Homeಕರ್ನಾಟಕದರಿಯಾ ದೌಲತ್ ಸೇರಿ ಹಲವು ಸ್ಮಾರಕಗಳ ಪ್ರವೇಶಕ್ಕೆ ಕಠಿಣ ನಿಯಮಾವಳಿಗಳೇಕೆ..?

ದರಿಯಾ ದೌಲತ್ ಸೇರಿ ಹಲವು ಸ್ಮಾರಕಗಳ ಪ್ರವೇಶಕ್ಕೆ ಕಠಿಣ ನಿಯಮಾವಳಿಗಳೇಕೆ..?

- Advertisement -
- Advertisement -

ನಮ್ಮ ನಾಡಿನ ಒಂದಿಷ್ಟು ಚಿಲ್ಟು ಪಲ್ಟುಗಳು ಗಂಟಲು ಹರಿದರೂ ಹಝ್ರತ್ ಟಿಪ್ಪು ಸುಲ್ತಾನ್ ಎಂಬ ಆ ಭವ್ಯ ವ್ಯಕ್ತಿತ್ವಕ್ಕೆ ಕಿಂಚಿತ್ ಹಾನಿ ಮಾಡಲೂ ಸಾಧ್ಯವಿಲ್ಲ. ಅಮೆರಿಕಾದ ನಾಸಾ ಕೂಡಾ ಟಿಪ್ಪು ಸುಲ್ತಾನರ ಕ್ಷಿಪಣಿಯ ಪ್ರತಿಕೃತಿಯನ್ನು ಸಂರಕ್ಷಿಸಿಟ್ಟು ” Father of the Missile Technology ” ಎಂದು ಟಿಪ್ಪುವನ್ನು ಗೌರವಿಸುತ್ತದೆ. ಟಿಪ್ಪು ಜೀವನಪೂರ್ತಿ ಯಾವ ಬ್ರಿಟಿಷರ ವಿರುದ್ಧ ಹೋರಾಡಿದರೋ ಅದೇ ಬ್ರಿಟಿಷರು ಕೂಡಾ ಟಿಪ್ಪು ಸುಲ್ತಾನರ ಅಮೂಲ್ಯವಾದಂತಹ ಸಾಧನಗಳನ್ನು ಲಂಡನ್ ಮ್ಯೂಸಿಯಂನಲ್ಲಿಟ್ಟು ಸಂರಕ್ಷಿಸುತ್ತಾ ಬಂದಿದೆ. ಟಿಪ್ಪುವಿನಂತಹ ಮಹಾನ್ ವ್ಯಕ್ತಿತ್ವ ತಮ್ಮ ಶತ್ರುವಾಗಿದ್ದರು ಎಂಬುವುದೂ ಅವರ ಪಾಲಿಗೆ ಬಹಳ ಗೌರವದ ವಿಚಾರ. ಆದರೆ ಟಿಪ್ಪುವಿನ ಸ್ವಂತ ನಾಡಲ್ಲಿ ಏನಾಗುತ್ತಿದೆ..? ಟಿಪ್ಪು ಸುಲ್ತಾನರ ಪ್ರತಿಯೊಂದು ಕುರುಹುಗಳನ್ನೂ ನಾಶಗೊಳಿಸುವ ಕುಪ್ರಯತ್ನವನ್ನು ಟಿಪ್ಪುವಿನ ನಾಡಿನ ಜನರೇ ಮಾಡುತ್ತಿದ್ದಾರೆ.

ನಾನು ಟಿಪ್ಪು ಕುರಿತು ಬರೆದಾಗೆಲ್ಲಾ ನನ್ನ ಮಲಯಾಳಿ ಸ್ನೇಹಿತರು ”ನೀನು ಟಿಪ್ಪು ಕುರಿತು ಇಷ್ಟೆಲ್ಲಾ ಬರೆಯುತ್ತೀಯಲ್ವಾ ಮಾರಾಯ, ಕನಿಷ್ಟ ಟಿಪ್ಪು ಸುಲ್ತಾನರ ದರಿಯಾ ದೌಲತ್ ಅರಮನೆ ಪ್ರವೇಶವನ್ನಾದರೂ ಸುಗಮಗೊಳಿಸು ಮಾರಾಯ” ಎಂದು ನನ್ನನ್ನು ಕುಟುಕುತ್ತಿದ್ದರು.

