Homeಎಕಾನಮಿಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ...

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ…

- Advertisement -
- Advertisement -

ಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

ಅನುವಾದ: ವೆಂಕಟೇಶ್‌ ಮಾನು

2011-12 ಹಾಗೂ 2017-18 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು ಉದ್ಯೋಗದ ಪ್ರಮಾಣ ಕುಗ್ಗಿರುವ ಬಗ್ಗೆ ಇತ್ತೀಚೆಗೆ ದೆಹಲಿಯ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಸಸ್ಟೆನೇಬಲ್ ಎಂಪ್ಲಾಯಿಮೆಂಟ್’ ಪ್ರಕಟಿಸಿರುವ ಹಾಗೂ ಸಂತೋಷ ಮೆಹ್ರೋತ್ರಾ ಮತ್ತು ಜಜಾತಿ ಕೆ. ಪರಿದಾ ಬರೆದಿರುವ ಪ್ರಬಂಧದಲ್ಲಿ ಅಭಿಪ್ರಾಯಪಡಲಾಗಿದೆ.

ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗ ವಲಯ ಇಷ್ಟೊಂದು ಕುಸಿತ ಕಂಡಿದೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಹಿಮಾಂಶು ಸೇರಿದಂತೆ ಈ ಪ್ರಬಂಧದ ಲೇಖಕರು ಹಾಗೂ ಇತರೆ ಪರಿಣಿತರು ಸಹ ಈ ರೀತಿಯ ಉದ್ಯೋಗ ಕುಸಿತದ ಪ್ರಮಾಣವನ್ನು ಕಂಡುಕೊಂಡಿದ್ದಾರೆ.

ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, “2011-12 ಹಾಗೂ 2017-18ರ ಅವಧಿಯಲ್ಲಿ 9 ದಶಲಕ್ಷ ಗಳಷ್ಟು (90 ಲಕ್ಷ) ಉದ್ಯೋಗದ ಪ್ರಮಾಣ ಕುಗ್ಗಿದೆ. ಇದು ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ’ ಎಂದಿದ್ದಾರೆ.

ಮೆಹ್ರೋತ್ರಾ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಪರಿದಾ ಅವರು ಪಂಜಾಬ್‍ನ ಕೆಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರು.

ಈ ಅಧ್ಯಯನದ ಫಲಿತಾಂಶವು, ಪ್ರಧಾನಿ ಅವರ ಅರ್ಥಶಾಸ್ತ್ರ ಸಲಹಾ ಸಮಿತಿಯಿಂದ ಲಾವೀಸ್ ಭಂಡಾರಿ ಹಾಗೂ ಅಮರೇಶ ದುಬೈ ನಡೆಸಿದ ಅಧ್ಯಯನಕ್ಕಿಂತ ಭಿನ್ನವಾಗಿದೆ. ಅವರ ಅಧ್ಯಯನದಂತೆ 2011-12 ಅವಧಿಯಲ್ಲಿ 43.3 ಕೋಟಿ ಇದ್ದ ಉದ್ಯೋಗಗಳು 2017-18ರ ಅವಧಿಯಲ್ಲಿ ಅದು 45.7 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, 2011-12ರ ಅವಧಿಯಲ್ಲಿ 47.4 ಕೋಟಿ ಉದ್ಯೋಗಗಳಿದ್ದು  2017-18ರ ಅವಧಿಯಲ್ಲಿ ಅದು 46.5 ಕೋಟಿಗಿಳಿದಿವೆ. ಅಂದರೆ ಜನಸಂಖ್ಯೆ ಏರುತ್ತಲೇ ಇದ್ದರೆ ಮೊದಲ ಬಾರಿಗೆ ಉದ್ಯೋಗಗಳಲ್ಲಿ ಇಳಿಕೆ ಕಂಡುಬಂದಿದೆ.

ಆಗಸ್ಟ್ 1ರ  ಮಿಂಟ್ ಪತ್ರಿಕೆಯಲ್ಲಿ ಹಿಮಾಂಶು ಅಭಿಪ್ರಾಯಪಟ್ಟಿರುವಂತೆ “2011-12ರ ಅವಧಿಯಲ್ಲಿ 472.5 ದಶಲಕ್ಷ ದಷ್ಟು ಉದ್ಯೋಗ ಕುಸಿತ ಕಂಡು ಬಂದಿದೆ. ನಂತರದ 6 ವರ್ಷಗಳ ಅವಧಿಯಲ್ಲಿ 15 ದಶಲಕ್ಷ ಉದ್ಯೋಗಗಳು ಕುಂಠಿತಗೊಂಡಿವೆ. ಅಂದರೆ, 2011-12 ಹಾಗೂ 2017-18ರ ಅವಧಿಯ ಪ್ರತಿ ವರ್ಷದಲ್ಲೂ 26 ಲಕ್ಷದಷ್ಟು ಉದ್ಯೋಗಗಳು ನಷ್ಟ ಹೊಂದುತ್ತಾ ಬಂದಿವೆ.

