Homeಅಂಕಣಗಳುಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

ಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

- Advertisement -
- Advertisement -

 

ಗಿರೀಶ್ ಕಾರ್ನಾಡ್‍ರವರ ಸಾವಿನ ನಂತರ ನಡೆದುಕೊಂಡ ರೀತಿಗೆ ಅವರ ವೈರಿಗಳೂ ಮೆಚ್ಚಿ ತಲೆದೂಗುತ್ತಿದ್ದಾರಂತಲ್ಲಾ. ಇದರ ನಡುವೆ ವೀರಶೈವರ ಜಾಲತಾಣಗಳು ಕಾರ್ನಾಡರ ಸಾವನ್ನು ಸಂಭ್ರಮಿಸಿದ್ದು ನೋಡಿದ ಲಿಂಗಾಯತರು, ‘ಥೂ ಎಷ್ಟೇ ಆಗಲಿ ಇವುರು ಅಂಥೋರೆಯ’ ಎಂದು ಉದ್ಘಾರ ತೆಗೆದರಂತಲ್ಲಾ. ಅದಿರಲಿ ಈ ವೀರಶೈವರಿಗೇಕೆ ಕಾರ್ನಾಡರ ಸಾವಿಗೆ ಸಂಭ್ರಮಿಸಿದರು ಎಂದು ನೋಡಿದರೆ, ಕಾರ್ನಾಡರ ‘ತಲೆದಂಡ’ ಕೃತಿ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದಂತಲ್ಲಾ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಕೊಲೆ ಇಪ್ಪತ್ತೊಂದನೆ ಶತಮಾನದಲ್ಲೂ ಕೆಲವರನ್ನು ಬೆಚ್ಚಿಸುತ್ತದೆ ಎಂದರೆ ಆಶ್ಚರ್ಯ. ಗಾಂಧೀ ಕೊಲೆಯೂ ಹಾಗೇ ಅಲ್ಲವೆ. ಕೊಂದವನು ನಮ್ಮ ಜಾತಿ ಅಲ್ಲ ಎಂದರು. ಪತ್ತೆ ಹಚ್ಚಿ ಹೇಳಿದಾಗ ನಮ್ಮ ಸಂಘದ ಸದಸ್ಯನಲ್ಲ ಎಂದರು. ಅದನ್ನೂ ಪತ್ತೆ ಹಚ್ಚಿದಾಗ ಸಂಘ ತೊರೆದು ಬಹಳ ವರ್ಷವಾಗಿತ್ತು ಎಂದರು. ಎಲ್ಲಾ ಮುಗಿದು ಮರಣ ದಂಡನೆಯಾದಾಗ ಮನುಧರ್ಮದುದ್ದಾರಕ್ಕೆ ಹುತಾತ್ಮನಾದ ಮಹಾತ್ಯಾಗಿ ಎಂದರು. ಅದೆಲ್ಲಾ ಆಗಿ ಮನುಧರ್ಮ ಗ್ರಂಥವನ್ನು ಪುನರ್ಮುದ್ರಣ ಮಾಡುವ ವ್ಯಾಪಾರಿಯಂತೆ ಕಾಣುವ ಮೋದಿ ಪ್ರಧಾನಿಯಾದ ಕೂಡಲೆ ಗೋಡ್ಸೆಗೆ ಗುಡಿಕಟ್ಟಿದರಂತಲ್ಲಾ ಥೂತ್ತೇರಿ.

