Homeಕರ್ನಾಟಕಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

- Advertisement -
- Advertisement -

ಡಾ. ಪ್ರಕಾಶ್ ಮಂಟೇದ ಅವರು ಬರೆದ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಶೀರ್ಷಿಕೆಯ ಲೇಖನದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಡಾ.ಪ್ರಕಾಶ್ ಮಂಟೇದ ವಿರುದ್ಧ 153ಎ ಮತ್ತು ಐಪಿಸಿಯ 505ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ನ.1ರಂದು ವಿಚಾರಣೆಗೆ ಹಾಜರಾಗುವಂತೆ ಡಾ.ಪ್ರಕಾಶ್ ಮಂಟೇದ ಅವರಿಗೆ ರಾಮನಗರ ಗ್ರಾಮಾಂತರ ಪೊಲೀಸರು ನೊಟೀಸ್‌ ನೀಡಿದ್ದಾರೆ.

ರಾಮನಗರದ ಭೋವಿ ಸಮುದಾಯದ ವ್ಯಕ್ತಿಯೊಬ್ಬ ಪ್ರಕಾಶ್ ಮಂಟೇದ ಅವರ ವಿರುದ್ದ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಲೇಖಕ ಡಾ.ಪ್ರಕಾಶ್ ಮಂಟೇದ ಅವರು ತಮ್ಮ ಬಾಲ್ಯದ ಜೀವನಕ್ಕೆ ಸಂಬಂಧಿಸಿ ಅನುಭವದ ಲೇಖನ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ’ ಎಂಬ ಶೀರ್ಷಿಕೆಯಡಿ ಬರೆದಿದ್ದು, ಇದನ್ನು ಬಿಗ್ ಕನ್ನಡ ವೆಬ್‌ ಮಾದ್ಯಮ ಪ್ರಕಟಿಸಿದೆ.

ಪರಿಶಿಷ್ಟ ಜಾತಿಯವರೇ ಆದ ತನ್ನೂರಿನ ಬೋವಿ ಸಮುದಾಯದ ಜನರು ಪರಿಶಿಷ್ಟ ಜಾತಿಯ ಹೊಲೆಯರನ್ನು ಅವಮಾನಿಸಿದ ನಿದರ್ಶನಗಳ ಕುರಿತು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. SC ಪಟ್ಟಿಯಲ್ಲಿನ ಸ್ಪರ್ಶ್ಯ ಮತ್ತು ಅಸ್ಪೃಶ್ಯ ಸಮುದಾಯದಗಳ ನಡುವೆ ಇರುವ ಜಾತಿ ತಾರತಮ್ಯದ ಅಸಮಾನತೆಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು.

