Homeಮುಖಪುಟಅಮಿತ್ ಶಾರ ನೆಕ್ಸ್ಟ್ ಟಾರ್ಗೆಟ್ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್: ಸಿಖ್ ವಿರೋಧಿ ಗಲಭೆಯ ಪ್ರಕರಣ...

ಅಮಿತ್ ಶಾರ ನೆಕ್ಸ್ಟ್ ಟಾರ್ಗೆಟ್ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್: ಸಿಖ್ ವಿರೋಧಿ ಗಲಭೆಯ ಪ್ರಕರಣ ರೀಓಪನ್..

- Advertisement -
- Advertisement -

1984 ರ ಸಿಖ್ ವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್  ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯವು ಆ ಕೇಸ್ ಅನ್ನು ರೀಓಪನ್ ಮಾಡಲು ಮುಂದಾಗಿದೆ. ಗಲಭೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಕಮಲ್ ನಾಥ್ ನಿರಾಕರಿಸಿದ್ದಾರೆ. ಆದರೆ ಸಾಲು ಸಾಲು ವಿರೋಧ ಪಕ್ಷದ ನಾಯಕರನ್ನು ಬೇಟೆಯಾಡಲು ಮುಂದಾಗಿರುವ ಅಮಿತ್ ಶಾ ಧೃಡ ತೀರ್ಮಾನ ಮಾಡಿದಂತಿದೆ.

ಕಳೆದ ವರ್ಷ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷ ಕೂದಲೆಳೆ ಅಂತರದಲ್ಲಿ ಬಿಜೆಪಿಯನ್ನು ಸೋಲಿಸಿ ಸರಳ ಬಹುಮತ ಪಡೆಯಿತು. ಆಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆಗೆ ಸಿಖ್ ಗುಂಪುಗಳು ಈ ಪ್ರಕರಣವನ್ನು ಉಲ್ಲೇಖಿಸಿ ಪ್ರತಿಭಟನೆ ನಡೆಸಿದ್ದರು. ಈಗ ಭಾರೀ ಬಹುಮತದೊಂದಿಗೆ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷದ ನಾಯಕರನ್ನು ಮುಗಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಸಣ್ಣ ಕೇಸಿನಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಜೈಲಿನಲ್ಲಿದ್ದಾರೆ. ಆ ಲಿಸ್ಟಿಗೆ ಹೊಸ ಸೇರ್ಪಡೆ ಕಮಲ್ ನಾಥ್ ಆಗಿದ್ದಾರೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿಯನ್ನು ಬಂಧಿಸಿದ ಕೆಲ ದಿನಗಳ ನಂತರ ಗೃಹ ಸಚಿವಾಲಯದ ಈ ನಿರ್ಧಾರ ಬಂದಿದೆ. 1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಸಿಖ್ ಸಮುದಾಯಕ್ಕೆ ಸೇರಿದ್ದ ಅವರ ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಇದಕ್ಕೆ ಪ್ರತೀಕಾರಕ್ಕಾಗಿ ಕಮಲ್ ನಾಥ್ ಮತ್ತು ಪಕ್ಷದ ದೆಹಲಿ ನಾಯಕರಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರೊಂದಿಗೆ 1984 ರಲ್ಲಿ ಸಿಖ್ಖರ ಮೇಲಿನ ಗಲಭೆಗೆ ಜನಸಂದಣಿಯನ್ನು ಪ್ರಚೋದಿಸಿದ ಆರೋಪ ಹೊರಿಸಲಾಗಿದೆ.

ಕಮಲ್ ನಾಥ್ ಅವರು ಗಲಭೆಯಲ್ಲಿ ಕೇಂದ್ರ ದೆಹಲಿಯ ರಾಕಬ್‌ಗಂಜ್ ಗುರುದ್ವಾರದ ಹೊರಗೆ ಜನಸಮೂಹವನ್ನು ಮುನ್ನಡೆಸಿದ್ದಾರೆ ಮತ್ತು ಇಬ್ಬರು ಸಿಖ್ಖರು ಆತನ ಸಮ್ಮುಖದಲ್ಲಿ ಕೊಲ್ಲಲ್ಪಟ್ಟರು ಎಂದು ಸಾಕ್ಷಿಗಳು ಆರೋಪಿಸಿದ್ದರು. ಗಲಭೆಗಳ ಬಗ್ಗೆ ತನಿಖೆ ನಡೆಸುತ್ತಿದ್ದ ನಾನಾವತಿ ಆಯೋಗವು ಆಗಿನ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಸಂಜಯ್ ಸೂರಿ ಸೇರಿದಂತೆ ಇಬ್ಬರು ವ್ಯಕ್ತಿಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು ಕಮಲ್ ನಾಥ್ ಸ್ಥಳದಲ್ಲಿದ್ದರು ಎಂದು ಉಲ್ಲೇಖಿಸಿದೆ.

