Homeಮುಖಪುಟನಿಮ್ಮ ದೌರ್ಬಲ್ಯದಿಂದಾಗಿ ನಮ್ಮ ಜನ ಸಾಯುತ್ತಿದ್ದಾರೆ: ನೋ-ಫ್ಲೈ ಝೋನ್ ಹೇರದ NATO ವಿರುದ್ಧ ಕಿಡಿಕಾರಿದ ಉಕ್ರೇನ್...

ನಿಮ್ಮ ದೌರ್ಬಲ್ಯದಿಂದಾಗಿ ನಮ್ಮ ಜನ ಸಾಯುತ್ತಿದ್ದಾರೆ: ನೋ-ಫ್ಲೈ ಝೋನ್ ಹೇರದ NATO ವಿರುದ್ಧ ಕಿಡಿಕಾರಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ನೋ-ಫ್ಲೈ ಝೋನ್ ಎಂದರೇನು? NATO ನಿರಾಕರಿಸಿದ್ದೇಕೆ? ಈ ಹಿಂದೆ ಎಲ್ಲೆಲ್ಲಿ ಬಳಸಲಾಗಿದ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

- Advertisement -
- Advertisement -

ಉಕ್ರೇನ್‌ ಹಲವು ಪ್ರದೇಶಗಳಲ್ಲಿ ನೋ-ಫ್ಲೈ ಝೋನ್ (no-fly zone) ಹೇರಬೇಕೆಂಬ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮನವಿಯನ್ನು NATO ನಿರಾಕರಿಸಿದೆ. ಇದರಿಂದ ಕ್ರೋಧಗೊಂಡಿರುವ ಝೆಲೆನ್ಸ್ಕಿ “ನಿಮ್ಮ ಈ ನಿರ್ಧಾರವು ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳ ಮೇಲೆ ಮತ್ತಷ್ಟು ಬಾಂಬ್ ದಾಳಿಗೆ ಹಸಿರು ನಿಶಾನೆ ನೀಡುತ್ತದೆ” ಎಂದು ಕಿಡಿಕಾರಿದ್ದಾರೆ.

“ಈ ದಿನದಿಂದ ಸಾಯುವ ಎಲ್ಲಾ ಜನರು ನಿಮ್ಮ (NATO) ಕಾರಣದಿಂದಾಗಿ ಸಾಯುತ್ತಾರೆ, ನಿಮ್ಮ ದೌರ್ಬಲ್ಯದಿಂದಾಗಿ, ನಿಮ್ಮ ಒಗ್ಗಟ್ಟಿನ ಕೊರತೆಯಿಂದಾಗಿ ಸಾಯುತ್ತಾರೆ” ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿಅವರು ಉಕ್ರೇನಿಯನ್ ಜನತೆಯ ಪ್ರತಿರೋಧದ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಶುಕ್ರವಾರದ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಝೆಲೆನ್ಸ್ಕಿ “ಇಂದು ನ್ಯಾಟೋ ಶೃಂಗಸಭೆ ನಡೆಯುತ್ತಿದೆ. ಅದು ದುರ್ಬಲ ಮತ್ತು ಗೊಂದಲಮಯ ಶೃಂಗಸಭೆಯಾಗಿದೆ. ಯುರೋಪಿನ ಸ್ವಾತಂತ್ರ್ಯಕ್ಕಾಗಿ ಯುದ್ಧವನ್ನು ನಂಬರ್ ಒನ್ ಗುರಿ ಎಂದು ಶೃಂಗಸಭೆಯ ಎಲ್ಲರೂ ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಏನಿದು ನೋ-ಫ್ಲೈ ಝೋನ್?

ನಿರ್ದಿಷ್ಟ ವಾಯು ಪ್ರದೇಶದಲ್ಲಿ ನೋ-ಫ್ಲೈ ಝೋನ್ ಹೇರಿದಾಗ ಅದು ಹಾರಾಟ ನಿಷೇಧ ವಲಯವಾಗಿದ್ದು, ಅಲ್ಲಿ ಕೆಲವು ವಿಮಾನಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ಘರ್ಷಣೆಗಳು ಮತ್ತು ಯುದ್ಧಗಳ ಸಂದರ್ಭದಲ್ಲಿ ಸೈನಿಕ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮತ್ತು ಕಣ್ಗಾವಲು ನಡೆಸಲು ನಿಷೇಧಿತ ವಿಮಾನಗಳನ್ನು ವಾಯುಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಸಾಮಾನ್ಯವಾಗಿ ನೋ-ಫ್ಲೈ ಝೋನ್ ಹೇರಲಾಗುತ್ತದೆ.
ನೋ-ಫ್ಲೈ ಝೋನ್‌ಗಳನ್ನು ಮಿಲಿಟರಿ ಬಲ ಬಳಸಿಯೇ ಜಾರಿಗೊಳಿಸಬೇಕು. ಆ ಸಂದರ್ಭದಲ್ಲಿ ನಿಷೇಧಿತ ವಿಮಾನಗಳು ಪ್ರವೇಶಿಸಿದ್ದಲ್ಲಿ ಹೊಡೆದುರುಳಿಸಬಹುದು. ಇದರರ್ಥ ನಾಟೊ ತನ್ನ ಫೈಟರ್ ಜೆಟ್‌ಗಳನ್ನು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಕಳಿಸಿಕೊಡಬೇಕು ಎಂಬುದೇ ಆಗಿದೆ.