ಎಸ್ಸಿಗಳೆನ್ನುವ ಭೋವಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಿದೆ. ಭೋವಿಗಳು ತಮ್ಮ ದಬ್ಬಾಳಿಕೆ, ಪುಂಡಾಟಿಕೆಗಳಿಂದ ಊರಲ್ಲಿ ದೌರ್ಜನ್ಯದ ಹವಾ ಇಟ್ಟಿದ್ದರು. ಅಂದಿನ ಇವರ ಜಾತೀಯತೆಯನ್ನು ಇವರ ಸಾಮಾಜಿಕ ಅಜ್ಞಾನ ಎಂದು ಸುಮ್ಮನಾಗಬಹುದಷ್ಟೆ. ಆದರೂ ಜಾತಿ ಆಚರಣೆಯಲ್ಲಿ ತಮ್ಮಂತೆಯೇ ಎಸ್ಸಿಗಳಾದ ಹೊಲೆಯರನ್ನು ನಿಕೃಷ್ಟವಾಗಿ ನಡೆಸಿಕೊಂಡದ್ದಿದೆ ಸೇರಿ ಹಲವು ವಿಚಾರಗಳನ್ನು, ನಿದರ್ಶನಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಡಾ.ಪ್ರಕಾಶ್ ಮಂಟೇದ, ನನ್ನ ಬರಹದ ಬಗ್ಗೆ ಸಮಾಜದಲ್ಲಿ ಶಾಂತಿ ಕದಡಿದ, ಕೋಮು ದ್ವೇಷದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನಾನು 30 ವರ್ಷಗಳ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ಬಿಗ್‌ ಕನ್ನಡದಲ್ಲಿ ‘ಅರಿವೇ ಕಂಡಾಯ’ ಸರಣಿ ಅಂಕಣಗಳನ್ನು ನಾನು ಬರೆಯುತ್ತಿದ್ದೇನೆ. ಅದರಲ್ಲಿ ನನ್ನ ಮೂಲ, ಊರಿನ ಬಗ್ಗೆ ಬರೆಯುವಾಗ, ನಮ್ಮ ತಂದೆ ಅಂಬೇಡ್ಕರ್‌ ಸಂಘ ಮಾಡಿದ ಪೋಟೋ ಕಾಣಿಸಿಕೊಂಡಿತ್ತು. ನಮ್ಮ ಅಪ್ಪ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವನ್ನು ಮಾಡಿದ್ದರು. ಇದನ್ನು ನೋಡಿ  ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಲೇಖನ ಬರೆದೆ. ಅವತ್ತಿಗೆ ನಮ್ಮಲ್ಲಿ ಬೋವಿ ಸಮುದಾಯದ ಜನರು ಪ್ರಬಲವಾಗಿದ್ದರು. ಈ ವೇಳೆ ನನಗೆ ಆದ ಜಾತಿ ಆಧಾರಿತ ಅನುಭವದ ಬಗ್ಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಸ್ಪೃಶ್ಯ, ಅಸ್ಪೃಶ್ಯತೆಯ ತಳ ಮತ್ತು ಮೇಲ್ಮಟ್ಟದ ಜಾತಿ ದೌರ್ಜನ್ಯದ ತಲಸ್ಪರ್ಶದ ಅರಿವಿದೆ. ಆತ್ಮ ವಂಚನೆ ಮಾಡಿಕೊಂಡು ಹುಸಿ ಜಾತ್ಯತೀತ ವಿಚಾರಗಳನ್ನು ಮಾತಾಡುವ ತೆವಲು ಅಥವಾ ಗೀಳು ನನಗಿಲ್ಲ. ಇವತ್ತಿಗೂ ಕೆಲವರಿಗೆ ಜಾತಿಯ ರೂಪ ವಿರೂಪಗಳು ಹೇಗೆ ಸ್ಥಿರೀಕರಣ ಗೊಳ್ಳುತ್ತಿವೆ ಎಂಬುದು ಗೊತ್ತಿಲ್ಲ. ಕೆಲವರ ಬಳಿ ಸಿದ್ಧಾಂತ, ಸ್ಟಾಕ್ ರಿಯಾಕ್ಷನ್ಸ್ ಮಾತ್ರವಿದೆ. ಆದರೆ ಜಾತಿ ಚಲನೆಯ ಸಂಕೀರ್ಣತೆಗಳ ಅರಿವು ಮತ್ತು ಅದು ಮಾಡುವ ಗಾಯ ಮತ್ತು ಗಾಸಿತನಗಳು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇಂದಿಗೂ ಹೊಲೆಯ ಸಮುದಾಯದ ಜನರನ್ನು ಅಸಹಾಯಕರನ್ನಾಗಿಸಿ ಏನೇ ಆದರೂ ಸುಮ್ಮನಿರುವಂತೆ ಆರ್ಭಟ ಮಾಡುವವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ. ಹಾಗೆ ನೋಡಿದರೆ ಇಡೀ ಕುಂಭಾಪುರ ಕಾಲೋನಿಯನ್ನು ಹಾಳುಗೆಡುತ್ತಿರುವವರು ಇವರೇ ಆಗಿರುತ್ತಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಇದನ್ನು ಗಮನಿಸಬೇಕು. ಇಂತಹ ಅವಿವೇಕಿಗಳು ಮತ್ತು ದುಷ್ಟರನ್ನು ಇಟ್ಟುಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಸಾಧಿಸುವುದಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯ ಹೇಳಲು ನಮಗೆ ಅಂಜಿಕೆ ಯಾಕೆ? ಬಾಬಾ ಸಾಹೇಬರು ಹೇಳಿದಂತೆ ಎಂಜಲು ಮತ್ತು ರಕ್ತವನ್ನು ಟಚಬಲ್ ದಲಿತರು, ಅನ್‌ಟ ಚಬಲ್ ದಲಿತರ ಜೊತೆ ಬೆರೆಸಬಲ್ಲರೆ?  