Homeಮುಖಪುಟಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

ಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

- Advertisement -
- Advertisement -

ಗೃಹ ಸಚಿವ ಅಮಿತ್ ಶಾ 370ನೇ ವಿಧಿಯ ರದ್ದು ಮಾಡಿ ಎಂಟ್ಹತ್ತು ದಿನಗಳು ಕಳೆದಿವೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ದೇಶಾದ್ಯಂತ ಸಂಭ್ರಮವಿದೆ ಎಂದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದವಷ್ಟೇ. ಆದರೆ ಕಾಶ್ಮೀರದ ನಿವಾಸಿಗಳು ಮತ್ತು ಹೊರಗಡೆ ಇರುವ ಕಾಶ್ಮೀರಿಗಳ ಧ್ವನಿ, ಅಭಿಪ್ರಾಯಗಳ ಸುದ್ದಿ ಕಾಣಲೇ ಇಲ್ಲ, ಕೇಳಿಸಲೇ ಇಲ್ಲ. ಕಾಶ್ಮೀರದಲ್ಲಿನ ಸಂಪರ್ಕ ವ್ಯವಸ್ಥೆಯನ್ನೇ ಬರಖಾಸ್ತು ಮಾಡಲಾಗಿತ್ತು. ಮೊಬೈಲ್, ಲ್ಯಾಂಡ್‍ಲೈನ್, ಇಂಟರ್‍ನೆಟ್ ಸಂಪರ್ಕಗಳನ್ನೆಲ್ಲ ಕಡಿತಗೊಳಿಸಲಾಗಿತ್ತು. ಮೊದಲೇ ವಿಶ್ವದ ಅತಿದೊಡ್ಡ ಮಿಲಿಟರಿ ಪ್ರದೇಶವೆಂದು ಗುರುತಿಸಲ್ಪಟ್ಟ ಕಾಶ್ಮೀರದೊಳಕ್ಕೆ, 370 ವಿಧಿ ರದ್ದು ಘೋಷಿಸುವ ಪೂರ್ವದಲ್ಲಿ ಮತ್ತೆ 46 ಸಾವಿರ ಸೈನಿಕರನ್ನು ನುಗ್ಗಿಸಿ ಪಹರೆಗೆ ಬಿಡಲಾಯಿತು.

ಇವತ್ತಿಗೆ (ಮಂಗಳವಾರ) ಅಲ್ಲಿ ಸ್ಥಳಿಯ ಸುದ್ದಿ ಪತ್ರಿಕೆಗಳು ಬಿಡುಗಡೆ ಆಗದೇ 10 ದಿನ ಕಳೆದವು. ಕೊನೆಯ ಬಾರಿ ಅಲ್ಲಿ ಸ್ಥಳೀಯ ಪತ್ರಿಕೆ ಪ್ರಕಟವಾಗಿದ್ದು ಆಗಸ್ಟ್ 4ರಂದು. ಸರ್ಕಾರ ನೀಡಿದ ಪ್ರಕಟಣೆಗಳಷ್ಟೇ ಕಾಶ್ಮೀರದಲ್ಲಿ ಎಲ್ಲ ಸರಿಯಾಗಿದೆ ಎಂಬ ವಿವರ ನೀಡುತ್ತಿದ್ದವು. ಆ ಪ್ರದೇಶದಲ್ಲಿರುವ ಭಾರತೀಯ ಪತ್ರಕರ್ತರಿಗೂ ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪರಿಸ್ಥಿತಿಯ ಚರ್ಚೆ ಕಡಿಮೆ ಆಗತೊಡಗಿದಂತೆ ಹಲವು ಮಾಧ್ಯಮ ಧ್ವನಿಗಳು ಸತ್ಯ ಹೇಳತೊಡಗಿದವು. ಆಗ ಗೊತ್ತಾಗಿದ್ದು ಕೇಂದ್ರ ಸರ್ಕಾರ ಮಾತ್ತು ಭಾರತದ ಮುಖ್ಯವಾಹಿನಿಗಳು ಹೇಳಿದಂತೆ ಪರಿಸ್ಥಿತಿ ನಾರ್ಮಲ್ ಆಗಿರಲೇ ಇಲ್ಲ! ಸತ್ಯ ಏನಾಗಿತ್ತೆಂದರೆ, ಜನರಲ್ಲಿ ಆಕ್ರೋಶ ತುಂಬಿತ್ತು, ಆಹಾರ ಮತ್ತು ಔಷಧಿಗಳ ಕೊರತೆಯಾಗಿತ್ತು, ತುರ್ತು ಚಿಕಿತ್ಸೆಯ ನೆರವೂ ಸಿಗದೇ ಜನ ಪ್ರಾಣಾಪಾಯ ಎದುರಿಸಿದರು, ಕೆಲವು ಕಿಲೋಮೀಟರ್ ಪ್ರಯಾಣಿಸಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ಗಂಟೆಗಟ್ಟಲೇ ಕಾದಿದ್ದರು….ಆದರೆ, ಸರ್ಕಾರಿ ವಾಹನಗಳು ಸಂಚರಿಸುತ್ತಿದ್ದ ಕೆಲವೇ ಕೆಲವು ರಸ್ತೆಗಳನ್ನು ತೋರಿಸಿದ ಮುಖ್ಯ ವಾಹಿನಿ ಮಾಧ್ಯಮಗಳು ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸುವ ಮೂಲಕ ಆತ್ಮವಂಚನೆ ಮಾಡಿಕೊಂಡು , ವೃತ್ತಿದ್ರೋಹವನ್ನೂ ಎಸಗಿದ್ದವು.

