Homeಕರ್ನಾಟಕ7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಪತ್ರಿಕೆಯೊಂದು ಕಳೆದ ಶನಿವಾರ ಗೌರಿ ಲಂಕೇಶರ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಟ್ರಸ್ಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಸಂಗ್ರಹ ಮಾಡಲಾಗಿದೆ ಎಂಬ ವರದಿಯೊಂದನ್ನು ಪ್ರಕಟಿಸಿತು. ಇಂತಹ ಪತ್ರಿಕೆಗಳಲ್ಲಿ ಗೌರಿ ಲಂಕೇಶರ ಕುರಿತಂತೆ ಅಥವಾ ಅವರ ಬಳಗದ ಕುರಿತಂತೆ ನಕಾರಾತ್ಮಕ ಸುದ್ದಿ ಬರುವುದೇ ಆಶ್ಚರ್ಯವಲ್ಲ. ಆದರೆ, ಗೌರಿ ಹತ್ಯೆಗೆ ಪ್ರತೀಕಾರ ಎಂಬ ತಲೆಬರಹ ಬಳಸಿ ಅದರಲ್ಲಿ ಹೊಸದೊಂದು ಕಥೆ ತೇಲಿಬಿಡಲಾಗಿತ್ತು.

ಅಚ್ಚರಿ ಮಾತ್ರವಲ್ಲದೇ ಅಪಾಯಕಾರಿಯಾದ ಅಂಶ ಅದರಲ್ಲಿತ್ತು. ‘ಪತ್ರಿಕೆ’ಯು ಇದರ ಮೂಲವನ್ನು ಕೆದಕಲು ಹಲವರನ್ನು ಮಾತಾಡಿಸಿಲು ಆರಂಭಿಸಿತು. ಗೌರಿಯವರ ಹತ್ಯೆ ಆದ ಮರುದಿನದಿಂದಲೇ ಅದೊಂದು ಸೈದ್ಧಾಂತಿಕ ಹತ್ಯೆಯಾಗಿರುವ ಸಾಧ್ಯತೆಯನ್ನು ಇಡೀ ದೇಶ ಗುರುತಿಸಿತು. ದೇಶ ವಿದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಎಸ್‍ಐಟಿ ನಡೆಸಿದ ವಿಚಾರಣೆಯಲ್ಲೂ ಅದು ಸಾಬೀತಾಗಿದೆ. ಆದರೆ, ಹತ್ಯೆಯಾದ ಕೆಲವೇ ಗಂಟೆಗಳಿಂದ ಒಂದು ಗುಂಪು ಇದನ್ನ ‘ನಕ್ಸಲೀಯರು’ ಮಾಡಿರಬಹುದು ಎಂಬ ಸುದ್ದಿ ತೇಲಿಬಿಟ್ಟಿತು. ವಿಪರ್ಯಾಸವೆಂದರೆ ಅದಕ್ಕೆ ದನಿಗೂಡಿಸಿದ್ದ ವ್ಯಕ್ತಿಯು ಇಂದು ಗೌರಿಯವರ ಫೋಟೋವನ್ನು ಜೊತೆಯಲ್ಲಿಟ್ಟುಕೊಂಡು ತನ್ನ ಅಕ್ಕನ ಹೆಸರು ದುರ್ಬಳಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಇವೆಲ್ಲವೂ ಬೇರಾವುದೋ ಹುನ್ನಾರದ ಸುಳಿವನ್ನು ನೀಡುತ್ತಿದೆ.

 

ಗೌರಿಯವರ ಹಂತಕರು ಯಾರು ಎಂಬ ಕುರಿತ ಸಂದೇಹ ಯಾರಿಗೂ ಉಳಿದಿಲ್ಲ. ಇನ್ನು ಉಳಿದಿರುವುದು ಕಾನೂನು ಪ್ರಕ್ರಿಯೆ ಮಾತ್ರ. ಕಾನೂನಿನ ಕೆಲವು ಅನಿವಾರ್ಯ ಸಮಸ್ಯೆಗಳಿಂದ ಮುಂದಿನ ದಿನಗಳಲ್ಲಿ ಈಗ ಜೈಲಿನಲ್ಲಿರುವ ಆರೋಪಿಗಳು ಬಿಡುಗಡೆಯಾದರೂ ಸತ್ಯವನ್ನಂತೂ ಮರೆಮಾಚಲಾಗದು. ಆದರೆ, ಹತ್ಯೆ ನಡೆದ ಕೆಲವೇ ಗಂಟೆಗಳಿಂದ ಕಾರ್ಯಪ್ರವೃತ್ತವಾದ ಒಂದು ಗುಂಪು ಹಂತಕರಿಂದ ಇದನ್ನು ಮರೆಮಾಚುವ ಪ್ರಯತ್ನಕ್ಕೆ ಕೈ ಹಾಕಿತ್ತು. ಎಸ್‍ಐಟಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಾ, ಅಸಲೀ ಹಂತಕರನ್ನು ಪತ್ತೆ ಹಚ್ಚಿದ ಮೇಲೆ ಈ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು.

