Homeಮುಖಪುಟರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

ರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

- Advertisement -
- Advertisement -

ನಿಮ್ಮ ಫೋನಿನ ಹೃದಯದೊಳಗ ಇರೋ ವಾಟ್ಸಪ್ಪು ಯುನಿವರ್ಸಿಟಿಯೊಳಗ ನಿಮಗೊಂದು ಜೋಕು ಬಂದಿರಲಿಕ್ಕೇ ಬೇಕು. “ಈ ದೇಶದಾಗ ಒಂಬತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಅಂತ ಒಂದು ಕಾನೂನು ಇದೆ. ಇಂತಹ ಬ್ರಿಟಿಷರು ಮಾಡಿದ ಕಾನೂನುಗಳನ್ನು ನಮಗೆ ಬೇಡ. ಇಂತಹ ಅನೇಕ ಕಾನೂನುಗಳನ್ನು ತಿದ್ದಲೆಂದೇ ನಾವು ಬಂದಿದ್ದೇವೆ” ಅಂತ.

ಇದನ್ನ ನೋಡಿದಾಗ ನಿಮಗೂ ಅನ್ನಿಸಿರಬಹುದು. ‘ಹೌದಲ್ಲಾ ಅ ಬ್ರಿಟಿಷ್ ನನ ಮಕ್ಕಳು ಏನೇನು ಮಾಡಿ ಹೋಗ್ಯಾರ. ಇದನ್ನೆಲ್ಲಾ ಬದಲಾಯಿಸಬೇಕು. ಅದಕ್ಕೊಬ್ಬ ಸೂಪರ್ ಹೀರೋ ಬೇಕು’ ಅಂತ. ಆದರ ಅದರ ಹಿಂದಿನ ತಥ್ಯವನ್ನು ನೋಡೋಣ.

ಭಾರತದ ಸಂವಿಧಾನದಾಗ 12 ನೇ ಕಲಂ ಅಂತ ಒಂದು ಮೂರು ಸಾಲಿನ ಒಂದು ಪ್ಯಾರಾ ಐತಿ.
ಅದೇನಪಾ ಅಂದರ ರಾಜ್ಯ ಅಂದರ ಏನು ಅನ್ನೋದರ ವ್ಯಾಖ್ಯಾನ.

ಸಂವಿಧಾನದ ಭಾಷಾದಾಗ ರಾಜ್ಯ ಅಂದ್ರ ಕರ್ನಾಟಕ, ತಮಿಳುನಾಡು, ಕಾಶ್ಮೀರ ಅಂತ ಅವ ಅಲ್ಲಾ, ಹಿಂತಾ ರಾಜ್ಯ ಅಲ್ಲ. ಅದರ ಪ್ರಕಾರ ರಾಜ್ಯ ಅಂದ್ರ ಅಕೆಡೆಮಿಕ್ ಭಾಷಾದಾಗ ಪ್ರಭುತ್ವ. ’ಹಂಗಂದರ ಏನು ಮತ್ತ ಎಲ್ಲಿ ಸಿಗತದ’ ಅಂತ ನೀವು ಜವಾರಿ ಭಾಷಾದಾಗ ಕೇಳಿದರ ಅದಕ್ಕ ನಿಮಗ 12ನೇ ಕಲಂ ನೋಡು ಅಂತ ಉತ್ತರ ಸಿಗಬಹುದು.

ಅದರ ಪ್ರಕಾರ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳು ಪ್ರಭುತ್ವದಾಗ ಬರತಾವ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಭುತ್ವದಾಗ ಬರತಾವ. ಈವಲ್ಲದನ, ನಗರ ಸಭೆ, ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಸಹ ಇದರಾಗ ಕೂಡಿಸ್ಯಾರ. ಮಜಾ ಏನಂದರ ಸರಕಾರದ ಸಂಸ್ಥೆಗಳು ಅಥವಾ ಸರಕಾರದಿಂದ ನಿಯಂತ್ರಿತವಾದ ಸಂಸ್ಥೆಗಳು ಇವೆಲ್ಲವೂ ಪ್ರಭುತ್ವ ಎನ್ನಿಸಿಕೊಳ್ಳುತ್ತವೆ ಎನ್ನುವುದು ಇದರ ಸಾರಾಂಶ.

