Homeಕರ್ನಾಟಕ2020: ಕರ್ನಾಟಕ ತನ್ನನ್ನು ತಾನು ಕಳೆದುಕೊಂಡ ವರ್ಷ

2020: ಕರ್ನಾಟಕ ತನ್ನನ್ನು ತಾನು ಕಳೆದುಕೊಂಡ ವರ್ಷ

ಒಂದು ವರ್ಷದಲ್ಲಿ ಒಂದು ರಾಜ್ಯದ ಆಗುಹೋಗುಗಳನ್ನು ಅವಲೋಕಿಸುವುದು ಎಂದರೆ ಕೇವಲ ಸರಕಾರದ ಕೆಲಸಗಳನ್ನಷ್ಟೇ ನೋಡುವುದಲ್ಲ. ಜನಜೀವನದ ಇತರ ಅಂಗಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಹಾಗೆ ಗಮನ ಹರಿಸಿದಾಗ ಅನುಭವಕ್ಕೆ ಬರುವುದು ಎರಡು ರೀತಿಯ ಮೌನಗಳು. ಒಂದು ಸರಕಾರವನ್ನು ಪ್ರಶ್ನಿಸಬೇಕಾದವರು ಪ್ರಶ್ನಿಸದೆ ಶಾಮೀಲು ನೀತಿಯೊಂದನ್ನು ಒಪ್ಪಿಕೊಂಡದ್ದರಿಂದ ಆವರಿಸಿಕೊಂಡಿರುವ ಮೌನ

- Advertisement -
- Advertisement -

ಮುಗಿದು ಹೋಗುತ್ತಿರುವ 2020ನೇ ವರ್ಷ ಕರ್ನಾಟಕದ ಪಾಲಿಗೆ ಹೇಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸುವಾಗ ಕರ್ನಾಟಕ ಎಂಬ ರಾಜ್ಯ ಈ ವಿಶಾಲ ವಿಶ್ವದ ಮತ್ತು ಈ ದೊಡ್ಡ ದೇಶದ ಭಾಗವಾಗಿತ್ತು ಎನ್ನುವುದನ್ನು ಗಮನಿಸಿಯೇ ಮುಂದುವರಿಯಬೇಕಾಗುತ್ತದೆ. ವಿಶ್ವ ಮತ್ತು ದೇಶವನ್ನು ಕಾಡಿದ ಸಂಕಷ್ಟ ಕರ್ನಾಟಕವನ್ನೂ ಕಾಡಿತ್ತು. ಸಂಕಷ್ಟದ ನಿಭಾವಣೆಯಲ್ಲೇ ವಿಶ್ವದ ಜತೆ ಮತ್ತು ದೇಶದ ಜತೆ ಹೆಜ್ಜೆ ಹಾಕುತ್ತಾ ಕರ್ನಾಟಕವೂ ಮುಗಿದ ವರ್ಷವನ್ನು ಬೀಳ್ಕೊಡಬೇಕಾಗಿದೆ.