ಆದರೆ, ಹಂತಕರ ಸಿದ್ಧಾಂತಕ್ಕೆ ಪೂರಕವಾದ ಸರ್ಕಾರವು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಅಂತಹ ಗುಂಪುಗಳು ಕಾರ್ಯಪ್ರವೃತ್ತವಾಗಿರುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಸದರಿ ವರದಿ ಹಾಗೂ ನಂತರದ ಬೆಳವಣಿಗೆಗಗಳೂ ಆ ಅನುಮಾನವನ್ನು ಪುಷ್ಟೀಕರಿಸುತ್ತವೆ.

ಹಾಗಾಗಿಯೇ ಗೌರಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ಎಂತಲೂ, ಎರಡು ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದೂ ಬಿಂಬಿಸುವ ಪ್ರಯತ್ನ ನಡೆದಿರುವ ಸಾಧ್ಯತೆಗಳಿವೆ. ಗೌರಿ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡ ಬಲಪಂಥೀಯ ಗುಂಪೂ ಸಹಾ ಏಕರೂಪಿಯಾಗಿಲ್ಲ. ಒಂದು ಕಡೆ ಸಂಪೂರ್ಣ ವಿಷವೇರಿಸಿಕೊಂಡ ತಣ್ಣನೆಯ ಕ್ರೌರ್ಯಕ್ಕೆ ಹೇಸದ ಮನಸ್ಥಿತಿಯ ಹಾರ್ಡ್‍ಕೋರ್ ಗುಂಪಿದ್ದರೆ, ಇನ್ನೊಂದು ಕಡೆ ಇದನ್ನೇ ದೇಶಪ್ರೇಮ ಎಂದುಕೊಂಡು ಅವರ ಜಾಲಕ್ಕೆ ಬಿದ್ದ ‘ಹೊಸಬರೂ’ ಇದ್ದಾರೆ. ಅಂತಹವರು ಈಗ ಪಶ್ಚಾತ್ತಾಪವನ್ನು ಪಡುತ್ತಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವುದಿಲ್ಲ. ‘ಪತ್ರಿಕೆ’ಗೆ ಸಿಕ್ಕ ವಿಶ್ವಾಸನೀಯ ಮಾಹಿತಿಯು ಅದನ್ನು ಸ್ಪಷ್ಟಪಡಿಸುತ್ತದೆ. ಇದು ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ ಮತ್ತು ಕೇವಲ ಪತ್ರಿಕಾ ಸುದ್ದಿಯನ್ನಾಗಿ ಮಾತ್ರ ನೋಡದೇ, ಕರ್ನಾಟಕದ ಧೀಮಂತ ಪತ್ರಕರ್ತೆಯೊಬ್ಬರ ಹತ್ಯೆಯ ವಿಚಾರ ಆಗಿರುವುದರಿಂದ ಅದನ್ನು ಸುದ್ದಿ ಮಾಡದೇ ಪೊಲೀಸರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ.

ಹಂತಕ ಪಡೆಯ ದುರ್ಬಲ ಸದಸ್ಯರ ಮೇಲೆ ತಾವೇ ದಾಳಿ ಮಾಡಿ ಅದನ್ನು ಗೌರಿಯವರ ಬಳಗದ ಮೇಲೆ ಹೊತ್ತುಹಾಕುವ ಆಲೋಚನೆ ದುಷ್ಟಗುಂಪಿನಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ ಅಂತಹ ನಿರ್ದಿಷ್ಟ ಸಂಗತಿಯ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಇಡುವ ಸಾಧ್ಯತೆಯಿದೆ.

ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಧ್ಯಮಗಳ ಮೂಲಕ ಮಾಡುವುದಾದರೆ ಬಲಪಂಥೀಯ ಸಿದ್ಧಾಂತವನ್ನೇ ಹಾಸುಹೊದ್ದುಕೊಂಡಿರುವ ಪತ್ರಿಕೆಗಿಂತ ಉತ್ತಮವಾದ ಸಾಧನ ಇನ್ನಾವುದಿದೆ? ಅದನ್ನೇ ಈಗ ಮಾಡಲಾಗಿದೆ ಎಂಬುದು ವಿವಿಧ ಮೂಲಗಳು (ಇದರಲ್ಲಿ ಪೊಲೀಸ್ ಮೂಲಗಳೂ ಇವೆ) ಅನುಮಾನ ಪಡುತ್ತಿವೆ. ಅಂದರೆ ಗೌರಿ ಹಂತಕರನ್ನು ರಕ್ಷಿಸುವ ಯೋಜನೆಯೊಂದು ಸಿದ್ಧವಾದಂತೆ ಕಾಣುತ್ತಿದೆ. ಏಕೆಂದರೆ, ಸ್ವಂತ ಕೈಯ್ಯಿಂದ ಹಣ ಹಾಕಿ ಹಿತೈಷಿಗಳಿಂದ ಹಣ ಸಂಗ್ರಹಿಸಿ ಕಷ್ಟದ ಮಧ್ಯೆಯೇ ಬದ್ಧತೆಯಿಂದ ಕೆಲಸ ಮಾಡುವ ಜನರೇ ಇರುವ ಟ್ರಸ್ಟ್ ಮೇಲೆ ಆರೋಪ ಮಾಡಿದ್ದಕ್ಕೆ ಬೇರೆ ಕಾರಣಗಳು ಕಾಣುತ್ತಿಲ್ಲ.

‘ಬ್ಲ್ಯಾಕ್‍ಮೇಲ್ ಪತ್ರಕರ್ತರು ಮತ್ತು ಸುಳ್ಳು ಸುದ್ದಿ ಪತ್ರಿಕೆಗಳು’
ನಮ್ಮ ಅಕ್ಕ ಮತ್ತು ತಂದೆಯ ಹೆಸರಿನಲ್ಲಿ ಚಂದಾ ಎತ್ತುವುದಕ್ಕೆ ನನ್ನ ವಿರೋಧ ಎಂದು ಒಬ್ಬ ‘ಪತ್ರಕರ್ತ’ರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಚೆನ್ನಾಗಿ ಬಲ್ಲವರೊಬ್ಬರಿಗೆ ಟಿವಿ ವಾಹಿನಿಯವರು ಸಂಪರ್ಕಿಸಿದ್ದಾರೆ. ಅವರು ಸ್ಪಷ್ಟವಾಗಿ ಗೌರಿಯವರ ಪತ್ರಿಕೆಯ ಕುರಿತು ತನಿಖೆ ನಡೆಯುವುದಾದರೆ ಸ್ವಾಗತ ಮತ್ತು ಅವರ ತಂದೆಯ ಹೆಸರಿನ ಪತ್ರಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಕುರಿತೂ ತನಿಖೆ ನಡೆದರೆ ನಿಜವಾದ ಸಂಗತಿಗಳು ಹೊರಬೀಳುತ್ತವೆ ಎಂದಿದ್ದಾರೆ.

ಪತ್ರಿಕೆಯು ಚಂದಾದಾರರಿಂದ ನಡೆಯದೇ ಬ್ಲ್ಯಾಕ್‍ಮೇಲ್‍ನಿಂದ ನಡೆಯುವುದೇ ‘ನಾರ್ಮಲ್’ ಎಂದು ಭಾವಿಸಿರುವವರ ಗೋಳು ಇದು. ಅಂತಹುದೇ ಬ್ಲ್ಯಾಕ್‍ಮೇಲ್ ಪ್ರಕರಣದಲ್ಲಿ ಸದರಿ ಬಲಪಂಥೀಯ ಪತ್ರಿಕೆಯ ವರದಿಗಾರನ ಮೇಲೂ ಎರಡು ದೂರುಗಳು ದಾಖಲಾಗಿವೆ. ಒಂದು ವರ್ಷದ ಹಿಂದೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಮತ್ತು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರುಗಳಾಗಿವೆ. ಅದರ ಪ್ರತಿಗಳು ‘ಪತ್ರಿಕೆ’ಗೆ ಲಭ್ಯವಾಗಿವೆ. ಆದರೆ, ಅದರ ಕುರಿತು ಸಂಬಂಧಪಟ್ಟವರನ್ನು ಮಾತನಾಡಿಸಿದಾಗ ಗೊತ್ತಾದದ್ದೆಂದರೆ ಸದರಿ ಧ್ಯಾನಸ್ಥ ಆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಬಹಳ ಕಡಿಮೆ. ಅವರ ಸ್ನೇಹಿತನ ಜೊತೆ ಪ್ರಕರಣದಲ್ಲಿ ಸಿಲುಕಿಸಿರಬಹುದೆಂದು ಕಾಣುತ್ತದೆ. ಹೀಗಿದ್ದಾಗಲೂ ತಾನೇ ಬ್ಲ್ಯಾಕ್‍ಮೇಲ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಎಂದು ಬರೆಯುವುದು ಪತ್ರಿಕೋದ್ಯಮದ ನೀತಿ ಸಂಹಿತೆಗೆ ವಿರುದ್ಧವಾದುದು.

