Homeಮುಖಪುಟಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

ಯಾವ ರೀತಿಯ ಉದ್ಯೋಗ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಓದಿ

- Advertisement -
- Advertisement -

ಜೀವನ ಕಲೆಗಳು ಲೇಖನ: 5

ವ್ಯಕ್ತಿತ್ವ ವಿಕಸನ 4  ನಿಮ್ಮನ್ನು ನೀವು ಅರಿಯಿರಿ

ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ)ಬಗ್ಗೆ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ್ದೆ. ಇದು ವ್ಯಕ್ತಿತ್ವಗಳ ಬಗೆಗಿನ ಅಧ್ಯಯನ ಮತ್ತು ಅದಕ್ಕೆ ಸರಿಹೊಂದುವಂತಹ ವೃತ್ತಿ ಅಥವಾ ಉನ್ನತ ಶಿಕ್ಷಣದ ಆಯ್ಕೆಯ ಒಂದು ವಿಧಾನ. ಎಂಬಿಟಿಐ ಸೂಚ್ಯಾಂಕ ತಿಳಿದುಕೊಳ್ಳುವ ಆಸಕ್ತಿ ಉಳ್ಳವರು ಈ ಲಿಂಕ್ ಕ್ಲಿಕ್ಕಿಸಿ:

ಎಂಬಿಟಿಐ ಸೂಚ್ಯಾಂಕದಲ್ಲಿ, ಕಾರ್ಲ್ ಜಂಗ್ ಪ್ರಕಾರ, ವ್ಯಕ್ತಿಯ ಪ್ರಮುಖವಾದ ನಾಲ್ಕು ಗುಣಲಕ್ಷಣಗಳಾದ ಸೂಕ್ಷ್ಮತೆ, ಸಹಜ ಜ್ಞಾನ, ಸಂವೇದನೆ ಮತ್ತು ಯೋಚನಾಶಕ್ತಿ ಎಂಬವನ್ನು ವಿಂಗಡಿಸಿ, ಅದರ ತದ್ವಿರುದ್ದಗಳೊಂದಿಗೆ ಸಂಯೋಗಪೂರ್ವಕವಾಗಿ ಜೋಡಿಸಿ, ಹದಿನಾರು ಸಂಯೋಗ ಸೂಚಕ ಅಕ್ಷರದ ಗುಂಪುಗಳನ್ನಾಗಿ ಮಾಡಲಾಗಿದೆ. ಅದರಂತೆ ಬಂದ ಹದಿನಾರು ಸಂಯೋಗಗಳು ಹೀಗಿವೆ:

ESTJ, ISTJ, ENTJ, INTJ, ESTP, ISTP, ENTP, INTP, ESFJ, ISFJ, ENFJ, INFJ, ESFP, ISFP, ENFP & INFP.

ನಿಮ್ಮ ಟೈಪ್ ಇಂಡಿಕೇಟರ್ ಮೇಲಿನ ಹದಿನಾರ ಪೈಕಿ ಯಾವುದೇ ಆಗಿದ್ದಲ್ಲಿ ಅದಕ್ಕೆ ಜನ್ಮ ಕುಂಡಲಿ (ಜಾತಕ) ರೀತಿಯ ಸಂಪೂರ್ಣ ವಿಶ್ಲೇಷಣೆ, ಮೇಲೆ ನೀಡಿರುವ ಅಂತರ್ಜಾಲತಾಣದಲ್ಲಿ ಲಭ್ಯವಿದೆ. ಹೆಚ್ಚಿನ ಆಸಕ್ತಿ ಇರುವವರು ಅದನ್ನು ಆಳವಾಗಿ ಅಧ್ಯಯನ ಮಾಡಬಹುದು. ಸಂಕ್ಷಿಪ್ತವಾಗಿ ತಿಳಿಸುವುದಾದರೆ:

ಇ.ಎಸ್.ಟಿ.ಜೆ. (ESTJ): ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ತೀರ್ಪುಗಾರಿಕೆ ಸ್ವಭಾವದ ನೈಸರ್ಗಿಕ ನಾಯಕತ್ವದ ವ್ಯಕ್ತಿಗಳು, ತಮಗೆ ಯಾವುದು ಸರಿಯೋ ಅದನ್ನು ಶಕ್ತಿಯುತವಾಗಿ ಪ್ರತಿಪಾದಿಸುವವರು, ಪರಿಣಾಮವನ್ನು ಎದುರಿಸುವವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಶಿಕ್ಷಣ, ತರಬೇತಿ, ಬ್ಯಾಂಕಿಂಗ್, ರಾಜಕೀಯ, ಮತ್ತು ಎಲ್ಲಾ ಸ್ತರದ ವ್ಯವಸ್ಥಾಪಕ ಹುದ್ದೆ.