ಮೊನ್ನೆ ಮೈಸೂರು ದಸರಾಕ್ಕೆ ಕುಟುಂಬ ಸಮೇತ ಹೋಗಿದ್ದವ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ ದರಿಯಾ ದೌಲತ್ ನೋಡಲೆಂದು ಹೋದೆವು. ನನಗಿದು ಸುಮಾರು ಆರು ವರ್ಷಗಳ ಬಳಿಕದ ದರಿಯಾ ದೌಲತ್ ಸಂದರ್ಶನ. ಹಿಂದೆಲ್ಲಾ ನಾವು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ದರಿಯಾ ದೌಲತ್ ಅರಮನೆ ಪ್ರವೇಶಿಸುತ್ತಿದ್ದೆವು. ಮೊನ್ನೆ ಹೋಗಿ ಟಿಕೆಟ್ ಪಡೆಯುವುದು ಎಲ್ಲಿ ಎಂದು ಸೆಕ್ಯೂರಿಟಿಯವರಲ್ಲಿ ವಿಚಾರಿಸಿದೆ. ಸಾರ್..ಈಗ ಹಿಂದಿನಂತೆ ಟಿಕೆಟ್ ನೀಡುವ ವ್ಯವಸ್ಥೆಯಿಲ್ಲ. ಎಲ್ಲಾ ಆನ್ಲೈನ್ ಸಿಸ್ಟಮ್ ಎಂದರು. ಸರಿಯಪ್ಪಾ ಈಗೇನು ಮಾಡ್ಬೇಕು ಎಂದು ಕೇಳಿದೆ. ಆತ ಒಂದು ಕಬ್ಬಿಣದ ಸ್ಟ್ಯಾಂಡ್ ಪಕ್ಕಕ್ಕೆ ಕರಕೊಂಡು ಹೋದ. ಈ ಸ್ಕ್ಯಾನರ್‌ನಲ್ಲಿ ಸ್ಕ್ಯಾನ್ ಮಾಡಿ, ವೆಬ್‌ಸೈಟ್ ವಿಳಾಸ ಸಿಗುತ್ತೆ, ವೆಬ್‌ಸೈಟ್‌ಗೆ ಲಾಗಿನ್ ಆಗಿ, ಅದರಲ್ಲಿ ಬರುವ ಕಾಲಂಗಳಲ್ಲಿ ನಿಮ್ಮ ಆಧಾರ್ ನಂಬರ್, ಎಷ್ಟು ಮಂದಿಯಿದ್ದೀರಿ, ಯಾವೂರು, ಯಾವ ದೇಶ ಮತ್ತಿತರ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ. ಕೊನೆಯಲ್ಲಿ ಪೇಮೆಂಟ್ ವಿವರಗಳಿರುತ್ತವೆ, ಅದರಲ್ಲಿ ಎಮೌಂಟ್ ಪೇ ಮಾಡಿದ ಬಳಿಕ ನೀವು ಒಳಪ್ರವೇಶಿಸಬಹುದು ಎಂದ.

ಉಸ್ಸಪ್ಪಾ.. ಇಷ್ಟೆಲ್ಲಾ ಮಾಡ್ಬೇಕಾ..?
ಹೌದು ಸರ್.. ಇದು ನಾವು ಮಾಡಿದ ನಿಯಮಾವಳಿಯಲ್ಲ. ಸರಕಾರವೇ ಮಾಡಿದ ನಿಯಮಾವಳಿಗಳು.
ಕಳೆದ ಬಾರಿ ಬಂದಾಗ ಹೀಗೆಲ್ಲಾ ಇರ್ಲಿಲ್ವಲ್ಲಾ..?
ಈ ರೀತಿಯ ನಿಯಮಗಳಾಗಿ ನಾಲ್ಕು ವರ್ಷಗಳಾಯಿತು..

ನಮ್ಮ ಜೊತೆಗಿದ್ದ ಸ್ನೇಹಿತ ಡಾ.ಅಂಕೇಶ್ ಮೌರ್ಯ ವೆಬ್‌ಸೈಟಿಗೆ ಹೋಗಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದರು. ಆ ಮಧ್ಯೆ ಎರಡು ಬಾರಿ ಸರ್ವರ್ ಕನೆಕ್ಷನ್ ಅರ್ಧದಲ್ಲಿ ಕೈ ಕೊಟ್ಟಿತ್ತು. ಈ ಮಧ್ಯೆ ಈ ವೆಬ್‌ಸೈಟ್‌ಗೆ ಲಾಗಿನ್ ಆಗುವುದು, ವಿವರ ಭರ್ತಿ ಮಾಡುವುದೆಲ್ಲಾ ಗೊತ್ತಿಲ್ಲದ ಒಟ್ಟು ಏಳು ತಂಡಗಳು ನಮ್ಮ ಕಣ್ಮುಂದೆಯೇ ದರಿಯಾ ದೌಲತ್ ಅರಮನೆ ನೋಡಲಾಗದೇ ನಿರಾಶೆಯಿಂದ ಮರಳಿತು. ಅವರಲ್ಲಿ ಸ್ಮಾರ್ಟ್ ಫೋನ್ ಇಲ್ಲದ ವೃದ್ಧ ದಂಪತಿಗಳು, ಹಳ್ಳಿಗಳಿಂದ ಬಂದವರು, ಇಡೀ ದಿನ ಪ್ರಯಾಣ ಮಾಡಿ ಬಂದ ದೂರ ದೂರದ ಊರಿನ ಪ್ರವಾಸಿಗಳೆಲ್ಲಾ ಇದ್ದರು.

