Homeಅಂತರಾಷ್ಟ್ರೀಯಪ್ರಾಜೆಕ್ಟ್ - ಜೋರ್ ಸೆ ಬೋಲೊ; ಷೋರ್ ಸೆ ಬೋಲೊ! (ಜೋರಾಗಿ ಹೇಳು; ...

ಪ್ರಾಜೆಕ್ಟ್ – ಜೋರ್ ಸೆ ಬೋಲೊ; ಷೋರ್ ಸೆ ಬೋಲೊ! (ಜೋರಾಗಿ ಹೇಳು; ಅಳುಕಿಲ್ಲದೆ ಕೂಗಿ ಹೇಳು)

- Advertisement -
- Advertisement -

ಈ ಸೊರೋಸ್ 90ಕಳೆದಿರುವ ವಯೋವೃದ್ಧ ಅಸಾಮಿ. ಮೂಲತಃ ಹಂಗೇರಿಯನ್. ಅಮೆರಿಕ ವಾಸಿ. ಶ್ರೀಮಂತ, ಹಿಂದೊಮ್ಮೆ ಶಾರ್ಟ್ ಟ್ರೇಡಿಂಗ್ ಮಾಡಿಯೇ ಬ್ಯಾಂಕ್ ಆಫ್ ಇಂಗ್ಲೆಂಡ್‌ಅನ್ನು ಕಂಗಾಲು ಮಾಡಿದ್ದ ಹೆಜ್ ಫಂಡ್ ಮ್ಯಾನೇಜರ್; ದಾನಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಪರ ಮತ್ತು ಲಿಬರಲ್ ರಾಜಕೀಯಗಳ ಪರ ನಿಂತಿರುವ ವ್ಯಕ್ತಿ ಎಂಬ ಗುಮಾನಿ ಇರುವ ವ್ಯಕ್ತಿ.

ಈ ಆರ್ಕೆಸ್ಟ್ರಾಗಳೆಲ್ಲ ನೋಡಲು ಬಲುಚೆಂದ. ಮಗ್ಗುಲ ಮುಳ್ಳುಗಳು ಸರ್ಕಾರಕ್ಕೆ ಚುಚ್ಚಿದಾಗಲೆಲ್ಲ, ಕೂಡಲೇ ಒಂದು ನರೆಟಿವ್ ಕಟ್ಟುವುದಕ್ಕೆ ಅದರ ಸಮರ್ಥಕರು, ಅವರ ಡಿಯರ್_ಮೀಡಿಯಾ ಮತ್ತು ಟ್ರೋಲ್ ಸೇನೆಗಳು ಒಟ್ಟಾಗಿ ಕೋರಸ್ ಎತ್ತಿ ಹಾಡುತ್ತವೆ; ಆಗ ಯಾವ ಅರಚು ಕಂಠಕ್ಕಾದರೂ ಆ ಹಾಡು ಒಲಿಯಬೇಕು, ಹಾಗಿರುತ್ತದೆ ಈ ಆರ್ಕೆಸ್ಟ್ರೇಷನ್.