ಇದೇ ಮಾತನ್ನು ಆ ದಿನಪತ್ರಿಕೆಯ ಕುರಿತು ಹೇಳಲಾಗದು. ಏಕೆಂದರೆ ಆ ಪತ್ರಿಕೆಯು ಸುಳ್ಳು ಸೃಷ್ಟಿಸುವುದರಲ್ಲಿ ಸಿದ್ಧಹಸ್ತ. ಅದಕ್ಕಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಗಣಪತಿಯಪ್ಪನವರಿಂದ ಒಮ್ಮೆ ಛೀಮಾರಿ ಹಾಕಿಸಿಕೊಂಡಿತ್ತು. ಅಷ್ಟೇ ಅಲ್ಲದೇ ಸುಳ್ಳು ಬರೆದದ್ದಕ್ಕೆ ದಂಡ ಕಟ್ಟುವ ಶಿಕ್ಷೆಯನ್ನು ಶೃಂಗೇರಿ ನ್ಯಾಯಾಲಯ ಆದೇಶಿಸಿದ ವರದಿಗಳಿವೆ.

ಲಂಕೇಶರ ಪರಂಪರೆ ಮತ್ತು ಗೌರಿಯವರ ಹೋರಾಟದ ಕುರಿತು ಮಾತನಾಡಲು ಅಳುಕು ಬೇಡವೇ?

ಜಾತಿ ವ್ಯವಸ್ಥೆ ಮತ್ತು ಕೋಮುವಾದಕ್ಕೆ ವಿರೋಧ ಇವು ಪಿ.ಲಂಕೇಶರು ಎಂದೂ ರಾಜಿ ಮಾಡಿಕೊಳ್ಳದ ಎರಡು ಸಂಗತಿಗಳು. ಹಾಗೆಯೇ ಸ್ವಂತ ಅನುಕೂಲಕ್ಕಾಗಿ ಅಧಿಕಾರಸ್ಥರನ್ನು ಓಲೈಸುವುದು ಅವರ ಮೈಮೇಲೆ ಮುಳ್ಳು ತರಿಸುತ್ತಿತ್ತು. ಆ ಮುಳ್ಳುಗಳು ಅಧಿಕಾರಸ್ಥರಿಗೆ ಚುಚ್ಚುತ್ತಿತ್ತು. ಅದನ್ನು ಅಷ್ಟೇ ಕಠೋರವಾಗಿ ಮುಂದುವರೆಸಿಕೊಂಡು ಬಂದಿದ್ದು ಗೌರಿ ಲಂಕೇಶ್. ಆದರೆ ಲಂಕೇಶರ ಪತ್ರಿಕೆಯ ಮಾಲೀಕತ್ವ ಹೊಂದಿದ್ದ ಇಂದ್ರಜಿತ್ ತುಳಿದ ದಾರಿಯೇ ಬೇರೆ. ಅಧಿಕಾರಸ್ಥರನ್ನು ಓಲೈಸುವುದಕ್ಕೆ ಹಲವು ದಾರಿಗಳನ್ನು ಆಗಿಂದಾಗ್ಗೆ ಹಿಡಿಯುತ್ತಲೇ ಇದ್ದರು.

ಒಮ್ಮೆ ಯಡಿಯೂರಪ್ಪನವರನ್ನು ಸನ್ಮಾನಿಸಿ ಬಾಯಿಗೆ ಬಂದದ್ದು ಮಾತನಾಡಲು ಹೊರಟಾಗ ಯಡಿಯೂರಪ್ಪನವರೇ ‘ಇಂಥದ್ದೆಲ್ಲಾ ನಿಮ್ಮ ತಂದೆಯವರಿಗೆ ಇಷ್ಟವಾಗುತ್ತಿರಲಿಲ್ಲ, ಸುಮ್ಮನಿರಿ’ ಎಂದು ಹೇಳಿದರೆಂದರೆ, ಇಂದ್ರಜಿತ್ ಎಂಬ ವ್ಯಕ್ತಿಯ ಮಟ್ಟವನ್ನು ಊಹಿಸಬಹುದು.

