Homeಕರ್ನಾಟಕನಮ್ಮದು ಗಾಂಧೀಜಿ ಹಿಂದುತ್ವ, ಅವರದ್ದು ಗೋಡ್ಸೆ ಹಿಂದುತ್ವ: ಕೆ.ಎನ್.ರಾಜಣ್ಣ

ನಮ್ಮದು ಗಾಂಧೀಜಿ ಹಿಂದುತ್ವ, ಅವರದ್ದು ಗೋಡ್ಸೆ ಹಿಂದುತ್ವ: ಕೆ.ಎನ್.ರಾಜಣ್ಣ

ಕಾಂಗ್ರೆಸ್‌ ಬೆಂಬಲದಿಂದ ಪಿಎಂ, ಸಿಎಂ ಆದವರಿಗೆ ಉಪಕಾರ ಸ್ಮರಣೆ ಇದೆಯಾ? ಇವರಿಗೆ ಲಾಟರಿ ಪ್ರಧಾನಿ, ಲಾಟರಿ ಮುಖ್ಯಮಂತ್ರಿ ಎಂದು ಹೇಳುತ್ತೇನೆ: ಮಾಜಿ ಸಚಿವ ಕೆ.ಎನ್‌.ರಾಜಣ್ಣ ವಾಗ್ದಾಳಿ

- Advertisement -
- Advertisement -

“ನಮ್ಮದು ಗಾಂಧೀಜಿ ಹಿಂದುತ್ವ, ಇತರ ಪಕ್ಷಗಳದ್ದು ಗೋಡ್ಸೆ ಹಿಂದುತ್ವ” ಎಂದು ಮಾಜಿ ಸಚಿವ, ಸಹಕಾರಿ ಕ್ಷೇತ್ರದ ಧುರೀಣ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ರೈತರ ಬಗರ್‌ ಹುಕುಂ ಸಾಗುವಳಿ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಅರಣ್ಯ ಇಲಾಖೆ ಹಾಗೂ ಸರ್ಕಾರದ ಹುನ್ನಾರದ ವಿರುದ್ಧ ಮಧುಗಿರಿ ತಾಲ್ಲೂಕಿನ ಬಂದ್ರೇಹಳ್ಳಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದ್ದಾರೆ.

ಹಿಂದುತ್ವದ ಬಗ್ಗೆ ಮಾತನಾಡುವವರಿಗೆ ಹೇಳುತ್ತೇನೆ. ನಾವು ಎಲ್ಲರೂ ಹಿಂದೂಗಳೇ. ನಾವೇನು ಕ್ರಿಶ್ಚಿಯನ್‌, ಪಾರ್ಸಿ ಮತ್ಯಾವುದೋ ಧರ್ಮದವರಲ್ಲ. ಆದರೆ ನಾವು ಪ್ರತಿಪಾದನೆ ಮಾಡುವುದು ಮಹಾತ್ಮ ಗಾಂಧೀಜಿಯವರ ಹಿಂದುತ್ವ. ಬೇರೆ ಪಕ್ಷದವರು ಪ್ರತಿಪಾದನೆ ಮಾಡುವುದು ಗೋಡ್ಸೆ ಹಿಂದುತ್ವ. ಗೋಡ್ಸೆ ಹಿಂದುತ್ವನ್ನು ನಾವು ವಿರೋಧ ಮಾಡಲೇಬೇಕು. ಗಾಂಧಿಯ ಹಿಂದುತ್ವದ ಜನರು ನಾವಾಗಬೇಕು ಎಂದು ಹೇಳಿದ್ದಾರೆ.

ಗೋಡ್ಸೆ ಹಿಂದುತ್ವವನ್ನು ತೋರಿಸಿ ಹಿಂದೂಗಳೆಲ್ಲ ಒಂದೇ ಎನ್ನುವವರು, ಪರಿಶಿಷ್ಟ ಜಾತಿಯವರನ್ನಾಗಲೀ, ನಮ್ಮೊಂದಿಗಾಗಲೀ ಸಂಬಂಧ ಮಾಡಲಿ ನೋಡೋಣ.  ವೋಟ್‌ಗಾಗಿ ಮಾತ್ರ ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಚೀನಾದವರು ಬಂದು ಇಂಡಿಯಾ ದೇಶದಲ್ಲಿ ಕೂತಿದ್ದಾರಲ್ಲ, 58 ಇಂಚಿನ ಎದೆಯವರು, ದೇಶಭಕ್ತರು ಹೋಗಿ ಅವರನ್ನು ಓಡಿಸಲಿ. ದೇಶಭಕ್ತಿಯನ್ನು ಇಲ್ಲಿ ತೋರಿಸುವುದಲ್ಲ ಎಂದು ಟೀಕಿಸಿದ್ದಾರೆ.

