Homeಕರ್ನಾಟಕಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ - ದಲಿತ ಮುಖಂಡರ ಮೇಲೆ...

ಚಿತ್ರದುರ್ಗ: ದಲಿತ ಮಹಾಗಣಪತಿ ಕೇಸ್‌ ಸೇರಿದಂತೆ 10 ಪ್ರಕರಣಗಳ ಆರೋಪ – ದಲಿತ ಮುಖಂಡರ ಮೇಲೆ ‘ಗೂಂಡಾ ಪಟ್ಟ’

- Advertisement -
- Advertisement -

ಹಲವು ಪ್ರಕರಣಗಳ ಆರೋಪದ ಮೇಲೆ ದಲಿತ ಮುಖಂಡ, ಚಿತ್ರದುರ್ಗದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರನ್ನು ‘ಗೂಂಡಾ ಕಾಯ್ದೆ’ಯಡಿ ಜೈಲಿಗೆ ಕಳಿಸಲಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ಪಕ್ಷವು, ಚಿತ್ರದುರ್ಗದಲ್ಲಿ ದಲಿತ ಮಹಾಗಣಪತಿ ಕೂರಿಸುವುದು, ಮಧುಗಿರಿ ಮೋದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರನ್ನು ಟೀಕಿಸಿದ್ದು, ಟಿಪ್ಪು ಜಯಂತಿ ಪರ ಕರಪತ್ರ ಹಂಚಿಕೆ ಮಾಡಿದ್ದು ಅಪರಾಧವೇ? ಇದಕ್ಕೆ ಗೂಂಡಾ ಕಾಯ್ದೆ ಹಾಕುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದೆ. ಇದು ಪಟ್ಟಭದ್ರರ ರಾಜಕೀಯ ಶಡ್ಯಂತ್ರಕ್ಕೆ ತಲೆಬಾಗಿ, ಪಿತೂರಿ ಮಾಡಿ, ಗೂಂಡಾ ಕಾಯ್ದೆ ಹಾಕಲಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾಯನ್ನು ಮುಸ್ಲಿಂ ಪಕ್ಷವೆಂದು ಉಲ್ಲೇಖಿಸಿರುವ ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು, ಶ್ರೀನಿವಾಸ್ ಅವರ ಮೇಲಿನ ಪ್ರಕರಣ ಪಟ್ಟಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಸಲ್ಲಿಸಿ ಬಂಧಿಸಲು ಅನುಮತಿ ಕೋರಿದ್ದರು. ಜಿಲ್ಲಾಧಿಕಾರಿಗಳು ಬಂಧನಕ್ಕೆ ಅನುಮತಿ ನೀಡಿದ ನಂತರ ಶ್ರೀನಿವಾಸ್‌ ಅವರನ್ನು ಜೈಲಿಗೆ ಕಳಿಸಲಾಗಿದೆ.

ಪ್ರಕರಣಗಳು ಮತ್ತು ಸಂಕ್ಷಿಪ್ತ ವಿವರ

1. ದಸಂಸ (ಎಸ್‌.ಎಸ್.ಬಣ) ವತಿಯಿಂದ ದಲಿತ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಸಮಾನತೆ ಯಾತ್ರೆ ಮಾಡಿದ್ದು, ಜಿಲ್ಲಾಡಳಿತ ಆದೇಶದ ವಿರುದ್ಧವಾಗಿ ಮೆರವಣಿಗೆ ವೇಳೆ ಡಿ.ಜೆ.ಸೌಂಡ್‌ ಬಳಸಿದ್ದು ಮೊದಲನೇ ಪ್ರಕರಣವಾಗಿದೆ.

2. ದಲಿತ ಗಣಪತಿ ಸಮಾನತಾ ಯಾತ್ರೆಯ ಸಂಬಂಧ ನಿಷೇಧಿತ ಪ್ರದೇಶಗಳಲ್ಲಿ ನೀಲಿ ಬಣ್ಣದ ಬಟ್ಟೆ ಮತ್ತು ಪ್ಲೆಕ್ಸ್‌ಗಳನ್ನು ಹಾಕಿಸಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ಪ್ರಕರಣ.