370ನೇ ವಿಧಿ ರದ್ದಾದ ಎರಡು ದಿನಗಳ ನಂತರ ರಕ್ಷಣಾ ಸಲಹೆಗಾರ ಅಜಿತ್ ದೋವಲಲ್ ಕಾಶ್ಮೀರಕ್ಕೆ ಹೋಗಿ ಕೆಲವು ಜನರ ಜೊತೆ ಬಿರ್ಯಾನಿ ತಿನ್ನುವ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ ಮಾಧ್ಯಮಗಳು, ‘ನೋಡಿ ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ. 370ನೇ ವಿಧಿ ರದ್ಧತಿಯ ನಂತರವೂ ಜನತೆ ಯಾವ ಪ್ರತಿರೋಧ ಮಾಡದೇ ಸಮ್ಮತಿಸಿದ್ದಾರೆ’ ಎಂಬ ಚಿತ್ರಣ ಕೊಡಲು ನಮ್ಮ ಮಾಧ್ಯಮಗಳು ಯತ್ನಿಸಿದವು.

ಕಾಶ್ಮೀರದ ಈ ‘ಸಹಜ’ ಪರಿಸ್ಥಿತಿಯನ್ನು ಮತ್ತು ‘ಸಂತೋಷ’ವಾಗಿರುವ ಕಾಶ್ಮೀರಿಗಳನ್ನು ಖುದ್ದಾಗಿ ನೋಡಿ ಅನುಭವಿಸಉ ಹೊರಟ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲೇ ತಡೆದು ದಹಲಿಗೆ ವಾಪಸ್ ಕಳಿಸಲಾಯಿತು. ಮರುದಿನ ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಇಂಥದ್ದೇ ಪ್ರಯತ್ನ ಮಾಡಿದಾಗ ಅವರನ್ನು ಶ್ರೀನಗರ ಪ್ರವೇಶಿಸದಂತೆ ತಡೆದು ದೆಹಲಿಗೆ ವಾಪಸ್ ಕಳಿಸಲಾಯಿತು.

ಪ್ರತಿದಿನವೂ ದೆಹಲಿಯಿಂದ ಬಿಡುಗಡೆಗೊಳ್ಳುತ್ತಿದ್ದ ಜನರಿರುವ ಮಾರ್ಕೆಟ್‍ಗಳು, ಜನ ತುಂಬಿರುವ ರಸ್ತೆಗಳು, ಹಬ್ಬಕ್ಕೂ ಮೊದಲೇ ತೆರೆದ ಮಸೀದಿಗಳ ಚಿತ್ರ ಮತ್ತು ವಿಡಿಯೋಗಳನ್ನೇ ಸತ್ಯ ಎಂಬಂತೆ ಚಾನೆಲ್‍ಗಳು ಪ್ರಸಾರ ಮಾಡಿದವು. ಕೆಲವು ಮಾಧ್ಯಮಗಳಂತೂ ಅಲ್ಲಿ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುಳ್ಳು ವರದಿ ಮಾಡಿಬಿಟ್ಟವೂ ಕೂಡ.