ಈ ಪ್ರಭುತ್ವದ ಮುಖ್ಯ ಕೆಲಸ ಏನಪಾ ಅಂದ್ರ ರಾಷ್ಟ್ರ ರಕ್ಷಣೆ, ಶಾಂತಿ ಕಾಪಾಡುವಿಕೆ, ನ್ಯಾಯ ನಿರ್ಣಯ, ಜನ ಕಲ್ಯಾಣ ಹಾಗೂ ದಿನನಿತ್ಯದ ಆಡಳಿತ. ಬರಬರತಾ ಸರಕಾರಗಳ ಕೆಲಸ ಜಾಸ್ತಿ ಆಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವ್ಯಾಪಾರ ವ್ಯವಹಾರ -(ಅದು ಸರಕಾರಿ ಸಂಸ್ಥೆ ಇರಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆ ಇರಬಹುದು) ದೊಳಗನ ಹೆಚ್ಚಿನ ಟೈಂ ಹೋಗಲಿಕ್ಕೆ ಹತ್ತೇದ. ಈಗಿನ ಕೇಂದ್ರ ಸರಕಾರ ಮಾತ್ರ ತಮ್ಮ ಕೆಲಸ ಬ್ಯಾರೆ ಏನೂ ಅಲ್ಲ, ಬರೇ ರಕ್ಷಣೆ ಒಂದ ಅಂತ ನಮಗ ಹೇಳಲಿಕ್ಕೆ ಹತ್ತೇದ. ಒಬ್ಬ ವಿದ್ಯಾರ್ಥಿ ಪರೀಕ್ಷೆಯೊಳಗ ಹತ್ತರೊಳಗ ಬರೇ ಒಂದ ಪ್ರಶ್ನೆ ಉತ್ತರ ಬರದು ನನಗ ಮೊದಲನೆ ದರ್ಜೆ ಕೊಡರಿ ಅಂತ ಹೇಳಿದಂಗ!. ಇರಲಿ ಅದು ಬೇರೆ.

ಹಿಂದಿನ ಕಾಲದ ಚಕ್ರವರ್ತಿಗಳಿಗೆ ಶಾಸನ ಮಾಡೋದು, ಜಾರಿ ಮಾಡೋದು, ಕಾನೂನು ಪಾಲಿಸದವರಿಗೆ ಶಿಕ್ಷಾ ಕೊಡೋದು ಇವೆಲ್ಲಾ ಅಧಿಕಾರ ಇತ್ತು. ಇತ್ತೋ ಅಥವಾ ಅವರಾಗೇ ತೊಗೊಂಡಿದ್ದರೋ ಅದು ಬ್ಯಾರೆ. ಆದರ ಆಧುನಿಕ ದಿನಮಾನದಾಗ ಇಂತಹ ಪ್ರಭುತ್ವಕ್ಕ ಮೂರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಎಲ್ಲಾ ಶಕ್ತಿ ಕೊಡಬಾರದು ಅಂತ ಒಂದು ಥಿಯರಿ ಅದ. ಅದರ ಪ್ರಕಾರ ನಮ್ಮ ಜನಸತ್ತಾದೊಳಗ ಈ ಮೂರು ಜವಾಬ್ದಾರಿಗಳನ್ನು ಬೇರೆ ಬೇರೆ ಅಂಗಗಳಿಗೆ ಹಂಚ್ಯಾರ.

ಆದರೂ ಸರಕಾರಗಳು ಮೂರೂ ರೀತಿಯ ಅಧಿಕಾರಗಳನ್ನ ಬಳಸತಾವು. ಉದಾಹರಣೆಗೆ ಪೊಲೀಸರನ್ನು ನೇಮಕ ಮಾಡೋದು ಪ್ರಭುತ್ವ, ಅವರಿಗೆ ಕೆಲಸ ಹೇಳೋದು ಸರಕಾರ. ನ್ಯಾಯಾಲಯಗಳನ್ನು ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅವರ ಮುಂದೆ ಕೇಸು ತೊಗೊಂಡು ಹೋಗೋದು ಪ್ರಭುತ್ವ. ಹಿಂಗಿದ್ದಾಗ ನ್ಯಾಯಾಲಯಗಳಲ್ಲಿ ಬರೇ ಸರಕಾರದ ದನಿ ಕೇಳಿ ಗರೀಬ ಆರೋಪಿತರ ದನಿ ಅಡುಗಿಹೋಗಬಾರದು ಅಂತ ಕೆಲವು ನಿಯಮ ಅವ. ಅವಕ್ಕ ಪ್ರಕ್ರಿಯಾ ಕಾನೂನು ಅಂತ ಹೆಸರು. ಉದ್ದೇಶದ ಜೊತೆ ಪ್ರಕ್ರಿಯಾನೂ ಸರಿ ಇರಬೇಕು ಅಂತ ಅದರ ನೇಮ.

ಅವು ಯಾಕ ಬೇಕಂದ್ರ ಸರಕಾರ ಅನ್ನೋದು ಸರ್ವಾಧಿಕಾರ ಆಗಬಾರದು ಅಂತ.

ಅದು ಯಾವಾಗ ಆಗಬಹುದಪಾ ಅನ್ನಲಿಕ್ಕೆ ಕೆಲವು ಉದಾಹರಣೆ ನೋಡೋಮು.

ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ ಚೌಟಾಲಾ ಅವರ ಮೊಮ್ಮಗ ಅಜಯ ಚೌಟಾಲಾ ಅವರಿಗೆ ಎರಡು ವಾರದ ಸಜಾ ಕಾಲದ ರಜೆ ಸಿಕ್ಕದ. ಅದರ ಹಿಂದಿನ ದಿವಸ ಅಜಯ ಅವರ ಮಗ ದುಷ್ಯಂತ ಚೌಟಾಲಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ಹಂಗಾಗಿದ್ದ ಹರಿಯಾಣಾ ವಿಧಾನಸಭೆಯನ್ನು ಹಂಗ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇರಬಹುದು ಅನ್ನುಕೊಳ್ಳುವುದು ಅಂದುಕೊಂಡವರ ಚಿತ್ತ. ಸಜಾ ಕಾಲದ ರಜೆ (ಫರಲೋ) ಹಾಗೂ ಸಜಾ ಕಾಲದ ಬಿಡುಗಡೆ ( ಪರೋಲ್) ಗೂ ಫರ್ಕು ಏನಪಾ ಅಂದರ ಫರಲೋ ಅನ್ನುವುದು ಒಬ್ಬ ಕೈದಿಯ ಹಕ್ಕು. ಪರೋಲ್ ಅನ್ನುವುದು ಹಕ್ಕಲ್ಲ. ಅದು ಸರಕಾರದ ಹಾಗೂ ನ್ಯಾಯಾಲಯದ ಚಿತ್ತ. ಜಂಬೂ ದ್ವೀಪದ ಮಹಾನ್ ನಾಯಕ ಸಂಜೂ ಬಾಬಾ ಅವರು ಸುಮಾರು 39 ಸರೆ ಫರಲೋ ಹಾಗೂ ಪರೋಲ್ ಸೌಭಾಗ್ಯ ಪಡೆದಿದ್ದರು. ಅವರು ಪಡೆದು ಬಂದವರು.

ಜನರ ಸಲುವಾಗಿ ಹೋರಾಟ ಮಾಡೋ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಆಗೇದ. ಅವರನ್ನ 25 ವರ್ಷ ಹಳೆಯ ಕೇಸೊಂದರಲ್ಲಿ ಭಾಗಿಯಾಗಿದ್ದ ವಿನೋದ ಎನ್ನುವ ವ್ಯಕ್ತಿಯೆಂದರೆ ಇವನೇ ಅಂತ ಹೇಳಿ ರಾಯಚೂರು ಪೊಲೀಸರು ಹಿಡಕೊಂಡು ಹೋಗ್ಯಾರ. ಹಂಗಂತ ಅವರೇನು ಬೆಂಗಳೂರ ತನಾ ಬಂದು ಅವರನ್ನ ಹಿಡಕೊಂಡು ಹೋಗಿಲ್ಲ. ರಾಯಚೂರು ಕಾರ್ಯಕ್ರಮಕ್ಕ ಹೋದಾಗ ಪೊಲೀಸ್ ಟೇಸನಕ್ಕ ಬರ್ರಿ ಅಂತ ಹೇಳಿ ಕರಿಸಿಕೊಂಡು ಅರೆಸ್ಟು ಮಾಡ್ಯಾರ

ಬೆಂಗಳೂರಾಗ ಎಲ್ಲಾರ ಎದುರಿಗೆ ಖುಲ್ಲಂಖುಲ್ಲಾ ಓಡಾಡಿಕೊಂಡು ಇದ್ದ ಈ ಮನುಷ್ಯ 25 ವರ್ಷ ತಲೆ ಮರೆಸಿಕೊಂಡಿದ್ದ ಅಂತ ಪೊಲೀಸರು ಕತಿ ಹೇಳ್ಯಾರ. ಅದಕ್ಕ ಅವರಿಗೆ ಸರಿಯಾದ ಸಾಕ್ಷಿ ಇಲ್ಲ. ಅವರಿಗೆ ಇರೋ ಸಾಕ್ಷಿ ಅಂದರ ಒಬ್ಬ ಮಾಜಿ ಪೊಲೀಸ್ ಸಿಬ್ಬಂದಿಯ ನೆನಪಿನ ಶಕ್ತಿ. ಇದು ಭಾರತೀಯ ದಂಡಸಂಹಿತೆ ಹಾಗೂ ಸಂವಿಧಾನದ ಪ್ರಕಾರ ಲಾಗೂ ಆಗೋದಿಲ್ಲ. ಆದರೆ ಅದು ನ್ಯಾಯಾಧೀಶರ ಎದುರಿಗೆ ವಾದಕ್ಕ ಬಂದಾಗಿನ ಮಾತು. ಅಲ್ಲಿ ತನಕಾ ಸರಕಾರದ ಮಾತೇ ಸರಿ.