ವಿಷಯ ಇಷ್ಟೇ. ಸುಮಾರು ನಮ್ಮಲ್ಲಿನ “ಲಿಟ್ ಫೆಸ್ಟ್” ಮಾದರಿಯಂತೆಯೇ, ಯುರೊ-ಅಟ್ಲಾಂಟಿಕ್ ವಲಯದ ಖಾಸಗಿ ವ್ಯವಸ್ಥೆಯೊಂದು, ಜಗತ್ತಿನಾದ್ಯಂತದಿಂದ ಒಂದಿಷ್ಟು ರಾಜಕಾರಣಿಗಳು, ಅಕಡೆಮೀಷಿಯನ್‌ಗಳು ಮತ್ತು ಭದ್ರತಾ ವೃತ್ತಿಪರರನ್ನು ಕರೆಸಿ ನಡೆಸುವ ವಾರ್ಷಿಕ ಸಮ್ಮೇಳನ ಇದು. ಇದರಲ್ಲಿ ಭಾರತದಿಂದ ಈ ವರ್ಷ ಪಾಲ್ಗೊಂಡದ್ದು ಭದ್ರತಾ ಉಪಸಲಹೆಗಾರ ವಿಕ್ರಂ ಮಿಸ್ರಿ ಮತ್ತು ಗುಪ್ತಚರ ವಿಭಾಗ “ರಾ”-RAWದ ಕಾರ್ಯದರ್ಶಿ ಸುಮಂತ್ ಕುಮಾರ್ ಗೋಯಲ್. ಒಂದಿಷ್ಟು ಯುರೋಪಿಯನ್ ಪುಟ್ಟ ದೇಶಗಳ ಮುಖ್ಯಸ್ಥರೂ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಇಂತಿಪ್ಪ ಸಮಾವೇಶದಲ್ಲಿ, ಜಾರ್ಜ್ ಸೊರೋಸ್ ಎಂಬ ಇಲ್ಲಿಯತನಕ ಭಾರತಕ್ಕೆ ’ಬಹುತೇಕ ಅಪರಿಚಿತ’ ವ್ಯಕ್ತಿಯೊಬ್ಬರು ಮೊನ್ನೆ, “ಭಾರತದಲ್ಲಿ ಪ್ರಜಾತಂತ್ರ ಇದೆ; ಆದರೆ ಭಾರತದ ಪ್ರಧಾನಮಂತ್ರಿಗಳು ಪ್ರಜಾತಾಂತ್ರಿಕ ಅಲ್ಲ. ಅದಾನಿ ಬಳಗ ವ್ಯಾವಹಾರಿಕ ತೊಂದರೆಗಳಲ್ಲಿ ಸಿಕ್ಕಿಹಾಕಿಕೊಂಡಿರುವುದರ ಕುರಿತು ಪ್ರಧಾನಿ ಮೋದಿ ಅವರ ಮೌನವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಅವರು ದೇಶದ ಜನತೆಗೆ, ವಿದೇಶಿ ಹೂಡಿಕೆದಾರರಿಗೆ ಮತ್ತು ಸಂಸತ್ತಿಗೆ ಮೌನ ಮುರಿಯಲೇಬೇಕಾಗುತ್ತದೆ” ಎಂದೆಲ್ಲ ಭಾಷಣ ಕುಟ್ಟಿದ್ದರು.

ಜಗತ್ತಿನಾದ್ಯಂತ ಪ್ರತಿದಿನವೆಂಬಂತೆ ನಡೆಯುವ ಬಗೆಬಗೆಯ ಈ ರೀತಿಯ ಸಮಾವೇಶಗಳಲ್ಲಿ ಇಂತಹ ನೂರಾರು ಭಾಷಣಗಳು ನಡೆದು ಮುಚ್ಚಿಹೋಗಿರುತ್ತವೆ. ಅದು ಬಹಳ ಸಹಜ ಸಂಗತಿ. ಆದರೆ ಅಲ್ಲಿ ಯಾರೋ ಒಬ್ಬರು ಮಾಡಿದ ಭಾಷಣ ಏಕಾಏಕಿ ಇಲ್ಲಿ ಭಾರತದಲ್ಲಿ ಸ್ಫೋಟಿಸಿ, ಅನುರಣಿಸಿದ್ದು ಯಾಕೆ?

ಸ್ಮೃತಿ ಇರಾನಿ ಕೆಂಡ
ಭಾಷಣ ನಡೆದು ಕೇವಲ ಇಪ್ಪತ್ತನಾಲ್ಕು ತಾಸುಗಳ ಒಳಗೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಕರೆದ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ಸಿಡ್ನಿಯಲ್ಲಿ ಸೊರೋಸ್ ಅವರು ಮಾಡಿದ ಭಾಷಣದ ವಿರುದ್ಧ ಉಗ್ರವಾಗಿ ಹರಿಹಾಯ್ದು, “ಇದು ಭಾರತದ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ನಡೆಸಿದ ಹಸ್ತಕ್ಷೇಪ; ಅವರು ಇಲ್ಲಿನ ಪ್ರಜಾಪ್ರಭುತ್ವವನ್ನು ನಾಶ ಮಾಡಿ, ತನ್ನ ಆಯ್ಕೆಯ ಜನ ಇಲ್ಲಿ ಅಧಿಕಾರ ಹಿಡಿಯಬೇಕೆಂದು ಬಯಸಿದ್ದಾರೆ” ಎಂದೆಲ್ಲ ಹೇಳಿದರು.

