ಶನಿವಾರ ಇಂಗ್ಲೆಂಡ್ನ ಲೀಸೆಸ್ಟರ್ನಲ್ಲಿ ಯುವಕರ ಗುಂಪೊಂದು ನಡೆಸಿದ ಮೆರವಣಿಗೆಯು ಕೋಮು ‘ಘರ್ಷಣೆ’ಗಳನ್ನು ಹುಟ್ಟುಹಾಕಿದೆ. ಹಿಂದುತ್ವದ ಬೆಂಬಲಿಗರು ಎಂದು ಆರೋಪಿಸಲಾಗಿರುವ ಮೆರವಣಿಯಲ್ಲಿದ್ದ ಯುವಕರೆಲ್ಲರೂ ಮಾಸ್ಕ್ ಧರಿಸಿದ್ದು, ಕೈಗಳಲ್ಲಿ ಚಾಕು ಮತ್ತು ಇತರ ಅಸ್ತ್ರಗಳನ್ನು ಇಟ್ಟುಕೊಂಡಿದ್ದರು. ಮೆರವಣಿಗೆಯ ಉದ್ದಕ್ಕೂ ಜೈಶ್ರೀರಾಮ್ ಸೇರಿದಂತೆ ಮುಸ್ಲಿಂ ವಿರೂಧಿ ಘೋಷಣೆಗಳು ಕೂಗಿ ಬಾಟಲಿಗಳನ್ನು ಎಸೆದು ಕಿಟಕಿ ಗಾಜುಗಳನ್ನು ಒಡೆದಿದ್ದಾರಲ್ಲದೆ ಬದಿಯಲ್ಲಿ ಇದ್ದ ವ್ಯಕ್ತಿಯೊಬ್ಬರಿಗೆ ಥಳಿಸುತ್ತಿರುವ ವಿಡಿಯೊಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಘರ್ಷಣೆಯ ಹಿನ್ನಲೆಯಲ್ಲಿ ಪೊಲೀಸರು ಮತ್ತು ಸಮುದಾಯದ ಮುಖಂಡರು ನಾಗರಿಕರಿಗೆ ಶಾಂತವಾಗಿರಲು ಕರೆ ನೀಡಿದ್ದಾರೆ. ಶನಿವಾರ ಇಬ್ಬರನ್ನು ಬಂಧಿಸಲಾಗಿದ್ದು, ಸೆಕ್ಷನ್ ‘60 ಸ್ಟಾಪ್ ಆಂಡ್ ಸರ್ಚ್’ ಅಧಿಕಾರದ ಅಡಿಯಲ್ಲಿ ಹೆಚ್ಚಿನ ಸಂಖ್ಯೆ ಜನರನ್ನು ಜನರನ್ನು ಹುಡುಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ 15 ಜನರನ್ನು ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಹೇಳಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದ ನಂತರ ಲೀಸೆಸ್ಟರ್ನ ಪೂರ್ವದಲ್ಲಿ ಕೆಲವು ಗೊಂದಲಕಾರಿ ಘಟನೆಗಳು ನಡೆದಿದ್ದು, ಈ ಸರಣಿಗೆ ಹೊಸದಾಗಿ ಶನಿವಾರದ ಘರ್ಷಣೆಯು ಸೇರಿಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಗರದ ಗ್ರೀನ್ ಲೇನ್ ರಸ್ತೆಯಲ್ಲಿ, ಹಲವಾರು ಮುಸ್ಲಿಂ ಒಡೆತನದ ವ್ಯಾಪಾರಿ ಮಳಿಗೆಗಳು ಮತ್ತು ಹಿಂದೂ ದೇವಾಲಯ ಇದ್ದು, ಹಿಂದೂ ಯುವಕರ ಗುಂಪು ಶನಿವಾರ ಆ ಪ್ರದೇಶದ ಮೂಲಕ ಮೆರವಣಿಗೆ ನಡೆಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Watch this & RT! Here’s a clearer video of RSS / #Hindutva inspired racist thugs with masks and balaclavas marching through #Leicester yesterday with weapons in their hands in broad daylight in front of @LeicsPolice. HOW was this allowed to happen? This later resulted in a riot! pic.twitter.com/VFcrXiAnnV
— Majid Freeman (@Majstar7) September 18, 2022
ಸಾಮಾಜಿಕ ಕಾರ್ಯಕರ್ತ ಮಜಿದ್ ಫ್ರೀಮನ್ ಶನಿವಾರ ಸಂಜೆ ಬೆಲ್ಗ್ರೇವ್ ರಸ್ತೆಯಲ್ಲಿ ನಡೆದ ಘಟನೆಗಳನ್ನು ಚಿತ್ರೀಕರಿಸಿದ್ದು, ಅವರುಗಳನ್ನು ಟ್ವಿಟರ್ನಲ್ಲಿ ಅಫ್ಲೋಡ್ ಮಾಡಿದ್ದಾರೆ. ಅವರು ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ, ಗಾಜಿನ ಬಾಟಲಿಗಳನ್ನು ಒಡೆದು ಹಾಕುವ ಶಬ್ದ ಕೇಳಿಸುತ್ತಿದ್ದು, ಪೊಲೀಸರು ಅವರನ್ನು ದೂರ ಹೋಗುವಂತೆ ಕೂಗುತ್ತಾರೆ.