ಕಾಶ್ಮೀರದಲ್ಲಿ ‘ಎಲ್ಲವೂ ಸರಿಯಿದೆ’; ಆದರೆ ನಿಜವಾಗಿಯೂ ಅಲ್ಲ….

ಆಗಸ್ಟ್ 8ರಂದು ದಿ ವೈರ್ ಸುದ್ದಿ ಪೋರ್ಟಲ್‍ನ ಸಂಪಾದಕ ಸಿದ್ದಾರ್ಥ ವರದರಾಜನ್ ಕಾಶ್ಮೀರದ ಕೆಲವು ಫೂಟೇಜ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸತ್ಯದ ದರ್ಶನ ಮಾಡಿಸಿದರು. ಪೆಲೆಟ್ ಗುಂಡುಗಳಿಂದ ಕಣ್ಣುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಹಲವರೊಂದಿಗೆ ಸಿದ್ದಾರ್ಥರು ಮಾತಾಡಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಈ ಗತಿ ಎಂದು ಕೆಲವರು ಹೇಳಿದರೆ, ಸುಮ್ಮನೇ ಇದ್ದ ನಮ್ಮ ಮೇಲೂ ಮಿಲಿಟರಿಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದ್ದರು. ಮರುದಿನ ಆಗಸ್ಟ್ 8ರಂದು ಎನ್‍ಡಿಟಿವಿ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಯ ಪ್ರಕಾರ, ಕಾರ್ಗಿಲ್ ಪ್ರದೇಶದಲ್ಲಿ 370 ವಿಧಿ ರದ್ದತಿ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು ಮತ್ತು ಬಹುಪಾಲು ಪ್ರದೇಶದಲ್ಲಿ ಕಫ್ರ್ಯೂ ಇನ್ನೂ ಜಾರಿಯಲ್ಲಿತ್ತು.

 

 

 

 

 

ಮೊನ್ನೆ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಶ್ರೀನಗರದ ರಸ್ತೆಗಳಲ್ಲಿ ಕಾಶ್ಮೀರದ ಧ್ವಜಗಳನ್ನು ಹಿಡಿದು, ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ ಶಾಂತಿಯುತ ಪ್ರತಿಭಟನೆಯಲ್ಲಿ ಸಾಗುವಾಗ ಭಾರತೀಯ ಸೇನೆ ಅವರತ್ತ ಗುಂಡು ಹಾರಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 

ಶುಕ್ರವಾರದ ಪ್ರಾರ್ಥನೆಯ ನಂತರ ಶ್ರೀನಗರ ಸೇರಿ ಹಲವು ಕಡೆ ವಿಧಿ ರದ್ದತಿ ವಿರೋಧಿಸಿ ಬೃಹತ್ ಪ್ತಿಭಟನೆಗಳು ಜರುಗಿದ ಫೂಟೇಜ್‍ಗಳನ್ನು ಮರುದಿನ ಬಿಬಿಸಿ ಪ್ರಸಾರ ಮಾಡಿತು. ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆಗಳು ನಡೆದಿದ್ದನ್ನು, ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಸಿಡಿಸಿದ್ದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಫೋಟೊ ಮತ್ತು ವಿಡಿಯೋಗಳ ಮೂಲಕ ಅಲ್ ಜಝೀರಾ, ವಾಶಿಂಗ್ಟನ್ ಪೋಸ್ಟ್, ರ್ಯೂಟರ್ಸ್ ಸುದ್ದಿಸಂಸ್ಥೆಗಳು ಮಾಡಿದವು. ಬಿಬಿಸಿ, ಅಲ್ ಜಝೀರಾ, ರ್ಯೂಟರ್ಸ್‍ಗಳ ಸುದ್ದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ ನಂತರದಲ್ಲಿ, ಕೆಲವು ಕಲ್ಲು ತೂರುವ ಘಟನೆಗಳು ಸಂಭವಿಸಿವೆ , ಆದರೆ ಅವರ ಮೇಲೆ ಬಲ ಪ್ರಯೋಗಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕಾಶ್ಮೀರ ಕಣಿವೆಯ ಮೂಲೆಮೂಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ, ಪುಟ್ಟ ಹಳ್ಳಿಗಳ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸೈನಿಕನನ್ನು ಪಹರೆಗೆ ನಿಲ್ಲಿಸಲಾಗಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಬಹಳಷ್ಟು ಕಡೆ ಕಲ್ಲು ತೂರಾಟದ ಮೂಲಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ ಮತ್ತು ಕಾಶ್ಮೀರದ ಜನರಲ್ಲಿ ಈಗ ದೊಡ್ಡ ಅಸಹನೆ ತುಂಬಿದೆ ಎಂಬುದನ್ನು ಹಲವು ಸೈನಿಕರೇ ಒಪ್ಪಿಕೊಂಡಿರುವುದನ್ನು ನಿರೂಪಿಸಿದೆ.