ಸಾಮಾನ್ಯವಾಗಿ ಇಂತಹ ಸಂಗತಿಗಳಿಗೆ ಸರ್ಕಾರದ ಕಡೆಯಿಂದ ಪ್ರತಿಕ್ರಿಯಿಸುವುದಿದ್ದರೆ ಗೃಹ ಇಲಾಖೆ ಅಥವಾ ವಿದೇಶಾಂಗ ಇಲಾಖೆಯ ವಕ್ತಾರರು ಪ್ರತಿಕ್ರಿಯಿಸುವುದು ಸಂಪ್ರದಾಯ. ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಇದನ್ನು (ವಿದೇಶಾಂಗ ಇಲಾಖೆ ವಕ್ತಾರ ಅರಿಂಧಾಮ್ ಬಾಗ್ಚಿ ಪ್ರತಿಕ್ರಿಯಿಸಿದ್ದು) ನಾವು ಕಂಡಿದ್ದೇವೆ. ಆದರೆ ಇಲ್ಲಿ ಏಕಾಏಕಿ ಸರ್ಕಾರದ ಸಂಪುಟ ದರ್ಜೆಯ, ಹೆವಿವೆಯ್ಟ್ ಸಚಿವರೊಬ್ಬರು ಪತ್ರಿಕಾಗೋಷ್ಠಿ ನಡೆಸಿದ್ದು ಸಹಜವಾಗಿಯೇ ಸರ್ಕಾರದ ಪರ ಇರುವ ಮಾಧ್ಯಮಗಳ ಗಮನ ಸೆಳೆಯಿತು ಮತ್ತು ಸೊರೋಸ್ ಯಾರೆಂದು ದೇಶ ಹುಡುಕಾಟ ನಡೆಸುವಂತಾಯಿತು.

ಮುದುಕ ಡೇಂಜರಸ್ ಎಂದ ಜೈಶಂಕರ್
ಇದು ಅಲ್ಲಿಗೇ ಮುಗಿಯಲಿಲ್ಲ. ಸಚಿವಮಟ್ಟದ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ, ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ (ASPI) ಮತ್ತು ಭಾರತದ ಅಬ್ಸರ್ವರ್ ರಿಸರ್ಚ್ ಫೌಂಡೇಷನ್ (ORF) ಜಂಟಿಯಾಗಿ ಆಸ್ಟ್ರೇಲಿಯಾದಲ್ಲಿ ರೈಸಿನಾ@ಸಿಡ್ನಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್, ಅಲ್ಲಿನ ಕ್ಲೈಮೇಟ್ ಚೇಂಜ್ ಮತ್ತು ಎನರ್ಜಿ ಸಚಿವ ಕ್ರಿಸ್ ಬ್ರೌನ್ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲೂ ಪಾಲ್ಗೊಂಡರು. ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲೇ ಸೊರೋಸ್ ಅವರು ಭಾರತದ ಕುರಿತು ನೀಡಿದ್ದ ಹೇಳಿಕೆಯ ಬಗ್ಗೆ ಪತ್ರಕರ್ತರೊಬ್ಬರು ವಿದೇಶಾಂಗ ಸಚಿವರ ಪ್ರತಿಕ್ರಿಯೆ ಕೇಳಿದಾಗ ಅವರು ಈ ಗದ್ದಲಕ್ಕೆ ಒಂದು ಹೊಸ ತಿರುವು ತರಲು ಪ್ರಯತ್ನಿಸಿದರು. ’ಸೊರೋಸ್ ಅವರದು ಹಳೆಯ ಯುರೋ-ಅಟ್ಲಾಂಟಿಕ್ ಮಾದರಿಯ ವರಸೆ. ಅವರು ಮುದುಕ, ಶ್ರೀಮಂತ, ಸ್ಥಾಪಿತ ಅಭಿಪ್ರಾಯಗಳ ಮನುಷ್ಯ ಮತ್ತು ಅಪಾಯಕಾರಿ. ಅವರು ನ್ಯೂಯಾರ್ಕಿನಲ್ಲಿ ಕುಳಿತು, ಜಗತ್ತು ಹೇಗೆ ಕೆಲಸ ಮಾಡಬೇಕೆಂದು ತನ್ನ ದೃಷ್ಟಿಕೋನಗಳೇ ನಿರ್ಧರಿಸುತ್ತವೆ ಎಂದು ನಂಬಿರುವವರು; ಅವರು ನರೆಟಿವ್‌ಗಳನ್ನು ಕಟ್ಟಲು ಶ್ರಮಿಸುತ್ತಾರೆ. ಅವರಿಗೆ ಬೇಕಾದವರು ಗೆದ್ದರೆ ಮಾತ್ರ ಅದು ಡೆಮಾಕ್ರಸಿ, ಇಲ್ಲದಿದ್ದರೆ ಅಲ್ಲಿ ಡೆಮಾಕ್ರಸಿ ಇಲ್ಲ ಅನ್ನುವವರು ಅವರು. ಮುಕ್ತ ಸಮಾಜದ ಹೆಸರಲ್ಲೇ ಅವರು ಇದನ್ನೆಲ್ಲ ಹೇಳಿ ದಕ್ಕಿಸಿಕೊಳ್ಳುತ್ತಾರೆ. ವಸಾಹತುಶಾಹಿ ಬದುಕಿನ ಕಷ್ಟ ಉಂಡಿರುವ ಭಾರತಕ್ಕೆ ವಿದೇಶೀ ಹಸ್ತಕ್ಷೇಪಗಳ ಪರಿಣಾಮಗಳ ಅರಿವಿದೆ. ಜಗತ್ತು ಈಗ ಮರುಸಂತುಲನಗೊಳ್ಳುತ್ತಿದ್ದು, ಡೆಮಾಕ್ರಸಿ ಎಂದರೆ ಏನೆಂಬ ಯೂರೊ-ಅಟ್ಲಾಂಟಿಕ್ ಕೇಂದ್ರಿತ ವ್ಯಾಖ್ಯಾನಕ್ಕಿಂತ ಭಿನ್ನವಾದ ನಿಲುವುಗಳ ಚರ್ಚೆಗೂ ಈಗ ಅವಕಾಶಗಳು ತೆರೆದಿವೆ’ ಎಂದೆಲ್ಲ ವಿವರಿಸಿ ಇಡಿಯ ಪ್ರಕರಣಕ್ಕೆ ಒಂದು ಜಾಗತಿಕ ರಾಜಕೀಯದ ಸ್ವರೂಪ ತಂದುಕೊಟ್ಟರು.