*****

ಎಡೂರಪ್ಪನ ಜೊತೆ ಇಪ್ಪತ್ತು ತಿಂಗಳು ತೆಕ್ಕೆ ಬಡಿದುಕೊಂಡು ರಾಜ್ಯಾಡಳಿತ ನಡೆಸಿದ ಕುಮಾರಣ್ಣ, ಜನಾನುರಾಗಿ ಆಗಿದ್ದರು. ಅದಕ್ಕೆ ಕಾರಣ, ಅವರ ಗ್ರಾಮ ವಾಸ್ತವ್ಯವಂತೆ. ಆದರೀಗ ಕುಮಾರಣ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಮಗನನ್ನ ಗೆಲ್ಲಿಸಲಾಗಿಲ್ಲ. ತುಮಕೂರಿನಲ್ಲಿ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಸನದಲ್ಲಿ ತನ್ನ ಮತ್ಸರಕ್ಕೆ ತುತ್ತಾಗಿರುವ ಭವಾನಿ ಪುತ್ರ ಗೆದ್ದು ಮೆರೆಯುತ್ತಿದ್ದಾನೆ. ಕಾಂಗೈಗಳು ನಂಬಿಕೆಗೆ ಯೋಗ್ಯವಾಗಿ ವರ್ತಿಸುತ್ತಿಲ್ಲ. ಸಿದ್ಧರಾಮಯ್ಯ ಕರ್ಣನಂತೆ ಮಾತನಾಡಿದರೂ ಶಕುನಿಯಾಗಿದ್ದಾರೆ. ಇಂತೆಲ್ಲಾ ತಲೆತಿನ್ನುವ ಸಂಗತಿಗಳಿಂದ ದೂರವಾಗಿ, ನೆಮ್ಮದಿಯಿಂದ ನಾಲ್ಕು ಗಂಟೆ ನಿದ್ದೆ ಮಾಡಬೇಕೆಂದರೆ, ಅದು ಗ್ರಾಮ ವಾಸ್ತವ್ಯದಿಂದ ಮಾತ್ರ ಸಾಧ್ಯ ಎಂದು ಸೂಕ್ತ ಗ್ರಾಮ ಶೋಧನೆಗೆ ತೊಡಗಿರುವಾಗ ಅವರಿಗೆ ಶುಭ ಹಾರೈಸುವುದು ನಮ್ಮ ಕರ್ತವ್ಯ. ಹಾಗಾಗಿ ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್ ಟೋನ್: ಹಳ್ಳಿಯಾದರೇನು ಶಿವಾ ದಿಳ್ಳಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ ಜನರೆಲ್ಲಾ…….
“ಹೇಳ್ರಿ ಯಾಹು ಏನ್ಸಮಾಚಾರ”
“ಸುಮ್ಮನೆ ಮಾತಾಡಬೇಕು ಅನ್ನುಸ್ತು ಸಾರ್.”
“ಒಂದು ಕೆಲಸ ಮಾಡಿ, ನಾನು ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಒಂದು ತೀರ್ಮಾನ ಏನು ತಗೊಂಡಿದ್ದೀನಿ. ಅದರ ಪ್ರಕಾರ ಗ್ರಾಮ ವಾಸ್ತವ್ಯವನ್ನ ಆರಂಭಿಸಬೇಕು ಅನ್ನೊ ತೀರ್ಮಾನದ ಪ್ರಕಾರ ನಡಕೊಳನಾ ಅಂತ ಇದೀನಿ.”
“ಒಳ್ಳೆ ಆಲೋಚನೆ ಸರ್, ಬೇಗ ಹೊರಡಿ.”
“ನೋಡಿ, ನಿಮ್ಮ ಬಾಯಲ್ಲೂ ಅದೇ ಬರ್ತಾಯಿದೆ. ಅಲ್ಲಿ ನಾನು ಗ್ರಾಮ ವಾಸ್ತವ್ಯದ ಜಾಗದಲ್ಲಿ ಮಾತ್ನಾಡಕ್ಕೆ ಯಾರು ಇರಲ್ಲ. ನೀವು ಬಂದ್ರೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಕಾರ್ಯಕ್ರಮ ಹಾಯ್ಕಬವುದು.”
“ಸರಿ ಸಾರ್, ಆದ್ರೆ ನಿಮ್ಮ ಗ್ರಾಮ ವಾಸ್ತವ್ಯದಲ್ಲಿ ಭೋಜೇಗೌಡ ಇರ್ತನೆ, ಇನ್ನ ಶಿವರಾಮೇಗೌಡ ಈಗ ನಿರುದ್ಯೋಗಿ ಆಗಿರದ್ರಿಂದ ಅವುನೂ ಇರತನೆ, ಅಲ್ದೆ ಮಧ್ಯೆಮಧ್ಯೆ ಬಾಯಿ ಹಾಕಿ ಯಾರೂ ಮಾತಾಡಕೆ ಬಿಡಲ್ಲ. ಅಂತ ಜಾಗದಲ್ಲಿ ನಾನ್ಯಾಕೆ ಸಾರ್.”