ಎಲ್ಲಾ ದೇಶಗಳ ಬಹುತೇಕ ಎಲ್ಲಾ ಪ್ರದೇಶಗಳನ್ನೂ ಕಾಡಿದ ಸಂಕಷ್ಟವೊಂದಕ್ಕೆ ಒಂದೊಂದು ದೇಶವೂ, ಒಂದೊಂದು ಪ್ರದೇಶವೂ ಪ್ರತಿಕ್ರಿಯಿಸಿದ ರೀತಿ ಬೇರೆಬೇರೆಯಾಗಿತ್ತು ಎನ್ನುವುದು ಕೂಡಾ ಇಲ್ಲಿ ಅಷ್ಟೇ ಮುಖ್ಯವಾದ ವಿಚಾರ. ಯಾವ್ಯಾವ ದೇಶಗಳು, ಯಾವ್ಯಾವ ಪ್ರದೇಶಗಳು ಹೇಗೆ ಪ್ರತಿಕ್ರಿಯಿಸಿದವು ಎನ್ನುವುದು ಆಯಾ ದೇಶಗಳ ಮತ್ತು ಆಯಾ ಪ್ರದೇಶಗಳ ಅರ್ಥಾತ್ ಆಯಾ ರಾಜ್ಯಗಳ ವಿಶಿಷ್ಟತೆಯ ಬಗ್ಗೆ ಮತ್ತು ಅನನ್ಯತೆಯ ಬಗ್ಗೆ ಬೇರೆ ಕತೆಗಳನ್ನು ಹೇಳಿದವು. ಹಾಗಾದರೆ, ಕರ್ನಾಟಕದ ಕತೆ ಏನು ಎನ್ನುವುದು ಪ್ರಶ್ನೆ. ಈ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಬೇಕು ಎಂದರೆ 2020 ಕರ್ನಾಟಕ ತನ್ನನ್ನು ತಾನು ಕಳೆದುಕೊಂಡ ವರ್ಷ.

ಈ ತೀರ್ಮಾನಕ್ಕೆ ಬಂದದ್ದು ಕರ್ನಾಟಕ ಕೊರೊನಾ ಮಹಾಮಾರಿಯನ್ನು ಮತ್ತು ಅದು ಜನಜೀವನದ ಮೇಲೆ ಮಾಡಿದ ಆರ್ಥಿಕ ಪ್ರಹಾರವನ್ನು ನಿಭಾಯಿಸುವಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಲಿಲ್ಲ ಎಂಬ ಕಾರಣಕ್ಕಲ್ಲ. ಧುತ್ತನೇ ಬಂದೆರಗುವ ಸಾಂಕ್ರಾಮಿಕದಂತಹ ಸಂಕಷ್ಟಗಳನ್ನು ಒಂದು ಜಾನಾರೋಗ್ಯದ ಸಮಸ್ಯೆಯಾಗಿ ನಿಭಾಯಿಸುವಲ್ಲಿ ಹಾಗೂ ದಿಢೀರನೆ ಕುಸಿದ ಅರ್ಥವ್ಯವಸ್ಥೆಯನ್ನು ತೃಪ್ತಿಕರವಾಗಿ ನಿರ್ವಹಿಸುವಲ್ಲಿ ರಾಜ್ಯವೊಂದಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ. ಅದನ್ನು ಅರ್ಥಮಾಡಿಕೊಳ್ಳಬಹುದು. ಹಾಗಾದರೆ ಕರ್ನಾಟಕ ತನ್ನನ್ನು ತಾನು ಕಳೆದುಕೊಂಡದ್ದು ಎಲ್ಲಿ?