ಇದನ್ನೂ ಓದಿ: ಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಮಾಧ್ಯಮ ಆರ್ಕೆಸ್ಟ್ರಾ

ಇಂತಹದೊಂದು ಚರ್ಚೆಗೆ ಭಾರತದ ಸುದ್ದಿ ಹಸಿವಿನ ವರ್ಗ ತೆರೆದುಕೊಳ್ಳುವಂತೆ ಮಾಧ್ಯಮಗಳು ಭರ್ಜರಿಯಾಗಿ ಕೆಲಸ ಮಾಡಿದವು. ಎಎನ್‌ಐ ಅಂತಹ ಸರ್ಕಾರ ಪರವಾದ ಪ್ರಬಲ ಸುದ್ದಿಮೂಲಸಂಸ್ಥೆಯು ಈ ಸುದ್ದಿ ಗದ್ದಲವಾಗುವಲ್ಲಿ ಮಹತ್ವದ ಪಾತ್ರ ವಹಿಸಿರುವಂತೆ ಕಾಣಿಸುತ್ತಿದೆ. ದೇಶದಿಂದ ಹೊರಗೆ ಎಲ್ಲೋ ಯಾರೋ ಮಾತನಾಡಿದ ಬೀಸುಮಾತಿನ ಸುದ್ದಿಯೊಂದು ಭಾರತದಲ್ಲಿ ಈ ಪರಿ ಉರಿ ಹೊತ್ತಿಸಿದೆ ಮತ್ತು ಸರ್ಕಾರವು ಚತುರಂಗಬಲದ ಮೂಲಕ ತಾನೇ ಆ ಸುದ್ದಿಯನ್ನು ತಳಮಟ್ಟಕ್ಕೆ ತಲುಪಿಸಲು ಶ್ರಮ ಯಾಕೆ ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡರೆ ಪರಿಸ್ಥಿತಿ ಸ್ಪಷ್ಟವಾಗುತ್ತದೆ.

ಈ ಸೊರೋಸ್ 90 ಕಳೆದಿರುವ ವಯೋವೃದ್ಧ ಅಸಾಮಿ. ಮೂಲತಃ ಹಂಗೇರಿಯನ್. ಅಮೆರಿಕ ವಾಸಿ. ಶ್ರೀಮಂತ, ಹಿಂದೊಮ್ಮೆ ಶಾರ್ಟ್ ಟ್ರೇಡಿಂಗ್ ಮಾಡಿಯೇ ಬ್ಯಾಂಕ್ ಆಫ್ ಇಂಗ್ಲೆಂಡ್‌ಅನ್ನು ಕಂಗಾಲು ಮಾಡಿದ್ದ ಹೆಜ್ ಫಂಡ್ ಮ್ಯಾನೇಜರ್; ದಾನಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಪರ ಮತ್ತು ಲಿಬರಲ್ ರಾಜಕೀಯಗಳ ಪರ ನಿಂತಿರುವ ವ್ಯಕ್ತಿ ಎಂಬ ಗುಮಾನಿ ಇರುವ ವ್ಯಕ್ತಿ.

