Homeಮುಖಪುಟಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ...

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ…

- Advertisement -
- Advertisement -

ಜೀವನ ಕಲೆಗಳು : ಅಂಕಣ – 13

ಸಮರ್ಪಕ ಸಂವಹನ ಕಲೆ –2 ಮಾತನಾಡುವುದು,  ಓದುವುದು ಮತ್ತು ಬರೆಯುವುದು.

ಸಂವಹನ ಪ್ರಕ್ರಿಯೆಯಲ್ಲಿ ನಾವು ಸುಮಾರು 45% ಸಮಯ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ, ಕೇವಲ 30% ಸಮಯ ಮಾತನಾಡುತ್ತಿರುತ್ತೇವೆ, 16% ಸಮಯ ಓದುತ್ತಿರುತ್ತೇವೆ ಮತ್ತು 9% ಸಮಯ ಬರೆಯುತ್ತೇವೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಅದೇ ರೀತಿ ಸಕ್ರಿಯ ಕೇಳಿಸಿಕೊಳ್ಳುವಿಕೆಯ ಬಗ್ಗೆಯೂ ತಿಳಿಸಿದ್ದೆ.

ಮಾತನಾಡುವ ಸಮಯದಲ್ಲಿ ನಾವು ಮೂರು ಮಾಧ್ಯಮಗಳನ್ನು ಬಳಸುತ್ತೇವೆ. ಅವೆಂದರೆ ಬ್ಯಾಷ್ಯಾತೀತ ದೈಹಿಕಭಾಷೆ ಅಥವಾ ಬಾಡಿಲಾಂಗ್ವೇಜ್, ಎರಡನೆಯದು ಸ್ವರಬೇಧ/ಶಬ್ದಾಧರಿತ ಧ್ವನಿಗಳ ಏರಿಳಿತ (ಇನ್ಟೊನೇಶನ್). ಮೂರನೆಯದು ಸಂಪೂರ್ಣ ಭಾಷೆಯನ್ನು ಆಧರಿಸಿದ ಮಾತುಕತೆ, ಅದನ್ನು ನಾವು ಓದುವ/ಬರೆಯುವ ಕಲೆ ಎನ್ನಲೂಬಹುದು. ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಬಗ್ಗೆ ಪ್ರತ್ಯೇಕವಾಗಿ ಮುಂದೆತಿಳಿಸುತ್ತೇನೆ.

ಟೋನ್ ಅಥವಾ ನಾದವನ್ನು ಆಧರಿಸಿದ ಧ್ವನಿಯ ಸಮರ್ಪಕ ಏರಿಳಿತದಿಂದ ಸಂವಹನದಲ್ಲಿ ಸಮಯಕ್ಕೆ/ಸಂದರ್ಭಕ್ಕೆ ತಕ್ಕ ಪರಿಣಾಮವನ್ನು ಸೃಷ್ಟಿಸಬಹುದು. ಇದನ್ನು ಸಣ್ಣ ಮಕ್ಕಳು ತಮ್ಮ ಸುತ್ತಮುತ್ತ ಇರುವವರ ಜೊತೆ ಸಂವಹನಕ್ಕೆ ಬಳಕೆ ಮಾಡುವುದನ್ನು ನೋಡಿರಬಹುದು. ಮೂಕ ಪ್ರಾಣಿಗಳು ಸಹ ತಮ್ಮ ವಿವಿಧ ಸದ್ದಿನಿಂದ ತಮ್ಮ ಭಾವನಾತ್ಮಕ ಸಂದೇಶ ರವಾನಿಸುತ್ತವೆ. ಧ್ವನಿಯ ಏರಿಳಿತ, ಉಚ್ಚಾರಣೆಯ ವಿಧಾನ ಮತ್ತು ಕಂಪನಗಳ ನಿಯಂತ್ರಣದಿಂದ ಸಂದೇಶಕ್ಕೆ ಹೆಚ್ಚಿನ ಬಲ ಸಿಕ್ಕು, ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಇದನ್ನು ಭಾವನಾತ್ಮಕ ವಾಚನ ಎಂದೂ ಕರೆಯಬಹುದು. ಗಾಯನ ಸಹ ಇದೇ ಗುಂಪಿಗೆ ಸೇರುತ್ತದೆ. ಧ್ವನಿಯ ಏರಿಳಿತ, ಕಂಪನ ನಿಯಂತ್ರಣವಿಲ್ಲದಿದ್ದರೆ ಭಾಷೆ ನೀರಸ ಮತ್ತು ಏಕತಾನೀಯವಾಗುತ್ತದೆ.