ಕೊರೊನಾ ಸಂಕಷ್ಟ ಕಾಲವು ಈ ದೇಶದಲ್ಲಿ ‘ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ’ ಹೊಸ ರಾಜಕಾರಣವೊಂದನ್ನು ರಾಷ್ಟ್ರಮಟ್ಟದಲ್ಲಿ ಹುಟ್ಟುಹಾಕಿತು. ಪ್ರಸಿದ್ಧ ಅಭ್ಯುದಯ ಪತ್ರಕರ್ತ ಪಿ. ಸಾಯಿನಾಥ್ ಅವರ ಒಂದು ಒಳ್ಳೆಯ ’ಬರ ಎಂದರೆ ಎಲ್ಲರಿಗೂ ಇಷ್ಟ’ (ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್) ಎನ್ನುವ ಪುಸ್ತಕದ ಶೀರ್ಷಿಕೆಯನ್ನು ನೆನಪಿಸುವಂತೆ ಒಂದು ಭೀಕರ ಸಾಂಕ್ರಾಮಿಕ ತಂದ ಸಂಕಷ್ಟವು ಅಧಿಕಾರವಂತರಿಗೆ ಬಯಸದೇ ಬಂದ ಅವಕಾಶ-ಭಾಗ್ಯ ಎನ್ನುವ ರೀತಿಯ ರಾಜಕಾರಣವೊಂದು ದೇಶದಲ್ಲಿ ಹಬ್ಬಿತು. ಜನಜೀವನದ ದುರ್ಬರತೆಯ ದುರ್ಬಲ ಕ್ಷಣಗಳನ್ನೇ ಬಳಸಿಕೊಂಡು ಒಬ್ಬ ನಾಯಕ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುವುದು, ತನಗೆ ರಾಜಕೀಯವಾಗಿ ಲಾಭ ತಂದುಕೊಡುತ್ತಿರುವ ಸಿದ್ಧಾಂತವೊಂದನ್ನು ಜಾಣತನದಿಂದ ಸಂಸ್ಥಾಪಿಸಿಬಿಡುವುದು, ಯಾವುದೋ ರೀತಿಯ ಅಭಿವೃದ್ಧಿಯ ಮಾದರಿಯನ್ನು ದೇಶದ ಮೇಲೆ ಹೇರಿಬಿಡುವುದು ಈ ರಾಜಕಾರಣದ ಭಾಗ. ರಾಷ್ಟ್ರಮಟ್ಟದಲ್ಲಿ ಜರುಗಿಹೋದ ಈ ಸಾಂಕ್ರಾಮಿಕ ಕಾಲದ ರಾಜಕೀಯಕ್ಕೆ ಸಂಪೂರ್ಣ ಶರಣಾಗಿ ಕಪ್ಪ ಒಪ್ಪಿಸಿದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಹೀಗೂ ಆಗಬಹುದು ಎಂದು ಕರ್ನಾಟಕದ ಜನರಿಗೆ ಅರ್ಥವಾಗಿ ಹೋದ ವರ್ಷ 2020.

ಕೇಂದ್ರ ಸರಕಾರದ ಮತ್ತು ಇನ್ಯಾವುದೋ ’ಕೇಂದ್ರ ಸ್ಥಾನದ’ ಅಣತಿಯಂತೆ ಕರ್ನಾಟಕ ಸಂಕಷ್ಟದ ಅವಧಿಯುದ್ಧಕ್ಕೂ ಕಾನೂನುಗಳ ಮೇಲೆ ಕಾನೂನುಗಳನ್ನು ತಂದಿತು. ಇಲ್ಲವೇ ಈಗಾಗಲೇ ಅಸ್ತಿತ್ವದಲ್ಲಿ ಇರುವಂತಹ ಕಾನೂನುಗಳನ್ನು ಬದಲಿಸಿತು. ಇಷ್ಟೊಂದು ಸಣ್ಣ ಅವಧಿಯಲ್ಲಿ ಇಷ್ಟೊಂದು ಸಂಖ್ಯೆಯ ಕಾನೂನುಗಳು ಈ ರಾಜ್ಯದಲ್ಲಿ ಸೃಷ್ಟಿಯಾದದ್ದು ಇದುವೇ ಮೊದಲಿಗಿರಬೇಕು. ಕೆಲವು ಕಾನೂನುಗಳನ್ನು ಕೇಂದ್ರದ ಅಣತಿಯಂತೆ ತರಲಾಯಿತು. ಇನ್ನು ಕೆಲವು ಕಾನೂನುಗಳನ್ನು ಅತ್ಯವಸರದಲ್ಲಿ ತರಬೇಕೆಂದು ಬಯಸಿದ ನಿಯಾಮಕ ಶಕ್ತಿ ಯಾವುದು ಎನ್ನುವುದು ಊಹೆಗೆ ಮಾತ್ರ ನಿಲುಕುವಂತದ್ದು; ಪಂಚೇಂದ್ರಿಯಗಳ ಮೂಲಕ ಪರಾಂಬರಿಸುವಂತದ್ದಲ್ಲ. ಕರ್ನಾಟಕದ ಸಾಮಾಜಿಕ-ಆರ್ಥಿಕ ಚಹರೆಯ ಮುದ್ರೆಯಂತಿದ್ದ ಭೂಸುಧಾರಣಾ ಕಾಯ್ದೆಯ ಅಕ್ಷರಶಃ ಚರಮ ಗೀತೆಗೆ ಕಳೆದ ವರ್ಷ ಸಾಕ್ಷಿಯಾಯಿತು. ಕೇಂದ್ರ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕರ್ನಾಟಕ ವಿಧೇಯತೆಯಿಂದ ಒಪ್ಪಿಕೊಂಡು ತನ್ನ ನೆಲದ ಕಾನೂನುಗಳನ್ನು ಮುರಿದುಕಟ್ಟಿತು. ಕಾರ್ಮಿಕ ಕಾನೂನುಗಳನ್ನು ಕೇಂದ್ರದ ಮರ್ಜಿಗೊಳಗಾಗಿ ದುಡಿಯುವ ವರ್ಗಕ್ಕೆ ವಿರೋಧಿಯಾಗಿ ಮರುರೂಪಿಸಿತು.

