Homeಕರ್ನಾಟಕಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

ಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

- Advertisement -
- Advertisement -

ಜೂನ್ 30ರಂದು ಅಬ್ದುಲ್ ಹಕೀಂ ಎಂಬ ಪತ್ರಕರ್ತರೊಬ್ಬರ ವಿರುದ್ಧ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ನೀಡಿದ ದೂರಿನ ಮೇರೆಗೆ ಐಪಿಸಿಯ ಕಾಯ್ದೆಯ 9 ಕಲಂಗಳಡಿ ಪ್ರಕರಣ ದಾಖಲಾಗಿದೆ. ಇಲ್ಲಿ ಹಕೀಂ ಅವರ ಮೇಲೆ ಇರುವ ಆಪಾದನೆ ಎಂದರೆ ಉತ್ತರಪ್ರದೇಶದ ಝಾನ್ಸಿ ಬುಂದೇಲಖಂಡ ವಿವಿಯ ಖೊಟ್ಟಿ ಪದವಿ ದಾಖಲೆ ಪತ್ರಗಳನ್ನು ಹಂಪಿ ವಿವಿಗೆ ಸಲ್ಲಿಸಿ ‘ಅಭಿವೃದ್ಧಿ ಅಧ್ಯಯನ’ದಲ್ಲಿ ಪಿಎಚ್‍ಡಿ ಪಡೆದುಕೊಂಡಿದ್ದಾರೆ ಅನ್ನೋದು. ಈ ಆರೋಪದ ಮೇಲೆ ವಿವಿ ಅವರ ಪದವಿ ಮತ್ತು ಡಾಕ್ಟರೇಟ್‍ಗಳನ್ನು ರದ್ದು ಮಾಡಿದೆ.

ಹಕೀಂ ವಾದವೇನು?

ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅಬ್ದುಲ್ ಹಕೀಂ ವಿವಿಯ ಅಧಿಕಾರಿಗಳ ವಿರುದ್ಧ ಕಾನೂನು ಸಮರಕ್ಕೆ ಸಿದ್ದ ಎಂದು ಸಾರಿದ್ದಾರೆ. ತಾವು ಕುವೆಂಪು ವಿವಿಯಿಂದ ಎಂಎ ಪದವಿ ಪಡೆದಿರುವೆ ಎಂದು ‘ದಾಖಲೆಗಳನ್ನು’ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ಆದರೆ ಈಗ ಎದ್ದಿರುವ ಪ್ರಶ್ನೆ ಎಂದರೆ, ಇಲ್ಲಿ ಅವರು ಕುವೆಂಪು ವಿವಿಯನ್ನೂ ಯಾಮಾರಿಸಿ ಎಂ.ಎ ಪದವಿ ಪಡೆದಿದ್ದಾರಾ ಎಂಬುದು. ಏಕೆಂದರೆ ಹಂಪಿ ವಿವಿ ದೂರು ಕೊಟ್ಟಿರೋದು ಅವರ ಎಂಎ ಪ್ರಮಾಣಪತ್ರದ ಬಗ್ಗೆಯಲ್ಲ, ಪದವಿ ಪ್ರಮಾಣಪತ್ರದ ಬಗ್ಗೆ. ಅದು ಯಾವ ಯುನಿವರ್ಸಿಟಿಯ ಯಾವ ಕಾಲೇಜಿನ ಪದವಿ ಪ್ರಮಾಣ ಪತ್ರ ಎಂಬುದರ ಬಗ್ಗೆ ಈ ಪ್ರಕರಣದಲ್ಲಿ ಸ್ಪಷ್ಟವೇ ಆಗಿಲ್ಲ. ಅದನ್ನು ಹಕೀಂ ಸಾಹೇಬರೂ ಸ್ಪಷ್ಟಗೊಳಿಸಿಲ್ಲ.

