Homeಕರ್ನಾಟಕಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ - ದಲಿತ ಮುಖಂಡರ ಮೇಲೆ...

ಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ – ದಲಿತ ಮುಖಂಡರ ಮೇಲೆ ‘ಗೂಂಡಾ ಪಟ್ಟ’

- Advertisement -
- Advertisement -

ಹಲವು ಪ್ರಕರಣಗಳ ಆರೋಪದ ಮೇಲೆ ದಲಿತ ಮುಖಂಡ, ಚಿತ್ರದುರ್ಗದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರನ್ನು ‘ಗೂಂಡಾ ಕಾಯ್ದೆ’ಯಡಿ ಜೈಲಿಗೆ ಕಳಿಸಲಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ಪಕ್ಷವು, ಚಿತ್ರದುರ್ಗದಲ್ಲಿ ದಲಿತ ಮಹಾಗಣಪತಿ ಕೂರಿಸುವುದು, ಮಧುಗಿರಿ ಮೋದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರನ್ನು ಟೀಕಿಸಿದ್ದು, ಟಿಪ್ಪು ಜಯಂತಿ ಪರ ಕರಪತ್ರ ಹಂಚಿಕೆ ಮಾಡಿದ್ದು ಅಪರಾಧವೇ? ಇದಕ್ಕೆ ಗೂಂಡಾ ಕಾಯ್ದೆ ಹಾಕುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಇದು ಪಟ್ಟಭದ್ರರ ರಾಜಕೀಯ ಶಡ್ಯಂತ್ರಕ್ಕೆ ತಲೆಬಾಗಿ, ಪಿತೂರಿ ಮಾಡಿ, ಗೂಂಡಾ ಕಾಯ್ದೆ ಹಾಕಲಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾಯನ್ನು ಮುಸ್ಲಿಂ ಪಕ್ಷವೆಂದು ಉಲ್ಲೇಖಿಸಿರುವ ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಮೇಲಿನ ಪ್ರಕರಣ ಪಟ್ಟಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸಲ್ಲಿಸಿ ಬಂಧಿಸಲು ಅನುಮತಿ ಕೋರಿದ್ದರು. ಜಿಲ್ಲಾಧಿಕಾರಿಗಳು ಬಂಧನಕ್ಕೆ ಅನುಮತಿ ನೀಡಿದ ನಂತರ ಶ್ರೀನಿವಾಸ್‌ ಅವರನ್ನು ಜೈಲಿಗೆ ಕಳಿಸಲಾಗಿದೆ.

ಪ್ರಕರಣಗಳು ಮತ್ತು ಸಂಕ್ಷಿಪ್ತ ವಿವರ

1. ದಸಂಸ (ಎಸ್‌.ಎಸ್.ಬಣ) ವತಿಯಿಂದ ದಲಿತ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಸಮಾನತೆ ಯಾತ್ರೆ ಮಾಡಿದ್ದು, ಜಿಲ್ಲಾಡಳಿತ ಆದೇಶದ ವಿರುದ್ಧವಾಗಿ ಮೆರವಣಿಗೆ ವೇಳೆ ಡಿ.ಜೆ.ಸೌಂಡ್‌ ಬಳಸಿದ್ದು ಮೊದಲನೇ ಪ್ರಕರಣವಾಗಿದೆ.

2. ದಲಿತ ಗಣಪತಿ ಸಮಾನತಾ ಯಾತ್ರೆಯ ಸಂಬಂಧ ನಿಷೇಧಿತ ಪ್ರದೇಶಗಳಲ್ಲಿ ನೀಲಿ ಬಣ್ಣದ ಬಟ್ಟೆ ಮತ್ತು ಪ್ಲೆಕ್ಸ್‌ಗಳನ್ನು ಹಾಕಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ಪ್ರಕರಣ.

3. ಟಿಪ್ಪು ಜಯಂತಿ ಸಂಬಂಧ ಪರ, ವಿರೋಧದ ಕರಪತ್ರಗಳ ಹಂಚುವ ವಿಚಾರವಾಗಿ ಚಿತ್ರದುರ್ಗ ನಗರದ ಗಾಂಧಿ ಸರ್ಕಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದು ಇದೇ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತಪಡಿಸುವ ಎರಡೂ ಗುಂಪುಗಳು ಸೇರಿಕೊಂಡು ಚಿತ್ರದುರ್ಗ ನಗರದಲ್ಲಿ ಇರುವ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ ಪ್ರಕರಣ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿರುವ ಪ್ರಕರಣ ಇದಾಗಿದೆ.