3. ಟಿಪ್ಪು ಜಯಂತಿ ಸಂಬಂಧ ಪರ, ವಿರೋಧದ ಕರಪತ್ರಗಳ ಹಂಚುವ ವಿಚಾರವಾಗಿ ಚಿತ್ರದುರ್ಗ ನಗರದ ಗಾಂಧಿ ಸರ್ಕಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದು ಇದೇ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತಪಡಿಸುವ ಎರಡೂ ಗುಂಪುಗಳು ಸೇರಿಕೊಂಡು ಚಿತ್ರದುರ್ಗ ನಗರದಲ್ಲಿ ಇರುವ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ ಪ್ರಕರಣ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿರುವ ಪ್ರಕರಣ ಇದಾಗಿದೆ.

4. ಚಿತ್ರದುರ್ಗ ನಗರದ ಚೇಳುಗಡ್ಡ ಏರಿಯಾದಲ್ಲಿ ಬಸವರಾಜ್‌ ಎಂಬವರೊಂದಿಗೆ ಆದ ಜಗಳದ ಪ್ರಕರಣ. ಚರಂಡಿ ಮೇಲೆ ಇರುವ ಗೋಡೆಯನ್ನು ತೆಗೆಯಲು ಶ್ರೀನಿವಾಸ್‌ ಹೇಳಿದಾಗ ಆಗಿರುವ ಗಲಾಟೆ ಇದಾಗಿದೆ.

5. ಮಧುಗಿರಿ ಮೋದಿ ಎಂಬವರು ಮಾಡಿದ್ದ ವಿಡಿಯೊಗೆ ವಿರುದ್ಧವಾಗಿ ಮಾತನಾಡಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ವಿಚಾರವನ್ನು ಪ್ರಸ್ತಾಪಿಸಿ ಮುಸ್ಲಿಂ ಧರ್ಮದ ಪರ ಮಾತನಾಡಿದ ಪ್ರಕರಣ. ಮುಸ್ಲಿಂ ಧರ್ಮದ ಪರ ಮಾತನಾಡಿದ್ದರಿಂದ ಜನರ ನಡುವೆ ಭೇದ ಹಾಗೂ ವೈಶಮ್ಯ ಹರಡಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

6. ಚಿತ್ರದುರ್ಗ ನಗರದ ಚೇಳೂಗುಡ್ಡದ ಈಶ್ವರನ ಕಲ್ಲು ದೇವಸ್ಥಾನದ ಮುಂಭಾಗ ಗೋಡೆಯ ಮೇಲೆ ಬರೆಯಿಸಿದ್ದ ಶ್ರೀ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಶಿವಕೇಸರಿ ಚೇಳುಗುಡ್ಡ ಚಿತ್ರದುರ್ಗ ಎಂಬ ಬೋರ್ಡ್‌‌ಗೆ ಕಪ್ಪುಬಣ್ಣ ಬಳಿದ ಪ್ರಕರಣ.

7. ಅಪಘಾತ ಪ್ರಕರಣದಲ್ಲಿ ಮೋಟಾರ್‌ ಸೈಕಲ್‌ ಬೋರ್ಡ್ ಬದಲಿಸಿದ ಪ್ರಕರಣ.

8. ಆರೋಪಿಯು ಸಾಕ್ಷಿದಾರರನ್ನು ಬೆದರಿಸುವ ಉದ್ದೇಶ ಹೊಂದಿರುವ ಆರೋಪ ಹೊರಿಸಲಾಗಿದೆ.  ಆ ಮೂಲಕ ನ್ಯಾಯಾಲಯದ ಶಿಕ್ಷೆಗಳಿಂದ ಪಾರಾಗುವ ತಂತ್ರಗಳನ್ನು ಅನುಸರಿಸುತ್ತಿರುವುದಾಗಿ ಶ್ರೀನಿವಾಸ್ ಮೇಲೆ ದೂರಲಾಗಿದೆ. ಶ್ರೀನಿವಾಸ್‌ ಮುಸ್ಲಿಂ ರಾಜಕೀಯ ಪಕ್ಷವಾದ ಎಸ್‌ಡಿಪಿಐಗೆ ಸೇರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

9. ಎಸ್‌ಡಿಪಿಐನಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಪ್ರಕರಣ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅನುಮತಿ ಇಲ್ಲದೆ ರಸ್ತೆ ಮಧ್ಯೆಯಲ್ಲಿ ಶಾಮಿಯಾನ ಹಾಕಿ, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ಎಸ್‌ಡಿಪಿಐನ 50-60 ಜನರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಆರೋಪ ಮಾಡಲಾಗಿದೆ.

