Homeಕರ್ನಾಟಕಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ, ಉಳಿದ ಕ್ಷೇತ್ರಗಳಿಗೆ ಪಂಗನಾಮ: ಯಡ್ಡಿಯ ಕೀಳು ರಾಜಕೀಯ

ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ, ಉಳಿದ ಕ್ಷೇತ್ರಗಳಿಗೆ ಪಂಗನಾಮ: ಯಡ್ಡಿಯ ಕೀಳು ರಾಜಕೀಯ

ಹೈದರಾಬಾದ್ ಕರ್ನಾಟಕದಲ್ಲಿ ಕೀಳು ರಾಜಕೀಯ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಅನರ್ಹರಿಗೆ ವಿವೇಚನಾಹೀನ ನಿಧಿ ನೀಡಿದ್ದು ಬಿಜೆಪಿಯೇತರ ಶಾಸಕರಿಗೆ ದುರ್ವಿಧಿ ಘೋಷಿಸಿದ್ದಾರೆ.

- Advertisement -
- Advertisement -

ಪ್ರವಾಹಪೀಡಿತ ಪ್ರದೇಶಗಳಿಗೆ ಅನುದಾನ ಕೊಡುವುದಿರಲಿ, 10 ಸಾವಿರ ಕೊಟ್ಟದ್ದೇ ಹೆಚ್ಚು ಎಂದು ಸಂತ್ರಸ್ತ ಕುಟುಂಬಗಳನ್ನು ಸಚಿವ ಕೆ.ಎಸ್. ಈಶ್ವರಪ್ಪ ಅವಮಾನಿಸಿ ಹೋಗಿದ್ದಾರೆ. ಇತ್ತ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶಿಕಾರಿಪುರ ತಾಲೂಕಿಗೆ ಏಕಾಏಕಿ 1,100 ಕೋಟಿ ನೀಡಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ, ಉಳಿದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 3 ಕೋಟಿ ಅನುದಾನವನ್ನು ನೀಡಿರುವ ಯಡಿಯೂರಪ್ಪ, 23 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆಯನ್ನೂ ನೀಡಿಲ್ಲ. ಅಸಹ್ಯ ಆಡಳಿತ ಮತ್ತು ಸ್ವಾರ್ಥ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ನೆರೆಪೀಡಿತ ಪ್ರದೇಶಗಳಿಗೂ ಚಿಕ್ಕಾಸೂ ಬಿಡುಗಡೆ ಮಾಡಲು ಒಲ್ಲದ ದೇಶದ ಪ್ರಧಾನಿ ಚಂದಮಾಮಾನನ್ನು ತೋರಿಸಲು ಬೆಂಗಳೂರಿಗೆ ಬಂದು ಕರ್ನಾಟಕದ ಸಂಕಟಗಳಿಗೆ ಬೆನ್ನು ಮಾಡಿ ಹೋಗುತ್ತಾರೆ. ಇತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ‘ನಿಮ್ಗೆಲ್ಲ 10 ಸಾವಿರ ಪರಿಹಾರ ಕೊಟ್ಟಿದ್ದೇ ಜಾಸ್ತಿ ಹೋಗ್ರಿ’ ಎಂದು ಉದ್ಧಟತನದ ಮಾತಾಡಿ ಜನರ ಆಕ್ರೋಶಕ್ಕೆ ಗುರುಯಾಗಿದ್ದಾರೆ. ಅವರ ಕಾರಿಗೆ ಮುತ್ತಿಗೆ ಹಾಕಿದ ಜನ ಕಾರನ್ನು ಗುದ್ದಿ ಗುದ್ದಿ ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ಅದಕ್ಕಿಂತ ಹೀನ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುವ ಮೂಲಕ ಹೈದರಾಬಾದ್-ಕರ್ನಾಟಕದ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಪ್ರವಾಹ, ನೆರೆ ಮತ್ತು ಬರ ಇದ್ಯಾವುದರ ಬಗ್ಗೆಯೂ ನಮಗೆ ಚಿಂತೆಯಿಲ್ಲ, ನಮಗೀಗ ಉಪ ಚುನಾವಣೆಗಳನ್ನು ಗೆಲ್ಲಬೇಕು ಮತ್ತು ಹೈಮಾಂಡ್ ಹೇಳಿದ್ದನ್ನು ಎಲ್ಲ ಮುಚ್ಚಿಕೊಂಡು ಪಾಲಿಸಬೇಕು ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ತಮ್ಮ ಅಪ್ರಬುದ್ಧ, ಅಸಂಬದ್ಧ ಆದೇಶಗಳ ಮೂಲಕ ಜಗಜ್ಜಾಹೀರು ಮಾಡಿದ್ದಾರೆ.