4. ಚಿತ್ರದುರ್ಗ ನಗರದ ಚೇಳುಗಡ್ಡ ಏರಿಯಾದಲ್ಲಿ ಬಸವರಾಜ್‌ ಎಂಬವರೊಂದಿಗೆ ಆದ ಜಗಳದ ಪ್ರಕರಣ. ಚರಂಡಿ ಮೇಲೆ ಇರುವ ಗೋಡೆಯನ್ನು ತೆಗೆಯಲು ಶ್ರೀನಿವಾಸ್‌ ಹೇಳಿದಾಗ ಆಗಿರುವ ಗಲಾಟೆ ಇದಾಗಿದೆ.

5. ಮಧುಗಿರಿ ಮೋದಿ ಎಂಬವರು ಮಾಡಿದ್ದ ವಿಡಿಯೊಗೆ ವಿರುದ್ಧವಾಗಿ ಮಾತನಾಡಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ವಿಚಾರವನ್ನು ಪ್ರಸ್ತಾಪಿಸಿ ಮುಸ್ಲಿಂ ಧರ್ಮದ ಪರ ಮಾತನಾಡಿದ ಪ್ರಕರಣ. ಮುಸ್ಲಿಂ ಧರ್ಮದ ಪರ ಮಾತನಾಡಿದ್ದರಿಂದ ಜನರ ನಡುವೆ ಭೇದ ಹಾಗೂ ವೈಶಮ್ಯ ಹರಡಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

6. ಚಿತ್ರದುರ್ಗ ನಗರದ ಚೇಳೂಗುಡ್ಡದ ಈಶ್ವರನ ಕಲ್ಲು ದೇವಸ್ಥಾನದ ಮುಂಭಾಗ ಗೋಡೆಯ ಮೇಲೆ ಬರೆಯಿಸಿದ್ದ ಶ್ರೀ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಶಿವಕೇಸರಿ ಚೇಳುಗುಡ್ಡ ಚಿತ್ರದುರ್ಗ ಎಂಬ ಬೋರ್ಡ್‌‌ಗೆ ಕಪ್ಪುಬಣ್ಣ ಬಳಿದ ಪ್ರಕರಣ.

7. ಅಪಘಾತ ಪ್ರಕರಣದಲ್ಲಿ ಮೋಟಾರ್‌ ಸೈಕಲ್‌ ಬೋರ್ಡ್ ಬದಲಿಸಿದ ಪ್ರಕರಣ.

8. ಆರೋಪಿಯು ಸಾಕ್ಷಿದಾರರನ್ನು ಬೆದರಿಸುವ ಉದ್ದೇಶ ಹೊಂದಿರುವ ಆರೋಪ ಹೊರಿಸಲಾಗಿದೆ.  ಆ ಮೂಲಕ ನ್ಯಾಯಾಲಯದ ಶಿಕ್ಷೆಗಳಿಂದ ಪಾರಾಗುವ ತಂತ್ರಗಳನ್ನು ಅನುಸರಿಸುತ್ತಿರುವುದಾಗಿ ಶ್ರೀನಿವಾಸ್ ಮೇಲೆ ದೂರಲಾಗಿದೆ. ಶ್ರೀನಿವಾಸ್‌ ಮುಸ್ಲಿಂ ರಾಜಕೀಯ ಪಕ್ಷವಾದ ಎಸ್‌ಡಿಪಿಐಗೆ ಸೇರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

9. ಎಸ್‌ಡಿಪಿಐನಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಕರಣ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅನುಮತಿ ಇಲ್ಲದೆ ರಸ್ತೆ ಮಧ್ಯೆಯಲ್ಲಿ ಶಾಮಿಯಾನ ಹಾಕಿ, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ಎಸ್‌ಡಿಪಿಐನ 50-60 ಜನರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಆರೋಪ ಮಾಡಲಾಗಿದೆ.

