Homeಅಂತರಾಷ್ಟ್ರೀಯಸ್ಪೇನ್ ಪಾರ್ಲಿಮೆಂಟಿನಲ್ಲಿನ ಧ್ರುವೀಕರಣ; ಸಾರ್ವತ್ರಿಕ ಚುನಾವಣೆಯಲ್ಲಿ ಉಂಟಾದ ನೂತನ ಸಮತೋಲನ

ಸ್ಪೇನ್ ಪಾರ್ಲಿಮೆಂಟಿನಲ್ಲಿನ ಧ್ರುವೀಕರಣ; ಸಾರ್ವತ್ರಿಕ ಚುನಾವಣೆಯಲ್ಲಿ ಉಂಟಾದ ನೂತನ ಸಮತೋಲನ

- Advertisement -
- Advertisement -

23ಜುಲೈ 2023ರಂದು ಸ್ಪೇನ್‌ನಲ್ಲಿ ದಿಢೀರ್ ಚುನಾವಣೆಗಳನ್ನು ನಡೆಸಲಾಯಿತು. ಎಲ್ಲರೂ ಈ ಚುನಾವಣೆಯ ಕಾರಣದಿಂದ ಒಂದು ಸದೃಢ ಸರ್ಕಾರ ಸ್ಥಾಪಿತವಾಗುತ್ತದೆ ಎಂದು ಅಂದುಕೊಂಡಿದ್ದರೂ ಸಹ, ಒಂದು ಅತಂತ್ರ ಮತ್ತು ಅನಿಶ್ಚಿತ ಪ್ರಭುತ್ವಕ್ಕೆ ಈ ಚುನಾವಣೆ ನಾಂದಿ ಹಾಡಿತು.

ಯಾವುದೇ ಪಕ್ಷವೂ ಬಹುಮತವನ್ನು ಗಳಿಸಲಿಲ್ಲ. ಚುನಾವಣೆಗೆ ಮುಂಚೆ ಪೆದ್ರೊ ಸಾಂಚೆಜ್‌ನ ಸ್ಪಾನಿಷ್ ಸೋಶಿಯಲಿಸ್ಟ್ ವರ್ಕರ್ಸ್ ಪಕ್ಷ (PSOE) ಅಧಿಕಾರದಲ್ಲಿತ್ತು. ಆಲ್ಬರ್ಟೊ ನ್ಯೂನೆಜ್ ಫೈಜೂ ಅವರ ಪೀಪಲ್ಸ್ ಪಾರ್ಟಿ (PP) ಈ ಚುನಾವಣೆಯಲ್ಲಿ 48ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅತ್ಯಧಿಕ ಲಾಭವನ್ನು ಪಡೆಯಿತು ಮತ್ತು ಅದು ಗಳಿಸಿದ ಒಟ್ಟು ಸ್ಥಾನಗಳ ಸಂಖ್ಯೆ 137. PP ಒಂದು ಬಲಪಂಥೀಯ (ಸೆಂಟರ್-ರೈಟ್) ಸಾಂಪ್ರದಾಯಿಕ ಪಕ್ಷ. PSOE ಒಂದೇ ಒಂದು ಹೆಚ್ಚಿಗೆ ಸ್ಥಾನವನ್ನು ಪಡೆಯಿತು ಮತ್ತು ಈಗ ಅದರ ಬಲ 121 ಸ್ಥಾನಗಳು.

ಅಂತಾರಾಷ್ಟ್ರೀಯವಾಗಿ ಈ ಚುನಾವಣೆಯು ಬಹಳ ಮಹತ್ವಪೂರ್ಣದ್ದಾಗಿದೆ, ಕಾರಣ ಯೂರೋಪಿಯನ್ ಯೂನಿಯನ್‌ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸರದಿ ಈಗ ಸ್ಪೇನ್ ಬಳಿಗೆ ಬರುತ್ತಿದೆ. ಈ ಚುನಾವಣೆಗಳಿಂದ ಯೂರೋಪಿಯನ್ ಯೂನಿಯನ್‌ನ ಅಧಿಕಾರದ ಚುಕ್ಕಾಣಿಯನ್ನು ಬಲಪಂಥೀಯ ಸಂಪ್ರದಾಯವಾದೀ ಶಕ್ತಿಗಳು ಹಿಡಿಯುವ ಸಾಧ್ಯತೆಗಳಿವೆ. ಇದು ಫ್ರಾಂಕೊ ನಂತರದಲ್ಲಿ ಸ್ಪೇನ್‌ನಲ್ಲಿ ಮೊದಲನೇ ಬಲಪಂಥೀಯ ಸರ್ಕಾರವಾಗಲಿದೆ.

