Homeಮುಖಪುಟಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ.

- Advertisement -
- Advertisement -

ಹಿಂದೆ ಒಂದು ಕಾಲವಿತ್ತು. ಬ್ರಿಟಿಷರ ವಿರುದ್ಧ ನಿಂತು ನಮ್ಮವರು, ಸುಧೀರ್ಘ ಹೋರಾಟದ ನಂತರ ಸ್ವಾಂತಂತ್ರ್ಯ ದೊರಕಿಸುವಲ್ಲಿ ಯಶಸ್ವಿಯಾದರು. ಅಂದಿನ ಹೋರಾಟ, ಪ್ರತಿಭಟನೆ ಅತೀ ಅಗತ್ಯದ್ದಾಗಿತ್ತು. ಸ್ವತಂತ್ರ ಭಾರತದ ನಂತರದ ಗುರಿ, ದೇಶದ ಅಭಿವೃದ್ಧಿ. ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೋರ್ವನ ಏಳಿಗೆ, ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಸಂವಿಧಾನ ರೂಪಿಸಿದರು. ಈ ಇತಿಹಾಸ ಬಹಳಷ್ಟು ಸರಳ ಮತ್ತು ಪ್ರತಿಯೋರ್ವನಿಗೂ ತಿಳಿದಿರುವ ವಿಚಾರ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ‘ದೇಶದ ಏಳಿಗೆ’ಯ ಕುರಿತಾಗಿ.

ಒಂದು ದೇಶವನ್ನು ನಾವು ಅಭಿವೃದ್ಧಿ ಹೊಂದಿದೆ ಅಥವಾ ಅಭಿವೃದ್ಧಿ ಹೊಂದುತ್ತಿದೆ ಎಂದು ಕರೆಯಬೇಕಾದರೆ,

·       ರಾಷ್ಟ್ರೀಯ ಉತ್ಪನ್ನ (GDP), ರಾಷ್ಟ್ರೀಯ ಆದಾಯ (GNI)

·       ದೇಶದ ಕೈಗಾರೀಕರಣದ ಹಂತ

·       ಜನರ ಜೀವನ ಮಟ್ಟ

·       ಬಳಸುತ್ತಿರುವ ತಂತ್ರಜ್ಞಾನದ ಗುಣಮಟ್ಟ

ಇವೇ ಮೊದಲಾದ ಅಂಶಗಳು ಮುಖ್ಯವಾಗಿ ಅಳತೆಗೋಲಾಗುತ್ತವೆ. ಇವುಗಳ ಆಧಾರದ ಮೇಲೆ ದೇಶದ ಏಳಿಗೆ ನಿಂತಿದೆ. ಇಂದು ಸುಮಾರು 22 ಶೇಕಡಾ ಭಾರತೀಯರು ಬಡತನದಲ್ಲಿದ್ದರೆ, ನಿರುದ್ಯೋಗ ಗೆರೆ 7ಶೇಕಡದಷ್ಟಿದೆ. ವಿಶ್ವದೆಲ್ಲೆಡೆ ವ್ಯಾಪಿಸಿದ ಕೊರೊನಾ ಭಾರತಕ್ಕೂ ತಗುಲಿ ಬಹಳಷ್ಟು ಬಳಲಿದೆ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ದೇಶದ ಸಾವಿಸಸಂಖ್ಯೆ 7.5 ಶೇಕಡಾವಾರು ಏರಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವಿಂದು ಕೋಮುಗಲಭೆಯಲ್ಲಿ ವಿಜ್ರಂಭಿಸುತ್ತಿದ್ದೇವೆ.

