Homeಅಂತರಾಷ್ಟ್ರೀಯಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

ಇರಾನ್ ಮೇಲೆ ಅಮೆರಿಕದ ಹದ್ದಿನ ಕಣ್ಣು

- Advertisement -
- Advertisement -

| ಭರತ್ ಹೆಬ್ಬಾಳ |

ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ.

ಅಮೆರಿಕದ ಕಾರ್ಯದರ್ಶಿ ಕೋಲಿನ್ ಪೊವೆಲ್ 2003, ಫೆಬ್ರುವರೀ 5ನೇ ತಾರೀಕು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ಒಂದು ವರದಿಯನ್ನು ನೀಡಿ ಮಾಡಿದ ಭಾಷಣ ಇರಾಕ್ ವಿರುದ್ದದ ಯುದ್ದಕ್ಕೆ ದಾರಿಮಾಡಿಕೊಟ್ಟಿತ್ತು. ಈ ಭಾಷಣದಲ್ಲಿ ಪೊವೆಲ್ ಅವರು ಸದ್ದಾಂ ಹುಸೇನ್ ಮತ್ತವರ ಆಡಳಿತವು ಉಗ್ರವಾದ ಪ್ರತಿಪಾದಿಸುವ ಅಲ್‍ಖೈದಾ ಅಂಗ ಸಂಘಟನೆಯ ಸಹಯೋಗದೊಂದಿಗೆ ರಾಸಾಯನಿಕ ಆಯುಧಗಳು ಮತ್ತು ಇನ್ನಷ್ಟು ವಿಧ್ವಂಸಕಾರಿ ಆಯುಧಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಮತ್ತದರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಪ್ರತಿಪಾದಿಸಿದ್ದರು. ತಾವು ಮಂಡಿಸಿದ ವರದಿಯಲ್ಲಿ ಬ್ರಿಟನ್ ಗೂಢಾಚಾರಿ ಸಂಸ್ಥೆ, ಉಪಗ್ರಹ ಚಿತ್ರಗಳು, ಆಡಿಯೋ ರೆಕಾರ್ಡಿಂಗ್ಸ್ ಮತ್ತು ಇನ್ನೂ ಇತರೆ ನಿರಾಕರಿಸಲಾಗದಂಥ ಪುರಾವೆಗಳೊಂದಿಗೆ ಇದೆ ಎಂದು ಒತ್ತು ಮಾಡಿ ಹೇಳಿದ್ದರು. ಈ ಘಟನೆಯ ಒಂದು ತಿಂಗಳ ನಂತರ ಅಮೆರಿಕ ಮತ್ತು ಹಿಂಬಾಲಕ ಪಡೆಗಳು ಇರಾಕ್ ಅನ್ನು ಬಾಂಬ್ಗಳ ಸುರಿಮಳೆಗೈದು ಧ್ವಂಸಗೊಳಿಸಿ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಮೇಲ್ಪಟ್ಟ ಜನ ಪ್ರಾಣ ಕಳೆದುಕೊಂಡಿದ್ದಾರೆ, ಅಷ್ಟೇ ಮಂದಿ ಆಂತರಿಕ ಹಾಗೂ ಅಂತರ್ರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ ಮತ್ತು ಇದಕ್ಕಾಗಿ ಅಮೆರಿಕ 1.06 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ. ಇರಾಕಿನಲ್ಲಿ ತಾನು ಹುಟ್ಟು ಹಾಕಿದ್ದ ಕ್ರೌರ್ಯದಿಂದ ಐಸಿಸ್ ಹುಟ್ಟಲು ಕಾರಣವಾಯಿತು.