ನೆಲದ ಜತೆ ಜನರ ಸಂಬಂಧ, ಬೇಸಾಯದ ಜತೆ ಅರ್ಥವ್ಯವಸ್ಥೆಯ ಸಂಬಂಧ, ದುಡಿಯುವ ವರ್ಗಕ್ಕೆ ಮಾಲೀಕರ ಜತೆ ಇರುವ ಸಂಬಂಧ ಇತ್ಯಾದಿಗಳೆಲ್ಲ ರಾಜ್ಯದಿಂದ ರಾಜ್ಯಕ್ಕೆ ಸಾವಯವವಾಗಿ ಭಿನ್ನವಾಗಿರುತ್ತವೆ ಎನ್ನುವುದು ಸತ್ಯ. ಈ ಸತ್ಯವನ್ನು ಅರಿಯದೆ ಯಾರಿಗೋ ಆಪ್ಯಾಯಮಾನವಾದ ಯಾವುದೋ ಅಭಿವೃದ್ಧಿಯ ಮಾದರಿಯನ್ನು ರಾಜ್ಯದ ಸಾಮಾಜಿಕ ಆರ್ಥಿಕ ಅಂತರಂಗಕ್ಕೆ ಎಗ್ಗಿಲ್ಲದೆ ಬಿಟ್ಟುಕೊಟ್ಟದ್ದು 2020 ವರ್ಷ ಕಂಡ ಇನ್ನೊಂದು ದುರಂತ. ವರ್ಷದುದ್ದಕ್ಕೂ ಕರ್ನಾಟಕ ಕೇಳಿದ್ದು ಅಥವಾ ಬೇಡಿಕೊಂಡದ್ದು (ತೆರಿಗೆ ಪಾಲು, ನೆರೆ ಪರಿಹಾರ, ಜಿಎಸ್‌ಟಿ ಪರಿಹಾರ) ಏನೂ ಸಿಗಲಿಲ್ಲ. ವರ್ಷದುದ್ದಕ್ಕೂ ಕರ್ನಾಟಕ ’ಮೇಲಿನಿಂದ’ ಬಂದ ಆಜ್ಞೆಗಳೆಲ್ಲವನ್ನೂ ಬಿಂದು ವಿಸರ್ಗ ಬದಲಾವಣೆ ಇಲ್ಲದೆ ಒಪ್ಪಿ ಪಾಲಿಸಿತು.