ಹಿಂದುತ್ವದ ಆಧಾರದ ಮೇಲೆ ಜಾತಿ, ಜಾತಿಗಳನ್ನು ಎತ್ತಿಕಟ್ಟಲಾಗುತ್ತಿದೆ. ಐದು ರಾಜ್ಯಗಳಲ್ಲಿ ಗೆದ್ದಿರಬಹುದು. ಅದು ಬೇರೆ ವಿಚಾರ. ವಿರೋಧ ಪಕ್ಷಗಳ ಲೋಪಗಳೂ ಇದಕ್ಕೆ ಕಾರಣವಾಗಿರುತ್ತವೆ. ಆದರೆ ಈ ದೇಶವನ್ನು, ಜನರನ್ನು ಒಡೆಯುವುದು, ದ್ವೇಶವನ್ನು ಹುಟ್ಟುಹಾಕುವುದು ದೇಶಕ್ಕೆ ಅಪಾಯ ಎಂದು ಎಚ್ಚರಿಸಿದ್ದಾರೆ.

ದೇವೇಗೌಡರನ್ನು ಸೆಕ್ಯುಲರ್‌ ಫ್ಯಾಬ್ರಿಕ್ ಅಂತಾರೆ. ಈ ಪದವನ್ನು ಎಲ್ಲಿಂದ ಹಿಡಿದುಕೊಂಡು ಬಂದರೋ ಗೊತ್ತಿಲ್ಲ. ಸೆಕ್ಯೂಲರ್‌ ಫ್ಯಾಬ್ರಿಕ್ ಅಂದರೆ ಏನಪ್ಪ? ಅಲ್ಲಿ ಹೋಗಿ ಮೋದಿಯನ್ನು ಭೇಟಿ ಮಾಡ್ತಾರೆ, ಇಲ್ಲಿ ಗೋ ಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್‌ನಲ್ಲಿ ಬೆಂಬಲ ಕೊಟ್ಟು ಪಾಸ್ ಮಾಡಿಸುತ್ತಾರೆ. ನಂತರ ಮೌರ್ಯ ಸರ್ಕಲ್‌ನಲ್ಲಿ ಕೂತು ಮಸೂದೆ ವಿರುದ್ಧವಾಗಿ ಧರಣಿ ಮಾಡ್ತಾರೆ. ಈ ರೀತಿಯ ಇಬ್ಬಂದಿ ರಾಜಕಾರಣ ಮಾಡುವುದರಿಂದ ದೇಶಕ್ಕೆ ಅಪಾಯವಿದೆ ಎಂದಿದ್ದಾರೆ.