ಜನಸಾಮಾನ್ಯರ ಪ್ರಶ್ನೆಗಳಿಷ್ಟೇ

ಹಕೀಂ ಪ್ರಕಾರ, ಅವರು ಬೆಂಗಳೂರು ವಿವಿಯ ಕಾನೂನು ಪದವಿ ಮತ್ತು ಕುವೆಂಪು ವಿವಿಯ ರಾಜ್ಯಶಾಸ್ತ್ರ ಎಂಎ ಪದವಿ ಆಧಾರದ ಮೇಲೆ ಹಂಪಿ ವಿವಿಗೆ ಪಿಎಚ್ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅವರನ್ನು ಕಂಡರಾಗದ ಹಂಪಿ ವಿವಿಯ ಸೋಮನಾಥ್ ಎಂಬ ಅಧಿಕಾರಿ, ಹಕೀಂ ಅವರ ‘ಒರಿಜಿನಲ್’ ಪ್ರಮಾಣ ಪತ್ರಗಳನ್ನು ತೆಗೆದು ಹಾಕಿ, ಅಲ್ಲಿ ಬುಂದೇಲಖಂಡ ವಿವಿಯ ಫೇಕ್ ಡಿಗ್ರಿ ಸರ್ಟಿಫಿಕೇಟುಗಳನ್ನು ತುರುಕಿದ್ದಾರಂತೆ. ಓಕೆ, ಅವರು ಕೊಟ್ಟ ಡಿಗ್ರಿ ಸರ್ಟಿಫಿಕೇಟುಗಳನ್ನು ಬದಲಿಸಿ, ಫೇಕ್ ಡಿಗ್ರಿಗಳನ್ನು ಲಗತ್ತಿಸಿರುವ ಸಾಧ್ಯತೆಯನ್ನೂ ಒಪ್ಪಿಕೊಳ್ಳೋಣ. ಆದ್ರೆ, ಹಕೀಂ ಸ್ವತಃ ತಮ್ಮ ಕೈರಬಹದಲ್ಲಿ ಬರೆದ ಪಿ.ಎಚ್‍ಡಿ ಅರ್ಜಿಯಲ್ಲಿ ಪದವಿಯನ್ನು ಬಂದೇಲ್‍ಖಂಡ್ ವಿವಿಯಿಂದಲೇ ಪಡೆದಿರುವುದಾಗಿ ಬರೆದುಕೊಟ್ಟಿದ್ದಾರೆ! ಇದರ ಬಗ್ಗೆ ಅವರ ಯಾವ ಸ್ಪಷ್ಟಣೆಯನ್ನೂ ಕೊಟ್ಟಿಲ್ಲ.
ಹಕೀಂರನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿರೋ ಸಂಗತಿ ಅಂದ್ರೆ, ಆ ಪಿ.ಎಚ್ಡಿ ಪಡೆಯುವಾಗ ಅವರು ಅದೇ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದರು. ಸಹಜವಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂಥಾ ಯಡವಟ್ಟು ಮಾಡಿಕೊಂಡರಾ ಅನ್ನಿಸದಿರದು.

ಇನ್ನೊಂದು ವಿಚಿತ್ರ ಎಂದರೆ ಹಂಪಿ ವಿವಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆದಾಗ, ಬುಂದೇಲಖಂಡ ವಿವಿಯ ಅಧಿಕಾರಿಗಳು ಈ ಹೆಸರಿನ ಕರ್ನಾಟಕದ ಯಾವ ವ್ಯಕ್ತಿಯೂ ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂದು ಅಧಿಕೃತ ದಾಖಲೆ ನೀಡಿದ್ದಾರೆ. ನಿಜ, ಅಲ್ಲಿ ಹಕೀಂ ಓದಿಯೇ ಇಲ್ಲ. ಕುಚೋದ್ಯವೆಂದರೆ ಹಕೀಂ ಕೂಡಾ ಅದನ್ನೇ ಹೇಳುತ್ತಿದ್ದಾರೆ…

ಹಂಪಿ ವಿವಿಯ ದೂರು ಏನು?

ಜೂನ್ 28ರಂದು ಹಂಪಿ ವಿವಿ ಕುಲಸಚಿವ ಕಮಲಾಪುರದ ಠಾಣೆಯಲ್ಲಿ ದೂರು ದಾಖಲಿಸಿ, ಹಂಪಿ ವಿವಿಯಲ್ಲಿ ಪಿಎಚ್‍ಡಿ ಪಡೆಯಲು ಅಬ್ದುಲ್ ಹಕೀಂ ಅವರು ಖೊಟ್ಟಿ ಪದವಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಆಪಾದಿಸುತ್ತಾರೆ.