ಆಲ್ಬರ್ಟೊ ನ್ಯೂನೆಜ್ ಫೈಜೂ

ಎಲ್ಲಾ ಸಣ್ಣಪುಟ್ಟ ಪಕ್ಷಗಳೂ ಗಣನೀಯವಾಗಿ ಸೋಲುಂಡವು, ಆದರೆ ಅದೇ ಸಮಯದಲ್ಲಿ ರಾಜಕೀಯವಾಗಿ ಅವುಗಳು ಲಾಭವನ್ನೂ ಪಡೆದವು. ಯಾವುದೇ ಒಂದು ಪಕ್ಷವೂ ಬಹುಮತವನ್ನು ಗಳಿಸದೇ ಇದ್ದ ಕಾರಣಕ್ಕೆ, PSOE ಮತ್ತು PP ಪಕ್ಷಗಳೀಗ ಈ ಸಣ್ಣಪುಟ್ಟ ಪಕ್ಷಗಳ ಬೆಂಬಲವನ್ನು ಪಡೆದು ಸರ್ಕಾರವನ್ನು ರಚಿಸಬೇಕಾಗಿದೆ. ಈ ಸಂದರ್ಭದಲ್ಲಿ ಒಟ್ಟುಗೂಡಿರುವ ಬಲಪಂಥೀಯ ಕೂಟ, ಮೈತ್ರಿ ಸಾಧಿಸಿರುವ ಕಟು ಎಡಪಂಥೀಯ ಪಕ್ಷಗಳ ಕೂಟಕ್ಕಿಂತ ಸ್ವಲ್ಪಮಟ್ಟಿಗೆ ಬಹುಮತ ಹೊಂದಿವೆ. ಪ್ರತ್ಯೇಕತಾವಾದಿಗಳ ಪರ ವಹಿಸಿರುವ ಪಕ್ಷಗಳು ಅಂದರೆ ಕೆಟಲೋನಿಯ ಪಕ್ಷದವರ (ಜಂಟ್ಸ್) ಬಗ್ಗೆ ವ್ಯಾಖ್ಯಾನಕಾರರುಗಳು ಹೇಳಿರುವುದೇನೆಂದರೆ, ಅವರು ಚುನಾವಣೆಯಲ್ಲಿ ಗಣನೀಯವಾದಂತಹ ಯಶಸ್ಸನ್ನು ಪಡೆಯದೇ ಇದ್ದರೂ ಕೂಡ ರಾಜಕೀಯವಾಗಿ ಸಾಕಷ್ಟು ಲಾಭವನ್ನು ಗಳಿಸಿದ್ದಾರೆ ಎಂದು.

