Homeಅಂಕಣಗಳುಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

ಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

- Advertisement -
- Advertisement -

| ಯಾಹೂ |

ನೋಡಿದ ಕೂಡಲೆ ಅಖಿಲ ಭಾರತ ಮಟ್ಟದ ಮುಠ್ಠಾಳನಂತೆ ಕಾಣುವ ಅಮಿತ್ ಶಾ ಎಂಬ ಭಾಷಾ ಬೃಹಸ್ಪತಿ ಹಿಂದಿ ಭಾಷೆಯನ್ನು ಇಂಡಿಯಾದ ಮೇಲೆ ಹೇರುವ ಮಾತನಾಡಿದ್ದಾನಲ್ಲಾ. ಯಾವ ಭಾಷೆಯೂ ಸರಿಯಾಗಿ ಬರದ ಈತನ ಹಿಂದಿ ಹೇರಿಕೆ ಮಾತಿಗೆ ಕರ್ನಾಟಕದ ಕನ್ನಡ ಸಂಘಗಳು ಜೇನುಗೂಡಿಗೆ ಕಲ್ಲು ಬೀರಿದಂತೆ ರ್ವಯ್ಯನೆ ಬೀದಿಗೆ ಬರುತ್ತವೆಂದು ನಿರೀಕ್ಷಿಸಿದ್ದ ಕನ್ನಡಿಗರಿಗೆ ಆಘಾತವಾಗಿದೆಯಂತಲ್ಲಾ. ಹಾಗಾದರೆ ಎಲ್ಲಿ ಹೋದವು? ಬೆಂಗಳೂರಿನ ಆದಾಯ ಹಂಚಿಕೊಳ್ಳುವಲ್ಲಿ ಹೊಡೆದಾಡಿ ಇಬ್ಬಾಗವಾದ ಬಣಗಳು ಅದ್ಯಾವಾಗ ಉಸಿರೆಳೆದವು ಎಂದು ಹುಡುಕಲಾಗಿ ಅವೆಲ್ಲಾ ಉಂಡ ಉಬ್ಬಸದಲ್ಲಿ ನರಳುತ್ತಿವೆಯೇ ಹೊರತು, ಉಸಿರೆಳೆದಿಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಈ ನಡುವೆ ಬಹುಭಾಷೆ ನಟ ಕಮಲ್‍ಹಾಸನ್ ಶಾ ಎಂಬ ಸುಲ್ತಾನನ ಕರೆಗೆ ಸೆಡ್ಡು ಹೊಡೆದಿರುವುದಲ್ಲದೆ ಮತ್ತೊಮ್ಮೆ ಇಂತಹ ಹೇಳಿಕೆ ಕೊಟ್ಟರೆ ಜಲ್ಲಿಕಲ್ಲು ಬೀರಬೇಕಾಗುತ್ತದೆಂದು ಎಚ್ಚರಿಕೆ ಕೊಟ್ಟಿದ್ದಾರಲ್ಲಾ. ಶಾ ಮಾತಿಗೆ ಹ್ವಟ್ಯಾಳ ನಾಗರಾಜ, ನಾರಾಯಣಗೌಡ, ಪ್ರವೀಣ ಶೆಟ್ಟಿ ತಕ್ಕ ಉತ್ತರ ಕೊಡುತ್ತಾರೆಂದು ಕಾದ ಮುಖ್ಯಮಂತ್ರಿ ಎಡೂರಪ್ಪನವರೆ ಮುಂದಾಗಿ ಕನ್ನಡಪರ ದನಿ ಎತ್ತಿ ಮಯೂರನಂತೆ ಘರ್ಜಿಸಿದ್ದಾರಲ್ಲಾ, ಥೂತ್ತೇರಿ….!