“ನೀವು ಬನ್ನಿ, ಅವುರು ಬೇರೆ ಜಾಗದಲ್ಲಿ ಮನಗತಕ್ಕಂತ ವ್ಯವಸ್ಥೆ ಮಾಡ್ತಿನಿ.”
“ಅದರಗತ್ಯ ಇಲ್ಲ ಸಾರ್, ಶಿವರಾಮೇಗೌಡ ಅವುನ ಕಾರಲ್ಲೇ ಮನಿಕತ್ತನೆ, ಭೋಜೇ ಗೌಡನೂ ಅಂಗೆಯಾ, ಅದಿರ್ಲಿ ತಾವು ಇದ್ದಕ್ಕಿದ್ದಂಗೆ ಗ್ರಾಮ ವಾಸ್ತವ್ಯಕ್ಕೆ ಹೊಂಟಿದ್ಯಾಕೆ.”
“ಈಚೆಗೆ ಬೆಂಗಳೂರಿನಲ್ಲಿ ಇರಕ್ಕಾಗ್ತಾಯಿಲ್ಲ ಕಂಡ್ರಿ.”
“ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ ಸಾರ್. ಇಡೀ ಬೆಂಗಳೂರ ಜನಕ್ಕೆ ಅಂಗಾಗ್ಯದೆ.”
“ಅವುರದೇನಾದ್ರು ಆಗ್ಲಿ, ನನ್ನ ಈ ಸಂದರ್ಭದ ಪರಿಸ್ಥಿತಿಯನ್ನ ನೋಡೋದಾದ್ರೆ, ನಾನು ಎಲ್ಲಾದ್ರು ಹೊರಗೋಗಲೇಬೇಕು. ನಾನು ತುಂಬಾ ಭರವಸೆ ಇಟ್ಟಿದ್ದಂತಹ ಮಂಡ್ಯ ಜಿಲ್ಲೆ ಎಮ್ಮೆಲ್ಲೆಗಳು ಮೋಸ ಮಾಡಿದ್ರು. ನಮ್ಮ ಪಕ್ಷದವರೆ ನನಗೆ ತೊಂದರೆ ಕೊಡತಕಂತ ತೀರ್ಮಾನ ತಗೊಂಡ್ರು. ರಾತ್ರೆ ಆದ್ರು ಕೂಡ ಕಾಂಗ್ರೆಸ್‍ನವರು ಮನೆಹತ್ರ ಬಂದು ಏನೇನೊ ಕೇಳ್ತರೆ. ಅವು ಬೆದರಿಕೆ ತರ ಇರತವೆ. ಇನ್ನ ಬಿಜೆಪಿಗಳ ಭಯೋತ್ಪಾದನೆ ಬೇರೆ.”
“ಒಳ್ಳೆ ಪದ ಬಳಸಿದ್ರಿ ಸಾ. ಬಿಜೆಪಿಗಳದು ಯಾವತ್ತೂ ಭಯೋತ್ಪಾದನೆನೆ. ಸಾಬರ ಕಂಡು ಹೆದ್ರಿಕಂಡು ಅಂಗಾಡ್ತವವು.”
“ಅದೇನಾದ್ರು ಆಗ್ಲಿ. ನನ್ನ ಮನಸ್ಸು ಹಾಳಾಗಿರತಕ್ಕಂತ ಈ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೂಕ್ತ.”
“ಆರೋಗ್ಯ ಹ್ಯಾಗಿದೆ ಸಾ.”
“ಚೆನ್ನಾಗಿದೀನಿ.”
“ಮತ್ತೆ ದೇವೇಗೌಡ್ರು ತುಂಬ ಅಪಾಯದ ಸ್ಥಿತೀಲಿದಾನೆ ಕುಮಾರ ಅಂದ್ರು.”
