Homeಮುಖಪುಟ512ಕೆಜಿ ಈರುಳ್ಳಿಗೆ ಕೇವಲ 2ರೂ. ಲಾಭ ಪಡೆದ ರೈತ!; ಸರ್ಕಾರದ ಅಸಮಂಜಸ ನೀತಿಯೇ ಇದಕ್ಕೆ ಕಾರಣ...

512ಕೆಜಿ ಈರುಳ್ಳಿಗೆ ಕೇವಲ 2ರೂ. ಲಾಭ ಪಡೆದ ರೈತ!; ಸರ್ಕಾರದ ಅಸಮಂಜಸ ನೀತಿಯೇ ಇದಕ್ಕೆ ಕಾರಣ ಎಂದ ರೈತ ಮುಖಂಡ

- Advertisement -
- Advertisement -

ಮಹಾರಾಷ್ಟ್ರ, ಸೊಲ್ಲಾಪುರದ ರೈತರೊಬ್ಬರು ತಾವು ಬೆಳೆದಿದ್ದ 512 ಕೆಜಿ ಈರುಳ್ಳಿಯನ್ನು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದು, ಅದರಿಂದ ಅವರು ಗಳಿಸಿದ ಹಣ ಕೇವಲ 2.49ರೂ. ಈ ಸುದ್ದಿ ತಿಳಿದಾಕ್ಷಣ ರೈತರು ಆಘಾತಕ್ಕೊಳಗಾದರು.

ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ ಸೊಲ್ಲಾಪುರ ಮಾರುಕಟ್ಟೆ ಯಾರ್ಡ್‌ನಲ್ಲಿ ಈರುಳ್ಳಿ ಇಳುವರಿ ಪ್ರತಿ ಕೆಜಿಗೆ 1ರೂ.ನಂತೆ ಬೆಲೆ ಪಡೆದಿದೆ. ಆದರೆ ಎಲ್ಲಾ ಕಡಿತದ ನಂತರ ಅವರು ಈ ಅಲ್ಪ ಮೊತ್ತವನ್ನು ತಮ್ಮ ಒಟ್ಟು ಲಾಭವಾಗಿ ಪಡೆದರು ಎಂದು ಅವರು ಹೇಳಿದರು.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ರೈತ ಚವ್ಹಾಣ್, ”ಸೊಲ್ಲಾಪುರದ ಈರುಳ್ಳಿ ವ್ಯಾಪಾರಿಯೊಬ್ಬರಿಗೆ ಐದು ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಮಾರಾಟಕ್ಕೆ ಕಳುಹಿಸಿದ್ದೆ, ಆದರೆ ಲೋಡಿಂಗ್, ಸಾರಿಗೆ, ಕೂಲಿ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ನನಗೆ ಕೇವಲ ಅವರಿಂದ 2.49ರೂ. ನಿವ್ವಳ ಲಾಭ ಬಂದಿದೆ. ಆ ವ್ಯಾಪಾರಿ ನನಗೆ ನೀಡಿದ ದರ ಕ್ವಿಂಟಲ್‌ಗೆ 100 ರೂ. ಆಗಿತ್ತು. ಒಟ್ಟಾರೆ ಬೆಳೆ 512 ಕೆಜಿ ಇದ್ದು, ಉತ್ಪನ್ನಕ್ಕೆ 512ರೂ. ಬೆಲೆ ಬಂದಿದೆ” ಎಂದು ಅವರು ಹೇಳಿದರು..

”ಕೂಲಿ, ತೂಕ, ಸಾಗಣೆ ಮತ್ತು ಇತರ ಶುಲ್ಕಗಳ ಮೇಲೆ 509.51ರೂ. ಕಡಿತದ ನಂತರ, ನಾನು ಕೇವಲ 2.49ರೂ. ನಿವ್ವಳ ಲಾಭ ಪಡೆದಿದ್ದೇನೆ. ಇದು ನನಗೆ ಮತ್ತು ರಾಜ್ಯದ ಇತರ ಈರುಳ್ಳಿ ಬೆಳೆಗಾರರಿಗೆ ಮಾಡಿದ ಅವಮಾನವಾಗಿದೆ. ಅಂತಹ ಆದಾಯವನ್ನು ಪಡೆದರೆ ನಾವು ಹೇಗೆ ಬದುಕುವುದು? ಈರುಳ್ಳಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಮತ್ತು ಹಾನಿಗೊಳಗಾದ ರೈತರಿಗೆ ಪರಿಹಾರ ಸಿಗಬೇಕು” ಎಂದರು.

ಇದನ್ನೂ ಓದಿ: ಮಹಾರಾಷ್ಟ್ರ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಕೊಂದು, ಬೆಡ್ ಬಾಕ್ಸ್‌ನಲ್ಲಿ ಶವ ಅಡಗಿಸಿಟ್ಟ ಪ್ರಿಯಕರ

ಉತ್ಪನ್ನವು ಉತ್ತಮ ಗುಣಮಟ್ಟದ್ದಾಗಿದೆ ಎಂದು ಚವಾಣ್ ಹೇಳಿಕೊಂಡರೆ, ಅದು ಕಡಿಮೆ ದರ್ಜೆಯದ್ದಾಗಿದೆ ಎಂದು ವ್ಯಾಪಾರಿ ಹೇಳಿದ್ದಾನೆ.