10. ಎಸ್‌ಡಿಪಿಐ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಕರಣ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ ಆರೋಪ ಹೊರಿಸಲಾಗಿದೆ. 70-80 ಜನರನ್ನು ಒಂದೆಡೆ ಸೇರಿಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

New Doc 01-19-2022 21.21-compressed

ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ದಲಿತ ಮುಖಂಡ, ಎಸ್‌ಡಿಪಿಐ ನಾಯಕ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಖಂಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಚಿತ್ರದುರ್ಗ ಕೋಟೆ ಪೋಲಿಸ್ ಠಾಣೆಯ ಪೊಲೀಸ್‌ ನಿರೀಕ್ಷಕರು ಒಟ್ಟು 10 ಕಾರಣಗಳನ್ನು ನೀಡಿ, ಬಾಳೆಕಾಯಿ ಶ್ರೀನಿವಾಸ್ ಅವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಅವರು ಪೋಲಿಸ್ ನಿರೀಕ್ಷಕರು ಸಲಿಸಿದ ಅರ್ಜಿಯನ್ನು ಪರಿಶೀಲಿಸಿ ಶ್ರೀನಿವಾಸ್ ಅವರನ್ನು ಜೈಲಿಗೆ ಕಳಿಸಲು ಆದೇಶಿಸಿದ್ದಾರೆ. ಚಿತ್ರದುರ್ಗದ ಸೂಪರಿಂಟೆಂಡೆಂಟ್ ಪೋಲಿಸ್ ರಾಧಿಕಾ ಇದೆಲ್ಲವನ್ನು ನೋಡಿಯೂ, ಇಲ್ಲಿ ಅನ್ಯಾಯ ಆಗ್ತಾ ಇದೆ ಎಂದು ಗೊತ್ತಿದ್ದೂ, ತಮ್ಮ‌ಇಲಾಖೆಯ ಸಿಬ್ಬಂದಿ ರಾಜಕೀಯ ದಾಳಗಳಾಗಿ ಶ್ರೀನಿವಾಸ್ ಅವರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷವಾಗಿ ಗೋಚರಿಸುತ್ತಿದ್ದರೂ, ಅದ್ಯಾರ ಮರ್ಜಿಗೂ ಒಳಗಾದಂತೆ ತಮ್ಮ‌ ಇಲಾಖೆಯ ನಡೆಯನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ಒಬ್ಬ ದೊಡ್ಡ ಗ್ಯಾಂಗ್ಸ್ಟರ್ ಎಂದು ಬಿಂಬಿಸಲು ಪಣ ತೊಟ್ಟು ನಿಂತು ಬಿಟ್ಟಿದ್ದಾರೆ” ಎಂದು ದೂರಿದ್ದಾರೆ.

ಪೊಲೀಸರು ನೀಡಿರುವ ಕಾರಣಗಳು ನಿಜಕ್ಕೂ ಅಪರಾಧಗಳೋ ಅಥವಾ ಹೋರಾಟದ ಕೆಚ್ಚೆದೆಯ ಹೆಜ್ಜೆಗಳೋ. ನಿಜಕ್ಕೂ ಇವೆಲ್ಲಾ ಗೂಂಡಾ ಕಾಯ್ದೆ ಅಡಿ ಬಂದು, ಜೈಲು ಶಿಕ್ಷೆ ಆಗುವುದೇ ಆಗಿದ್ದರೆ ಇವತ್ತು ಯಾವೊಬ್ಬ ರಾಜಕಾರಣಿಯೂ ಜೈಲಿನಿಂದ ಹೊರಗೆ ಇರುತ್ತಲೇ ಇರಲಿಲ್ಲ. ಆದರೇ ಜನರ ಪರವಾಗಿ ಹೋರಾಟ ಮಾಡಿದ ಶ್ರೀನಿವಾಸ್ ಇವತ್ತು ಜೈಲಿನಲ್ಲಿದ್ದಾರೆ‌. ಇದೇನಾ ನ್ಯಾಯ? ಇದೇನಾ ನೀತಿ? ಇದೇನಾ ಸತ್ಯ, ಧರ್ಮ? ಇವತ್ತು ಶ್ರೀನಿವಾಸ್‌ ಅವರಿಗೆ ಆಗಿದ್ದು ನಾಳೆ ಯಾರಿಗೂ ಆಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗಕ್ಕೆ ಇವತ್ತು ಕಳಂಕ ಹತ್ತಿಕೊಳ್ತಾ ಇದೆ. ಯಾರೋ ಕೆಲವರ ರಾಜಕೀಯ ಸ್ವಾರ್ಥ ಮತ್ತು ದುರಾಸೆಗಳಿಗೆ ಚಿತ್ರದುರ್ಗದ ಹೋರಾಟಗಾರರು ಮತ್ತು ಸಾಮಾನ್ಯ ಜನ ಬೆಲೆ ತೆರಬೇಕಾಗುತ್ತಿದೆ. ಪೊಲೀಸರ ರಾಜಕೀಯ ಪಿತೂರಿ ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇವತ್ತು ನಾವು, ನಾಳೆ ಯಾರು ಅನ್ನುವ ಹಾಗಾಗಿದೆ. ಈ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆಗಳ ವಿರುದ್ದ ನಿಲ್ಲದೇ ಹೋದರೇ, ಇವನ್ನು ತಡೆಯದೆ ಹೋದರೆ, ಮುಂದಿನ‌ ನಮ್ಮ‌ ತಲೆಮಾರು ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ. ಬನ್ನಿ ನ್ಯಾಯ ಕೇಳೋಣ ಎಂದು ಕೋರಿದ್ದಾರೆ.