ನೂತನ ರಾಜಕೀಯ ಒಕ್ಕೂಟದ ರಚನೆ ಸ್ಪೇನ್‌ಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. PP ಪಕ್ಷ ಸರ್ಕಾರವನ್ನು ರಚಿಸಬೇಕಾದರೆ ಅದು ವಿಪರೀತವಾಗಿ ಬಲಪಂಥೀಯ ಧೋರಣೆ ಹೊಂದಿರುವ ವಾಕ್ಸ್ (vox) ಪಕ್ಷದ ಜೊತೆಗೆ ಸೇರಬೇಕಾಗುತ್ತದೆ. ವಾಕ್ಸ್ ಜೊತೆ ಸೇರಿದರೂ ಕೂಡ PPಗೆ ಬಹುಮತ ಗಳಿಸಲು ಐದು ಸ್ಥಾನಗಳ ಕೊರತೆ ಉಂಟಾಗುತ್ತದೆ. ಅವರಿಗೆ ಅಗತ್ಯವಿರುವುದು ಇನ್ನೊಂದು ಪಕ್ಷದ ಬೆಂಬಲ. ಬಲಪಂಥೀಯ ಧೋರಣೆ ಹೊಂದಿರುವ ಪಕ್ಷಗಳಲ್ಲಿಯೇ, ಇರುವುದರಲ್ಲಿ ಜಂಟ್ಸ್ ಬಲಪಂಥೀಯ ಆರ್ಥಿಕ ನಿಲುವುಗಳನ್ನು ಸಹಮತಿಸುತ್ತದೆ, ಆದರೆ ಅವರ ಕೆಟಲಾನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಬಗ್ಗೆಗಿನ ನಿಲುವು, ಬಲಪಂಥೀಯ ಮೈತ್ರಿಕೂಟದ ಜೊತೆ ಸೇರುವ ವಿಷಯದಲ್ಲಿ ಅವರಿಗೆ ಇರಸುಮುರುಸನ್ನು ಉಂಟುಮಾಡುತ್ತದೆ. ಜಂಟ್ಸ್‌ಗಳೇನಾದರೂ ಸರ್ಕಾರಕ್ಕೆ ಸೇರಿಕೊಂಡು ಸರ್ಕಾರ ರಚನೆಯಾದರೆ ಅವರು ರಾಜಕೀಯವಾಗಿ ಮೇಲುಗೈಅನ್ನು ಸಾಧಿಸಬಹುದು. ಜಂಟ್ಸ್‌ನ ಅನೇಕ ನಾಯಕರುಗಳು ಈ ಮೈತ್ರಿಯನ್ನು ಅರ್ಥವಿಲ್ಲದ್ದು ಎಂದು ವ್ಯಾಖ್ಯಾನಿಸುತ್ತಾರೆ, ಕಾರಣ ಅದು ಅವರನ್ನು ಕೆಟಲಾನ್ ರಾಷ್ಟ್ರವಾದದ ಬಗೆಗಿನ ಬದ್ಧತೆಯಿಂದ ಚಂಚಲಗೊಳಿಸಬಹುದು ಎಂದು. ಒಂದು ಸದೃಢ ಸ್ಪಾನಿಷ್ ಸರ್ಕಾರವನ್ನು ರಚಿಸುವುದಕ್ಕಿಂತ ಹೆಚ್ಚಾಗಿ ಕೆಟಲಾನ್ ಬಗ್ಗೆಗಿನ ಸಮಸ್ಯೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಜಂಟ್ಸ್ ಸದ್ಯಕ್ಕೆ ಸ್ಪಷ್ಟಪಡಸಿದ್ದಾರೆ.

ಬಹುಮತಕ್ಕೆ ಈ ಕೂದಲೆಳೆಯಷ್ಟಿನ ಅಂತರದ ಪರಿಣಾಮವಾಗಿ ಸ್ಪೇನಿನ ರಾಜಕೀಯ ಈಗ ಧ್ರುವೀಕರಣಗೊಂಡಿದೆ. ಉಳಿದ ಎಡಪಂಥೀಯ (ಸೆಂಟರ್ ಆಫ್ ಲೆಫ್ಟ್) ಪಕ್ಷಗಳೂ ಕೂಡ ಈಗ ಒಟ್ಟುಗೂಡಿವೆ. ಲೆಫ್ಟ್ ಆಫ್ ಸೆಂಟರ್‌ನ ಎಡಪಂಥೀಯ ಪಕ್ಷಗಳ ಮೈತ್ರಿಯಿಂದ PSOE ಪಕ್ಷಕ್ಕೆ ಈಗ ಲಾಭ ಉಂಟಾಗಿದೆ. ಇದು ತೀವ್ರವಾದೀ ಎಡಪಂಥೀಯ ಪಕ್ಷಗಳೂ ಕೂಡ ಮೃದು ಧೋರಣೆಯ ಎಡ ಪಕ್ಷಗಳತ್ತ ವಾಲಿದಂತಾಗಿದೆ.