ಅತ್ತ ಜನಸಾಗರವೇ ಸೇರಿದ್ದ ಮೈಸೂರು ಒಡೆಯರ ಅರಮನೆ ಪ್ರವೇಶಿಸಲು ಇಂತಹ ಯಾವ ಕಠಿಣ ನಿಯಮಾವಳಿಗಳೂ ಇಲ್ಲ. ನೇರವಾಗಿ ದುಡ್ಡು ಪಾವತಿಸಿ ಟಿಕೆಟ್ ಪಡಕೊಂಡು ಸಲೀಸಾಗಿ ಪ್ರವೇಶಿಸಬಹುದಿತ್ತು. ಆದರೆ ಟಿಪ್ಪು ಸುಲ್ತಾನರ ಅರಮನೆ ಪ್ರವೇಶಕ್ಕೆ ಮಾತ್ರ ಇಷ್ಟೆಲ್ಲಾ ನಿಯಮಾವಳಿಗಳೇಕೆ..? ಇದು ಮಾತ್ರವಲ್ಲದೇ Archeological survey of India ದ ಅಡಿ ಬರುವ ರಾಜ್ಯದ ಸುಮಾರು 10 ಕ್ಕಿಂತ ಹೆಚ್ಚು ಪ್ರವಾಸಿ ತಾಣ ಸೇರಿ ಎಲ್ಲಾ ಕಡೆಗೂ ಈ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದಾರೆ. ಇಲ್ಲಿ ಕನಿಷ್ಠ ಪಕ್ಷ ವೆಬ್‌ಸೈಟ್ ಲಾಗಿನ್, ವಿವರಗಳನ್ನು ದಾಖಲಿಸುವುದು ಇವೆಲ್ಲಾ ತಿಳಿಯದ ಜನರಿಗೆ ಸಹಾಯ ಮಾಡಲು ಕನಿಷ್ಠ ಒಂದು ಕ್ಲರಿಕಲ್ ಸ್ಟಾಫ್ ಕೂಡಾ ಅಲ್ಲಿಲ್ಲ. ಅಲ್ಲಿರುವ ಸೆಕ್ಯೂರಿಟಿಗಳಿಗೆ ಪಾಪ ಅಷ್ಟು ಜ್ಞಾನವೂ ಇಲ್ಲ.

ಮಾನ್ಯ ಮುಖ್ಯಮಂತ್ರಿಗಳೆ ಟಿಪ್ಪು ಸುಲ್ತಾನರ ಸ್ಮಾರಕಗಳನ್ನು ಸಂರಕ್ಷಿಸುವುದು ನೀವು ಜಗತ್ತಿನಾದ್ಯಂತದ ಟಿಪ್ಪು ಅಭಿಮಾನಿಗಳಿಗೆ ಮಾಡಬಲ್ಲ ಬಹುದೊಡ್ಡ ಉಪಕಾರ. ಟಿಪ್ಪು ಸುಲ್ತಾನರ ದರಿಯಾ ದೌಲತ್ ಅರಮನೆ, ಹಲವು ದೇವಸ್ಥಾನಗಳೂ ಸೇರಿದಂತೆ ಹಲವು ಪ್ರವಾಸಿ ಐತಿಹಾಸಿಕ ತಾಣಗಳನ್ನು ನೋಡಲೆಂದು ದೂರದೂರದ ಊರುಗಳಿಂದ ಬರುವ ಹಳ್ಳಿಗರು, ಅಂತರ್ಜಾಲ ತಂತ್ರಜ್ಞಾನ ಕುರಿತ ಜ್ಞಾನವಿಲ್ಲದ ಜನರು ಪ್ರವೇಶ ಸಿಗದೇ ನಿರಾಶೆಯಿಂದ ಮರಳುವಂತಾಗಬಾರದು. ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ಪ್ರವೇಶ ಸುಗಮಗೊಳಿಸಬೇಕೆಂದು ನಾಡ ಜನತೆಯ ಪರವಾಗಿ ವಿನಂತಿಸುತ್ತೇನೆ.

ಇದನ್ನೂ ಓದಿ: ಮೈಸೂರು: ದಸರಾ ಉತ್ಸವ ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. Couple of years back I had my Senior Citizen card. They did not allow me to go inside along with my wife. They insisted me to get other than Senior Citizen card. I was harassed then I had no other option but to get my driving licence which was inside my car parked almost one furlong away. I had come all the way from Mangalore residing near to Sulthan Bathery fort built by Tippu. After returning to Mangalore approached Archaeological dept at Bangalore asking as to why I was harassed & I will give a written complaint. The person who I had approached apologized on their bad behaviour at DARIYA DAULAT PALACE and told me about the outsourcing security personnel who are the main culprit & advised me to inform Mr Sunil who is the main head there. I can’t understand as my friend who had been to Japan on official visit had the senior citizen card in his purse & Passport was in his baggage and the hotel management over there obliged his senior citizen card. So this is Indian policy 😄😄😄

  2. Kannadigas don’t have a problem in preserving the monuments of tippu or any other rulers. That doesn’t mean that we have to hush up the truth of history. It was well known to the world that TIPPU was a VOILENT attrocious religious bigot,the number of crimes to his credit were in lakhs.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...