ಹಕೀಂ ಅವರು ಉತ್ತರಪ್ರದೇಶದ ಝಾನ್ಸಿಯ ಬುಂದೇಲಖಂಡ್ ವಿವಿಯ ಪದವಿಯ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ 2012-13ರಲ್ಲಿ ಎಂಎ ಪತ್ರಿಕೋದ್ಯಮ (ದೂರಶಿಕ್ಷಣ) ಪದವಿಯನ್ನು ಮತ್ತು 2014-15ರಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಪಿಎಚ್‍ಡಿ ಪದವಿ ಪಡೆದಿರುವುದು ದೂರಿನಲ್ಲಿ ದಾಖಲಾಗಿದೆ. ಹಕೀಂ ಅವರ ಇತಿಹಾಸವನ್ನು ನೋಡಿದರೆ ಇದರಲ್ಲೇನೂ ಆಶ್ಚರ್ಯ ಎನಿಸದು. ಅವರು ಹಂಪಿ ವಿವಿಯ ಕೆಲವು ಅಧಿಕಾರಿಗಳನ್ನು ಬೆದರಿಸಿಯೂ ತಮ್ಮ ಕೆಲಸ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆಯೂ ಕೇಳಿಬಂದಿದ್ದವು.
ನನಗೆ ನೌಕರಿ ಮಾಡಲು ಈ ಪದವಿ, ಪಿಎಚ್‍ಡಿ ಅಗತ್ಯವಿಲ್ಲ, ನನ್ನ ಗೌರವಕ್ಕೆ ಧಕ್ಕೆ ತರುವ ಈ ಕೆಲಸವನ್ನು ನಾನು ಸಹಿಸಲಾರೆ ಎಂದು ಅವರು ಅಬ್ಬರಿಸಿದ್ದಾರೆ. ಈ ಹಿಂದೆಯೇ ಅವರ ಈ ಪಿಎಚ್‍ಡಿ ವಿರುದ್ಧ ದಾಖಲೆ ಸಹಿತ ಪತ್ರಕರ್ತರೊಬ್ಬರು ವರದಿ ಮಾಡಿದ್ದರೂ ಆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಹಾಶಯರು ಅದನ್ನು ಪ್ರಕಟಿಸಲಿಲ್ಲ ಮಾತ್ರವಲ್ಲ. ಇಂಥದ್ದೇನಲ್ಲ ಬರೆಯಕೂಡದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂದು ಆ ಪತ್ರಕರ್ತರು ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗವಾಗೇ ಬರೆದುಕೊಂಡಿದ್ದಾರೆ. ಹೀಗೆ ವಾರ್ನಿಂಗ್ ಕೊಟ್ಟ ಕಾರ್ಯ ನಿರ್ವಾಹಕ ಸಂಪಾದಕರಿಗೆ ಹಕೀಂ ಜೊತೆಗಿದ್ದ ಗಳಸ್ಯ ಕಂಠಸ್ಯ ಗೆಳೆತನವೇ ವರದಿಯನ್ನು ತಡೆಹಿಡಿಯುವಂತೆ ಮಾಡಿದ್ದಿರಲೂಬಹುದು.

ಹುಬ್ಬಳ್ಳಿಯ ‘ಪ್ರಪಂಚ’ 2 ‘ಹೊಡಿ ಒಂಭತ್’ ಟಿವಿವರೆಗೆ!

ಈಗ ‘ಹಕೀಕತ್ತಿನ’ ಕ್ಲೈಮಾಕ್ಸಿನಲ್ಲಿ ಕೆಲವು ರೋಚಕ ಆದರೆ ಪುಟ್ಟಾಪೂರಾ ಸತ್ಯಗಳನ್ನು ನಿಮ್ಮ ಮುಂದೆ ಇಡಲೇಬೇಕು. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯಲ್ಲಿ ಹಕೀಂ ಒಂದರ್ಥದಲ್ಲಿ ಸೆಕೆಂಡ್ ಸಂಪಾದಕರೇ ಆಗಿದ್ದ ಕಾಲವೂ ಇತ್ತು. ಬೆಂಗಳೂರಲ್ಲಿ ಕೂತು ಅವರು ಹುಬ್ಬಳ್ಳಿಯ ‘ಪ್ರಪಂಚ’ಕ್ಕೆ ಪಿಚ್ಚರ್ ವರದಿ ಕೊಡ್ತಾ ಇದ್ದರು. ಮುಂದೆ ಪಾಪು ಅವರ ಟೈಟಲ್ ಪಡೆದು ಅದನ್ನು ಸಿನಿಮಾ ಪತ್ರಿಕೆ ಮಾಡಿದರು, ನಂತರ ಕ್ರೀಡಾ ಪತ್ರಿಕೆ ಮಾಡಿದರು, ಫೈನಲಿ ಅದನ್ನು ಸ್ಪರ್ಧಾ ಪತ್ರಿಕೆಯನ್ನೂ ಮಾಡಿಬಿಟ್ಟರು. ಅದನ್ನು ಎಷ್ಟು ಜನ ಓದಿದರೋ ಗೊತ್ತಿಲ್ಲ, ಆದರೆ ಹಕೀಂ ಮಾತ್ರ ‘ಭವ್ಯ’ ಪತ್ರಕರ್ತರಾದರು.

ಹಂಪಿ ವಿವಿಯ ಪಿಎಚ್‍ಡಿ ಪದವಿ ಪಡೆದು ಅವರು ‘ಹೊಡಿ ಒಂಭತ್’ ಚಾನೆಲ್ ಸೇರಿದರು. ಅಲ್ಲಿ ಅವರ ಪೋಸ್ಟ್ ಏನೆಂಬುದು ನಿಗೂಢವಾಗಿದೆಯಾದರು ಹೊಡಿ ಒಂಭತ್ ಗ್ಯಾಂಗಿಗೆ ಇಂತಹ ಸಕಲಕಲಾವಲ್ಲಭರ ಅಗತ್ಯವಂತೂ ಇದ್ದೇ ಇದೆ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...