ಆದರೆ ಬಹುತೇಕ ಮಾಧ್ಯಮಗಳು ಮರೆಮಾಚಿದ ಸಂಗತಿಯೆಂದರೆ ಕೋಲಿನ್ ಪೊವೆಲ್ ಮಂಡಿಸಿದ ಇರಾಕ್ ವಿರುದ್ದದ ವರದಿ ಒಂದು ಕೃತಿಚೌರ್ಯ ವರದಿಯಾಗಿದ್ದು ಅದನ್ನು ಕೇಂಬ್ರಿಡ್ಜ್ ಪ್ರೋಫೆಸರ್ ಗ್ಲೆನ್ ರಾಂಗ್ವಾಲ ಹೊರತಂದ ವಾಸ್ತವವನ್ನು ಕೆಲವೇ ಕೆಲವು ಮಾಧ್ಯಮಗಳು ಪ್ರಕಟಿಸಿದ್ದವು. ಆ ಹತ್ತೊಂಬತ್ತು ಪುಟಗಳ ವರದಿಯಲ್ಲಿ 6ರಿಂದ 16ರ ಪುಟಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಯ ಥೀಸಿಸ್ ಇಂದ ನೇರ ಕಾಪೀ ಪೇಸ್ಟ್ ಮಾಡಿದ ವರದಿ. ಆಗಿನ ಬ್ರಿಟಿಷ್ ಅಧ್ಯಕ್ಷ ಟೋನೀ ಬ್ಲೇರ್ ಆಫೀಸಿನಿಂದ ಬಂದದ್ದು ಎಂದು ಹೇಳಲಾಗುತ್ತಿದ್ದ ವರದಿ ಒಂದು ದೊಡ್ಡ ಕೃತಿಚೌರ್ಯ ದಾಖಲೆ. ಈ ಸುಳ್ಳು ದಾಖಲೆಯಿಂದ ತಮ್ಮೆಲ್ಲವನ್ನು ಕಳೆದುಕೊಂಡ ಇರಾಕ್ ಜನತೆ ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ಅಮೆರಿಕ ಮತ್ತದರ ಮಿತ್ರಪಡೆಗಳು ಉಪಯೋಗಿಸಿದ ಡೆಪ್ಲೀಟೆಡ್ ಯುರೇನೀಯಮ್ ಬಾಂಬ್ನಿಂದಾಗಿ ಆ ಪ್ರದೇಶಗಳಲ್ಲಿ ಹುಟ್ಟುವ ಅರ್ಧದಷ್ಟು ಮಕ್ಕಳು ಬರ್ತ್ ಡೆಫೆಕ್ಟ್ಸ್‍ಗಳಿಂದ ಹುಟ್ಟುತ್ತಿವೆ. 45% ಮಕ್ಕಳು ಹುಟ್ಟುವ ಮುಂಚಿತವಾಗಿ ಗರ್ಭದಲ್ಲೇ ಅಸುನೀಗುತ್ತವೆ. ಈ ಸಂಖ್ಯೆ ಯುದ್ದಕ್ಕೂ ಮುಂಚೆ 10%ಗಿಂತಲೂ ಕಡಿಮೆ ಇತ್ತು. ಇರಾಕ್‍ನಲ್ಲಿರುವ ಕಚ್ಚಾ ತೈಲವನ್ನು ಲಪಟಾಯಿಸಲು ಅಮೆರಿಕ ಕೊಟ್ಟ ಸಬೂಬು “ಸದ್ದಾಂ ತೊಲಗಿಸಿ ಪ್ರಜಾತಂತ್ರ (“ವಾಸ್ತವವಾಗಿ ಪಾಶ್ಚಾತ್ಯ ಬಂಡವಾಳಶಾಹಿ ಪ್ರಜಾತಂತ್ರ”) ತೆರುತ್ತೇವೆ” ಎಂದು.

ಮಧ್ಯಪ್ರಾಚ್ಯ ಕಚ್ಚಾ ತೈಲದ ನಿಯಂತ್ರಣವನ್ನು ತಮ್ಮ ತಮ್ಮ ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿಯೇ ಇಟ್ಟುಕೊಳ್ಳಲು ಈಗ ಮತ್ತೆ ಅದೇ ಯುದ್ದ ರಾಗವನ್ನು ಇರಾನ್ ವಿರುದ್ಧ ಉಪಯೋಗಿಸುತ್ತಿದ್ದಾರೆ. ದಶಕಗಳಿಂದ ಮಧ್ಯಪ್ರಾಚ್ಯ ಏಶಿಯಾವನ್ನು ಯುದ್ದ ನಕ್ಷೆಯಂತೆ ಉಪಯೋಗಿಸುತ್ತಿರುವ ಪಾಶ್ಚಾತ್ಯ ಶಕ್ತಿಗಳು ಈಗ ಇರಾನ್ ಮೇಲೆ ಕಣ್ಣಿಟ್ಟಿದೆ. ಪುರಾತನ ಕಾಲದಿಂದಲೂ ದೀರ್ಘ ಮತ್ತು ಮಹತ್ತರ ಇತಿಹಾಸ ಹೊಂದಿರುವ ಇರಾನ್, ಪ್ರಪಂಚದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ನಿಕ್ಷೇಪಗಳು ಮತ್ತು ಪ್ರಪಂಚದ ಎರಡನೇ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರ. 1953ರಲ್ಲಿ ಅಮೆರಿಕ ಮತ್ತು ಬ್ರಿಟಿಷ್ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಇರಾನ್ ದೇಶದ ಕಚ್ಚಾ ತೈಲ ನಿಕ್ಷೇಪಗಳ ರಾಷ್ಟ್ರೀಕರಣ ಮಾಡಲೆತ್ನಿಸಿದ ಮೊಹಮ್ಮೆದ್ ಮೊಸ್ಸಾದೇಘ್ನನ್ನು ಕಿತ್ತೊಗೆದು ತನ್ನ ಕೈಗೊಂಬೆ ಶಾಹ್ ರೆಜû ಪಲ್ಹಾವಿ ಯನ್ನು ಕೂರಿಸಿತು. ಶಾಹ್ ಆಡಳಿತ ಇರಾನಿನ ಜನರ ಮೇಲೆ ಅತ್ಯಂತ ಕ್ರೂರವಾಗಿತ್ತು. 1979 ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ಜನತೆ ಶಾಹ್ ಮತ್ತು ತಮ್ಮ ದೇಶದಲ್ಲಿನ ಪಾಶ್ಚಾತ್ಯ ಹಸ್ತಕ್ಷೇಪವನ್ನು ತೊಲಗಿಸಿತು ಮತ್ತು ತನ್ನ ತೈಲ ಬಾವಿಗಳನ್ನು ಹಿಂಪಡೆಯಿತು. ಆಗಿನಿಂದಲೂ 40 ವರ್ಷಗಳ ಕಾಲ ಸರಕುಗಳು, ಔಷಧಿಗಳು, ಆರ್ಥಿಕ, ವೈಜ್ಞಾನಿಕ ನಿರ್ಬಂಧಗಳನ್ನು ಎದುರಿಸುತ್ತಾ ಬಂದಿದೆ.