ಈ ಚುನಾವಣೆಗೆ ಆರಿಸಿಕೊಂಡ ಸಮಯ ಕೂಡ ವಿಚಿತ್ರವಾಗಿತ್ತು. ಚುನಾವಣಾ ಸಮೀಕ್ಷೆಗಳು PP ಮತ್ತು ವಾಕ್ಸ್ ಪಕ್ಷಗಳ ಮೈತ್ರಿಕೂಟ ಬಹುಮತದ ಸರ್ಕಾರವನ್ನು ರಚಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಸ್ಥಳೀಯ ಚುನಾವಣೆಗಳಲ್ಲಿನ PSOE ಪಕ್ಷದ ನಿರಾಶಾದಾಯಕ ಫಲಿತಾಂಶವನ್ನು ಆಧರಿಸಿ ಅವುಗಳು ಭವಿಷ್ಯ ನುಡಿದಿದ್ದವು. ಸ್ಥಳೀಯ ಚುನಾವಣೆಯಲ್ಲಿನ ವಾಕ್ಸ್ ಪಕ್ಷದ ಉತ್ತಮ ಫಲಿತಾಂಶಗಳು ರಾಷ್ಟ್ರೀಯ ಚುನಾವಣೆಯಲ್ಲಿಯೂ ಪುನರಾವರ್ತಿಸಬಹುದು ಎಂಬ ಆತಂಕ ಉಂಟಾಗಿತ್ತು. ಹಾಗಾಗಿದ್ದರೆ ಅದು ವಲಸಿಗರ ವಿರುದ್ಧದ ಅಭಿಯಾನಕ್ಕೆ ಪುಷ್ಟಿದಾಯಕವಾಗಿಬಿಡುತ್ತಿತ್ತು.

ಯಾರಿದು ತೀವ್ರ ಬಲಪಂಥೀಯ ವಾಕ್ಸ್ (vox)?

ವಾಕ್ಸ್ ತನ್ನ 52 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಕಳೆದುಕೊಂಡಿರುವುದರಿಂದ ಅದರ ಬಲ 33ಕ್ಕೆ ಇಳಿಸಿದೆ. ಅವರು ತೀವ್ರ ಎಡಪಂಥೀಯ ಗುಂಪಿನ ಚುನಾವಣಾ ಮುಖವಾಗಿದ್ದ ಸುಮಾರ್ ಪಕ್ಷಕ್ಕಿಂತ ಸ್ವಲ್ಪವೇ ಸ್ವಲ್ಪ ಮುಂದಿದ್ದಾರೆ.

ವಾಕ್ಸ್ ಸ್ಥಾಪಿತವಾಗಿದ್ದು 2013ರಲ್ಲಿ, ಅದೊಂದು PP ಪಕ್ಷದಿಂದ ಹೊರಬಿದ್ದ ತುಂಡರಿಸಿದ ಗುಂಪಾಗಿತ್ತು. ಅವರು PP ಪಕ್ಷದಲ್ಲಿನ ಭ್ರಷ್ಟಾಚಾರದ ಕಾರಣದಿಂದ ಬೇಸತ್ತವರಾಗಿದ್ದರು. ಅವರು ಸ್ಪಾನಿಷ್ ಸಂವಿಧಾನದ ಸಂಪೂರ್ಣ ಮತ್ತು ಕೂಲಂಕಷವಾದ ಬದಲಾವಣೆಯ ಬೇಡಿಕೆಯನ್ನು ಮುಂದಿಟ್ಟರು. ಅವರ ಉದ್ದೇಶ ಪ್ರಾಂತೀಯ ಸ್ವಾಯತ್ತತೆಯನ್ನು ನಿಗ್ರಹಿಸುವುದು ಮತ್ತು ಪ್ರಾಂತೀಯ ಪಾರ್ಲಿಮೆಂಟನ್ನು ತೊಡೆದುಹಾಕುವುದಾಗಿತ್ತು, ಮತ್ತು ಅದರ ಬದಲು ಹೆಚ್ಚು ಕೇಂದ್ರೀಕರಣಗೊಳಿಸುವುದನ್ನು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