ಇದನ್ನೂ ಓದಿ: ಗುಜರಾತ್ ಗಲಭೆ: ಪ್ರಧಾನಿಗೆ ಕ್ಲೀನ್ ಚಿಟ್ ದೃಢಪಡಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿ ವಜಾ
“ಅವರು ಬಾಟಲಿಗಳು ಸೇರಿದಂತೆ ಎಲ್ಲವನ್ನೂ ಎಸೆಯುತ್ತಿದ್ದರು. ಮಸೀದಿಯ ಹಿಂದೆ ಬರುತ್ತಿದ್ದು ಸಮುದಾಯವನ್ನು ನಿಂದಿಸುತ್ತಿದ್ದರು. ಅಷ್ಟೆ ಅಲ್ಲದೆ ದೈಹಿಕವಾಗಿ ಜನರನ್ನು ಹೊಡೆಯುತ್ತಿದ್ದರು” ಎಂದು ಫ್ರೀಮನ್ ಹೇಳಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
Some are saying what’s the harm in Hindus protesting and chanting their slogans outside the mosque and on the streets? It wasn’t just provoking but the #Hindutva racist mobs were attacking random Muslims in the streets too. The Muslims came out in numbers AFTER this. #Leicester https://t.co/Ari3i5c295 pic.twitter.com/PZXo2iKUNC
— Majid Freeman (@Majstar7) September 18, 2022
ಹಿಂದುತ್ವ ಯುವಕರ ಮೆರವಣಿಗೆಗೆ ಪ್ರತಿಕ್ರಿಯೆಯಾಗಿ ನಗರದಲ್ಲಿ ಮುಸ್ಲಿಂ ಯುವಕರು ಕೂಡಾ ಪೂರ್ವಸಿದ್ಧತೆಯಿಲ್ಲದೆ ಸಭೆ ನಡೆಸಿದ್ದಾರೆ ಎಂದು ಗಾರ್ಡಿಯನ್ ವರದಿ ಹೇಳಿದೆ. “ನಾವು ಪೊಲೀಸರನ್ನು ನಂಬಲು ಸಾಧ್ಯವಿಲ್ಲ, ನಮ್ಮ ಸಮುದಾಯವನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ” ಎಂದು ಯುವಕರು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಸರಣಿ ಘರ್ಷಣೆಗಳಿಂದ ಲೀಸೆಸ್ಟರ್ನ ಹಿಂದೂ ಸಮುದಾಯದಲ್ಲೂ ಭೀತಿ ಎದುರಾಗಿದೆ. ರಾಷ್ಟ್ರೀಯ ಹಿಂದೂ ಸಂಘಟನೆಯ ಅಧ್ಯಕ್ಷರಾಗಿರುವ ಲೀಸೆಸ್ಟರ್ ನಿವಾಸಿ ‘ದೃಷ್ಟಿ ಮಾ’ ಅವರು,“ಕಳೆದ ಮೂರು ದಶಕಗಳಲ್ಲೆ ಇತ್ತೀಚೆಗಿನ ಅಶಾಂತಿಯು ಅತಿಕೆಟ್ಟದಾಗಿದೆ. ಮೊದಲ ತಲೆಮಾರಿನ ವಲಸಿಗ ಸಮುದಾಯವು ಹಿಂದೂ ಸಮುದಾಯವನ್ನು ಗುರಿಯಾಗಿಸುತ್ತಿದೆ. ನಗರದ ಕೆಲವು ಮುಸ್ಲಿಮರು ಹಿಂದೂ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: ಅನುಮತಿಯಿಲ್ಲದ ಮೆರವಣಿಗೆ ತಡೆಯದೆ ಇದ್ದಿದ್ದು ‘ಸಂಪೂರ್ಣ ವಿಫಲತೆ’; ದೆಹಲಿ ಪೊಲೀಸರಿಗೆ ಕೋರ್ಟ್ ಛೀಮಾರಿ
“ಅವರು ಬೆದರಿಕೆ ಮತ್ತು ದಾಳಿಗೆ ಒಳಗಾಗಿದ್ದಾರೆ. ಪೊಲೀಸರು ಆಸ್ತಿ, ಜನರು ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ನಮ್ಮನ್ನು ರಕ್ಷಿಸಿಕೊಳ್ಳಲು ನಮಗೆ ಹಕ್ಕಿದೆ” ಎಂದು ಅವರು ಹೇಳಿದ್ದಾರೆ. ಈ ನಡುವೆ ಯುವಕರ ಗುಂಪೊಂದು ದೇವಾಲಯದ ಹೊರ ಹಾಕಿದ್ದ ಕೇಸರಿ ಧ್ವಜವನ್ನು ಕಿತ್ತು ಹಾಕಿರುವ ವಿಡಿಯೊ ಕೂಡಾ ವೈರಲ್ ಆಗಿದೆ.