ಹಿಜಾಬ್ ಕುರಿತಾಗಿ ಇಂದು ದೇಶದಲ್ಲಿ ಸಾಕಷ್ಟುಗಲಭೆಗಳು, ವಿವಾದಗಳು, ಚರ್ಚೆಗಳು ಭುಗಿಲೆದ್ದಿದೆ. ಮುಸ್ಲೀಂ ಹೆಣ್ಣು ಮಕ್ಕಳ ವಸ್ತ್ರಸಂಹಿತೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಯಾಗುತ್ತಿರುವುದು ವಿಷಾದನೀಯ. ಈ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಪಕ್ಷಗಳ ನಡೆ ಬೇಸರದ ಸಂಗತಿ. ಹಿಂದಿನಿಂದಲೂ ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಮುಸ್ಲೀಂ ವಿದ್ಯಾರ್ಥಿನಿಯರಿದ್ದರು. ಆಗ ನಮಗೆ ಇದೊಂದು ವಿಷಯವೇ ಆಗಿರಲಿಲ್ಲ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗಿರಲಿಲ್ಲ. ನಮಗವರು ಬೇರೆ ಎಂದೆಣಿಸಿರಲಿಲ್ಲ. ಜೊತೆಯಾಗಿ ಕುಳಿತುಕೊಳ್ಳುವುದಕ್ಕೂ, ಮಾತನಾಡುವುದಕ್ಕೂ, ಗೆಳೆತನಕ್ಕೂ ಕಷ್ಟವಾಗಿರಲಿಲ್ಲ. ಇಂದೇಕೆ ಏಕಾಏಕಿ ಈ ಮನಸ್ಥಿತಿಗೆ ನಾವು ಬಂದಿದ್ದೇವೆ? ಮುಸ್ಲೀಂ ಹೆಣ್ಣು ಮಗಳೊಬ್ಬಳು ನಮ್ಮ ಒತ್ತಾಯದ ಮೇರೆಗೆ ಹಿಜಾಬ್ ಧರಿಸದೇ ಬಂದಳೆಂದರೆ ನಮ್ಮ ಶಿಕ್ಷಣ ಪ್ರಗತಿ ಸಾಧಿಸುತ್ತದೆಯೆ? ಇದರಿಂದ ನಮಗೇನು ದೊರಕುತ್ತದೆ?

ಏಕೆ ನಮಗೆ ಅನ್ಯಕೋಮಿನ ಪ್ರತಿಯೊಂದು ಆಚಾರ, ವಿಚಾರಗಳು ಪ್ರಚೋದನಕಾರಿಯಾಗಿ ಕಾಣುತ್ತಿದೆ? ಮಾನವ ಸಂಘಜೀವಿ ಸರಿ. ಆದರೆ ನಾವು ಆರಿಸಿಕೊಂಡ ಸಂಘ, ನಾವು ಮಾಡಿಕೊಂಡಿರುವ ಒಡನಾಟಗಳು ಏನನ್ನು ಕಲಿಸುತ್ತಿವೆ? ಯಾವುದರತ್ತ ಮುಖಮಾಡಿದೆ? ಅದರ ಮುಖ್ಯಗುರಿ ಏನು? ದೇಶದ ಏಳಿಗೆ ಅದರಿಂದ ಹೇಗೆ ಸಾಧ್ಯ?ನಾವು ಮಾಡುತ್ತಿರುವ ಇವೆಲ್ಲಾ ಗಲಭೆಗಳು ದೇಶಪ್ರೇಮ ಎಂದೆನ್ನಿಸಿರಬಹುದು. ಆದರೆ ‘ವಿವಿಧತೆಯಲ್ಲಿನ ಏಕತೆ’, ‘ನಾವೆಲ್ಲರೂ ಒಂದೇ’ ಎನ್ನುವ ಸಂವಿಧಾನದ ಧ್ಯೇಯ ಇಂದು ಪಠ್ಯಗಳಲ್ಲಷ್ಟೇ ಉಳಿತ್ತಿದೆಯೇ ವಿನಃ ನಮ್ಮ ಮನದೊಳಗೆ ಇಳಿಯುತ್ತಿಲ್ಲ. ನಾವು ಅಂದುಕೊಂಡಿರುವ ಈ ದೇಶಪ್ರೇಮ ಒಂದುಗೂಡಿಸುವ ಬದಲು, ದೇಶವನ್ನು ಒಡೆಯುತ್ತಿದೆ.