“ಅದು ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಬೇಕಾದ್ರೆ, ಏನಾದ್ರು ಒಂದು ಪ್ರಮುಖವಾದ ಕಾರಣ ಬೇಕಾಗಿದ್ದ ಸನ್ನಿವೇಶದಲ್ಲಿ ನಮ್ಮ ತಂದೆ ಹಾಗಂದಿದ್ರು.”
“ಥೂ.. ಏನಾಯ್ತು ಗೊತ್ತ ಸಾರ್, ನೀವು ಕಾಂಗ್ರೆಸ್‍ನಿಂದ ಮಂಜೇಗೌಡ ಅಂತ ಕೊಂಡಕೊಂಡ್ರಲ್ಲ ಅವುನೇನು ಮಾಡಿದ ಗೊತ್ತೇ, ಕುಮಾರಣ್ಣ ಜಾಸ್ತಿ ದಿನ ಇರದಿಲ್ಲ. ನಿಖಿಲ್‍ಗೆ ಓಟು ಮಾಡಿ ಅಂತ ಇಡೀ ಜಿಲ್ಲೇಲಿ ಹೇಳಿಕಂಡು ತಿರುಗಿದ. ಅಂಗಾಗಿ ಜನ ನಿಮ್ಮ ಬಗ್ಗೆ ಕ್ಯಟ್ಟ ನಿರೀಕ್ಷೆಲವುರೆ.”
“ಇರ್ಲಿ ಬಿಡಿ, ಜನ ನಮ್ಮ ಬಗ್ಗೆ ಅಂಗನ್ನಕಂಡ್ರೆ ನನ್ನ ಆಯಸ್ಸು ಜಾಸ್ತಿಯಾಯ್ತದಂತೆ, ನಮ್ಮ ತಂದೆ ಹಾಗೇಳತಿದ್ರು.”
“ಗ್ರಾಮ ವಾಸ್ತವ್ಯದಲ್ಲಿ ಏನು ಮಾಡ್ತಿರಿ ಸಾರ್.”
“ನಮ್ಮ ಅಧಿಕಾರಿಗಳು ನಾನು ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಒಂದು ಮನೇನ ವಶಕ್ಕೆ ತಗೊಳ್ತರೆ. ಅಲ್ಲಿ ನನ್ನ ವಾಸ್ತವ್ಯಕ್ಕೆ ಏನೇನು ಬೇಕೊ ಅದನ್ನ ಅರೇಂಜ್ ಮಾಡ್ತರೆ. ನಾನು ಆ ಮನೆ ಜನಗಳ ಜೊತೆ ಕುಳಿತು ಊಟ ಮಾಡ್ತಿನಿ, ಚರ್ಚೆ ಮಾಡ್ತಿನಿ. ಈ ಗ್ರಾಮದ ಅಭಿವೃದ್ಧಿ ಹೇಗೆ ಮಾಡಬೇಕು ಅನತಕ್ಕಂತ ಸಲಹೆ ಕೇಳ್ತಿನಿ.”
“ಒಳ್ಳೆ ಕಾರ್ಯಕ್ರಮ ಸಾರ್, ಆದ್ರು ಕರ್ನಾಟಕದಲ್ಲಿ 28 ಸಾವಿರ ಹಳ್ಳಿಗಳಿವೆ ಅವುಗಳ ಅಭಿವೃದ್ಧಿ ಹೇಗೆ.”
“ಇಪ್ಪತ್ತೆಂಟು ಸಾವಿರ ಹಳ್ಳಿಗಳಿಗೂ ಹೋಗಿ ನಾನು ಗ್ರಾಮ ವಾಸ್ತವ್ಯ ಮಾಡಕ್ಕಾಗಲ್ಲ.”
“ಅಷ್ಟು ದಿನ ಇರಬೇಕಲ್ಲ ಸಾ ನೀವು.”