“ಪೂರ್ವ ಲೀಸೆಸ್ಟರ್ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವ ಹಲವಾರು ವರದಿಗಳಿವೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಶನಿವಾರ ಸಂಜೆ ಲೀಸೆಸ್ಟರ್ಶೈರ್ ಪೊಲೀಸ್ ಫೋರ್ಸ್ನ ತಾತ್ಕಾಲಿಕ ಮುಖ್ಯ ಕಾನ್ಸ್ಟೇಬಲ್ ರಾಬ್ ನಿಕ್ಸನ್ ಅವರು ಸಾಮಾಜಿಕ ಮಾಧ್ಯಮದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
Message from Temporary Chief Constable Rob Nixon. We're taking control of the situation in @LPEastLeics, numerous officers and resources are on the ground, and we are calling for calm. pic.twitter.com/hhLOqFMfHn
— Leicestershire Police (@leicspolice) September 17, 2022
ಭಾನುವಾರ ಯುವಕರ ಗುಂಪುಗಳು ಯೋಜಿತವಲ್ಲದ ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. “ಹಲವಾರು ಹಿಂಸಾಚಾರ ಮತ್ತು ಹಾನಿಯ ಘಟನೆಗಳನ್ನು ಪೊಲೀಸರಿಗೆ ವರದಿ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ: ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ ಗಲಭೆಗೆ ಪ್ರಚೋದನೆ; 7 ದುಷ್ಕರ್ಮಿಗಳ ಬಂಧನ
“ಲೀಸೆಸ್ಟರ್ನ ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಕಟ್ಟಡದ ಹೊರಗೆ ವ್ಯಕ್ತಿಯೊಬ್ಬ ಧ್ವಜವನ್ನು ಕೆಳಗೆ ಎಳೆಯುತ್ತಿರುವ ವೀಡಿಯೊ ಪ್ರಸಾರವಾಗುತ್ತಿದ್ದು, ಈ ಬಗ್ಗೆ ನಮಗೆ ತಿಳಿದಿದೆ. ಪೊಲೀಸ್ ಅಧಿಕಾರಿಗಳು ಈ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯೊಂದಿಗೆ ವ್ಯವಹರಿಸುವಾಗ ಇದು ಸಂಭವಿಸಿದೆ ಎಂದು ತೋರುತ್ತದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಶನಿವಾರ ಇಬ್ಬರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಲ್ಲಿ ಒಬ್ಬನನ್ನು ಹಿಂಸೆಗೆ ಸಂಚು ರೂಪಿಸಿದ ಶಂಕೆಯ ಮೇಲೆ ಬಂಧಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಬ್ಲೇಡ್ ರೀತಿಯ ವಸ್ತುವನ್ನು ಹೊಂದಿರುವ ಶಂಕೆಯ ಮೇಲೆ ಬಂಧಿಸಲಾಗಿದೆ. ಇಬ್ಬರೂ ಭಾನುವಾರವೂ ಪೊಲೀಸ್ ಕಸ್ಟಡಿಯಲ್ಲಿದ್ದರು ದಿ ಗಾರ್ಡಿಯನ್ ವರದಿ ಹೇಳಿದೆ.