ಈ ಕುರಿತು ‘ನಾನುಗೌರಿ.ಕಾಂ’ ಕೋಟೆ ಠಾಣೆಯ ಪಿಎಸ್‌‌ಐರವರನ್ನು ಸಂಪರ್ಕಿಸಿತು. “ಈ ಹಿಂದೆ ನಡೆದಿರುವ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಗೂಂಡಾ ಕಾಯ್ದೆಯಡಿ ಇತ್ತೀಚಿನ ವರ್ಷಗಳಲ್ಲಿ ಬಂಧನಕ್ಕೊಳಗಾದವರು ಇವರೊಬ್ಬರೇ. ದಲಿತ ಮುಖಂಡ ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಆಧರಿಸಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

‘ಎಸ್‌ಡಿಪಿಐ’ ಒಂದು ಮುಸ್ಲಿಂ ಪಕ್ಷವೆಂದು ಅರ್ಜಿಯಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಸರಿ? ಮಹಾಗಣಪತಿ ಕೂರಿಸಿದ್ದು ಅಪರಾಧವೇ ಎಂಬ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿ ಸ್ಪಷ್ಟ ಉತ್ತರ ನೀಡಿಲ್ಲ.

ಬಾಳೇಕಾಯಿ ಶ್ರೀನಿವಾಸ್‌ರವರನ್ನು ಅನ್ಯಾಯಯುತವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಎಸ್‌ಡಿಪಿಐ ಪಕ್ಷವು ಅವರ ಬಿಡುಗಡೆಗೆ ಒತ್ತಾಯಿಸಿ ಇಂದು ಸಂಜೆಗೆ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿದೆ.


ಇದನ್ನೂ ಓದಿರಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಜನಪರ ಹೋರಾಟಗಾರ ಶ್ರೀನಿವಾಸ್ ಅವರನ್ನು ಗೂಂಡಾಕಾಯ್ದೆ ಅಡಿ ಬಂದಿಸಿರುವುದು ಕಂಡನಾರ್ಹ.

  2. rss rajakiya kutantra dc hagu police ilakege kappu chukke aagide, samanya praje ge arivu ide , janara rakshakara hesari nalli bhkshakaragi iddare, samaya inthavarige buddhi kalisuttade, Deena dalitaru shoshanege valapattavaru echchettakulla bekagi vinanti
    jai Hind, jai bheem

  3. ಜನರನ್ನು ಹತ್ಯೆ ಮಾಡುವಂತೆ ಕರೆ ನೀಡಿ ದ್ವೇಷವನ್ನು ಹರಡಿ, ಶಾಂತಿ ಕದಡುವ ಅನೇಕ ಜನರು ರಾಜಾರೋಷವಾಗಿ ಕರೆನೀಡುವವರನ್ನು ಬಂಧಿಸದೆ ಅವರ ಹೇಳಿಕೆ ಖಂಡಿಸುವವರನ್ನೇ ಗುರಿಯಾಗಿಸಿ ಬಂಧಿಸುತ್ತಿರುವುದನ್ನು ದೇಶವು ಪ್ರಜಾಪ್ರಭುತ್ವದಿಂದ ಸವಾ೯ಧಿಕಾರತ್ವಕ್ಕೆ ಸಾಗುತ್ತಿದೆಯೇನೋ….?

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...