ನೆರೆಪೀಡಿತರಿಗೆ ನಕೋ, ಅನರ್ಹರಿಗೆ ಪೀಕೋ ಪೀಕು
ಒಂದು ಕಡೆ ನೆರೆಪ್ರವಾಹದಿಂದ, ಇನ್ನೊಂದು ಕಡೆ ಪ್ರವಾಹದಿಂದ ಉತ್ತರ ಕರ್ನಾಟಕದ ಬಹುಭಾಗ ಮತ್ತು ದಕ್ಷಿಣ ಕರ್ನಾಟಕದ ಕೆಲ ಭಾಗಗಳಲ್ಲಿ ಜೀವನ ಅಸ್ತವ್ಯಸ್ತವಾಗಿದೆ, ಬೆಳೆಗಳು (ಪೀಕು) ನಾಶವಾಗಿವೆ. ಆದರೆ, ಅನರ್ಹ ಶಾಸಕರಿಗೆ ಮಾತ್ರ ಪೀಕೋ ಪೀಕು. ಸರ್ಕಾರ ಉರುಳಿಸಲು ಸಾಕಷ್ಟು ‘ಪೀಕಿದ’ ಈ ಅನರ್ಹರಿಗೆ ಈ ಸಚಿವ ಸ್ಥಾನ ಕೊಡಲಂತೂ ಆಗುವುದಿಲ್ಲ. ಆದರೆ, ಐದು ತಿಂಗಳಿಗೇ ಬರಲಿರುವ 17 ಉಪ ಚುನಾವಣೆಗಳಲ್ಲಿ ಕನಿಷ್ಠ 10ರಲ್ಲಾದರೂ ಗೆಲ್ಲಲೇಬೇಕು.