ಐ.ಎಸ್.ಟಿ.ಜೆ. (ISTJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ, ತೀರ್ಪುಗಾರಿಕೆ ಮತ್ತು ಸ್ವತಂತ್ರ ಸ್ವಭಾವದ ನಿರೀಕ್ಷಕ ವ್ಯಕ್ತಿಗಳು, ಸಮಯ ಪರಿಪಾಲಕರು, ತಪ್ಪು-ಸರಿ ತಿಳಿದವರು. ಇವರಿಗೆ ಸೂಕ್ತವಾದ ಕೆಲವು ವೃತ್ತಿಗಳು: ಮಿಲಿಟರಿ, ಪೋಲಿಸ್ ಅಧಿಕಾರಿ, ವೈದ್ಯರು, ಸನದು ಲೆಕ್ಕಿಗರು, ವಕೀಲರು, ಅಭಿಯಂತರು, ಮಧ್ಯಮ ಸ್ತರದ ವ್ಯವಸ್ಥಾಪಕ ಹುದ್ದೆ.

ಇ.ಎನ್.ಟಿ.ಜೆ. (ENTJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ ಸಂಸ್ಥೆ ಕಟ್ಟುವ ನಾಯಕರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲವರು. ಇವರಿಗೆ ಸೂಕ್ತ ವೃತ್ತಿಗಳು: ಕಂಪನಿಯ ಮುಖ್ಯಸ್ಥರು, ಉದ್ಯೋಗಶೀಲರು, ಕಂಪ್ಯೂಟರ್ ಸಲಹೆಗಾರರು, ವಿಶ್ವವಿದ್ಯಾಲಯದ ಆಡಳಿತಗಾರರು, ಇತ್ಯಾದಿ

ಐ.ಎನ್.ಟಿ.ಜೆ. (INTJ):ವ್ಯಕ್ತಿಗಳುಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ, ತೀರ್ಪುಗಾರಿಕೆ ಸ್ವಭಾವದ “ಮಾಸ್ಟರ್ ಮೈಂಡ್”. ಯಾವುದೇ ಸಂಕೀರ್ನ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಅಭಿಯಂತರು, ವೈದ್ಯರು, ರಣನೀತಿ ತಯಾರಕರು ಇತ್ಯಾದಿ.

ಇ.ಎಸ್.ಟಿ.ಪಿ. (ESTP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಕ್ರಿಯಾಶೀಲರು. ಇನ್ನೊಬ್ಬರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಸಲಹೆ ನೀಡಬಲ್ಲರು. ಇವರಿಗೆ ಸೂಕ್ತ ವೃತ್ತಿಗಳು: ಮಾರ್ಕೆಟಿಂಗ್, ಕಂಪ್ಯೂಟರ್/ವೈದ್ಯಕೀಯ ಸಪೋರ್ಟ್ ತಂಡ, ಇತ್ಯಾದಿ.

ಐ.ಎಸ್.ಟಿ.ಪಿ. (ISTP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಇವರಿಗೆ ಸೂಕ್ತ ವೃತ್ತಿಗಳು: ಪೋಲಿಸ್ ತನಿಖಾ ದಳ, ಅಭಿಯಂತರು, ಮೆಕ್ಯಾನಿಕ್, ಪೈಲಟ್ ಇತ್ಯಾದಿ. ಆದರೆ ಎಲ್ಲ ಕೆಲಸಕ್ಕೆ ಸುಲಭವಾಗಿ ಹೊಂದಿಕೊಳ್ಳುವರು.

ಇ.ಎನ್.ಟಿ.ಪಿ. (ENTP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವಕೀಲಿ, ಮನೋವಿಜ್ಞಾನಿ, ಸಿನಿಮಾ/ನಾಟಕ ನಟನೆ, ಇತ್ಯಾದಿ.

ಐ.ಎನ್.ಟಿ.ಪಿ. (INTP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಚಿಂತನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಫೋಟೋಗ್ರಾಫಿ, ಗಣಿತ ತಜ್ಞರು, ನ್ಯಾಯಾಧೀಶರು, ಇತ್ಯಾದಿ.

ಇ.ಎಸ್.ಎಫ್.ಜೆ. (ESFJ):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ನರ್ಸಿಂಗ್, ಶಿಕ್ಷಣ, ಧಾರ್ಮಿಕ ಕೆಲಸ, ಇತ್ಯಾದಿ.

ಐ.ಎಸ್.ಎಫ್.ಜೆ. (ISFJ):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಅಂಗಡಿ/ಮಳಿಗೆ ಮಾಲೀಕರು, ವಾಚನಾಲಯ ನಡೆಸುವುದು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎನ್.ಎಫ್.ಜೆ. (ENFJ):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಲಹೆಗಾರರು, ಮನೋರೋಗ ತಜ್ಞರು, ಸಮಾಜ ಸೇವಕರು ಇತ್ಯಾದಿ.