ನಲವತ್ತು ವರುಷಗಳಿಂದ ಈ ನಿರ್ಬಂಧಗಳ ನಡುವೆಯೂ ಇರಾನ್ ಸಾಕಷ್ಟು ಸಾಧಿಸಿದೆ. ಪ್ರತಿರೋಧದ ಹೆಸರಿನಲ್ಲಿ ಇಸ್ಲಾಮಿಕ್ ಕ್ರಾಂತಿಯ ಆಶಯಗಳಿಗೆ ನಿಷ್ಠೆಯಿಂದ ದುಡಿಯುವ ಇರಾನಿಯನ್ ರೆವೊಲ್ಯೂಶನರೀ ಗಾರ್ಡ್ಸ್ ಸೇನೆ. ಕ್ಯೂಬ ನಂತರ ನಿರ್ಬಂಧಗಳ ಹೊರತಾಗಿಯೂ ಪ್ರಗತಿ ಸಾಧಿಸಿರುವುದೇ ಇರಾನಿನ ಬಹುದೊಡ್ಡ ಸಾಧನೆ. ಇರಾಕಿನ ದ್ವಂಸದ ನಂತರ ಅಲ್ಲಿನ ಸ್ಥಳೀಯ ನಾಯಕತ್ವವನ್ನು ಇರಾನ್ ಬೆಳೆಸಿದೆ. ಇಸ್ರೇಲ್ಗೆ ಸವಾಲೊಡ್ಡುವ ಲೆಬೆನನ್ ಹೆಜ್ ಬೊಲ್ಲ ಬೆಳೆಸಿದೆ, ಸೌದಿಗೆ ಸವಾಲೊಡ್ಡುವ ಹೌತಿ ಪ್ರತಿರೋಧವನ್ನು ಹುಟ್ಟು ಹಾಕಿದೆ ಇರಾನ್. ತನ್ನದೇ ಕ್ಷಿಪಣಿಗಳನ್ನು ತಯಾರಿಸುವುದೇ ಅಲ್ಲದೆ ಹೊರದೇಶಗಳ ವೈಜ್ಞಾನಿಕ ಸಹಾಯವಿಲ್ಲದೆ ಅಣು ವಿಜ್ಞಾನದಲ್ಲೂ ಬಹಳಷ್ಟು ಸಾಧಿಸಿದೆ. ಮುಖ್ಯವಾಗಿ ಇರಾನ್ ಏಳಿಗೆಯನ್ನು ಸಹಿಸಲಾಗದ ಸೌದಿ ಮತ್ತು ಇಸ್ರೇಲ್ ಅಮೆರಿಕದ ಯುದ್ದಕೋರ ಬಣವನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಿದ್ದಾರೆ. ಇದರ ಸಲುವಾಗಿಯೇ ಒಬಾಮಾ ಆಡಳಿತ ಚೀನಾ, ರಶಿಯ, ಜರ್ಮನೀ, ಫ್ರಾನ್ಸ್, ಇರಾನ್ ಜೊತೆ ಮಾತುಕತೆ ನಡೆಸಿ Joint Comprehensive Plan of Action (JCPOA) ಒಪ್ಪಂದವನ್ನು 2015 ಜುಲೈ ತಿಂಗಳಲ್ಲಿ ಮಾಡಿಕೊಂಡಿತ್ತು. ಅದನ್ನು ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ಮುರಿದು ಮತ್ತೆ ಯುದ್ದದ ಮಾತುಗಳನ್ನು ಆಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಣ ಈ ಬಿಕ್ಕಟ್ಟು 1979ರ ಬಿಕ್ಕಟ್ಟನ್ನು ನೆನಪಿಸುತ್ತಿದೆ.