ಗುಜರಾತು ಪೊಲೀಸರು ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು 13 ತಿಂಗಳ ಹಿಂದೆ ಬಂಧಿಸಿದ್ದಾರೆ. ಅವರಿಗೆ ಇನ್ನೂ ಬೇಲು ಸಿಕ್ಕಿಲ್ಲ. ಅವರು 22 ವರ್ಷದ ಹಿಂದ ಪೊಲೀಸ ಅಧೀಕ್ಷಕರಾಗಿದ್ದಾಗ ತಮ್ಮ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಅಧಿಕಾರ ದುರ್ಬಳಕೆ ಪ್ರಸಂಗವೊಂದರಲ್ಲಿ ಅವರನ್ನು ಆರೋಪಿ ಅಂತ ಮಾಡ್ಯಾರ. ಮೂವತ್ತು ವರ್ಷ ಸಂವಿಧಾನ, ನ್ಯಾಯ ಪ್ರಕ್ರಿಯೆ, ಸರಕಾರಿ ಕಾನೂನುಗಳಿಗೆ ತಕ್ಕಂತ ನೌಕರಿ ಮಾಡಿದ ಮನಿಷಾಗ ಕಾನೂನಿನ ಬಗ್ಗೆ ನಂಬಿಕಿ ಇಲ್ಲಾ ಅಂತ ಹೇಳಿ ಸರಕಾರ ಅವರಿಗೆ ಬೇಲು ಕೊಡಿಸಿಲ್ಲ.

ಕಾರ್ಮಿಕ ಮುಖಂಡರಾದ ಸುಧಾ ಭಾರದ್ವಾಜ ಮತ್ತು 10 ಜನ ಜನನಾಯಕರನ್ನು ಒಳಗ ಹಾಕಿ 14 ತಿಂಗಳ ಆತು. ಅದರೊಳಗ ಒಬ್ಬರ ಮನಿಯೊಳಗ ’ವಾರ್ ಆಂಡ್ ಪೀಸ್’ ಅನ್ನೋ ಕಾದಂಬರಿ ಇತ್ತು ಅದು ಅಲ್ಯಾಕ ಇತ್ತು ಅನ್ನೋದು ಭಾರಿ ಸುದ್ದಿ ಆಗಿತ್ತು. ಇದರಾಗೂನು ಅವರ ವಿಚಾರಣೆ ಅನ್ನೋದು ಸುರೂನ ಆಗಿಲ್ಲ. ಅಧಿಕೃತವಾಗಿ ಸರಕಾರದ ತನಿಖೆ ಮುಗದೇ ಇಲ್ಲ.

ಪ್ರಭುತ್ವ ಅನ್ನುವುದು ಸರ್ವಾಧಿಕಾರ ಆಗಬಾರದು. ಯಾಕಂದ್ರ ಭಾರತದೊಳಗ ಆಳುವ ಪಕ್ಷ, ವಿರೋಧ ಪಕ್ಷ ಅಂತ ಯಾವೂ ಇಲ್ಲ. ಇಲ್ಲಿ ಇರೋದು ಇವತ್ತಿನ ಆಳುವ ಪಕ್ಷ, ನಿನ್ನೆಯ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಅಷ್ಟ. ಅವರು ಮಾಡ್ಯಾರ ಅಂತ ಇವರು ತಿನ್ನೋದು ಇವರಿಬ್ಬರೂ ಮಾಡ್ಯಾರ ಅಂತ ಮೂರನೆಯವರು ಮಾಡೋದು ಸರಿ ಅಲ್ಲ. ಇವತ್ತು ಆಳುವವರು ನ್ಯಾಯ ನಿಷ್ಟುರತೆ, ಪಾರದರ್ಶಕ ನೀತಿ ಹಾಗೂ ನಿಷ್ಪಕ್ಷಪಾತ ನಡೆ ಯನ್ನು ಪಾಲಿಸದಿದ್ದರೆ ನಾಳೆ ಬಂದವರೂ ಪಾಲಿಸಲಿಕ್ಕಿಲ್ಲ. ಆವಾಗ ಇವರು ಝಗಳಾ ತಗೀಲಿಕ್ಕೆ ಬರೋದಿಲ್ಲ. ನೀವು ಹಿಂಗ ಮಾಡಿದಿರಿ ಅಂದರ ನೀವು ಮಾಡಿಲ್ಲೇನು ಅಂತ ಅವರು ಅನ್ನಬಹುದು.
ಅದರ ಜನರಿಗೆ ಇವು ಯಾವುವೂ ಬ್ಯಾಡ. ಸಮಾನತೆ ಹಾಗೂ ಶಾಂತಿ ಬೇಕು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...