ಮಾತನಾಡುತ್ತಿರುವವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಸ್ವರಬೇಧದಿಂದ ನಾವು ಅವರ ಭಾವನೆಗಳನ್ನು ಅರಿಯಬಹುದು. ಧ್ವನಿಯು ಗದ್ಗದಿತವಾಗಿದ್ದಲ್ಲಿ ಅವರು ದುಃಖದಲ್ಲಿರಬಹುದೆಂತಲೂ, ಮೌನವಾಗಿದ್ದರೆ ಅತೀವ ಸಂತೋಷವಾದಾಗ ಮಾತು ಹೊರಡಲಿಲ್ಲವೇನೋ ಎಂದುಕೊಳ್ಳಬಹುದು. ಭಾವನೆಗಳ ಜೊತೆಗೆ, ವಾಕ್ಯ ಕೇವಲ ಹೇಳಿಕೆಯೋ ಅಥವಾ ಪ್ರಶ್ನಾರ್ಥಕವೋ ಎಂಬುದನ್ನೂ ಸ್ವರಭೇದ ಸೂಚಿಸುತ್ತದೆ. ಆಸಕ್ತಿ, ಉತ್ಸಾಹ ಮುಂತಾದ ಭಾವನೆಗಳನ್ನೂ ಸ್ವರಬೇಧ ಹೊರತರುತ್ತದೆ. ಪದದ ಅರ್ಥ ಪದದಲ್ಲಿ ಅಡಗಿರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ನಾಮಪದ, ಕ್ರಿಯಾಪದ, ಗುಣವಾಚಕ ಅಥವಾ ಕ್ರಿಯಾ ವಿಶೇಷಣ, ಸಂಧಿ, ಉಪಸರ್ಗ ಮುಂತಾದ ಪದಗಳಿರುತ್ತವೆ. ಯಾವ ಪದದ ಮೇಲೆ ಹೆಚ್ಚು ಒತ್ತು ಬೀಳುತ್ತದೋ ಅದೇ ರೀತಿಯಲ್ಲಿ ವಾಕ್ಯದ ಅರ್ಥ ಬದಲಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಅರ್ಥ ಹೇಳುವವರ ಅಥವಾ/ಮತ್ತು ಕೇಳುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಮನಃಸ್ಥಿತಿಯ ವ್ಯತ್ಯಾಸದಿಂದ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ತಪ್ಪಾಗಿ ಅರ್ಥೈಸಬಹುದು. ಕೆಲವೊಮ್ಮೆ ಕೇವಲ ಒಂದು ಪದದಲ್ಲಿ ಅನೇಕ ಅರ್ಥಗಳು ಗೂಢೈಸಿರಬಹುದು. ಅದೇ ರೀತಿ ಕಿರುಚುವಿಕೆ ಅಥವಾ ದ್ವನಿಯ ಗಡಸುತನವೂ ಶಕ್ತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಾತನಾಡುವ ವೇಗದಿಂದಲೂ ನಮ್ಮ ಉದ್ವೇಗ, ನಿರಾಸಕ್ತಿಯನ್ನು ತೋರಿಸಬಹುದು.

ದೃಶ್ಯ ಮಾಧ್ಯಮದ ಬಳಕೆಯಿಲ್ಲದೇ ಭಾವನೆಗಳ ನವರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ) ಧ್ವನಿಯಲ್ಲಿ ಮೂಡಿಸಬಹುದು. ಅಷ್ಟೇ ಅಲ್ಲ, ಯಾರು ತಮ್ಮ ಧ್ವನಿಯ ಕಂಪನವನ್ನು, ನಿಯಂತ್ರಣದಲ್ಲಿ, ಮೇಲೆ-ಕೆಳಗೆ ಸಮರ್ಪಕವಾಗಿ ಮಾಡಬಲ್ಲರೋ ಅವರು ಇನ್ನೋರ್ವ ವ್ಯಕ್ತಿಯ ಧ್ವನಿಯನ್ನೂ ಪ್ರತಿರೂಪಿಸಬಲ್ಲರು. ಸಿನಿಮಾ/ಟಿವಿ ಯಲ್ಲಿ ಇದನ್ನು “ವಾಯ್ಸ್ ಆರ್ಟಿಸ್ಟ್” ಗಳು ಸಮರ್ಪಕವಾಗಿ ಬಳಸುತ್ತಾರೆ. ಕೀರಲು-ಗಡಸು ಧ್ವನಿಯಿಂದ ಅವರು ಹೆಂಗಸು ಮತ್ತು ಗಂಡಸಿನ ಧ್ವನಿಯಲ್ಲಿ ಹಾಡಲೂ ಬಲ್ಲರು. ಈ ನಿಯಂತ್ರಣ ಅವರಿಗೆ ಸಾಕಷ್ಟು ಪರಿಶ್ರಮದಿಂದ ಬಂದಿರುತ್ತದೆ, ಹಾಗಾಗಿ ಈ ಕಲೆಯನ್ನು ಎಲ್ಲರೂ ಕಲಿಯಬಹುದು.