ಈ ಎರಡೂ ಅಧ್ಯಯನಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. 2004-05, 2011-12 ಹಾಗೂ ಪಿ.ಎಲ್.ಎಫ್.ಎಸ್-2017-18ರ ಅನ್ವಯ ಉದ್ಯೋಗ ಹಾಗೂ ನಿರುದ್ಯೋಗ ಸಮೀಕ್ಷೆಗಾಗಿ “ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗಾನೈಸೆಷನ್’ ನೀಡಿದ ಅಂಕಿ-ಅಂಶಗಳು ಈ ಎರಡೂ ಅಧ್ಯಯನಗಳಿಗೆ ಆಧಾರವಾಗಿವೆ. ಭಂಡಾರಿ ಹಾಗೂ ದುಬೈ ಪ್ರಕಾರ 40 ದಶಲಕ್ಷ ಉದ್ಯೋಗಗಳ ವ್ಯತ್ಯಾಸವಿದೆ. ಆದರೆ, ಮೆಹ್ರೋತ್ರಾ ಹಾಗೂ ಪರಿದಾ ಮತ್ತು ಹಿಮಾಂಶು ನಡೆಸಿದ ಅಧ್ಯಯನಗಳ ಫಲಿತಾಂಶಗಳು ಭಿನ್ನವಾಗಿವೆ.  ಏಕೆ ಹೀಗೆ ಎಂಬುದಕ್ಕೆ ಬಹುಶಃ ಎರಡು ಕಾರಣಗಳಿರಬಹುದು.

ಇಡೀ ದೇಶದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿ ಒಟ್ಟು ಉದ್ಯೋಗಗಳ ಸಂಖ್ಯೆಯನ್ನು ಅಂದಾಜಿಸಿರಬಹುದು. ಅತಿ ಹೆಚ್ಚಿನ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ನೀಡುತ್ತದೆ. ಭಂಡಾರಿ ಹಾಗೂ ದುಬೈ ಆವರು 2017-18ರಲ್ಲಿ ಭಾರತದ ಜನಸಂಖ್ಯೆಯನ್ನು 1.36 ಶತಕೋಟಿ ಎಂದು ಪರಿಗಣಿಸಿದ್ದಾರೆ. ಮೆಹ್ರೋತ್ರಾ ಹಾಗೂ ಪರಿದಾ ಅವರು 1.35 ಶತಕೋಟಿ ಎಂದು ಪರಿಗಣಿಸಿದ್ದಾರೆ. 2017-18ರಲ್ಲಿ ವಿಶ್ವಬ್ಯಾಂಕ್ 1.33 ಶತಕೋಟಿ ಎಂದಿದ್ದರೆ, ಹಿಮಾಂಶು-ಸರಕಾರಿ ಅಧಿಕಾರಿಗಳ ಜಿಡಿಪಿ ಅನ್ವಯ-1.31 ಶತಕೋಟಿ ಜನಸಂಖ್ಯೆ ಇದೆ ಎಂದು ಪರಿಗಣಿಸಿದೆ.

ಭಾರತದ ಜನಸಂಖ್ಯೆ ಬಗ್ಗೆ ಇಷ್ಟೊಂದು ಗೊಂದಲಗಳಿವೆ. ಏಕೆಂದರೆ, 2011ರ ಜನಗಣತಿ ಅನ್ವಯ ಇಂದಿಗೂ ಜನಸಂಖ್ಯೆ ಕುರಿತು ನಿಖರ ಮಾಹಿತಿ ನೀಡಿಲ್ಲ. ನಿಯಮದಂತೆ, ಸರ್ಕಾರವು 2016ರಲ್ಲಿಯೇ ಬಿಡುಗಡೆ ಮಾಡಬೇಕಿತ್ತು.

ಭಂಡಾರಿ ಹಾಗೂ ದುಬೈ ಅಧ್ಯಯನದಲ್ಲಿ, ಉದ್ಯೋಗಗಳ ಸಾಧ್ಯತೆಯ ಪ್ರಧಾನ ಮೂಲಾಂಶಗಳನ್ನು ಪರಿಗಣಿಸಿ, ನಂತರದ ಪೂರಕ ಸಾಧ್ಯತೆಗಳ ಮೂಲಗಳನ್ನು ಕಡೆಗಣಿಸಿರುವುದು ಈ ವ್ಯತ್ಯಾಸಗಳಿಗೆ ಕಾರಣ ಇರಬಹುದು. ಅದಲ್ಲದೇ ಅವರಿಬ್ಬರೂ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವುದರಿಂದ ಅಲ್ಲಿನ ಅಂಕಿ ಸಂಖ್ಯೆಗಳು ಉತ್ರೇಕ್ಷೆಯೂ ಇರಬಹುದೆಂಬ ಆರೋಪ ಸಹ ಕೇಳಿಬಂದಿದೆ.

ಈ ಸರ್ವೇಗಳಲ್ಲಿ ಒಬ್ಬ ವ್ಯಕ್ತಿಯು ವರ್ಷದ 365 ದಿನಗಳಲ್ಲಿ 182 ದಿನ ಕೆಲಸ ಮಾಡಿದರೆ ಆತನನ್ನು ಉದ್ಯೋಗಿ ಎಂದು ಪರಿಗಣಿಸುತ್ತದೆ. ಅಂದರೆ ಆರು ತಿಂಗಳು ಕೆಲಸ ಮಾಡಿ ಇನ್ನು ಆರು ತಿಂಗಳು ಕೆಲಸವಿಲ್ಲದಿದ್ದರೂ ಸಹ ಅವರು ಉದ್ಯೋಗಿಗಳ ಪಟ್ಟಿಗೆ ಸೇರುತ್ತಾರೆ. ಹಾಗಾಗಿ ಮೇಲಿನ ಅರ್ಥಶಾಸ್ತ್ರಜ್ಞರು ಊಹೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಉದ್ಯೋಗ ಕಡಿತವಾಗಿದೆ ಎಂದು ಹಲವಾರು ಜನ ಅಭಿಪ್ರಾಯಪಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...