“ನಾವು ಸ್ಥಳೀಯ ಸಮುದಾಯದ ಮುಖಂಡರ ಬೆಂಬಲದೊಂದಿಗೆ ಸಂವಾದ ಮತ್ತು ಶಾಂತಿಗೆ ಕರೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ. ನಗರದಲ್ಲಿ ಹಿಂಸೆ ಅಥವಾ ಅವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಮಹತ್ವದ ಪೊಲೀಸ್ ಕಾರ್ಯಾಚರಣೆಯು ಪ್ರದೇಶದಲ್ಲಿ ಉಳಿಯುತ್ತದೆ” ಎಂದು ಪೊಲೀಸರು ಹೇಳಿದ್ದಾರೆ.
Hindu mobs on Belgrave Road throwing glass bottles at the Muslims but narrowly missing police officers heads on numerous occasions. There is NOT a small minority of these Hindutva thugs. Theres hundreds of them. Will the Hindu community leaders continue defending them? #Leicester pic.twitter.com/WzXnY4AWVj
— Majid Freeman (@Majstar7) September 17, 2022
ಲೀಸೆಸ್ಟರ್ ಮೂಲದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸುಲೇಮಾನ್ ನಗ್ಡಿ,“ನಾವು ಬೀದಿಗಳಲ್ಲಿ ನೋಡಿರುವುದು ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಸಮುದಾಯಗಳ ಎಡೆಯಲ್ಲಿ ಈ ರೀತಿಯ ಸಮಸ್ಯೆ ನಡೆಯುತ್ತಿತ್ತು. ಆದರೆ ಅದು ಇಷ್ಟೊಂದು ಕೆಟ್ಟದಾಗಿ ಈ ವರೆಗೆ ಭುಗಿಲೆದ್ದಿಲ್ಲ. ನಮಗೆ ಶಾಂತಿ ಬೇಕಿದ್ದು, ಹಿಂಸಾಚಾರ ನಿಲ್ಲಬೇಕು. ಕೆಲವು ಅತೃಪ್ತ ಯುವಕರು ವಿನಾಶವನ್ನು ಉಂಟುಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ & ದೆಹಲಿ ಗಲಭೆಗಳ ಪ್ರಸಾರದ ಕುರಿತು ಟಿವಿ ಚಾನೆಲ್ಗಳಿಗೆ ‘ಸಲಹೆ’ ನೀಡಿದ ಒಕ್ಕೂಟ ಸರ್ಕಾರ!
ಲೀಸೆಸ್ಟರ್ನಲ್ಲಿರುವ ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ಸಮುದಾಯ ಸಂಘಟನೆಗಳ ಮುಖಂಡರು ನೀಡಿದ ಹೇಳಿಕೆಯಲ್ಲಿ, “ಶನಿವಾರದ ಪೂರ್ವಸಿದ್ಧತೆಯಿಲ್ಲದ ಮೆರವಣಿಗೆಯ ಬಗ್ಗೆ ತಿಳಿಯಲು ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಬೆಲ್ಗ್ರೇವ್ ಮತ್ತು ನಾರ್ತ್ ಎವಿಂಗ್ಟನ್ನ ಬೀದಿಗಳಲ್ಲಿ ಸಂವೇದನಾಶೀಲವಲ್ಲದ ಮತ್ತು ಸಂಪೂರ್ಣವಾಗಿ ಅವಮಾನಕರ ಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಲೀಸೆಸ್ಟರ್ ನಗರದೊಳಗಿನ ಸಂಬಂಧಗಳು ಮತ್ತು ಏಕತೆಯನ್ನು ಹಾಳುಮಾಡುವ ಇಂತಹ ಆಕ್ರಮಣಕಾರಿ ಕೃತ್ಯಗಳನ್ನು ಹಿಂದೂ ಸಮುದಾಯದ ನಾಯಕರು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.