ಹಾನಗಲ್‌, ಬಸವ ಕಲ್ಯಾಣ, ಸಿಂಧಗಿ ಉಪಚುನಾವಣೆಯಲ್ಲಿ ಜೆಡಿಎಸ್‌ನವರು ಮುಸ್ಲಿಮರಿಗೆ ಟಿಕೆಟ್ ನೀಡಿತು. ರಾಮನಗರದಲ್ಲಿ, ಚೆನ್ನಪಟ್ಟಣದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ, ಅಲ್ಲಿ ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ಕೊಡಲಿ. ಕಡಿಮೆ ಸಂಖ್ಯೆಯಲ್ಲಿರುವಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದರೂ ಜನ ಮತ ಹಾಕಲಿಲ್ಲ ಅನ್ನುತ್ತಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲದಿಂದ ಪ್ರಧಾನಿಯಾದವರು ಕಾಂಗ್ರೆಸ್‌ ಪಕ್ಷವನ್ನೇ ನಾಶ ಮಾಡುತ್ತೇನೆ ಎನ್ನುತ್ತಾರೆ. 13 ಜನ ಇದ್ದರೆ ಮಾತ್ರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯ. 37 ಜನ ಎಂಎಲ್‌ಎಗಳಿದ್ದರೂ ಕಾಂಗ್ರೆಸ್‌ ಬೆಂಬಲದಿಂದಾಗಿ ಮುಖ್ಯಮಂತ್ರಿಯಾದರು. ಅಧಿಕಾರ ಹೋದ ತಕ್ಷಣ ಕಾಂಗ್ರೆಸ್‌ ಮುಗಿಸುತ್ತೇನೆ ಅಂತಾರೆ. ಇವರಿಗೆ ಉಪಕಾರ ಸ್ಮರಣೆ ಇದೆಯಾ? ಇವರಿಗೆ ಲಾಟರಿ ಪ್ರಧಾನಿ, ಲಾಟರಿ ಮುಖ್ಯಮಂತ್ರಿ ಎಂದು ಹೇಳುತ್ತೇನೆ. 274 ಜನ ಎಂಪಿಗಳಿದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ. 16 ಜನ ಸದಸ್ಯರಿದ್ದರೂ ಕಾಂಗ್ರೆಸ್‌ ಬೆಂಬಲದಿಂದ ಪ್ರಧಾನಿಯಾದರು. ಈಗ ಕಾಂಗ್ರೆಸ್ ಮುಗಿಸುತ್ತೇನೆ ಎಂದರೆ ಇವರಿಗೆ ಉಪಕಾರ ಸ್ಮರಣೆ ಇದೆಯಾ? ಸುಳ್ಳು ಹೇಳಿಕೊಂಡು, ಜಾತಿ ಹೇಳಿಕೊಂಡು ಇರುವವರಿಗೆ ಯಶಸ್ಸು ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2023ರ ಚುನಾವಣೆಯಲ್ಲಿ ಮತ ಕೇಳಲು ಬಂದಿಲ್ಲ. ಚುನಾವಣೆಯಲ್ಲಿ ಮತ ಕೇಳಿ ಎಂಎಲ್‌ಎ ಆಗಬಹುದು. ಎಂಎಲ್‌ಎ ಎಂದು ಕರೆಸಿಕೊಳ್ಳುವ ಚಟವಿಲ್ಲ. ಜನರ ಹೃದಯದಲ್ಲಿ ಸ್ಥಾನ ಬಯಸುತ್ತೇನೆ. ವಿಧಾನಸಭೆಯಲ್ಲಿ ಅಲ್ಲ. ಎಲ್ಲ ಅಪಪ್ರಚಾರದ ನಡುವೆ 70,000 ಮತದಾರರು ನನಗೆ ಮತ ಹಾಕಿದ್ದೀರಿ. ದುಡ್ಡು ಹಾಗೂ ಜಾತಿ ಮೀರಿ ಬೆಂಬಲ ನೀಡಿದ್ದೀರಿ. ದುಡ್ಡಿದ್ದರೆ ಸಾಕು ಮಧುಗಿರಿಯಲ್ಲಿ ಗೆದ್ದು ಬಿಡ್ತಾರೆ ಎಂಬ ಭಾವನೆ ಹೊರಗಡೆ ಬೆಳೆದುಬಿಟ್ಟಿದೆ. ಇದನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದ್ದಾರೆ.

2008ರಲ್ಲಿ 500 ಮತಗಳ ಅಂತರದಲ್ಲಿ ಸೋಲು ಕಂಡೆ. ಅದಕ್ಕೆ ಕಾರಣಗಳು ಬೇರೆ ಇರಬಹುದು. ಮುಂದಿನ ಚುನಾವಣೆಯಲ್ಲಿ 1,000 ಮತಗಳ ಅಂತರದಲ್ಲಿ ಸೋತೆ. ನನಗೆ ಆಗಲೂ ಬೇಸರವಾಗಲಿಲ್ಲ. 2018 ಸೋತ ಮೇಲೆ ಮತ್ತೆ ಚುನಾವಣೆಯತ್ತ ತಲೆಯೂ ಹಾಕಬಾರದು ಎಂದುಕೊಂಡಿದ್ದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲ ಗೌರವ ತಂದಿರಿ. ನಾವು ಬಿಜೆಪಿಗೆ ಮತ ಹಾಕಿಸಿಲ್ಲ. ಆದರೆ ಜಿ.ಎಸ್‌.ಬಸವರಾಜು ಅವರಿಗೆ ಮತ ಹಾಕಿಸಿದೆವು ಅಷ್ಟೇ. ಯಾಕೆಂದರೆ ಬಸವರಾಜು ಅವರು ಹಳೆಯ ಕಾಂಗ್ರೆಸ್ಸಿಗರು. ಅವರು ಜನಪರವಾಗಿರುತ್ತಾರೆಂದು ಮತ ಹಾಕಿಸಿದ್ದೇವೆ. ಅದರಲ್ಲಿ ಎರಡನೇ ಮಾತಿಲ್ಲ. ಬಸವರಾಜು ಬಿಜೆಪಿಯವರು ಎಂದು ನಾವು ಭಾವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿರಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...