“ಇರದರ ಪ್ರಶ್ನೆ ಅಲ್ಲ. ಗ್ರಾಮಗಳನ್ನ ಹೇಗೆ ಅಭಿವೃದ್ಧಿ ಮಾಡಬೇಕು ಅನತಕ್ಕಂತ ವಿಷಯಗಳನ್ನ ವಿಧಾನಸೌಧದಲ್ಲಿ ಕುಳಿತು ಚರ್ಚೆಮಾಡದಕ್ಕಿಂತ ಗ್ರಾಮಕ್ಕೆ ಹೋದ್ರೆ ಒಳ್ಳೆದಲವೆ.”
“ಸರಿ, ವಿಧಾನಸೌಧದ ರಾಶಿ ಫೈಲ್‍ಗಳ ನೋಡದ್ಯಾವಾಗ ನೀವು.”
“ಅದಕ್ಕೆಲ್ಲಾ ಜನ ಇದಾರೆ.”
“ನಿಮ್ಮ ಕುಟುಂಬದಲ್ಲಾ.”
“ನಮ್ಮ ಕುಟುಂಬ ಅಂದ್ರು ತಪ್ಪಾಗಲಾರ್ದು. ಯಾಕೆ ಅಂದ್ರೆ ನಮ್ಮ ಕುಟುಂಬದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದವುರು ಇದಾರೆ. ಸತತ ಮಂತ್ರಿಗಳಾಗಿದ್ದವರು ಇದಾರೆ. ಮಾಜಿ ಪ್ರಧಾನಿಗಳಿದಾರೆ. ಆದ್ರಿಂದ ಆಡಳಿತ ನಡೆಸತಕ್ಕಂತ ವಿಷಯದಲ್ಲಿ ನಮಗೆ ಯಾವ ಭಯವೂ ಇಲ್ಲ.”
“ಗ್ರಾಮಾಭಿವೃದ್ಧಿ ಬಗ್ಗೆ ಒಂದೆರಡು ಸಲಹೆ ಕೊಡ್ಳ ಸಾರ್.”
“ಕೊಡಿ, ನಾವು ದನಕಾಯೋ ಹುಡುಗನಿಂದ್ಲೂ ಸಲಹೆ ತಗೊಳ್ತಿವಿ.”
“ನಾನು ಕುರಿಕಾದಿದ್ದೆ ಸಾ.”
“ಇನ್ನೂ ಒಳ್ಳೆದಲವ, ನಾವು ದನಕಾದಿದ್ದೊ, ನೀವು ಕುರಿಕಾದಿದ್ರಿ. ಆದ್ರಿಂದ ನಾವಿಬ್ರು ಅಣ್ಣತಮ್ಮಂದಿರಿದ್ದಂಗೆ.”
“ಏನಿಲ್ಲ ಸಾರ್, ಗ್ರಾಮದ ಉದ್ದಾರ ಒಂದು ನಾಲ್ಕಾರು ಸಮಸ್ಯೆನ ಒಳಗೊಂಡದೆ ಸಾರ್. ರಸ್ತೆ, ಕರೆಂಟು, ಕುಡಿಯೋ ನೀರು, ಒಳ್ಳೆ ಸ್ಕೂಲು ಇಷ್ಟೆ ಸಾರ್.”
“ಅದಕ್ಕೆ ನಾನು ಸ್ಕೂಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೊರಟಿರೋದು.”
“ಒಳ್ಳೆ ತೀರ್ಮಾನ ಸಾರ್, ಒಂಥರ ಐತಿಹಾಸಿಕ ತೀರ್ಮಾನ.”
“ಐತಿಹಾಸಿಕ ಯಾಕ್ರಿ?”
“ನೀವು ಎಡೂರಪ್ಪನ ಜೊತೆ ಸರಕಾರ ಮಾಡಿದಾಗ ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ರಿ. ಆಯ್ಕೆ ಮಾಡಿದ ಊರಿನ ಮಹಿಳೆ ನಿಮಗಾಗಿ ಬೆಡ್ ರೂಮನ ಶೃಂಗಾರ ಮಾಡಿದ್ಲು ಇದು ಗೊತ್ತಾಗಿ ನೀವು ಐಬಿಗೆ ಓಡಿದ್ರಿ ಅಲವ ಸಾರ್.”
“ಹೌದು ಕಂಡ್ರೀ.”
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...