ಭಾರತೀಯ ಸಂವಿಧಾನದ ಶಿಲ್ಪಿ ಅವರ 132ನೇ ಜನ್ಮದಿನದಂದು ಶುಕ್ರವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಹೈದರಾಬಾದ್ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಹೈದರಾಬಾದ್ನಲ್ಲಿರುವ ಈ ಪ್ರತಿಮೆಯು ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆಯಾಗಿದೆ.
ಅಂಬೇಡ್ಕರ್ ಅವರ ಬೃಹತ್ ಪ್ರತಿಮಯ ಅನಾವರಣ ಸಮಾರಂಭದಲ್ಲಿ ಎಲ್ಲಾ 119 ಕ್ಷೇತ್ರಗಳಿಂದ 35,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ ಸುಮಾರು 750 ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಕಾರ್ಯನಿರ್ವಹಿಸಲಿವೆ.
ಈ ಪ್ರತಿಮೆಯು ಹೈದರಾಬಾದ್ನ ಪ್ರಸಿದ್ಧ ಹುಸೇನ್ ಸಾಗರ್ ಸರೋವರದ ದಡದಲ್ಲಿರುವ ರಾಜ್ಯ ಸಚಿವಾಲಯದ ಪಕ್ಕದಲ್ಲಿದೆ.
ಇದನ್ನೂ ಓದಿ: ’ಹಿಂದೂ ಎಂದು ಕರೆದುಕೊಳ್ಳುವ ವ್ಯಕ್ತಿಯಾಗಿ ನಾನು ಸಾಯುವುದಿಲ್ಲ!’ – ಬಿ.ಆರ್. ಅಂಬೇಡ್ಕರ್
ಪ್ರತಿಮೆ ಉದ್ಘಾಟನೆ ಕುರಿತು ಚರ್ಚಿಸಲು ಕೆಸಿಆರ್ ಇತ್ತೀಚೆಗೆ ತಮ್ಮ ಸಚಿವರು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರತಿಮೆಯ ಮೇಲೆ ಹೆಲಿಕಾಪ್ಟರ್ನಿಂದ ಹೂವಿನ ದಳಗಳನ್ನು ಸುರಿಸಲಾಗುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಈ ಕಾರ್ಯಕ್ರಮಕ್ಕೆ ಏಕೈಕ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುವುದು.
ಹೈದರಾಬಾದ್ ತಲುಪುವ ಮೊದಲು 50 ಕಿ.ಮೀ ಒಳಗೆ ವಿಧಾನಸಭೆ ಸಂಕೀರ್ಣಕ್ಕೆ ಬರುವ ಜನರಿಗೆ ಆಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ. ಸಾರ್ವಜನಿಕರಿಗೆ ಒಂದು ಲಕ್ಷ ಸಿಹಿ ಪ್ಯಾಕೆಟ್ಗಳು, 1.50 ಲಕ್ಷ ಬೆಣ್ಣೆ ಹಾಲಿನ ಪ್ಯಾಕೆಟ್ಗಳು ಮತ್ತು ಅಷ್ಟೇ ಸಂಖ್ಯೆಯ ನೀರಿನ ಪ್ಯಾಕೆಟ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ಪ್ರತಿಮೆ ನಿರ್ಮಾಣ ಮಾಡಿದ 98 ವರ್ಷದ ರಾಮ್ ವಾಂಜಿ ಸುತಾರ್ ಅವನ್ನು ಕೆಸಿಆರ್ ಈ ಹಿಂದೆ ಶ್ಲಾಘಿಸಿದ್ದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುತಾರ್ ಅವರನ್ನು ಸರ್ಕಾರ ಆಹ್ವಾನಿಸಿ ಗೌರವಿಸಲಿದೆ.