ಉಕ್ರೇನ್ ಬಯಕೆಯೇನು?

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೇಶದ “ಮಹತ್ವದ ಭಾಗಗಳ” ಮೇಲೆ ನೋ-ಫ್ಲೈ ಝೋನ್ ಹೇರಬೇಕೆಂದು NATO, ಅಮೆರಿಕ ಮತ್ತು ಹಲವು ಯೂರೋಪ್ ದೇಶಗಳಲ್ಲಿ ಮನವಿ ಮಾಡಿದ್ದರು. ಇದರಿಂದ ರಷ್ಯಾ ದಾಳಿ ಮಾಡಲು ಆಗುವುದಿಲ್ಲ ಮತ್ತು ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಬಹುದು ಎಂದು ಅವರು ನಂಬಿದ್ದರು. ಅದಕ್ಕಾಗಿ ಅಮೆರಿಕ ಮತ್ತು NATO ಬಳಿ ಹಲವಾರು ಬಾರಿ ಮನವಿ ಮಾಡಿದ್ದ ಅವರು ಯುದ್ಧವಿಮಾನಗಳನ್ನು ಒದಗಿಸಬೇಕು, ಆದ್ದರಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು” ಎಂದು ವಾದಿಸಿದ್ದರು.

ನೋ-ಫ್ಲೈ ಝೋನ್ ಹೇರದಿರಲು ಕಾರಣವೇನು?

NATO, ಅಮೆರಿಕ ಅಥವಾ ಯೂರೋಪ್‌ನ ಯಾವುದೇ ದೇಶ ನೋ-ಫ್ಲೈ ಝೋನ್ ಹೇರಿದರೆ, ಅದನ್ನು ಜಾರಿಗೊಳಿಸಲು ಅವರೇ ಜವಾಬ್ದಾರರಾಗಿರುತ್ತಾರೆ. ಅಂದರೆ ನಿಷೇಧಿತ ರಷ್ಯಾದ ಮಿಲಿಟರಿ ವಿಮಾನಗಳ ವಿರುದ್ಧ ಹೋರಾಡಬೇಕಿರುತ್ತದೆ. “ನ್ಯಾಟೋ ಅದನ್ನು ಹೇರಿದರೆ ಮತ್ತು ನಾವು ರಷ್ಯಾದ ಒಂದು ವಿಮಾನವನ್ನು ಹೊಡೆದುರುಳಿಸಿದರೆ, ನಾವು ರಷ್ಯಾದೊಂದಿಗೆ ಯುದ್ಧದಲ್ಲಿದ್ದೇವೆ ಎಂದರ್ಥ. ಹಾಗಾಗಿ NATO ಅದನ್ನು ಬಯಸುವುದಿಲ್ಲ” ಎಂದು ನ್ಯೂ ಹೆವನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹೊವಾರ್ಡ್ ಸ್ಟಾಫರ್ ಹೇಳುತ್ತಾರೆ.

NFZ ಗಳನ್ನು ಜಾರಿಗೊಳಿಸಿದ ಹಿಂದಿನ ಸಂಘರ್ಷಗಳಿಗಿಂತ ಭಿನ್ನವಾಗಿ ಈ ಬಾರಿ ರಷ್ಯಾವು ದೃಢವಾದ ಮತ್ತು ಹೆಚ್ಚು ಅತ್ಯಾಧುನಿಕ ಮಿಲಿಟರಿಯನ್ನು ಹೊಂದಿದೆ ಮತ್ತು ಪರಮಾಣು ಶಕ್ತಿಯಾಗಿದೆ, ಹಾಗಾಗಿ ಅದರ ವಿರುದ್ಧ ನಾಟೋ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾಟೋ ವಾದವೇನು?