ಆದರೆ, ಇದೇ ಹೊತ್ತಲ್ಲಿ ಭಾರತೀಯ ಮಾಧ್ಯಮಗಳು ವಿಷಯಾಂತರ ಮಾಡಿ, ಪಾಕಿಸ್ತಾನದ ಕೋಪಿತ ನಡವಳಿಕೆಯ ಕುರಿತು ಸುದ್ದಿ ಮಾಡುತ್ತ, ಭಾರತ ತಕ್ಷಣದ ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಸುದ್ದಿ ಮಾಡುತ್ತಿದ್ದವು. ‘ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಬಿಪಿನ್ ರಾವತ್ ಹೇಳುವ ವಿಡಿಯೋವನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತು. ಜೀ ನ್ಯೂಸ್, ಆಜ್‍ತಕ್ ಮತ್ತು ರಿಪಬ್ಲಿಕ್ ಟಿವಿಗಳು ಸೈನಿಕರನ್ನು ಮಾತಾಡಿಸಿ, ‘ನೋಡಿ ಜೋಶ್ ಹೇಗಿದೆ’ ಎಂದೆಲ್ಲ ಅಪ್ರಬುದ್ಧ ವರದಿಗಳನ್ನು ಮಾಡುತ್ತಿವೆ. ಇದೊಂದು ಭಾರತೀಯ ಮೀಡಿಯಾದ ಸಹಜ ಹುಚ್ಚಾಟದ ಪ್ರದರ್ಶನದಂತಿದೆ: ಸರ್ಕಾರದ ವಕ್ತಾರರಂತೆ ಕೆಲಸ ಮಾಡಲು ಸುಳ್ಳನ್ನು ಹರಡುವುದು, ಅದು ಬಯಲಾದಾಗ ವಿಷಯಾಂತರ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವುದು….

ಮೊದಲೇ ಸಮಸ್ಯಾತ್ಮಕವಾಗಿದ್ದ ಪ್ರದೇಶದಲ್ಲಿ ಭಾರತ ಸರ್ಕಾರವು ಈಗ ಬೆಂಕಿಯನ್ನು ಹಾಕಿದೆ. ಕಾಲವಷ್ಟೇ ಉತ್ತರ ಹೇಳಲಿದೆ: ಇದು ಐತಿಹಾಸಿಕ ಜಯವೋ ಅಥವಾ ಐತಿಹಾಸಿಕ ಪ್ರಮಾದವೋ ಎಂಬುದನ್ನು. ಆದರೆ ಸದ್ಯದ ಪ್ರತಿಭಟನೆ, ಪ್ರತಿರೋಧಗಳನ್ನು ನೋಡಿದರೆ, ಕಾಶ್ಮೀರ ನನ್ನ ಪ್ರದೇಶ, ಆದರೆ ಅಲ್ಲಿನ ಜನ ನಮ್ಮವರಲ್ಲ ಎಂಬ ಭಾವ ಪ್ರದರ್ಶಿಸುತ್ತಿರುವ ದೇಶವು ಕಾಶ್ಮೀರದಲ್ಲಿ ಮುಳ್ಳಿನ ಹಾದಿಯನ್ನು ಸವೆಸಬೇಕಾಗಲಿದೆ. ಈಗ ಮಾತುಕತೆ ಮತ್ತು ಸಹನೆಯ ಅಗತ್ಯತೆಯ ಕಾಲ, ‘ಜೋಶ್’ನ ಕಾಲವಲ್ಲ. ಏಕೆಂದರೆ, ಜೋಶ್‍ನಲ್ಲಿ ಜೀವಗಳು ಮತ್ತು ಹಕ್ಕುಗಳು ಮರಣಕ್ಕೀಡಾಗುತ್ತವೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...