ತಾನು ಹಾಜರಿದ್ದನ್ನು ಒಪ್ಪಿಕೊಂಡ ಕಮಲ್ ನಾಥ್, ಆದರೆ ತಾನು ಜನಸಮೂಹವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. ಹಾಗಾಗಿ ಗಲಭೆಯಲ್ಲಿ ಆತನ ಭಾಗಿಗೆ ಯಾವುದೇ ಪುರಾವೆಗಳಿಲ್ಲ ಎಂದು ಆಯೋಗ ಹೇಳಿದೆ. ಸಜ್ಜನ್ ಕುಮಾರ್ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು.

ಗಲಭೆಗೆ ಸಂಬಂಧಿಸಿದ 220 ಕ್ಕೂ ಹೆಚ್ಚು ಮುಚ್ಚಿದ ಪ್ರಕರಣಗಳ ತನಿಖೆಗಾಗಿ ಕೇಂದ್ರವು ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲು ನಿರ್ಧರಿಸಿದ ಎರಡು ವರ್ಷಗಳ ನಂತರ, ಗಲಭೆಗೆ ಸಂಬಂಧಿಸಿದಂತೆ 88 ಜನರ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಕಳೆದ ವರ್ಷ ಎತ್ತಿಹಿಡಿದಿತ್ತು. ಈ ನಿರ್ಧಾರವನ್ನು ಮಾಜಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು “ನರಮೇಧ” ಎಂದು ಬಣ್ಣಿಸಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಅಕಾಲಿ ದಳ, ಸರ್ಕಾರ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ ಎಂದು ಹೇಳಿ ಕಮಲ್ ನಾಥ್ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಕ್ಷಣ ಕಮಲ್ ನಾಥ್ ಅವರಿಂದ ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕೆಂದು ಶಿರೋಮಣಿ ಅಕಾಲಿ ದಳದ ಸದಸ್ಯ ದೆಹಲಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಒತ್ತಾಯಿಸಿದ್ದಾರೆ. ಕಮಲ್ ನಾಥ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಸಿದ್ಧವಾಗಿರುವ ಇಬ್ಬರು ಸಾಕ್ಷಿಗಳಿಗೆ ಅವರು ರಕ್ಷಣೆ ಕೋರಿದ್ದಾರೆ.

“ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧದ 1984 ರ ಸಿಖ್ ನರಮೇಧ ಪ್ರಕರಣವನ್ನು ಮತ್ತೆ ತೆರೆದಿರುವುದು ಸಿಖ್ಖರ ವಿಜಯವಾಗಿದೆ. ಮುಚ್ಚಲ್ಪಟ್ಟ ಪ್ರಕರಣಗಳನ್ನು ಪುನಃ ತೆರೆಯುವಂತೆ ಒತ್ತಾಯಿಸಿ ನಾವು ನಡೆಸಿದ ನಿರಂತರ ಪ್ರಯತ್ನಗಳ ಫಲಿತಾಂಶವಾಗಿದೆ. ಈಗ ಕಮಲ್ ನಾಥ್ ಅವರ ಅಪರಾಧಗಳಿಗೆ ಬೆಲೆ ತೆರಲಿಲದ್ದಾರೆ” ಎಂದು ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಟ್ವೀಟ್ ಮಾಡಿದ್ದಾರೆ.

“ಶುಭಾಶಯಗಳು. ಇದು ಅಗತ್ಯವಾಗಿದ್ದ ಕ್ರಮವಾಗಿದೆ. ಹಾಗೆಯೇ ನಾವು ಕೂಡ ನ್ಯಾಯದ ನಿರೀಕ್ಷೆಯಲ್ಲಿರುವುದರಿಂದ ಗೃಹ ಸಚಿವಾಲಯವು 2002ರ ಗುಜರಾತ್ ಗಲಭೆ ಪ್ರಕರಣವನ್ನು ಮತ್ತೆ ತೆರೆಯಬಹುದೇ?” ಎಂದು ಖ್ಯಾತ ತನಿಖಾ ಪರ್ತಕರ್ತೆ ರಾಣಾ ಅಯ್ಯೂಬ್ ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...