“ನಾವು ಉಕ್ರೇನ್‌ನ ಹತಾಶೆಯನ್ನು ಅರ್ಥಮಾಡಿಕೊಂಡಿದ್ದೇವೆ. ನ್ಯಾಟೋ ಫೈಟರ್ ವಿಮಾನಗಳನ್ನು ಉಕ್ರೇನ್‌ನ ವಾಯುಪ್ರದೇಶಕ್ಕೆ ಕಳುಹಿಸುವುದು ಮತ್ತು ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಮಾತ್ರವೇ ನೋ ಫ್ಲೈ ಝೋನ್ ಅನ್ನು ಕಾರ್ಯಗತಗೊಳಿಸಲು ಸಾಧ್ಯ. ನಾವು ಅದನ್ನು ಮಾಡಿದರೆ, ಯುರೋಪ್‌ ಪೂರ್ಣ ಪ್ರಮಾಣದ ಯುದ್ಧದಲ್ಲಿ ಕೊನೆಗೊಳ್ಳುತ್ತದೆ. ಅಲ್ಲದೆ ಯುದ್ದವೂ ಇನ್ನೂ ಅನೇಕ ದೇಶಗಳನ್ನು ಒಳಗೊಂಡಿರುತ್ತದೆ ಮತ್ತು ಹೆಚ್ಚು ಜೀವಹಾನಿಯನ್ನು ಉಂಟುಮಾಡುತ್ತದೆ. ನಾವು ಈ ಸಂಘರ್ಷದ ಭಾಗವಾಗಿಲ್ಲ, ಮತ್ತು ಅದು ಉಲ್ಬಣಗೊಳ್ಳದಂತೆ ಮತ್ತು ಉಕ್ರೇನ್‌ನ ಆಚೆಗೆ ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ಅಮೆರಿಕ ಏನು ಹೇಳುತ್ತದೆ?

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಶ್ವೇತಭವನವು NFZ ಅನ್ನು ಜಾರಿಗೊಳಿಸುವುದು ಸೇರಿದಂತೆ ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡಲು ತಮ್ಮ ಪಡೆಗಳನ್ನು ಕಳುಹಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. “ಇದು ಮೂಲಭೂತವಾಗಿ ಯುಎಸ್ ಮಿಲಿಟರಿ ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮತ್ತು ರಷ್ಯಾದೊಂದಿಗೆ ಸಂಭಾವ್ಯ ನೇರ ಯುದ್ಧವನ್ನು ಉಂಟುಮಾಡುವುದನ್ನು ನಾವು ತಪ್ಪಿಸಲು ಬಯಸುತ್ತೇವೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಗುರುವಾರ ಹೇಳಿದ್ದರು.

ಇದುವರೆಗೂ NFZ ಗಳನ್ನು ಎಲ್ಲಿ ಹೇರಲಾಗಿದೆ

ಲಿಬಿಯಾ: ದೇಶದಲ್ಲಿ ದಾಳಿಯ ಬೆದರಿಕೆಯಲ್ಲಿರುವ ನಾಗರಿಕರನ್ನು ರಕ್ಷಿಸುವ ಕಾರಣ ನೀಡಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ 2011 ರಲ್ಲಿ ಲಿಬಿಯಾದ ಮೇಲೆ ನ್ಯಾಟೋ ಮೂಲಕ ನೋ-ಫ್ಲೈ ಝೋನ್ ಅನ್ನು ಹೇರಿತ್ತು.

ಬೋಸ್ನಿಯಾ: NATO ಏಪ್ರಿಲ್ 1993 ರಿಂದ ಡಿಸೆಂಬರ್ 1995 ರವರೆಗೆ ಬೋಸ್ನಿಯಾದ ಮೇಲೆ ನೋ-ಫ್ಲೈ ಝೋನ್ ಅನ್ನು ಹೇರಿತ್ತು.

ಇರಾಕ್: 1991ರ ಕೊಲ್ಲಿ ಯುದ್ಧದ ನಂತರ U.S. ಮತ್ತು ಸಮ್ಮಿಶ್ರ ರಾಷ್ಟ್ರಗಳು ಇರಾಕ್‌ನಲ್ಲಿ ಎರಡು ನೋ-ಫ್ಲೈ ಝೋನ್ ಅನ್ನು ಹೇರಿದ್ದವು.

ಅಮೆರಿಕ ದೇಶವು ಹಲವೆಡೆ ನೋ-ಫ್ಲೈ ಝೋನ್ ಅನ್ನು ಹೇರಿದೆ.


ಇದನ್ನೂ ಓದಿ: ಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...