ಪಿ.ಲಂಕೇಶರ ಆತ್ಮಕಥೆಯ ಹೆಸರು ಹುಳಿಮಾವಿನ ಮರ. ಅದೊಂದು ರೂಪಕಾತ್ಮಕವಾದ ಹೆಸರಾಗಿದ್ದರೂ, ಅವರ ಪ್ರೀತಿಯ ತೋಟದಲ್ಲೂ ಒಂದು ಹುಳಿಮಾವಿನ ಮರವಿತ್ತು. ಆ ತೋಟವು ಪ್ರತೀವರ್ಷ ಅವರ ಗೆಳೆಯರೆಲ್ಲರೂ ಸೇರುತ್ತಿದ್ದ ತಾಣವೂ ಆಗಿತ್ತು. ಇಂದು ಆ ತೋಟ ಮಾತ್ರವಲ್ಲದೇ, ಲಂಕೇಶರ ಸಮಾಧಿಯ ಜಾಗವನ್ನೂ ಸೇರಿಸಿ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಕುಟುಂಬದ ಮೂಲಗಳು ತಮಗೆ ಗೊತ್ತೇ ಆಗದಂತೆ ಮಾರಾಟವಾಗಿದ್ದನ್ನು ನೋವಿನಿಂದ ನೆನಪಿಸಿಕೊಳ್ಳುತ್ತವೆ. ಅಂದಹಾಗೆ ಸಮಾಧಿಯನ್ನೂ ಸೇರಿಸಿ ತೋಟ ಮಾರಾಟ ಮಾಡಿದ ವ್ಯಕ್ತಿಯೇ ಇಂದು ಪತ್ರಿಕಾಗೋಷ್ಠಿ ಮಾಡುತ್ತಿರುವುದು.

ಫೆಬ್ರವರಿ 22, 2005. ಬಸವನಗುಡಿ ಪೊಲೀಸ್ ಠಾಣೆ

ಬಸವನಗುಡಿ ಪೊಲೀಸ್ ಠಾಣೆಗೂ, ನಂ.9 ಇಎಟಿ ಸ್ಟ್ರೀಟ್, ಬಸವನಗುಡಿಗೂ ಸಾಕಷ್ಟು ಸಂಬಂಧವಿದೆ. ದುಷ್ಟರನ್ನೂ, ಭ್ರಷ್ಟರನ್ನೂ ಬಯಲುಗೊಳಿಸುವ ಬರಹಗಳನ್ನು ನಿರ್ಭೀತಿಯಿಂದ ಬರೆದ ಪತ್ರಿಕೆಯ ಕಚೇರಿ ಅದಾಗಿತ್ತು. ಅಂತಹ ದುಷ್ಟರು ಕಚೇರಿಯ ಮುಂದೆ ಗಲಾಟೆ ಮಾಡಲು ಬರುವುದು ಯಾವಾಗಲೋ ಒಮ್ಮೆ ನಡೆಯುತ್ತಲೇ ಇತ್ತು. ಆದರೆ, ಫೆಬ್ರವರಿ 22, 2005ರಂದು ಒಂದು ವಿಷಾದಕರ ದೂರು ಆ ಠಾಣೆಗೆ ಹೋಯಿತು.

ಆ ದೂರಿನಲ್ಲಿರುವ ಸಂಗತಿಗಳ ಕುರಿತು ಇಂದು ಇಂದ್ರಜಿತ್ ಮಾತಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಅವರ ಒಡನಾಡಿಗಳು ಕೇಳುತ್ತಾರೆ. ಇಂದು ಗೌರಿಯವರಿಲ್ಲ. ಆದರೆ ಅವರು ಕೊಟ್ಟ ದೂರಿದೆ. ಅದು ಏಳಿಸುವ ಪ್ರಶ್ನೆಗಳು ಹೀಗಿವೆ. ಗೌರಿಯವರಿಗೆ ಬಂದೂಕು ತೋರಿಸಿ ಹೆದರಿಸಿದ್ದು ಯಾರು? ಸ್ವತಃ ಗೌರಿ ಲಂಕೇಶರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೊಟ್ಟ ದೂರು ಏನಾಗಿತ್ತು? ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಕುಟುಂಬ ಸಮೇತ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳು ಅಧಿಕಾರಕ್ಕೆ ಏರಿರುವುದರಿಂದ, ಜಾತ್ಯತೀತ ಶಕ್ತಿಗಳ ವಿರುದ್ಧ ಅವರು ನಿರಂತರ ದಾಳಿಗಳನ್ನು ಮಾಡುತ್ತಲೇ ಇರುತ್ತಾರೆ.
    ಇದಕ್ಕೆ ಜಾತ್ಯತೀತರು ಹೆದರುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...