- Advertisement -
- Advertisement -
ಇಂದು ವಿಶ್ವಾಸಮತ ಸಾಬೀತಮಾಡದೇ ನಾಳೆ ಸದನ ಕಲಾಪ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 1:30 ರೊಳಗೆ ಬಹುಮತ ಸಾಬೀತುಪಡಿಸುವಂತೆ ಸಿಎಂ ಕುಮಾರಸ್ವಾಮಿಯವರಿಗೆ ರಾಜ್ಯಪಾಲ ವಜುಬಾಯಿ ವಾಲಾರವರು ಪತ್ರ ಬರೆದಿದ್ದಾರೆ. ಆ ಪತ್ರವನ್ನು ಸ್ಪೀಕರ್ ರವರಿಗೂ ಕಾಪಿ ಮಾಡಿದ್ದಾರೆ.
ಇದರಿಂದ ನಾಳೆ ಸದನದಲ್ಲಿ ಮತ್ತಷ್ಟು ಬಿಕ್ಕಟ್ಟು ಉಲ್ಬಣವಾಗಲಿದ್ದು ಪರ ವಿರೋಧದ ಚರ್ಚೆಗಳು ನಡೆಯುವ ಸಂಭವವಿದೆ. ಸ್ಪೀಕರ್ ರವರು ಸಿದ್ದರಾಮಯ್ಯನವರು ಎತ್ತಿರುವ “ಶಾಸಕಾಂಗ ಪಕ್ಷ ವಿಪ್ ನೀಡಬಹುದಲ್ಲವೇ?” ಎಂಬ ಪ್ರಶ್ನೆಗೆ ರೂಲಿಂಗ್ ಕೊಡಬೇಕಿದೆ. ನಂತರವಷ್ಟೇ ವಿಶ್ವಾಸಮತ ಯಾಚನೆ ನಡೆಯಲಿದೆ.
ದಿನೇ ದಿನೇ ಒತ್ತಡ ಹೆಚ್ಚಾಗುತ್ತಿರುವ ಕಾರಣದಿಂದ ನಾಳೆ ಈ ಸರ್ಕಾರದ ಅಂತಿಮ ನಿರ್ಧಾರ ಪ್ರಕಟವಾಗುವ ಸಂಭವವಿದೆ.
payment to this nanugiuri is not easy way.
Sorry sir, You can use the option in Donate option in the top and bottom of the page.