ಇಂದು ನಾವು ಅನ್ಯಕೋಮಿನ ಪ್ರತಿಯೋರ್ವನನ್ನು ಅನುಮಾನಿಸುತ್ತೇವೆ, ಕಾರಣವಿಲ್ಲದೆ ದ್ವೇಷಿಸುತ್ತೇವೆ. ಕಾಳಜಿ, ಪ್ರೀತಿ, ನಂಬಿಕೆಗಳು ಮೂಡುವುದಿಲ್ಲ. ಈ ವಿಷಯಕ್ಕೆ ಕೆಲವು ಮಾಧ್ಯಮ ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಬಿತ್ತರಿಸುವ ಸುದ್ದಿಗಳು ಎಷ್ಟು ಸರಿ ಎಂದು ಅವಲೋಕಿಸುವ ಬದಲಿಗೆ ದ್ವೇಷ ಕಾರುವ ವಿಷಯಗಳನ್ನು ಆನಂದಿಸುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರುಗಳು ವೇದಿಕೆಗಳಲ್ಲಿ ಉದ್ರೇಕದಿಂದ ಮಾತುನಾಡುತ್ತಿದ್ದರೆ ಚಪ್ಪಾಳೆ ತಟ್ಟುತ್ತೇವೆ, ಬೆಂಬಲಿಸುತ್ತೇವೆ. ಇದರಿಂದ ದೇಶದ ಪ್ರಗತಿ ಸಾಧ್ಯವೇ ಎಂದು ಯೋಚಿಸುವುದಿಲ್ಲ. ನಮ್ಮ ನಾಯಕರುಗಳ ಕೆಲಸ ನಮ್ಮನ್ನು ಉದ್ರೇಕಿಸಿ, ಗಲಭೆ ಸೃಷ್ಟಿಸುವುದೇ? ಎಂದು ನಮಗೆ ಹೊಳೆಯುವುದೇ ಇಲ್ಲ. ಮಾಧ್ಯಮ ಪ್ರತಿನಿಧಿಯೋರ್ವ ಚರ್ಚಿಸುತ್ತಾ ಮತ್ತೊಬ್ಬನ ಮಾತೇ ಕೇಳಿಸದಷ್ಟು ಬೊಬ್ಬೆ ಹಾಕುವಾಗ ನಮಗೇ ಗೆಲುವು ಸಿಕ್ಕಿದಷ್ಟು ಖುಷಿಯಾಗುತ್ತದೆ. ಹಾಗಾದರೆ ದೇಶ ಒಡೆಯುವುದರಲ್ಲಿ ನಮಗೆ ವಿಕೃತ ಆನಂದ ಸಿಗುತ್ತಿದೆ ಎಂದಲ್ಲವೇ ಇದರರ್ಥ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆ ಹಾಗಾದರೆ?

ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ. ಈ ವಿಷಯಗಳು ದೇಶದ ಬೆಳವಣಿಗೆಗೆ ಮಾರಕವಾಗದಿರಲಿ. ಪ್ರಜೆಯಾಗಿ ನಾವು ನಾಳೆ ಎಂತಹ ಭಾರತವನ್ನು ಕಟ್ಟಲು ಹೊರಟಿದ್ದೇವೆ ಎನ್ನುವುದನ್ನು ಬೇರೆಯವರೊಂದಿಗೆ ಚರ್ಚಿಸುವ ಮೊದಲು, ವಾದಕ್ಕಿಳಿಯುವ ಮೊದಲು ನಮ್ಮೊಳಗೆ ಉತ್ತರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತು. ನಮ್ಮ ದೇಶ ಪ್ರಗತಿ ಹೊಂದುವುದು ಹಲವಾರು ಸದ್ಯದ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಾಗ ಮಾತ್ರ. ನಿರುದ್ಯೋಗ ,ಬಡತನ ಮುಂತಾದ ಅತೀ ದೊಡ್ಡ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿದ್ದಾರೆ ಮಾತ್ರವೇ ಮುಕ್ತಾಯ ದೊರಕುತ್ತದೆ. ಯೋಚಿಸಿ ಮುನ್ನಡೆಯಬೇಕಾದದ್ದು ಪ್ರತಿಯೋರ್ವನ ಕರ್ತವ್ಯವಾಗಿರಲಿ ಎಂಬುದಷ್ಟೇ ಆಶಯ.

  • ಆದಿತ್ಯ ಪ್ರಸಾದ್ ಪಾಂಡೇಲು

ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಪ್ರಸಾದ್‌ರವರಿಗೆ ಸಾಹಿತ್ಯ ಹಾಗು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ಸಣ್ಣ ವಯಸ್ಸಿನಿಂದ ಬರಹಗಾರನಾಗಬೇಕೆಂಬ ತುಡಿತಕ್ಕೆ ದಿಕ್ಕು ತೋರಿದ್ದು ರಂಗಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ್ಯ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...