ವಾಕ್ಸ್ 2015 ಮತ್ತು 2016ರ ಸ್ಪಾನಿಷ್ ಚುನಾವಣೆಯಲ್ಲಿ ಭಾಗವಹಿಸಿತ್ತು; ಆದರೆ ಗಣನೀಯವಾದ ಬೆಂಬಲವನ್ನು ಪಡೆಯುವುದಕ್ಕೋಸ್ಕರ ಹೆಣಗಾಡಿತು. ಕೆಟಲನ್‌ನ ಸ್ವಾತಂತ್ರ್ಯ ಹೋರಾಟದ ಬಗೆಗಿನ ಪ್ರಜಾಭಿಪ್ರಾಯದ ನಂತರ ಅದು ಬೆಳೆಯತೊಡಗಿತು. 2017ರಲ್ಲಿ ಈ ಪಕ್ಷ ಕೆಟಲನ್‌ನ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿತು ಆದರೆ ಕೆಟಲನ್ ಪಾರ್ಲಿಮೆಂಟ್ ವಿರುದ್ಧ ಮತ್ತು ಕೆಟಲನ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಹಲವು ರಾಜಕಾರಿಣಿಗಳ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಯಿತು.

ಸ್ಪಾನಿಷ್‌ನ ಪ್ರಾಂತೀಯತೆ

ಭಾರತದಿಂದ ನೋಡಿದರೆ ಸ್ಪೇನ್ ಒಂದೇ ದೇಶದಂತೆ ಕಾಣಿಸಬಹುದು, ಆದರೆ ಅದೊಂದು ವಿಭಿನ್ನವಾದ ಭಾಷೆ ಮತ್ತು ಸಂಸ್ಕೃತಿಗಳ ಒಕ್ಕೂಟ. ಆ ದೇಶದೊಳಗಡೆಯೇ ಗುರುತಿಸಿ ಅಂಗೀಕರಿಸಲ್ಪಟ್ಟ ಐದು ಭಾಷೆಗಳಿವೆ; ಅವುಗಳು ಕಾಸ್ಟೀಲಿಯನ್, ಕೆಟಲಾನ್, ಗಾಲೀಸಿಯನ್, ಬಾಸ್ಕ್ ಮತ್ತು ಅರಾನೀಸ್.

PP ಪಕ್ಷದ ಮುಖಂಡ ಆಲ್ಬರ್ಟೊ ನ್ಯೂನೆಜ್ ಫೈಜೂ, ಗಾಲಿಸಿಯಾದ ವಾಯುವ್ಯ ಪ್ರದೇಶದಿಂದ ಬಂದವರು; ಅಲ್ಲಿಯ ಪ್ರಮುಖವಾದ ಭಾಷೆ ಗಾಲೀಸಿಯನ್. ಗಾಲೀಸಿಯನ್ ಪೋರ್ಚುಗೀಸ್ ಭಾಷೆಯ ಜೊತೆ ಭಾಷಾ ಸಾಮ್ಯತೆಯನ್ನು ಹೊಂದಿದೆ. ಕೆಲವು ಭಾಷಾವಿಜ್ಞಾನಿಗಳು ಹೇಳುವ ಪ್ರಕಾರ ಪೋರ್ಚುಗೀಸ್ ಭಾಷೆಯ ಒಂದು ಉಪಭಾಷೆ ಅಥವಾ ಡಯಲೆಕ್ಟ್ ಗಾಲೀಸಿಯನ್ ಎಂದು; ಇದು ಸ್ವಲ್ಪ ವಿವಾದಾತ್ಮಕವಾದದ್ದಾದರೂ ಕೂಡ.