10. ಎಸ್‌ಡಿಪಿಐ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಕರಣ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ ಆರೋಪ ಹೊರಿಸಲಾಗಿದೆ. 70-80 ಜನರನ್ನು ಒಂದೆಡೆ ಸೇರಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

New Doc 01-19-2022 21.21-compressed

ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ದಲಿತ ಮುಖಂಡ, ಎಸ್‌ಡಿಪಿಐ ನಾಯಕ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಖಂಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಚಿತ್ರದುರ್ಗ ಕೋಟೆ ಪೋಲಿಸ್ ಠಾಣೆಯ ಪೊಲೀಸ್‌ ನಿರೀಕ್ಷಕರು ಒಟ್ಟು 10 ಕಾರಣಗಳನ್ನು ನೀಡಿ, ಬಾಳೆಕಾಯಿ ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಅವರು ಪೋಲಿಸ್ ನಿರೀಕ್ಷಕರು ಸಲಿಸಿದ ಅರ್ಜಿಯನ್ನು ಪರಿಶೀಲಿಸಿ ಶ್ರೀನಿವಾಸ್ ಅವರನ್ನು ಜೈಲಿಗೆ ಕಳಿಸಲು ಆದೇಶಿಸಿದ್ದಾರೆ. ಚಿತ್ರದುರ್ಗದ ಸೂಪರಿಂಟೆಂಡೆಂಟ್ ಪೋಲಿಸ್ ರಾಧಿಕಾ ಇದೆಲ್ಲವನ್ನು ನೋಡಿಯೂ, ಇಲ್ಲಿ ಅನ್ಯಾಯ ಆಗ್ತಾ ಇದೆ ಎಂದು ಗೊತ್ತಿದ್ದೂ, ತಮ್ಮ‌ಇಲಾಖೆಯ ಸಿಬ್ಬಂದಿ ರಾಜಕೀಯ ದಾಳಗಳಾಗಿ ಶ್ರೀನಿವಾಸ್ ಅವರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷವಾಗಿ ಗೋಚರಿಸುತ್ತಿದ್ದರೂ, ಅದ್ಯಾರ ಮರ್ಜಿಗೂ ಒಳಗಾದಂತೆ ತಮ್ಮ‌ ಇಲಾಖೆಯ ನಡೆಯನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ಒಬ್ಬ ದೊಡ್ಡ ಗ್ಯಾಂಗ್ಸ್ಟರ್ ಎಂದು ಬಿಂಬಿಸಲು ಪಣ ತೊಟ್ಟು ನಿಂತು ಬಿಟ್ಟಿದ್ದಾರೆ” ಎಂದು ದೂರಿದ್ದಾರೆ.

ಪೊಲೀಸರು ನೀಡಿರುವ ಕಾರಣಗಳು ನಿಜಕ್ಕೂ ಅಪರಾಧಗಳೋ ಅಥವಾ ಹೋರಾಟದ ಕೆಚ್ಚೆದೆಯ ಹೆಜ್ಜೆಗಳೋ. ನಿಜಕ್ಕೂ ಇವೆಲ್ಲಾ ಗೂಂಡಾ ಕಾಯ್ದೆ ಅಡಿ ಬಂದು, ಜೈಲು ಶಿಕ್ಷೆ ಆಗುವುದೇ ಆಗಿದ್ದರೆ ಇವತ್ತು ಯಾವೊಬ್ಬ ರಾಜಕಾರಣಿಯೂ ಜೈಲಿನಿಂದ ಹೊರಗೆ ಇರುತ್ತಲೇ ಇರಲಿಲ್ಲ. ಆದರೇ ಜನರ ಪರವಾಗಿ ಹೋರಾಟ ಮಾಡಿದ ಶ್ರೀನಿವಾಸ್ ಇವತ್ತು ಜೈಲಿನಲ್ಲಿದ್ದಾರೆ‌. ಇದೇನಾ ನ್ಯಾಯ? ಇದೇನಾ ನೀತಿ? ಇದೇನಾ ಸತ್ಯ, ಧರ್ಮ? ಇವತ್ತು ಶ್ರೀನಿವಾಸ್‌ ಅವರಿಗೆ ಆಗಿದ್ದು ನಾಳೆ ಯಾರಿಗೂ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಇವತ್ತು ಕಳಂಕ ಹತ್ತಿಕೊಳ್ತಾ ಇದೆ. ಯಾರೋ ಕೆಲವರ ರಾಜಕೀಯ ಸ್ವಾರ್ಥ ಮತ್ತು ದುರಾಸೆಗಳಿಗೆ ಚಿತ್ರದುರ್ಗದ ಹೋರಾಟಗಾರರು ಮತ್ತು ಸಾಮಾನ್ಯ ಜನ ಬೆಲೆ ತೆರಬೇಕಾಗುತ್ತಿದೆ. ಪೊಲೀಸರ ರಾಜಕೀಯ ಪಿತೂರಿ ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇವತ್ತು ನಾವು, ನಾಳೆ ಯಾರು ಅನ್ನುವ ಹಾಗಾಗಿದೆ. ಈ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ದ ನಿಲ್ಲದೇ ಹೋದರೇ, ಇವನ್ನು ತಡೆಯದೆ ಹೋದರೆ, ಮುಂದಿನ‌ ನಮ್ಮ‌ ತಲೆಮಾರು ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ. ಬನ್ನಿ ನ್ಯಾಯ ಕೇಳೋಣ ಎಂದು ಕೋರಿದ್ದಾರೆ.