ಐ.ಎನ್.ಎಫ್.ಜೆ. (INFJ):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ, ತೀರ್ಪುಗಾರಿಕೆ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ವೈದ್ಯರು, ಸಂಗೀತಗಾರರು, ಧಾರ್ಮಿಕ ಕೆಲಸ ಇತ್ಯಾದಿ.

ಇ.ಎಸ್.ಎಫ್.ಪಿ. (ESFP):ವ್ಯಕ್ತಿಗಳು ಬಹಿರ್ಮುಖಿ, ಸೂಕ್ಷ್ಮತೆ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಸಂಗೀತ/ನೃತ್ಯ ಕಲಾವಿದರು,ಸಿನಿಮಾ/ನಾಟಕ ನಟನೆ,ಇತ್ಯಾದಿ.

ಐ.ಎಸ್.ಎಫ್.ಪಿ. (ISFP):ವ್ಯಕ್ತಿಗಳು ಅಂತರ್ಮುಖಿ, ಸೂಕ್ಷ್ಮತೆ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಶಿಕ್ಷಕರು, ಸಲಹೆಗಾರರು, ಅರಣ್ಯಾಧಿಕಾರಿ, ಇತ್ಯಾದಿ.

ಇ.ಎನ್.ಎಫ್.ಪಿ. (ENFP):ವ್ಯಕ್ತಿಗಳು ಬಹಿರ್ಮುಖಿ, ಸಹಜ ಜ್ಞಾನಿ,  ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು: ಲೇಖಕರು, ಪತ್ರಿಕೋದ್ಯಮ, ರಾಯಭಾರಿ ಇತ್ಯಾದಿ.

ಐ.ಎನ್.ಎಫ್.ಪಿ. (INFP):ವ್ಯಕ್ತಿಗಳು ಅಂತರ್ಮುಖಿ, ಸಹಜ ಜ್ಞಾನಿ, ಸಂವೇದನಾಶೀಲ ಮತ್ತು ಗ್ರಹಿಕಾ ಶಕ್ತಿಯ ಸ್ವಭಾವದ ಇವರಿಗೆ ಸೂಕ್ತ ವೃತ್ತಿಗಳು:ಲೇಖಕರು, ಶಿಕ್ಷಕರು, ಮನೋತಜ್ಞರು, ಇತ್ಯಾದಿ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:

1. ಎಂಬಿಟಿಐ ಸೂಚ್ಯಾಂಕ ನಿಮ್ಮ ಜನ್ಮಕ್ಕೆ ಅಂಟಿದ ಹಣೆಪಟ್ಟಿ ಅಲ್ಲ. ಇದು ನಿಮ್ಮ ಇಂದಿನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರಲ್ಲಿ ಕಂಡು ಬಂದ ಗುಣಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಹಾಗಾಗಿ ಅಂತರ್ಮುಖಿಗಳು ಬಹಿರ್ಮುಖಿಯಾಗಬಹುದು; ಚಿಂತನಾಶೀಲರು ಕ್ರಿಯಾಶೀಲರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಸೂಚ್ಯಾಂಕ, ಅದರ ವಿಶ್ಲೇಷಣೆ ಮತ್ತು ವೃತ್ತಿ ಸಹ ಬದಲಾಗಬಹುದು.

2. ಎಂಬಿಟಿಐ ಸೂಚ್ಯಾಂಕವನ್ನು ಬಹಳಷ್ಟು ಕಂಪನಿಗಳು, ಜಾಲತಾಣಗಳು, ಸಲಹೆಗಾರರು ವಿಧವಿಧವಾಗಿ ಅರ್ಥೈಸುತ್ತಾರೆ. ನಮ್ಮ ದೇಶದಲ್ಲಿ ಜ್ಯೋತಿಷಿಗಳು ಜಾತಕ ನೋಡಿ ಭವಿಷ್ಯ ಹೇಳುವಂತೆ, ಎಲ್ಲರೂ ತಮ್ಮದೇ ಆದ ವಿಶ್ಲೇಷಣೆ ಮತ್ತು ವೃತ್ತಿಗಳನ್ನು ಸೂಚಿಸುತ್ತಾರೆ. ಆದ್ದರಿಂದ ಇದು ವಿಜ್ಞಾನಿ ಎನಿಸಿಕೊಳ್ಳದೆ ಅರೆ-ವಿಜ್ಞಾನದ ಗುಂಪಿಗೆ ಸೇರಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಭವಿಷ್ಯದ ನಿರ್ಧಾರ ತೆಗೆದುಕೊಳ್ಳಿ ಎಂದು ನನ್ನ ಸವಿನಯ ಸಲಹೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...