಾಗಾದ್ರೆ ಈ `ಟ್ರಾನ್ಸ್‍ಜೆಂಡರ್ ಮಹಿಳೆ’ ಅಂದ್ರೆ ಯಾರು? ಹುಟ್ಟಿದಾಗ ಈ ಸಮಾಜ ಮತ್ತು ವೈದ್ಯರು ಯಾವ ಲಿಂಗದವರೆಂದು ನಿಗದಿಪಡಿಸುತ್ತೋ, ಅದೇ ಲಿಂಗದ ರೂಪದಲ್ಲೇ ಬದುಕುವುದಕ್ಕೆ ವಿಪರೀತ ದೈಹಿಕ ಮತ್ತು ಸಾಮಾಜಿಕ ಯಾತನೆ ಅನುಭವಿಸುವವರೇ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು. ಇನ್ನು ಹುಟ್ಟಿದಾಗ ಗಂಡು ಎಂದೋ ಅಥವಾ `ಇಂಟರ್‍ಸೆಕ್ಸ್’ ಎಂದೋ ಕರೆಯಲ್ಪಟ್ಟು, ಮುಂದೆ ಬೆಳೆಯುತ್ತಾ ಯಾರು ತಮ್ಮನ್ನು ತಾವು ಮಹಿಳೆಯಂತೆ ಉಪಚರಿಸಿಕೊಳ್ಳ ಬಯಸುತ್ತಾರೊ ಅವರೇ ಟ್ರಾನ್ಸ್‍ಜೆಂಡರ್ ಮಹಿಳೆಯರು. ಕೆಲವರು ತಮ್ಮನ್ನು ತಾವು `ಟ್ರಾನ್ಸ್‍ಜೆಂಡರ್ ಮಹಿಳೆ’ ಎಂದು ಕರೆದುಕೊಂಡರೆ ಮತ್ತೆ ಕೆಲವರು ಸಂಪೂರ್ಣವಾಗಿ `ಮಹಿಳೆ’ ಎಂದೂ, ಇನ್ನೂ ಕೆಲವರು `ತೃತೀಯ ಲಿಂಗಿ’ಗಳೆಂದೂ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಇಂತವರನ್ನು ಮಂಗಳಮುಖಿ ಎಂತಲೂ, ತಮಿಳಿನಲ್ಲಿ ತಿರುನಂಗಾಯಿ ಅಥವಾ ಅರವಾಣಿ ಎಂತಲೂ, ಹಿಂದಿಯಲ್ಲಿ ಕಿನ್ನರ್ ಎಂದೂ ಆಯಾ ಭಾಗದ ಪ್ರಾದೇಶಿಕ ರೂಢಿ ನಾಮದೊಂದಿಗೆ ಗುರುತಿಸಲಾಗುತ್ತೆ.
ಹಾಗಾಗಿ, ಲಿಂಗ ಪರಿವರ್ತಿತರು ಮತ್ತು ಇಂಟರ್‍ಸೆಕ್ಸ್ ಸಮುದಾಯದ ವ್ಯಕ್ತಿಗಳು ಒಟ್ಟಾಗಿ, ಪರಸ್ಪರ ಬೆನ್ನೆಲುಬಾಗಿ ಜೀವಿಸುವ ಒಂದು ಸಾಂಸ್ಕøತಿಕ ಸಮೂಹ ವ್ಯವಸ್ಥೆಯನ್ನೇ ಹಿಜಡಾ ಸಮುದಾಯ ಅಂತ ಕರೆಯಬಹುದು. ಅಲ್ಲಿ ಅವರು ತಮಗಿಷ್ಟವಾದ ಲಿಂಗತ್ವದ ರೂಪದಲ್ಲಿ ಬದುಕುತ್ತಾರೆ, ಮತ್ತು ತಾವೇ ಗುರುತಿಸಿಕೊಳ್ಳಲು ಬಯಸುವ ಲಿಂಗಕ್ಕೆ ಅನುಗುಣವಾಗಿ ತಮ್ಮ ದೇಹವನ್ನು ಸರ್ಜರಿ ಮಾಡಿಕೊಳ್ಳಲೂಬಹುದು. ಇವರು ತಮ್ಮದೇ ಮನೆಯವರಿಂದ, ಈ ಸಮಾಜದಿಂದ ತೀವ್ರ ಹಿಂಸೆ, ಬಹಿಷ್ಕಾರಗಳನ್ನು ಅನುಭವಿಸುತ್ತಾರೆ; ಮನೆ, ಆಸ್ಪತ್ರೆ ಸೌಲಭ್ಯ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಸವಲತ್ತುಗಳಿಂದ ಅವರನ್ನು ವಂಚಿಸಲಾಗುತ್ತೆ. ಕೊನೆಗೆ ತಮ್ಮ ಹೊಟ್ಟೆಪಾಡಿಗಾಗಿ ಸ್ವಯಂ-ಸಂಘಟಿತ ಭಿಕ್ಷಾಟನೆಯನ್ನೋ, ವೇಶ್ಯಾವಾಟಿಕೆಯನ್ನೋ ಅವರು ಅನಿವಾರ್ಯವಾಗಿ ಅವಲಂಭಿಸಬೇಕಾಗುತ್ತೆ. ಬಹಳಷ್ಟು ಲಿಂಗಪರಿವರ್ತಿತ ಮಹಿಳೆಯರು ಮತ್ತು ಇಂಟರ್‍ಸೆಕ್ಸ್ ವ್ಯಕ್ತಿಗಳು ಈ ಹಿಜಡಾ ವ್ಯವಸ್ಥೆಯ ಹೊರಗೂ ತಮ್ಮ ಜೀವನ ನಡೆಸುತ್ತಾರೆ.