ಈ ಕುರಿತು ‘ನಾನುಗೌರಿ.ಕಾಂ’ ಕೋಟೆ ಠಾಣೆಯ ಪಿಎಸ್‌‌ಐರವರನ್ನು ಸಂಪರ್ಕಿಸಿತು. “ಈ ಹಿಂದೆ ನಡೆದಿರುವ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಗೂಂಡಾ ಕಾಯ್ದೆಯಡಿ ಇತ್ತೀಚಿನ ವರ್ಷಗಳಲ್ಲಿ ಬಂಧನಕ್ಕೊಳಗಾದವರು ಇವರೊಬ್ಬರೇ. ದಲಿತ ಮುಖಂಡ ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಆಧರಿಸಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಎಸ್‌ಡಿಪಿಐ’ ಒಂದು ಮುಸ್ಲಿಂ ಪಕ್ಷವೆಂದು ಅರ್ಜಿಯಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಸರಿ? ಮಹಾಗಣಪತಿ ಕೂರಿಸಿದ್ದು ಅಪರಾಧವೇ ಎಂಬ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿ ಸ್ಪಷ್ಟ ಉತ್ತರ ನೀಡಿಲ್ಲ.

ಬಾಳೇಕಾಯಿ ಶ್ರೀನಿವಾಸ್‌ರವರನ್ನು ಅನ್ಯಾಯಯುತವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಎಸ್‌ಡಿಪಿಐ ಪಕ್ಷವು ಅವರ ಬಿಡುಗಡೆಗೆ ಒತ್ತಾಯಿಸಿ ಇಂದು ಸಂಜೆಗೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ.


ಇದನ್ನೂ ಓದಿರಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಜನಪರ ಹೋರಾಟಗಾರ ಶ್ರೀನಿವಾಸ್ ಅವರನ್ನು ಗೂಂಡಾಕಾಯ್ದೆ ಅಡಿ ಬಂದಿಸಿರುವುದು ಕಂಡನಾರ್ಹ.

  2. rss rajakiya kutantra dc hagu police ilakege kappu chukke aagide, samanya praje ge arivu ide , janara rakshakara hesari nalli bhkshakaragi iddare, samaya inthavarige buddhi kalisuttade, Deena dalitaru shoshanege valapattavaru echchettakulla bekagi vinanti
    jai Hind, jai bheem

  3. ಜನರನ್ನು ಹತ್ಯೆ ಮಾಡುವಂತೆ ಕರೆ ನೀಡಿ ದ್ವೇಷವನ್ನು ಹರಡಿ, ಶಾಂತಿ ಕದಡುವ ಅನೇಕ ಜನರು ರಾಜಾರೋಷವಾಗಿ ಕರೆನೀಡುವವರನ್ನು ಬಂಧಿಸದೆ ಅವರ ಹೇಳಿಕೆ ಖಂಡಿಸುವವರನ್ನೇ ಗುರಿಯಾಗಿಸಿ ಬಂಧಿಸುತ್ತಿರುವುದನ್ನು ದೇಶವು ಪ್ರಜಾಪ್ರಭುತ್ವದಿಂದ ಸವಾ೯ಧಿಕಾರತ್ವಕ್ಕೆ ಸಾಗುತ್ತಿದೆಯೇನೋ….?

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...