ಪ್ರಪಂಚವೇ ಒಪ್ಪಿಕೊಂಡ ಒಂದು ಮಾದರಿ ರಾಜ್ಯದಿಂದ ಹೇಗೂ ಬಹುದಿನ ದೂರ ಉಳಿಯಲು ಸಾಧ್ಯವಿರಲಿಲ್ಲ ಎಂದು ವಾದಿಸಬಹುದು. ಅಲ್ಲೇ ಬರುವುದು ರಾಜ್ಯದ ಸ್ವಂತಿಕೆಯ ಪ್ರಶ್ನೆ. ತುರ್ತುಪರಿಸ್ಥಿತಿ ಕಾಲದ ದೇವರಾಜ ಅರಸು ಅವರ ನಡೆಗಳನ್ನು ನೆನಪಿಸಿಕೊಳ್ಳಬೇಕು. ಆಗಿನ ದೊಡ್ಡ ನಾಯಕಿಯ, ದೊಡ್ಡ ಆಣತಿಯನ್ನು ಕಾಯ-ವಾಚಾ-ಮನಸಾ ಸ್ವೀಕರಿಸಿ ಊರಿಗೆ ಬಂದ ತುರ್ತುಪರಿಸ್ಥಿತಿ ಕೇರಿಗೆ ಬಾರದೆ ಇದ್ದೀತೆ ಅಂತ ಅವರೂ ವರ್ತಿಸಿದ್ದರೆ ’ಅಂತಹಾ ತುರ್ತುಪರಿಸ್ಥಿತಿಯ ಕಾಲದಲ್ಲೂ ಕರ್ನಾಟಕ ಕರ್ನಾಟಕವೇ ಆಗಿತ್ತು’ ಅಂತ ಇಂದಿಗೂ ದೇಶ ನೆನಪಿಸಿಕೊಳ್ಳುವಂತಾಗಲು ಎಲ್ಲಿ ಸಾಧ್ಯವಾಗುತ್ತಿತ್ತು. ಕೊರೊನಾ ಕಾಲದಲ್ಲಿ ಕರ್ನಾಟಕದ ಸ್ವಂತಿಕೆಯೇ ಕಳೆದು ಹೋದದ್ದು ಈ ಅವಧಿಯಲ್ಲಿ ಕರ್ನಾಟಕ ಏನನ್ನು ಒಪ್ಪಿಕೊಂಡಿತು ಎನ್ನುವುದಕ್ಕಿಂತ ಹೆಚ್ಚಾಗಿ, ಒಪ್ಪಿಕೊಂಡದ್ದನ್ನೆಲ್ಲಾ ಯಾವ ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿತು ಎನ್ನುವುದರಲ್ಲಿ ಇದೆ. ‘ತಗ್ಗಿದ ತಲೆ, ಬಾಗಿದ ಬೆನ್ನು, ಮುಗಿದ ಕೈ’ – ಈ ಕರ್ನಾಟಕದ ಚಿತ್ರ 2020ರ ವರ್ಷದ ಜತೆಗೆ ಬೆಸೆದು ಹೋದಂತೆ ಭಾಸವಾಗುತ್ತಿದೆ.