ಯಾರು ಏನೇ ಹೇಳಲಿ ಕನ್ನಡ ಭಾಷೆ ನಶಿಸುತ್ತಿದೆಯಂತಲ್ಲಾ. ಸಿಟಿಗಳಲ್ಲಿನ ನಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಅಕ್ಷರ ಮಾಯವಾಗಿದೆ. ಕರ್ನಾಟಕದ ರಸ್ತೆ ಬದಿಯ ಮೈಲಿ ಕಲ್ಲುಗಳಲ್ಲಿ ಕನ್ನಡ ಮಾಯವಾಗಿದೆ. ಹಳ್ಳಿಗಾಡಿನ ಹೊಟೇಲು ಕೂಡ ತಿಂಡಿ ಚೀಟಿಯನ್ನು ಇಂಗ್ಲಿಷ್‍ನಲ್ಲೇ ಮುದ್ರಿಸಿವೆ. ಬಸ್ಸುಗಳಲ್ಲೂ ಕೂಡ ಸೂಚನಾ ಫಲಕಗಳು ಇಂಗ್ಲಿಷ್‍ನಲ್ಲಿವೆ. ನಮ್ಮ ಅಕ್ಷರಗಳು ಕಣ್ಣಿಂದ ಮರೆಯಾದರೆ, ಮುಂದೆ ಅವನ್ನು ನಾವು ಗುರುತು ಹಿಡಿಯಲಾಗುವುದಿಲ್ಲ. ಇನ್ನ ಕಾನ್ವೆಂಟ್ ಮಕ್ಕಳು ಮನೆಯಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರೆ ತಂದೆ ತಾಯಿಗಳಿಗೆ ಎಲ್ಲಿಲ್ಲದ ಪುಲಕ. ನಾವು ಬರೆದ ಪುಸ್ತಕ ಲೇಖನವನ್ನ ನಮ್ಮ ಮನೆ ಮಕ್ಕಳೇ ಓದುತ್ತಿಲ್ಲ. ಅದಕ್ಕೆ ಸತ್ತ ಸಾಹಿತಿಯ ಮನೆಯವರು ಆ ಪುಸ್ತಕಗಳನ್ನ ಯಾರಾದರೂ ತೆಗೆದುಕೊಂಡು ಹೋಗಿ ಎಂದು ಬೇಡುತ್ತಿರುವುದು. ಹೀಗೆ ಕನ್ನಡದ ಜೊತೆ ಸಾಹಿತಿಗಳೂ ಕೊನೆಯುಸಿರೆಳೆಯುತ್ತಿರುವ ಸಮಯ ನೋಡಿಯೇ ಅಮಿತ್ ಶಾ ಹಾಗಂದಿರುವುದು. ಅವನ ಮಾತಿಗೆ ನಾರಾಯಣಗೌಡ ಏನು ಹೇಳುತ್ತಾನೆಂದು ಹುಡುಕಿದರೆ, ಆತ ಡಿಕೆಸಿ ಅರೆಸ್ಟಾಗಿರುವುದನ್ನ ಅರಗಿಸಿಕೊಳ್ಳಲಾರದೆ ಅಳುತ್ತಾ ಕೂತಿದ್ದಾನಂತಲ್ಲಾ, ಥೂತ್ತೇರಿ!!

ಅಳಿಯನ ಆತ್ಮಹತ್ಯೆ ಸುದ್ದಿ ಕೇಳಿದಾಗಲೂ ಸಾವಧಾನವಾಗಿ ಎದ್ದ ಎಸ್ಸೆಂ ಕೃಷ್ಣರು ಕನ್ನಡಿ ಮುಂದೆ ನಿಂತು ವಿಗ್ ಧರಿಸಿಕೊಂಡು ತಮ್ಮ ಸೊಗಸಿಗೆ ಚ್ಯುತಿ ಬಾರದಂತೆ ವೇಶ ಧರಿಸಿ ನಡೆದ ದುರಂತವನ್ನು ತಾಳ್ಮೆಯಿಂದ ನಿಭಾಯಿಸಿ, ಅಳುಬುರುಕರ ಮನಗೆದ್ದ ಕೃಷ್ಣ ಸ್ಮಾರ್ಟ್ ಸಿಟಿಗಳು ಹೇಗಿರಬೇಕೆಂದು ಮೋದಿಗೆ ಎರಡು ಪುಟದ ಪತ್ರ ಬರೆದಿದ್ದಾರಂತಲ್ಲಾ. ದುಃಖದಲ್ಲೂ ಸಿಟಿಯನ್ನು ಸೊಗಸಾಗಿ ನಿರ್ಮಿಸುವ ಕನಸು ಕಾಣುತ್ತಿರುವ ಕೃಷ್ಣರು ಮೋದಿಗೆ ಎರಡು ಪುಟದ ಪತ್ರ ಬರೆಯುವ ಬದಲು ಸಿದ್ಧಾರ್ಥನಿಗೆ ಒಂದು ಪುಟದ ಧೈರ್ಯದ ಸಾಲು ಬರೆಯಬಹುದಿತ್ತೆಂಬುದು ಮಂಡ್ಯದ ಮುಗ್ದರ ಸಲಹೆಯಾಗಿದೆಯಲ್ಲಾ