ಕೆಟೊಲೋನಿಯದಲ್ಲಿ ಮಾತನಾಡುವ ಪ್ರಮುಖ ಭಾಷೆ ಎಂದರೆ ಕೆಟಲಾನ್. ಕೆಟಲಾನ್ ಫ್ರೆಂಚ್ ಭಾಷೆಗೆ ಹತ್ತಿರವಾಗಿದೆ, ಮತ್ತು ಬಾಸ್ಕ್- ಈ ಒಂದು ಪುರಾತನ ಭಾಷೆಯನ್ನು ಫ್ರಾನ್ಸ್‌ನ ಗಡಿ ಪ್ರದೇಶದಲ್ಲಿ ಮಾತನಾಡುತ್ತಾರೆ. ಅದು ಫ್ರೆಂಚ್ ಮತ್ತು ಸ್ಪಾನಿಷ್ ಭಾಷೆಗಳಿಗಿಂತಲೂ ವಿಭಿನ್ನವಾಗಿದೆ. ಅದು ನೂರಾರು ವರ್ಷಗಳಿಂದ ತಾನಾಗಿಯೇ ಬೆಳೆದು ಬಂದ ಭಾಷೆ. ಅರಾನೀಸ್ ಭಾಷೆಯನ್ನು ಕೆಟಲೋನಿಯಾದಲ್ಲಿ ಮಾತನಾಡುತ್ತಾರೆ ಮತ್ತು ಕೆಟಲಾನ್ ಭಾಷೆಯಲ್ಲಿ ಮಾತನಾಡುವವರಿಗೆ ಅದು ಪರಸ್ಪರವಾಗಿ ಅರ್ಥವಾಗುವಂತಹ ಭಾಷೆ.

2

ಕುತೂಹಲಕಾರಿ ಅಂಶವೆಂದರೆ, ಸಾಮಾನ್ಯವಾಗಿ ಸ್ಪಾನಿಷ್ ಅಂತ ಕರೆಯುವ ಭಾಷೆಯೇ ಸ್ಥಳೀಯವಾಗಿ ಕರೆಯುವಂತಹ ಕಾಸ್ಟೀಲಿಯನ್ ಭಾಷೆ. ಅದು ಸ್ಪೇನ್‌ನ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದೆ, ಮತ್ತು ಅದನ್ನು ದೇಶದಾದ್ಯಂತ ಆಡಳಿತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲಾಗಿದೆ.