ನಾನು ತಳಮಟ್ಟದ ಸತ್ಯವನ್ನು ಮಾತಾಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಪೋಲ ಕಲ್ಪಿತ ಸಂಗತಿಗಳು ನನ್ನ ಲೇಖನದಲ್ಲಿ ಇರುವುದಿಲ್ಲ. ಈ ಬಗ್ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಭಾಸ್ಕರ್‌ ಪ್ರಸಾದ್‌, ಪ್ರಕಾಶ್ ಮಂಟೇದ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ನಾನು ಪ್ರಕಾಶ್ ಮಂಟೇದ ಅವರ ಜೊತೆ ಇದ್ದೇನೆ. ಸುಮ್ಮನೆ ಮಾತಿಗೆ ಮಾತ್ರ ಇರೋದಲ್ಲ.‌ ಅವರ ಮೇಲೆ ಕೇಸು ಹಾಕಿರುವ ಪೊಲೀಸರಿಗೆ  ಅವರು ಮಾಡಿರುವ ತಪ್ಪೇನು ಎಂದು ಕಾನೂನಿನ ಮೂಲಕ ತಿಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಬಾಲ್ಯದಲ್ಲಿ ಕೇವಲ ಜಾತಿಯ ಕಾರಣಕ್ಕೆ ನಾನೆಷ್ಟು ಹಿಂಸೆ, ಅವಮಾನ, ನಷ್ಟಗಳನ್ನು ಅನುಭವಿಸಿದ್ದೆ ಎಂದು ತನ್ನ ಜೀವನದ ಅನುಭವವನ್ನು ಬರೆದುಕೊಳ್ಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತೆ? ಜಾತಿ ದೌರ್ಜನ್ಯದ ವಿರುದ್ದ ಪ್ರತಿರೋಧ ಒಡ್ಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಕಥನವನ್ನು ಬರೆದುಕೊಳ್ಳುವುದು ಅಪರಾಧ ಎಂದಾದರೆ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಅನೇಕ ದಲಿತ ಮುಖಂಡರು ಹಾಗು ಸಾಹಿತಿಗಳು  ಜಾತಿ ದೌರ್ಜನ್ಯಗಳ ಘಟನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ನಾನು ಕೂಡ ಇಲ್ಲಿನ ಜಾತಿ ದೌರ್ಜನ್ಯಗಳ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಇನ್ನು ಮುಂದೆ ಇಂತಹ ಜಾತಿ ದೌರ್ಜನ್ಯದ ದಾಖಲಾತಿಗಳಿಗೆಲ್ಲಾ ಸೆಕ್ಷನ್ 505, 153A ಅಡಿಯಲ್ಲಿ FIR ಜಡಿಯುತ್ತೀರಾ?
ಯಾವ ಮುಠ್ಠಾಳನಾದರೂ ಇಂತಹ ಕೇಸು ದಾಖಲಿಸುವುದನ್ನು ಒಪ್ಪಬಹುದೇನು ಎಂದು ಭಾಸ್ಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ZEE TV ಕನ್ನಡದಲ್ಲಿ ಅಂಬೇಡ್ಕರರ ಜೀವನ ಚರಿತ್ರೆಯಲ್ಲಿ ಜಾತಿ ದೌರ್ಜನ್ಯಗಳ ಬಗ್ಗೆ ಬರೆಯಲಾಗಿದೆ. ಹಾಗಾದರೆ ನೀವು ಈ ಜಾತಿ ದಬ್ಬಾಳಿಕೆಯ ಚರಿತ್ರೆಯನ್ನು ಬರೆದವರ ಮತ್ತು ಪ್ರಸಾರ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇಂತಹ ದೂರುಗಳು ಬಂದಾಗ, ಬಂದ ದೂರುಗಳಿಗೆಲ್ಲಾ FIR ಮಾಡಲೇಬೇಕಿಲ್ಲ. ಒಂದು NCR ಮಾಡಿ ಆಪಾದಿತರಿಗೆ ನೋಟಿಸ್ ಕೊಟ್ಟು ಅವರು ನೀಡುವ ಹೇಳಿಕೆಯ ಮೇಲೆ ಮುಂದುವರೆಯಬಹುದು. ದೂರನ್ನು ಕೋರ್ಟಿನ ಗಮನಕ್ಕೆ ತಂದು ಕೋರ್ಟಿನ ಅನುಮತಿ ಪಡೆದು FIR ದಾಖಲಿಸಬಹುದು. ಆದರೆ ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತ ಪೋಲೀಸರು ಹಾಗೇನೂ ಮಾಡದೇ ನೇರವಾಗಿ FIR ಮಾಡಿರುವುದರ ಹಿಂದೆ ಜಾತಿ ರೋಗವೇ ಕೆಲಸ ಮಾಡಿದೆ. ಮತ್ತದಕ್ಕೆ ನಾವು ಸರ್ಕಾರವನ್ನೂ ಹೊಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂದಿಸಿದ ಕರ್ತವ್ಯ ಭ್ರಷ್ಟ ಪೋಲೀಸರ ಮೇಲೆ ಸೂಕ್ತ ಕ್ರಮವಹಿಸಿ ಎಂದು ಸರ್ಕಾರಕ್ಕೆ ಭಾಸ್ಕರ ಪ್ರಸಾದ್‌ ಅವರು ಆಗ್ರಹಿಸಿದ್ದಾರೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...