ಒಂದು ವರ್ಷದಲ್ಲಿ ಒಂದು ರಾಜ್ಯದ ಆಗುಹೋಗುಗಳನ್ನು ಅವಲೋಕಿಸುವುದು ಎಂದರೆ ಕೇವಲ ಸರಕಾರದ ಕೆಲಸಗಳನ್ನಷ್ಟೇ ನೋಡುವುದಲ್ಲ. ಜನಜೀವನದ ಇತರ ಅಂಗಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಹಾಗೆ ಗಮನ ಹರಿಸಿದಾಗ ಅನುಭವಕ್ಕೆ ಬರುವುದು ಎರಡು ರೀತಿಯ ಮೌನಗಳು. ಒಂದು ಸರಕಾರವನ್ನು ಪ್ರಶ್ನಿಸಬೇಕಾದವರು ಪ್ರಶ್ನಿಸದೆ ಶಾಮೀಲು ನೀತಿಯೊಂದನ್ನು ಒಪ್ಪಿಕೊಂಡದ್ದರಿಂದ ಆವರಿಸಿಕೊಂಡಿರುವ ಮೌನ. ಇನ್ನೊಂದು ಸರಕಾರದ ಕಿವಿ ಮುಟ್ಟುವಂತೆ ಅಳಬೇಕಾದವರಿಗೆ ಅಳುವುದಕ್ಕೂ ತ್ರಾಣವಿಲ್ಲದೆ ಹೋಗಿರುವ ಕಾರಣಕ್ಕೆ ಆವರಿಸಿಕೊಂಡಿರುವ ಮೌನ. ಈ ಎರಡು ಮೌನಗಳ ಮುಖಾಮುಖಿ 2020ರ ಹೆಗ್ಗುರುತು. ಇದು ದೇಶದ ಕತೆಯೂ ಹೌದು, ಕರ್ನಾಟಕದ ಕತೆ ಸ್ವಲ್ಪ ಹೆಚ್ಚಿನ ಮಟ್ಟಿಗೂ ಹೌದು.
ವರ್ಷ ಬರುತ್ತದೆ, ವರ್ಷ ಹೋಗುತ್ತದೆ. ಕಾಲಚಕ್ರ ಮುಂದುವರಿಯುತ್ತಲೇ ಇರುತ್ತದೆ. ಎಲ್ಲೆಡೆಯೂ ಏನೇನೂ ಆಗುತ್ತಲೇ ಇರುತ್ತದೆ. ಈ ವರ್ಷ ಕರ್ನಾಟಕದ್ದು ಅಂತ ಕರ್ನಾಟಕದಲ್ಲಿ ಆದದ್ದೇನು ಎನ್ನುವ ಪ್ರಶ್ನೆಯನ್ನು, ಇನ್ನೇನು ಸಂದುಹೋಗುವ 2020 ಉಳಿಸಿಹೋಗುತ್ತಿದೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಬಿಎಸ್​ವೈ ವಿರುದ್ಧ ಮತ್ತೆ ಅಪಸ್ವರ ಎತ್ತಿದ ಯತ್ನಾಳ್​; ಸಿಎಂ ಕಾರ್ಯವೈಖರಿ ಖಂಡಿಸಿ ಕಟೀಲ್​ಗೆ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೊಡ್ಡ ಊರುಗಳ ಸುತ್ತಾ ಇರುವ ಹಳ್ಳಿಗಳ ನೆಲಕ್ಕೆ ಸಿಕ್ಕಾಪಟ್ಟೆ ಬೆಲೆ ಬಂದಿದ್ದು, ಬೆಂಗಳೂರು, ಮಯ್ಸೂರಿನಂತ ಸುತ್ತಲ ಊರುಗಳ ಮಂದಿ ಇದ್ದಕ್ಕಿದ್ದಂತೆ, ತುಂಬಾ ಸಿರಿವಂತರಾದರೆ, ದೂರದ ಊರುಗಳ ಮಂದಿ ಮೊದಲಿನಂತೆ ಇದ್ದಾರೆ.
    ಇದನ್ನು ತಡೆಯುವ ಕೆಲಸವನ್ನು ನಮ್ಮ ಆಳ್ವಿಕೆ ಮಾಡಲಿಲ್ಲ! .ಇದನ್ನು ಸರಿಮಾಡಲೇ ಬೇಕು. ರಿಯಲ್ ಎಸ್ಟೇಟ್ ಆಳ್ವಿಕೆ ಹಿಡಿತದಲ್ಲಿರಬೇಕು. ರಯ್ತರಿಗೆ ನೆಲ ಇರುವುದು ಬೆಳೆಬೆಳೆಯಲೇ ಹೊರತು, ರಿಯಲ್ ಎಸ್ಟೇಟ್ ಚಟುವಟಿಕೆಗೆ ಬಳಸುವುದಕ್ಕಲ್ಲ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...