ಕೆಟಲೋನಿಯ ಪ್ರಾಂತ್ಯ

ಕೆಟಲೋನಿಯ ಸಮೃದ್ಧವಾದ ಚರಿತ್ರೆಯನ್ನು ಹೊಂದಿದೆ ಮತ್ತು ಎರಡನೇ ಮಹಾಯುದ್ಧದ ಮುಂಚಿನ ತೀವ್ರಗಾಮೀ ಸಮಾಜವಾದೀ ಚಳವಳಿಯಿಂದ ಗುರುತಿಸಲ್ಪಡುತ್ತದೆ. 1939ರಲ್ಲಿ ಫ್ರಾನ್ಸಿಸ್ಕೊ ಫ್ರಾಂಕೋನ ಫಾಸಿಸ್ಟ್ ಆಡಳಿತ ಸ್ಪೇನ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿತು ಮತ್ತು ಎಲ್ಲ ರೀತಿಯ ತೀವ್ರಗಾಮೀ ಚಟುವಟಿಕೆಗಳನ್ನೂ ದಮನಮಾಡಿತು. ಆಡಳಿತ ಭಾಷೆಯನ್ನಾಗಿ ಕೆಟಲಾನ್ ಭಾಷೆಯನ್ನು ಉಪಯೋಗಿಸುವುದನ್ನು ಫ್ರಾಂಕೊ ನಿಷೇಧಿಸಿದ ಮತ್ತು ಅದರ ಬದಲು ಕಾಸ್ಟೀಲಿಯನ್ ಭಾಷೆಯನ್ನು ಚಾಲ್ತಿಗೊಳಿಸಿದ. ರಾಷ್ಟ್ರೀಯ ಐಕ್ಯತೆಗೆ ಇದು ಬಹಳ ಮುಖ್ಯ ಎಂದು ಅವನು ಪ್ರತಿಪಾದಿಸಿದ. ಪ್ರಾಂತ್ಯದಲ್ಲೆಲ್ಲಾ ಇದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಯಿತು. ಜರ್ಮನಿ ಮತ್ತು ಇಟಲಿ ದೇಶಗಳಿಗೆ ತದ್ವಿರುದ್ಧವಾಗಿ, ಸ್ಪಾನಿಷ್ ಫ್ಯಾಸಿಸಮ್ 1975ರವರೆಗೂ ಚಾಲ್ತಿಯಲ್ಲಿತ್ತು. ಫ್ರಾಂಕೋನ ಸಾವಿನ ನಂತರ, ಕೆಟಲಾನ್‌ನ ಅಸಮಿತೆ ಪುನರುತ್ಥಾನಗೊಂಡಿತು. ಅರವತ್ತನೇ ದಶಕದಲ್ಲಿ ಫ್ರಾಂಕೊನ ಸ್ಪೇನ್ ಒಳಗೇ ಭಿನ್ನಮತ ಬೆಳೆಯುತ್ತಾ ಹೋಯಿತು. ಅತಿಯಾದ ಸಹಿಷ್ಣುತೆಯನ್ನು ಪ್ರಭುತ್ವ ದುರ್ಬಲತೆ ಎಂದು ಪರಿಗಣಿಸಿತು. ಭಿನ್ನಮತೀಯತೆ ಉಲ್ಬಣವಾಯಿತು. ಪ್ರತಿರೋಧದಲ್ಲಿ ಕೆಟಲಾನ್ ಪ್ರದೇಶ ಗಣನೀಯವಾದಂತಹ ಪಾತ್ರವನ್ನು ವಹಿಸಿತು. ನೊವ ಕಾನ್ಕೊ ಎಂಬ ಸಾಂಸ್ಕೃತಿಕ ಚಳುವಳಿಯ ಹೊರಹೊಮ್ಮುವಿಕೆ ಕೆಟಲಾನ್ ಭಾಷೆಯ ಮತ್ತು ಸಂಸ್ಕೃತಿಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಮುರಿಯಿತು; 1971ರಲ್ಲಿ ಸ್ಥಾಪಿಸಲಾಗಿದ್ದ ಕೆಟಲೋನಿಯಾ ಒಕ್ಕೂಟ, ವಿವಿಧ ರಾಜಕೀಯ ಪಕ್ಷಗಳನ್ನೂ ಮತ್ತು ಸಂಸ್ಥೆಗಳನ್ನು ಸರ್ವಾಧಿಕಾರಿ ಆಡಳಿತದ ವಿರುದ್ಧ ಒಂದುಗೂಡಿಸಿತು. 1978ರ ನೂತನ ಸ್ಪಾನಿಷ್ ಸಂವಿಧಾನದ ಜೊತೆಯಲ್ಲಿ, ಕೆಟಲೋನಿಯಾಗೆ ಸ್ವಾಯತ್ತತೆಯನ್ನು ನೀಡಲಾಯಿತು; ಇದು ಆ ಪ್ರದೇಶ ಆರ್ಥಿಕವಾಗಿ ಸಮೃದ್ಧಿ ಹೊಂದಲು ದಾರಿ ಮಾಡಿಕೊಟ್ಟಿತು.