ಹದಿನಾರು ವರ್ಷದ ಹಿಂದೆ ಕೋಲಿನ್ ಪೊವೆಲ್ ಹೇಗೆ ಸುಳ್ಳು ಹೇಳಿ ಇರಾಕ್ ವಿರುದ್ದದ ಯುದ್ದ ಶುರು ಮಾಡಿದ್ದಾರೋ ಹಾಗೆ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಇರಾನ್ ಅಣು ಬಾಂಬ್‍ಗಳನ್ನು ತಯಾರಿಸುತ್ತಿದೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ಹೇಳಿ ಯುದ್ದಕ್ಕೆ ಸಜ್ಜಾಗುತ್ತಿದ್ದಾರೆ. ಜಾರ್ಜ್ ಬುಷ್ ಹೇಗೆ ಇರಾಕ್ ಅನ್ನು ಬೆದರಿಸಿ ದಾಳಿ ನೆಡೆಸಿದನೋ ಅದೇ ರೀತಿ ಟ್ರಂಪ್ ಇರಾನ್ ವಿರುದ್ದ ಬೆದರಿಕೆಗಳನ್ನು ಒಡ್ಡುತ್ತಿದ್ದಾನೆ. ಅಮೆರಿಕದ ಮಾಧ್ಯಮಗಳು ಕೂಡ (ಲಿಬರಲ್ ಪತ್ರಿಕೆಗಳು ಸೇರಿದಂತೆ) ಯುದ್ದವನ್ನು ಉತ್ತೇಜಿಸುವ ಪ್ರಚಾರವನ್ನೇ ಪತ್ರಿಕೋದ್ಯಮವನ್ನಾಗಿ ಮಾಡಿಕೊಂಡಿದೆ. ಈಗ ಅದು ಇರಾನಿನ ಮೇಲೆ ಕಡಿಮೆ ಇಳುವರಿ ಇರುವ ನಿರ್ದಿಷ್ಟ ಅಣು ಬಾಂಬ್ಗಳನ್ನು ಹಾಕಬೇಕು ಎಂಬ ಸಲಹೆಯನ್ನು ಟ್ರಂಪ್ ಆಡಳಿತಕ್ಕೆ ನೀಡುತ್ತಿದೆ. ಸೌದಿ, ಇಸ್ರೇಲ್, ಅಮೆರಿಕ ಒಂದು ಕಡೆಯಾದರೆ ಇರಾನ್, ರಶಿಯ, ಚೀನಾ, ಸಿರಿಯ, ಹಿeóïಬೊಲ್ಲ ಇನ್ನೊಂದು ಕಡೆ.

ಆದರೆ ಇರಾನ್ ಇವೆಲ್ಲದಕ್ಕೂ ಸಜ್ಜಾಗಿದೆ ಎಂದು ಸ್ಪಷ್ಟ ಸಂದೇಶ ಅಮೆರಿಕಗೆ ರವಾನಿಸಿದೆ. ತನ್ನ ಮೇಲೆ ದಾಳಿ ಆದಲ್ಲಿ ಅಮೆರಿಕ ಮಿಲಿಟರೀ ಬೇಸ್ ಇರುವ ತನ್ನ ಸುತ್ತಮುತ್ತಲಿನ ರಾಷ್ಟ್ರಗಳೆಲ್ಲವನ್ನು ಶತ್ರು ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದೆ. ಕಾನೂನುಬಾಹಿರ ನಿರ್ಬಂಧಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇರಾನ್ ಹೇಗೆ ಪುಟಿದೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚೀನಾ ಮತ್ತು ರಶಿಯ ಕೂಡ ಬಲವಾಗಿ ಇರಾನ್ ಜೊತೆಗೆ ನಿಂತರೆ ಭಾರತ ಅಮೆರಿಕ ಮಾತುಗಳನ್ನು ಕೇಳಿ ಮೇ ತಿಂಗಳಿನಿಂದ ಇರಾನ್‍ನಿಂದ ತೈಲ ಆಮದು ನಿಲ್ಲಿಸಿದೆ. ಇರಾನ್ ವಿರುದ್ದ ಅಮೆರಿಕ ದಾಳಿ ಮಾಡಿದ್ದೆ ಆದಲ್ಲಿ ಅದರ ಪರಿಣಾಮ ಪ್ರಪಂಚದ ಎಲ್ಲ ದೇಶಗಳನ್ನು ತೀವ್ರ ಬಿಕ್ಕಟ್ಟಿಗೆ ತಳ್ಳುತ್ತದೆ. ತೈಲ ಬೆಲೆ ಗಗನಕ್ಕೇರುತ್ತವೆ. 1928 ರಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಕುಸಿತಕ್ಕಿಂತ ತೀವ್ರವಾಗಿರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...