ಆತ ಭಾರತವನ್ನೇ ಉದ್ದೇಶಿಸಿ ಈ ಮಾತನ್ನು ಹೇಳಿ, ಇಲ್ಲಿ ಅಲೆ ಎಬ್ಬಿಸುವ ಉದ್ದೇಶ ಇದ್ದಿದ್ದರೆ ಅದಕ್ಕೆ ನಾಲ್ಕಾರು ಭಾರತೀಯರು ಹೆಚ್ಚಿರುವ ಜಾಗ ಆಯ್ದುಕೊಳ್ಳುತ್ತಿದ್ದರೇನೋ. ಅವರು ವಾಸವಿರುವ ಅಮೆರಿಕದಲ್ಲೇ ಭಾರತೀಯರಿಗೇನೂ ಕಡಿಮೆ ಇಲ್ಲ. ಮೇಲಾಗಿ ಆತ ಒಬ್ಬ ಹೆಜ್ ಫಂಡ್ ಮ್ಯಾನೇಜರ್ ಆಗಿ ಮೊನ್ನೆ ಮಾತನಾಡಿದ್ದು ನೂರಕ್ಕೆ ಎಂಬತ್ತು ಭಾಗ ಅದಾನಿ ವ್ಯವಹಾರಗಳು, ಹಿಂಡೆನ್‌ಬರ್ಗ್ ವರದಿ ಮತ್ತು ಅದರ ಫಲಿತಗಳ ಬಗ್ಗೆ. ಭಾರತದ ಪ್ರಜಾತಂತ್ರದ ಬಗ್ಗೆ ಮತ್ತು ಪ್ರಧಾನಮಂತ್ರಿಗಳ ಬಗ್ಗೆ ಆತನ ಹೇಳಿಕೆ ಒಟ್ಟೂ ಹೇಳಿಕೆಯ ಒಂದು ಪುಟ್ಟ ಭಾಗ ಮಾತ್ರ.

ಆದರೆ ಮಾಧ್ಯಮಗಳು, ಸರ್ಕಾರ, ಸರ್ಕಾರದ ಚತುರಂಗಬಲಗಳು ಸೊರೋಸ್ ಮಾತಿನಲ್ಲಿ ಅದಾನಿ ಬಳಗದ ಕುರಿತ ದೊಡ್ಡ ಸುದ್ದಿಗೆ ಸಂಪೂರ್ಣ ಫಿಲ್ಟರ್ ತೊಡಿಸಿ, ಕೇವಲ ’ಪ್ರಜಾಪ್ರಭುತ್ವ ಎಂಬ ಪದವನ್ನು ಮಾತ್ರ ಆಯ್ದುಕೊಂಡು, ಅದಕ್ಕೆ ’ದೇಶದ ಆಂತರಿಕ ವ್ಯವಹಾರಗಳೊಳಗೆ ವಿದೇಶೀ ಹಸ್ತಕ್ಷೇಪದ’, ’ಪ್ರತಿಪಕ್ಷಗಳು ವಿದೇಶಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಅಪವಾದ’ವನ್ನು ದೊಡ್ಡ ಧ್ವನಿಯಲ್ಲಿ ಎತ್ತುತ್ತಿವೆ.

ಹಿಂಡೆನ್‌ಬರ್ಗ್ ವರದಿ, ಬಿಬಿಸಿ ಡಾಕ್ಯುಮೆಂಟರಿ ಮತ್ತು ಈಗ ಸೊರೋಸ್ ಹೇಳಿಕೆಗಳು- ಆ ಮೂರೂ ಸನ್ನಿವೇಶಗಳಲ್ಲಿ, ಭಾರತ ಸರ್ಕಾರವು ಪ್ರಧಾನಿ ಮೋದಿಯವರು ಯಾವಾಗಲೂ ಹೇಳುವಂತೆ “ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ” ಸೂತ್ರವನ್ನು ನಿಖರವಾಗಿ ಪ್ರಯೋಗಿಸಿದೆ. ಈ ಪ್ರಯತ್ನದಲ್ಲಿ ಆಳುವ ಪಕ್ಷದ ಚತುರಂಗ ಬಲಗಳು ಅವರಿಗೆ ಸಂಪೂರ್ಣ ಸಾತ್ ನೀಡಿ ’ಆರ್ಕೆಸ್ಟ್ರಾವನ್ನು ಅದ್ದೂರಿಗೊಳಿಸಿವೆ. ಈ ಆರ್ಕೆಸ್ಟ್ರಾದ ಅಬ್ಬರದಲ್ಲಿ ಚರ್ಚಿಸಲೇಬೇಕಾಗಿದ್ದ ಸಂಗತಿಗಳು ಎಂದಿನಂತೆಯೇ ಮೂಲೆ ಹಿಡಿದಿವೆ.

– ರಾಜಾರಾಂ ತಲ್ಲೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...