ಏನೆಂದರೆ, “ಸಿದ್ಧಾರ್ಥ ಆದ್ದದ್ದಾಯ್ತು. ನನ್ನ ಸಂಪತ್ತು ಈ ಮೋದಿಯ ನೋಟು ಬ್ಯಾನು, ಜಿಎಸ್‍ಟಿ ಮತ್ತು ಬೇಟೆ ನಾಯಿಗಳಂತಹ ಇನ್‍ಕಮ್ ಟ್ಯಾಕ್ಸ್ ಸಿಬ್ಬಂದಿಯಿಂದ ಮುಳುಗಿಹೋಯ್ತು. ಹೋಗಲಿ ಬಿಡು, ಅದೇನು ನಾನು ಮದ್ದೂರಿನ ಗದ್ದೆ ಹುತ್ತು ಸಂಪಾದಿಸಿದ್ದಲ್ಲ. ನೀನು ಎಲ್ಲವನ್ನು ಮಾರಿ ಸಾಲ ತೀರಿಸಿ ನಿಮ್ಮಪ್ಪನ ಎಸ್ಟೇಟ್ ಉಳಿಸಿಕೊಂಡು ಬದುಕು. ಈ ದೇಶದಲ್ಲಿ ನಿರ್ಗತಿಕರು ಭಿಕ್ಷುಕರು, ಕುಷ್ಟ ರೋಗಿಗಳೂ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನಿನಗೆ ಕಪ್ಪು ಹಣ ಕೊಟ್ಟವರೇ ಮಾಡಿಕೊಳ್ಳಲಿ. ನೀನು ಧೈರ್ಯವಾಗಿ ಬಾ, ಮಾತನಾಡೋಣ” ಎಂದು ಬರೆದಿದ್ದರೆ ಸಿದ್ಧಾರ್ಥ ಮರಳಿ ಬರುತ್ತಿದ್ದರಂತಲ್ಲಾ, ಥೂತ್ತೇರಿ!!

ಮನುಷ್ಯನಿಗೆ ವಯಸ್ಸಾದಂತೆ ಬುದ್ಧಿ ಮಾಗುತ್ತದೆ. ಮಾತಿನಲ್ಲಿ ತೂಕ ಬರುತ್ತದೆ. ಆದರೆ ಸಿದ್ದರಾಮಯ್ಯನ ಎದುರಾಳಿಯಾದ ಈಶ್ವರಪ್ಪನ ಅವತಾರ ನೋಡಿದರೆ ಕುರುಬರು ಹೋಗಲಿ, ಕರ್ನಾಟಕದ ಮಾನವಂತರ ಜೊತೆಗೆ ಸಾಬರೂ ಕೂಡ ಹೆದರುತ್ತಿದ್ದಾರಂತಲ್ಲಾ. ಈತನ ಮಾತು ನೋಡಿದರೆ ನಿಜಕ್ಕೂ ಈಶ್ವರಪ್ಪನೇ ಪಾಕಿಸ್ತಾನಕ್ಕೆ ಯೋಗ್ಯವಾದ ಪ್ರಜೆ. ಅಲ್ಲಿ ಯಾವ ಎಗ್ಗೂ ಇಲ್ಲದೆ ಮತಾಂಧತೆಯ ಮಾತನಾಡಬಹುದು. ಅನ್ಯ ಧರ್ಮೀಯರನ್ನ ಹೀಯಾಳಿಸಬಹುದು. ತನ್ನ ಮಾತಿನ ಪರಿಣಾಮ ಗ್ರಹಿಸಿ ವೈದ್ಯರಲ್ಲಿಗೆ ಹೋಗುವುದರ ಬದಲು ತಾನು ಕೆಲಸ ಮಾಡುವ ಪಾರ್ಟಿ ಆಫೀಸಿಗೆ ಹೋಗಬಹುದು. ಆದ್ದರಿಂದ ಈಶ್ವರಪ್ಪ ಪಾಕೀಸ್ತಾನಕ್ಕೆ ಹೋಗಿ ನೆಲೆಸಲು ಬಹುಯೋಗ್ಯವಾದ ಪ್ರಜೆ ಎಂದು ಇಸ್ಮಾಯಿಲ್ ಖಾನ್ ಹೇಳುತ್ತಿದ್ದಾರಂತಲ್ಲಾ. ಶಿವಮೊಗ್ಗದ ದುರಂತ ನೋಡಿ, ಅಲ್ಲಿ ಈಗ ಪ್ರಖ್ಯಾತ ಮನೋವೈದ್ಯರಿಲ್ಲ. ಅಶೋಕ್ ಪೈ ಇದ್ದಿದ್ದರೆ ಈಶ್ವರಪ್ಪನ ಮೆದುಳು ಮತ್ತು ನಾಲಿಗೆ ನಡುವೆ ಒಂದು ನಿಷ್‍ತಂತು ಅಂಗವನ್ನು ಅಳವಡಿಸಿ ಮಾತಿಗೆ ಮಿತಿಯಿರುವಂತೆ, ತೂಕ ಬರುವಂತೆ ಮಾಡಬಹುದಿತ್ತು. ಆದರೆ ಎಲ್ಲವೂ ಕೈಮೀರಿ ಹೋಗಿದೆ. ಇವತ್ತು ಮುಸ್ಲಿಮರ ಮೇಲೆ ಕೆರಳಿರುವ ಈಶ್ವರಿ, ಮುಂದೆ ದಲಿತರು, ಅಲೆಮಾರಿಗಳು ಮತ್ತೂ ತಿರುಗಿಬಿದ್ದು ಸಾದ ಲಿಂಗಾಯಿತರ ಮೇಲೆ ಎಗರಬಹುದು. ಒಟ್ಟಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆಯಂತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...