ಇನ್ನು ಕೆಲವರು ಹುಟ್ಟಿದಾಗ ಈ ಸಮಾಜದಿಂದ `ಗಂಡು’ ಎಂದು ಕರೆಯಲ್ಪಟ್ಟು, ತನ್ನನ್ನು ತಾನು ಹೆಣ್ಣೆಂದು ಉಪಚರಿಸಿಕೊಂಡರೂ ಸರ್ಜರಿಯ ಮೂಲಕ ದೇಹವನ್ನು ಮಾರ್ಪಾಡಿಸಿಕೊಳ್ಳದೆ ಬದುಕುತ್ತಾರೆ. ಅಂತವರನ್ನು ನಮ್ಮ ದೇಶದಲ್ಲಿ ‘ಕೋಥಿ’ ಎಂದು ಕರೆಯಲಾಗುತ್ತೆ. ಇವರಲ್ಲಿ ಕೆಲವರ ಸ್ತ್ರೀ ಲಕ್ಷಣಗಳು ಅವರು ಧರಿಸುವ ಉಡುಪು ಮತ್ತು ಜೀವನಶೈಲಿಯ ಅಭಿವ್ಯಕ್ತಿವರೆಗೆ ವ್ಯಾಪಿಸಿರುತ್ತವೆ ಅಂತವರನ್ನು ‘ಸತ್ಲಾ ಕೋಥಿ’ ಎನ್ನಲಾಗುವುದು. ಇನ್ನು ಕೆಲವರು ಪ್ಯಾಂಟ್-ಶರ್ಟ್‍ನಂತಹ ಪುರುಷ ಸಹಜ ಧಿರಿಸಿ ನಲ್ಲಿದ್ದರೂ ಸ್ತ್ರೀ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತಾರೆ. ಅಂತವರನ್ನು ‘ಪಂತಿ ಸತ್ಲಾ ಕೋಥಿ’ ಎಂದು ಗುರುತಿಸಲಾಗುತ್ತೆ. ಅಂತವರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಸ್ತ್ರೀ ಲಿಂಗತ್ವವನ್ನು ಅನುಭವಿಸುತ್ತಾರೆ. ಕೆಲವು ಸಲ, ಇಂಗ್ಲಿಷ್ ಪದವಾದ ‘ಗೇ’ ಎಂದು ಗುರುತಿಸಿಕೊಳ್ಳುವವರನ್ನು ‘ಇಂಗ್ಲಿಷ್ ಕೋಥಿ’ ಎಂದೂ ಕರೆಯಲಾಗುವುದು. ಒಂದೊಮ್ಮೆ ನಾವು ‘ಗೇ’ ಅನ್ನೋದು ಪರಕೀಯ ಪದವೆಂದು ಕರೆಯುವುದಾದರೆ, ನಮ್ಮ ನೆಲದ ‘ಕೋಥಿ’ ಅದಕ್ಕೆ ಸಮನಾರ್ಥಕವಾದ ಪದವಾಗಿದೆ. ಇಲ್ಲಿರುವ ಒಂದೇ ವ್ಯತ್ಯಾಸವೇನೆಂದರೆ, ಕೋಥಿ ಎನ್ನುವುದು, ಹುಟ್ಟಿದಾರಭ್ಯ ನಿಗದಿಪಡಿಸಲಾದ `ಗಂಡು’ ಲಿಂಗತ್ವದಿಂದ ವ್ಯಕ್ತಿಯ `ಹೆಣ್ಣು’ ರೂಪಾಂತರದ ಲಿಂಗ ಆಯ್ಕೆಯನ್ನು ಒಪ್ಪಿಕೊಳ್ಳುವ ಒಂದು ಬಗೆಯ ಲಿಂಗ ಅನನ್ಯತೆಯಾದರೆ, ‘ಗೇ’ ಎನ್ನುವುದು ಆ ವ್ಯಕ್ತಿಯ ಲೈಂಗಿಕತೆಯನ್ನು ಬಿಂಬಿಸುತ್ತದೆ. ಕೋಥಿ-ಹಿಜಡಾ ದೃಷ್ಟಿಕೋನದ ಪ್ರಕಾರ, ಗಂಡಸರು ಯಾರೊಂದಿಗಾದರು ಸರಿ, ಯಾವುದರೊಂದಿಗಾದರು ಸರಿ ಕಾಮಾಸಕ್ತರಾಗಿರುತ್ತಾರೆ. ಗಂಡಸರತ್ತಲೇ ಲೈಂಗಿಕಾಸಕ್ತಿ ಹೊಂದಿರುವ ‘ಪುರುಷ ಗೇ’ ಎನ್ನುವುದಕ್ಕಾಗಲಿ, ಗಂಡು-ಹೆಣ್ಣಿನ ನಡುವಿನ heterosexualityಯನ್ನು ವಿವರಿಸುವುದಕ್ಕಾಗಲಿ, ಅಥವಾ ಗಂಡು ಇಲ್ಲವೇ ಹೆಣ್ಣು ಎರಡೂ ಲಿಂಗದ ಕಡೆ ಆಕರ್ಷಿತವಾಗುವ bisexualityಯನ್ನು ವಿವರಿಸುವುದಕ್ಕಾಗಲಿ ನಮ್ಮ ದೇಸಿ ನೆಲೆಗಟ್ಟಿನ ಪದಗಳು ಸಿಗುವುದಿಲ್ಲ.
ನನಗೆ ತಿಳಿದಿರುವ ಮಟ್ಟಿಗೆ, ಒಂದು ಹೆಣ್ಣು ಮತ್ತೊಂದು ಹೆಣ್ಣಿನತ್ತ ಆಕರ್ಷಿತವಾಗುವುದನ್ನು ಉಲ್ಲೇಖಿಸುವ `ಲೆಸ್ಬಿಯನ್’ ಪದಕ್ಕೆ ಸಮನಾರ್ಥಕವಾದ ಪದ ಭಾರತದ ಯಾವ ಭಾಷೆಯಲ್ಲೂ ಕಾಣಸಿಗದು. ಇದಕ್ಕೆ ನಮ್ಮ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿ ಕಾರಣವಾಗಿರಬಹುದು. ನಮ್ಮ ದೇಶದಲ್ಲಿ ಮಹಿಳೆಯ ಲೈಂಗಿಕ ಒಲವಿಗೆ ಮನ್ನಣೆ ಸಿಕ್ಕಿದ್ದು ತುಂಬಾ ವಿರಳ; ಇಲ್ಲವೇ ಇಲ್ಲ ಅನ್ನಬಹುದೇನೊ. ಕಾರಣ ಸ್ಪಷ್ಟ. ಜಾತಿ ಪದ್ಧತಿ ಮತ್ತು ಆಸ್ತಿ ಹಸ್ತಾಂತರ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕೆಂದರೆ ಈ ಪುರುಷ ಅಧಿಪತ್ಯದ ಸಮಾಜಕ್ಕೆ ಆಕೆಯ ಲೈಂಗಿಕತೆಯನ್ನು ನಿರ್ಬಂಧಿಸಿ, `ನಿಶ್ಚಯಿಸಿದ ಮದುವೆಗೆ’ ಆಕೆಯನ್ನು ಬಿಗಿಯುವುದು ಅನಿವಾರ್ಯವಾಗಿತ್ತು.