ಕೆಟಲಾನ್ ಸ್ವಾತಂತ್ರ್ಯ ಹೋರಾಟದ ಒಳಗಡೆಯೇ ಎರಡು ಪ್ರಮುಖವಾದಂತಹ ಎಳೆಗಳು ಕಾಣಿಸಿಕೊಂಡವು. ಒಂದು ಸ್ಥಳೀಯ ಕೆಟಲಾನ್ಸ್‌ಗೆ ಸಂಬಂಧಪಟ್ಟಿದ್ದು- ಅವರು ಆರ್ಥಿಕವಾದ ಸಮೃದ್ಧಿಯನ್ನು ಫ್ರಾಂಕೋನ ನಂತರದ ಕಾಲದಲ್ಲಿ ಹೊಂದಿ ಅನುಭವಿಸಿದವರು; ಈ ಕೆಟಲಾನ್‌ಗಳು ಹೆಚ್ಚು ವಲಸಿಗರ ದ್ವೇಷಿಗಳು ಮತ್ತು ಕಾರ್ಮಿಕವರ್ಗದ ವಿರುದ್ಧ ಇದ್ದವರು. ಸ್ಥಳೀಯ ಕೆಟಲಾನ್‌ಗಳು ಸಮೃದ್ಧಿ ಹೊಂದುತ್ತಿರುವಾಗಲೇ, ಅನೇಕ ಕೆಟಲಾನೇತರರು ಇಲ್ಲಿಗೆ ಕೆಲಸಕ್ಕೋಸ್ಕರ ವಲಸೆ ಬಂದರು. ಕೆಟಲೋನಿಯಾದ ಕಾರ್ಮಿಕವರ್ಗದವರೆಲ್ಲರೂ ಈಗ ವಲಸೆ ಬಂದ ಕೆಟಲೋನಿಯೇತರರಾಗಿದ್ದರು. ಇವರೆಲ್ಲರೂ ಕೂಡ ಕೆಟಲಾನ್ ಸ್ವಾತಂತ್ರ್ಯವನ್ನು ವಿರೋಧಿಸಿದರು.

ಸ್ವಾತಂತ್ರ್ಯ ಹೋರಾಟದ ಚಳವಳಿಯ ಎಡಪಂಥೀಯ ಬಣ, ಅಂದರೆ ರಿಪಬ್ಲಿಕನ್ ಲೆಫ್ಟ್ ಆಫ್ ಕೆಟಲೋನಿಯ (ERC), ಅದು ಎಡಪಂಥೀಯ ಧೋರಣೆಗಳನ್ನು ಒಳಗೊಂಡ ಮತ್ತು ಎಡಪಂಥೀಯ ನೀತಿಗಳಿಗೆ ಬದ್ಧತೆಯುಳ್ಳ ಸ್ವಾತಂತ್ರ್ಯವನ್ನು ಪ್ರತಿಪಾದಿಸಿತು. ಚಾರಿತ್ರಿಕವಾಗಿ ERC ಕೆಟಲೋನಿಯದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದ ಪಕ್ಷವಾಗಿತ್ತು; ಆದರೆ ಇತ್ತೀಚಿನ ಚುನಾವಣೆಯಲ್ಲಿ ಅದಕ್ಕೆ ಹಿನ್ನಡೆ ಉಂಟಾಗಿ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ.

ಈಗ PSOEಗೆ ಇರುವ ಒಂದೇ ಭರವಸೆಯಂದರೆ ಅವರೀಗ ERC ಮತ್ತು ಜಂಟ್ಸ್‌ಗಳ ಬೆಂಬಲವನ್ನು ಪಡೆಯುವುದು. ಇದು ಕೆಟಲಾನ್‌ಗಳಿಗೆ ಸದೃಢವಾದ ಬೆಂಬಲ ಸಿಗುವಂತೆ ಮಾಡುತ್ತದೆ; ಆದರೆ ಇದರಿಂದ ಲೆಫ್ಟ್ ಆಫಗ ಸೆಂಟರ್ ಎಡಪಂಥೀಯ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ಅವಕಾಶ ವಂಚಿತವಾಗಬಹುದು. ಈ ಎರಡೂ ಪಕ್ಷಗಳಿಲ್ಲದೆ PSOEಗೆ ಅಧಿಕಾರವನ್ನು ಪುನಃ ಪಡೆಯಲು ಸಾಧ್ಯವಿಲ್ಲ. ಇದು ಯಾವುದೇ ಸದೃಢವಾದ ಎಡಪಂಥೀಯ ಪಕ್ಷವನ್ನೂ ದುರ್ಬಲಗೊಳಿಸುತ್ತದೆ.

ಕನ್ನಡಕ್ಕೆ: ಶ್ರೀನಾಥ್ ಕೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...