ಕೆಲವು ಭಾಷೆಗಳಲ್ಲಿ ಹೆಚ್ಚಿನ ನಾದಗಳ (ಟೋನ್) ಬಳಕೆ ಇರುತ್ತದೆ, ಉದಾ: ಚೈನೀಸ್ ಭಾಷೆಯಲ್ಲಿ ಸಾಧಾರಣವಾಗಿ ನಾಲ್ಕು ನಾದಗಳಿದ್ದರೆ, ಲಾಓಸ್, ಥಾಯ್ಲೆಂಡ್, ವಿಯಟ್ನಾಮ್, ಚೈನಾ ಪ್ರದೇಶದಲ್ಲಿ ಮಾತನಾಡುವ ಹಮೊಂಗ್ (ಚೈನೀಸ್) ಭಾಷೆಯಲ್ಲಿ ಉನ್ನತ, ಮಧ್ಯಮ, ಕೆಳಮಟ್ಟದ, ಏರುತ್ತಿರುವ, ಇಳಿಯುತ್ತಿರುವ  ನಾದಗಳ ಸಂಯೋಗದಿಂದ ಒಂದೇ ಪದಕ್ಕೆ ಎಂಟು ಅರ್ಥ ಕಲ್ಪಿಸಬಹುದು. ಆದ್ದರಿಂದ ಧ್ವನಿಯ  ಏರಿಳಿತಗಳನ್ನು ಸರಿಯಾಗಿ ತಿಳಿದಿರಬೇಕು. ಚೈನೀಸ್ ಭಾಷೆಗೆ ಹೋಲಿಸಿದರೆ ಇಂಗ್ಲಿಷ್ ಭಾಷೆಯನ್ನು ನಾದರಹಿತ ಭಾಷೆ ಎಂದೇ ಕರೆಯಬಹುದು. ಆದ್ದರಿಂದ ಇಂಗ್ಲಿಷ್ ಭಾಷಾ ಮೂಲದ ಜನರಿಗೆ ಚೈನೀಸ್ ಭಾಷೆ ಕಲಿಯುವುದು ಕಷ್ಟಕರ ಎನಿಸಬಹುದು. ಒಂದು ಭಾಷೆ ಕರತಲಾಮಲಕವಾಗಿರುವವರಿಗೆ ಇನ್ನೊಂದು ವಿಭಿನ್ನ ಭಾಷೆಯ ಪದಗಳನ್ನು ಉಚ್ಚಾರ ಮಾಡುವುದೂ ಕಷ್ಟವೆನಿಸಬಹುದು. ಉತ್ತರ ಭಾರತದವರು ದಕ್ಷಿಣದ ರಾಜ್ಯಗಳನ್ನು ಕರ್ನಾಟಕ್, ಕೇರಳ್, ಎನ್ನುವುದನ್ನು ನೀವು ಕೇಳಿರಬಹುದು.

ಓದುವುದೂ ಸಹ ಒಂದು ಕಲೆ. ಭಾವನಾತ್ಮಕವಾಗಿ ಬರೆದ ವಾಕ್ಯವನ್ನು ನಿರ್ಜೀವವಾಗಿಸಿ ಓದುವ ಸುದ್ದಿವಾಚಕರೂ ಇದ್ದಾರೆ, ಅದೇ ರೀತಿ ಏನೂ ಇಲ್ಲದ ಸುದ್ದಿಯನ್ನು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಎಂದು ಅರಚುವವರೂ ಇದ್ದಾರೆ. ಆದ್ದರಿಂದ ಗಟ್ಟಿಯಾಗಿ ಓದುವ ಮುಂಚೆ, ಬರೆದಿರುವ ವಾಕ್ಯವನ್ನಷ್ಟೇ ಅಲ್ಲ, ಸಂಪೂರ್ಣ ಪರಿಚ್ಛೇದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಂಡು, ಅದರ ಭಾವಾರ್ಥ ಅರಗಿಸಿಕೊಂಡು, ಯಾವ ಪದಗಳಿಗೆ ಎಷ್ಟು ಒತ್ತು ನೀಡಿ, ಯಾವ ಭಾವನೆ ವ್ಯಕ್ತ ಪಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಷ್ಟು ಭಾಷಾಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ಲೇಖಕರು ಭಾಷೆಯನ್ನು ಹೇಗೆ ಶಕ್ತಿಶಾಲಿಯಾಗಿ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ ಬರೆಯಬೇಕೆಂದಿರುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಸಾಕಷ್ಟು ಸಂಶೋಧನೆ ಇಲ್ಲದ ಬರವಣಿಗೆಯಲ್ಲಿ ಶಕ್ತಿ ಇರುವುದಿಲ್ಲ. ಹತ್ತು ಪುಟಗಳಷ್ಟು ಓದಿದರೆ ಒಂದು ಪುಟದಷ್ಟು ಸಾರಾಂಶ ಮಾಡಿಕೊಳ್ಳಬಹುದು. ಹತ್ತು ಪುಟದ ಸಾರಾಂಶವನ್ನು ಬರೆಯಲು ಪ್ರಾರಂಬಿಸಿದರೆ ಒಂದು ಪುಟದ ಲೇಖನವಾಗುತ್ತದೆ. ಅಂದರೆ ಒಂದು ಪುಟ ಬರೆಯಲು ನೂರು ಪುಟ ಓದಬೇಕು. ಆದ್ದರಿಂದ ನಾವು ಬರೆಯುವುದಕ್ಕಿಂತ ಹೆಚ್ಚು ಏಕೆ ಓದುತ್ತೇವೆ ಅಥವಾ ಹೆಚ್ಚು ಮಾತನಾಡುತ್ತೇವೆ ಎಂಬುದು ಸ್ಪಷ್ಟವಾಗಿರಬಹುದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...