ಹೀಗಾಗಿ ಯಡಿಯೂರಪ್ಪ ಸರ್ಕಾರ ಈಗ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಕ್ಕಾಪಟ್ಟೆ ಅನುದಾನ ಕೊಡಲು ಪ್ಲಾನು ಮಾಡಿದೆ. ಅದರ ಮೊದಲ ಭಾಗವಾಗಿ ಈಗ ಹೈದರಾಬಾದ್-ಕರ್ನಾಟಕದ ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳಿಗೆ ತಲಾ 11 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದಾರೆ ಯಡಿಯೂರಪ್ಪ. ವಿಜಯನಗರ-ಹೊಸಪೇಟೆ (ಆನಂದಸಿಂಗ್-ಅನರ್ಹ) ಮತ್ತು ಮಸ್ಕಿ (ಪ್ರತಾಪಗೌಡ- ಅನರ್ಹ) ಈ ಇಬ್ಬರಿಗೂ ಬೋನಸ್ ನೀಡುವ ಮೂಲಕ ಬರಲಿರುವ ಉಪಚುನಾವಣೆಗಳ ಮೇಲೆ ಯಡಿಯೂರಪ್ಪ ಕಣ್ಣು ಹಾಕಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಝೀರೊ!
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ಬಜೆಟ್ಟಿನಲ್ಲಿ (ಕುಮಾರಸ್ವಾಮಿ ಮಂಡಿಸಿದ್ದು) 1,500 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಶೇ. 5ರಷ್ಟು ಮುಖ್ಯಮಂತ್ರಿಗಳ ವಿವೇಚನಾ ನಿಧಿ ಇರುತ್ತದೆ. ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೇ.5 ಅಂದರೆ 75 ಕೋಟಿ ರೂಪಾಯಿಗಳನ್ನು ಆದಷ್ಟು ತಾರತಮ್ಯವಿಲ್ಲದೇ ಹಂಚಿದ್ದರು. ಆದರೆ, ಮೊನ್ನೆ ಈ ಆದೇಶ ರದ್ದು ಮಾಡಿದ ಯಡಿಯೂರಪ್ಪನವರು, ಇಬ್ಬರು ಅನರ್ಹ ಶಾಸಕರ ( ಆನಂದ್‍ಸಿಂಗ್, ಪ್ರತಾಪಗೌಡ) ಕ್ಷೇತ್ರಗಳಿಗೆ ತಲಾ 11 ಕೋಟಿ ಬಿಡುಗಡೆ ಮಾಡಿದ್ದಾರೆ. ಹೈದರಾಬಾದದ-ಕರ್ನಾಟಕದ 42 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರ ಗೆದ್ದಿದೆ. ಅದರಲ್ಲಿ 16 ಕ್ಷೇತ್ರಗಳಿಗೆ ತಲಾ 3 ಕೋಟಿಗಳನ್ನು ಮತ್ತು ಇನ್ನೊಂದು ಬಿಜೆಪಿ ಗೆದ್ದಿರುವ ಕ್ಷೇತ್ರವಾದ ರಾಯಚೂರು ನಗರಕ್ಕೆ 4 ಕೋಟಿ ಬಿಡುಗಡೆ ಮಾಡಿದ್ದಾರೆ. ಅಂದರೆ, ಬಿಜೆಪಿಯ 17 ಮತ್ತು ಇಬ್ಬರು ಅನರ್ಹ ಶಾಸಕರ ಕ್ಷೇತ್ರಗಳನ್ನು ಬಿಟ್ಟು ಎಲ್ಲ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡದೇ ತಾವೆಷ್ಟು ಪಕ್ಷಪಾತಿ ಸಿಎಂ ಎಂದು ಸಾಬೀತು ಮಾಡಿದ್ದಾರೆ ಯಡಿಯೂರಪ್ಪ…

ಈಗಾಗಲೇ ಕುಮಾರಸ್ವಾಮಿ ಈ ಕುರಿತು ಅಪಸ್ವರ ಎತ್ತಿದ್ದಾರೆ. ಜೆಡಿಎಸ್ ಶಾಸಕ ನಾಗನಗೌಡ ಇರುವ ಗುರುಮಿಠಕಲ್ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ 4.5 ಕೋಟಿ ಅನುದಾನವನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ. (ಈ ಕ್ಷೇತ್ರದ ಶಾಸಕರ ಮಗ ಶರಣೇಗೌಡನೇ ದೇವದುರ್ಗದ ಐಬಿಯಲ್ಲಿ ಯಡಿಯೂರಪ್ಪರನ್ನು ಆಪರೇಷನ್ ಕಮಲದ ಆಡಿಯೋ ಖೆಡ್ಡಾಕ್ಕೆ ಕೆಡವಿದ್ದು!)
ನೆರೆಪೀಡಿತ ಲಿಂಗಸಗೂರು ತಾಲೂಕಿಗೂ ನಯಾಪೈಸೆಯಿಲ್ಲ, ಪ್ರವಾಹಬಾಧಿತ ರಾಯಚೂರು ಗ್ರಾಮೀಣಕ್ಕೂ ಬಿಡಿಗಾಸಿಲ್ಲ! ಆದರೆ, ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಪ್ರತಿನಿಧಿಸುವ ರಾಯಚೂರು ನಗರಕ್ಕೆ 4 ಕೋಟಿ! ಶಾಸಕರೇ ಇಲ್ಲದ (ಅನರ್ಹರ) ಕ್ಷೇತ್ರಗಳಿಗೆ ತಮ್ಮ ವಿವೇಚನಾ ನಿಧಿ 75 ಕೋಟಿಯಲ್ಲಿ 22 ಕೋಟಿ ರೂಪಾಯಿ!

ವಿವೇಚನಾಶೂನ್ಯ ಸಿಎಂ: ರಾಘವೇಂದ್ರ ಕುಷ್ಟಗಿ
ವಿವೇಚನಾ ನಿಧಿಯನ್ನು ಇಷ್ಟು ಕ್ಷುಲ್ಲಕ ಶೈಲಿಯಲ್ಲಿ ಹಂಚಿದ ಮುಖ್ಯಮಂತ್ರಿಯನ್ನು ನಾನು ನೋಡೇ ಇಲ್ಲ. ಹೀಗೆಲ್ಲ ಅಸಮಾನ ಹಂಚಿಕೆ ಮಾಡುವ ಇವರೆಲ್ಲ ಸಮಾನತೆ ಕನಸಿನ ಕಲ್ಯಾಣ ಎಂಬ ಪದವನ್ನೇ ಅವಮಾನ ಮಾಡಿದ್ದಾರೆ. ಈ ನಡುವೆ ಒಂದೇ ಒಂದು ಸಾರಿಯೂ ಹೈ-ಕ ಅಭಿವೃದ್ಧಿ ಮಂಡಳಿ ಸಭೆಗೆ ಹಾಜರಾಗದೇ ನಿರ್ಗಮಿಸುತ್ತಿರುವ ರಾಜ್ಯಪಾಲ ವಜುಭಾಯಿಯವರ ಧೋರಣೆಯನ್ನೂ ಗಮನಿಸಿ ಹೇಳುವುದಾದರೆ ಹೈ-ಕದ ಮೊದಲ ಶತ್ರು ಬಿಜೆಪಿಯೇ ಆಗಿದೆ… ವಿವೇಚನಾಶೂನ್ಯ ಸಿಎಂಗೆ ಇಲ್ಲಿನ ಜನ ಪಾಠ ಕಲಿಸಲೇಬೇಕು ಎಂದು ಜನ ಸಂಗ್ರಾಮ ಪರಿಷತ್‍ನ ರಾಘವೇಂದ್ರ ಕುಷ್ಟಗಿ ಹೇಳುತ್ತಾರೆ.

ಟೋಟಲಿ ನಾನ್‍ಸೆನ್ಸ್ ನಿರ್ಧಾರ: ರಜಾಕ್ ಉಸ್ತಾದ್
ಯಡಿಯೂರಪ್ಪನವರ ಈ ನಿರ್ಧಾರ ಟೋಟಲಿ ನಾನ್‍ಸೆನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ ಹೈ-ಕ ಅಭಿವೃದ್ಧಿ ಹೋರಾಟ ಸಮಿತಿಯ ರಜಾಕ್ ಉಸ್ತಾದ್, ‘ಹೈ-ಕ ಭಾಗದ ಎಲ್ಲ ಐದೂ ಸಂಸದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನ ಗೆಲ್ಲಿಸಿದ್ದಾರೆ. ಈ ಎಂಪಿಗಳ ಕ್ಷೇತ್ರಕ್ಕೆ ಬರುವ 25ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಒಂದು ರೂಪಾಯಿಯ ಅನುದಾನವನ್ನೂ ನೀಡಿಲ್ಲ. ನಾಚಿಕೆಯಾಗಬೇಕು ಈ ಐದೂ ಎಂಪಿಗಳಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಂದೆಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...