”ರೈತರು 10 ಚೀಲ ಮಾತ್ರ ತಂದಿದ್ದು, ಉತ್ಪನ್ನವೂ ಕಡಿಮೆ ದರ್ಜೆಯದ್ದಾಗಿದೆ. ಹೀಗಾಗಿ ಕ್ವಿಂಟಲ್ ದರಕ್ಕೆ 100ರೂ. ಸಿಕ್ಕಿದೆ. ಹೀಗಾಗಿ ಎಲ್ಲ ಕಡಿತಗೊಳಿಸಿ 2ರೂ. ನಿವ್ವಳ ಲಾಭ ಬಂದಿದೆ” ಎಂದು ವ್ಯಾಪಾರಿ ತಿಳಿಸಿದ್ದಾನೆ.

”ಇದೇ ರೈತ ಇತ್ತೀಚಿನ ದಿನಗಳಲ್ಲಿ ನನಗೆ 400ಕ್ಕೂ ಹೆಚ್ಚು ಚೀಲಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಪಡೆದಿದ್ದಾನೆ. ಈ ಬಾರಿ 10 ಮೂಟೆ ಇಲ್ಲದ ಉಳಿಕೆ ಉತ್ಪನ್ನಗಳನ್ನು ತಂದಿದ್ದು, ಬೆಲೆ ಕುಸಿದಿದ್ದರಿಂದ ಈ ದರ ಸಿಕ್ಕಿದೆ”  ಎಂದು ವ್ಯಾಪಾರಿ ಹೇಳಿದರು.

ಈ ಬಗ್ಗೆ ರೈತ ಮುಖಂಡ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ಮಾತನಾಡಿ, ”ಈಗ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ‘ಖಾರಿಫ್’ ಉತ್ಪನ್ನವಾಗಿದ್ದು, ಇದನ್ನು ದೀರ್ಘಕಾಲ ಶೇಖರಿಸಿಡಲು ಸಾಧ್ಯವಿಲ್ಲ, ಹೀಗಾಗಿ ಉತ್ಪನ್ನದ ಶೆಲ್ಫ್ ಲೈಫ್ ಕಡಿಮೆಯಾಗಿದೆ. ಈ ಈರುಳ್ಳಿಯನ್ನು ತಕ್ಷಣ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹೊರಕ್ಕೆ ರಫ್ತು ಮಾಡಬೇಕಾಗಿದೆ. ಆದರೆ ದಲ್ಲಾಳಿಗಳ ದುರಾಸೆಯಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ.

ಈ ಈರುಳ್ಳಿಯನ್ನು ಭಾರತೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(NAFED)ದಿಂದ ಖರೀದಿಸಲಾಗುತ್ತಿಲ್ಲ, ಆದ್ದರಿಂದ ಈ ‘ಖಾರಿಫ್’ ಈರುಳ್ಳಿಗೆ ಬೆಲೆ ಸಿಗುವಂತೆ ಮಾಡುವುದೇ ಸರ್ಕಾರಕ್ಕೆ ಇರುವ ಏಕೈಕ ಆಯ್ಕೆಯಾಗಿದೆ ಎಂದು ರಾಜು ಶೆಟ್ಟಿ ಹೇಳಿದರು.

”ಈರುಳ್ಳಿಗೆ ಸಂಬಂಧಿಸಿದಂತೆ ಸರ್ಕಾರದ ರಫ್ತು ಮತ್ತು ಆಮದು ನೀತಿಯು ಸ್ಥಿರವಾಗಿಲ್ಲ. ನಾವು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಎರಡು ಶಾಶ್ವತ ಮಾರುಕಟ್ಟೆಗಳನ್ನು ಹೊಂದಿದ್ದೇವೆ. ಆದರೆ ನಮ್ಮ ಸರ್ಕಾರದ ಅಸಮಂಜಸ ನೀತಿಯಿಂದಾಗಿ ಅವರು ನಮ್ಮ ಬದಲಿಗೆ ಇರಾನ್‌ನಿಂದ ಈರುಳ್ಳಿ ಖರೀದಿಸಲು ಆದ್ಯತೆ ನೀಡಿದರು. ಮೂರನೇ ಮಾರುಕಟ್ಟೆ ಶ್ರೀಲಂಕಾ, ಆದರೆ ಪ್ರತಿಯೊಬ್ಬರಿಗೂ ಅವರ ಪರಿಸ್ಥಿತಿ ತಿಳಿದಿದೆ ಮತ್ತು ಯಾರೂ ತಮ್ಮ ಉತ್ಪನ್ನಗಳನ್ನು ಕಳುಹಿಸಲು ಬಯಸುವುದಿಲ್ಲ” ಎಂದು ಅವರು ಹೇಳಿದರು.

ಸರ್ಕಾರ ಈ ಈರುಳ್ಳಿ ಖರೀದಿಸಬೇಕು ಅಥವಾ ರೈತರಿಗೆ ಸಬ್ಸಿಡಿ ನೀಡಬೇಕು ಎಂದು ರೈತ ಮುಖಂಡರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. The farmers agitation…remember…that’s when farmers shot themselves in the foot….they became political pawns and protested good reforms…if any one expects govt to buy everything that they produce that’s not right. Markets will find their levels and reforms would have helped you avoid pitfalls. By the way I am also a farmer happily living with organic and multi crop farming.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...