ಅದೇರೀತಿ, ಹುಟ್ಟಿದಾಗ ಹೆಣ್ಣು ಎಂದು ಘೋಷಿಸಲ್ಪಟ್ಟು, ಬೆಳೆಯುತ್ತಾ ತನ್ನನ್ನು ಗಂಡಾಗಿ ಉಪಚರಿಸಿಕೊಳ್ಳಲು ಬಯಸುವ `ಲಿಂಗಪರಿವರ್ತಿತ ಪುರುಷ’ರನ್ನು ಉಲ್ಲೇಖಿಸುವುದಕ್ಕೂ ನಮ್ಮ ದೇಶೀ ಭಾಷೆಗಳಲ್ಲಿ ಹೆಚ್ಚು ಪದಗಳಿಲ್ಲ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಳಸಲಾಗುವ ‘ಗಂಡುಬಸಕ’ ಎನ್ನುವ ಪದ ತುಂಬಾ ಅವಹೇಳನಾತ್ಮಕವಾದುದು. ಇನ್ನು ‘ಶಿಖಂಡಿ’ ಕೂಡ ಅಷ್ಟೇ ಅವಹೇಳನಕಾರಿ. ಈ ಲಿಂಗಪರಿವರ್ತಿತ ಪುರುಷರಿಗಿರುವ ಏಕಮಾತ್ರ ಗೌರವಯುತ ಪದವೆಂದರೆ ‘ತಿರುನಂಬಿ’. ಈ ಪದ ತಮಿಳುನಾಡಿನಲ್ಲಿ ನಡೆದ ಪೆರಿಯಾರ್‍ವಾದಿ ಆತ್ಮ-ಗೌರವ ಚಳವಳಿಯ ಕೊಡುಗೆ.
ಲೈಂಗಿಕ ಅಭಿವ್ಯಕ್ತಿಯ ವೈವಿಧ್ಯತೆಗಳನ್ನು ವಿವರಿಸುವ ಇಂಗ್ಲಿಷ್ ಸಂಕ್ಷೇಪವಾದ ‘ಐಉಃಖಿಕಿ’ ಎನ್ನುವುದಕ್ಕೆ ಭಾರತೀಯ ಭಾಷೆಗಳಲ್ಲಿ ಹೆಚ್ಚೇನು ಸಮಾನ ಪದಗಳು ಸಿಗುವುದಿಲ್ಲ. ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಣೆ ಹೊಂದುವುದನ್ನು ಸೂಚಿಸುವುದಕ್ಕೆ ಇತ್ತೀಚೆಗೆ ‘ಸಮಲೈಂಗಿಕ’ ಎನ್ನುವ ಕೃತಕ ಪದವನ್ನು ಬಳಸಲಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲೂ ಈ ಐಉಃಖಿಕಿ ಎನ್ನುವ ಪದಗಳು ಇತ್ತೀಚಿನವೇ ಎನ್ನುವುದೂ ಗಮನಾರ್ಹ.
ಆದಾಗ್ಯೂ, ಲಿಂಗ ವೈವಿಧ್ಯತೆಯನ್ನು ವಿವರಿಸಲು ಭಾರತೀಯ ಭಾಷೆಗಳಲ್ಲಿ ಅಪಾರ ಪದಗಳ ಸಂಪತ್ತಿದೆ; ಆದರೆ ಇಂಗ್ಲೀಷಿನಲ್ಲಿ ಇದಕ್ಕೆ ಇರೋದು `ಟ್ರಾನ್ಸ್‍ಜೆಂಡರ್’ ಎನ್ನುವ ಪದವೊಂದೇ. ಇದಕ್ಕೆ ಕಾರಣವೇನೆಂದರೆ, ಹಿಜಡಾ ಸಮುದಾಯವು ಭಾರತದ ಐತಿಹಾಸಿಕ ಹೆಜ್ಜೆಗಳಲ್ಲಿ ತನ್ನದೇ ಆದ ನಾಯಕತ್ವಗಳ ಛಾಪು ಮೂಡಿಸಿದೆ. ಇಂತಹ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿಲ್ಲ. ತಾರತಮ್ಯ, ಹಿಂಸೆ, ನಿಂದನೆಯ ವಿರುದ್ಧ ದಿನನಿತ್ಯವೂ ಸಂಘಟನಾತ್ಮಕ ಹೋರಾಟ ನಡೆಸುತ್ತಾ ಬಂದ ಈ ಸಂಪದ್ಭರಿತ ಇತಿಹಾಸಕ್ಕೆ ನಮ್ಮದೊಂದು ದೊಡ್ಡ ಸಲಾಮ್.

– ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...