Homeಅಂಕಣಗಳುಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

ಸ್ಮಾರ್ಟ್ ಸಿಟಿ ಕಿಷ್ಣ ಮೋದಿಗೆ ಪತ್ರ ಬರೆದರಂತಲ್ಲಾ

- Advertisement -
- Advertisement -

| ಯಾಹೂ |

ನೋಡಿದ ಕೂಡಲೆ ಅಖಿಲ ಭಾರತ ಮಟ್ಟದ ಮುಠ್ಠಾಳನಂತೆ ಕಾಣುವ ಅಮಿತ್ ಶಾ ಎಂಬ ಭಾಷಾ ಬೃಹಸ್ಪತಿ ಹಿಂದಿ ಭಾಷೆಯನ್ನು ಇಂಡಿಯಾದ ಮೇಲೆ ಹೇರುವ ಮಾತನಾಡಿದ್ದಾನಲ್ಲಾ. ಯಾವ ಭಾಷೆಯೂ ಸರಿಯಾಗಿ ಬರದ ಈತನ ಹಿಂದಿ ಹೇರಿಕೆ ಮಾತಿಗೆ ಕರ್ನಾಟಕದ ಕನ್ನಡ ಸಂಘಗಳು ಜೇನುಗೂಡಿಗೆ ಕಲ್ಲು ಬೀರಿದಂತೆ ರ್ವಯ್ಯನೆ ಬೀದಿಗೆ ಬರುತ್ತವೆಂದು ನಿರೀಕ್ಷಿಸಿದ್ದ ಕನ್ನಡಿಗರಿಗೆ ಆಘಾತವಾಗಿದೆಯಂತಲ್ಲಾ. ಹಾಗಾದರೆ ಎಲ್ಲಿ ಹೋದವು? ಬೆಂಗಳೂರಿನ ಆದಾಯ ಹಂಚಿಕೊಳ್ಳುವಲ್ಲಿ ಹೊಡೆದಾಡಿ ಇಬ್ಬಾಗವಾದ ಬಣಗಳು ಅದ್ಯಾವಾಗ ಉಸಿರೆಳೆದವು ಎಂದು ಹುಡುಕಲಾಗಿ ಅವೆಲ್ಲಾ ಉಂಡ ಉಬ್ಬಸದಲ್ಲಿ ನರಳುತ್ತಿವೆಯೇ ಹೊರತು, ಉಸಿರೆಳೆದಿಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಈ ನಡುವೆ ಬಹುಭಾಷೆ ನಟ ಕಮಲ್‍ಹಾಸನ್ ಶಾ ಎಂಬ ಸುಲ್ತಾನನ ಕರೆಗೆ ಸೆಡ್ಡು ಹೊಡೆದಿರುವುದಲ್ಲದೆ ಮತ್ತೊಮ್ಮೆ ಇಂತಹ ಹೇಳಿಕೆ ಕೊಟ್ಟರೆ ಜಲ್ಲಿಕಲ್ಲು ಬೀರಬೇಕಾಗುತ್ತದೆಂದು ಎಚ್ಚರಿಕೆ ಕೊಟ್ಟಿದ್ದಾರಲ್ಲಾ. ಶಾ ಮಾತಿಗೆ ಹ್ವಟ್ಯಾಳ ನಾಗರಾಜ, ನಾರಾಯಣಗೌಡ, ಪ್ರವೀಣ ಶೆಟ್ಟಿ ತಕ್ಕ ಉತ್ತರ ಕೊಡುತ್ತಾರೆಂದು ಕಾದ ಮುಖ್ಯಮಂತ್ರಿ ಎಡೂರಪ್ಪನವರೆ ಮುಂದಾಗಿ ಕನ್ನಡಪರ ದನಿ ಎತ್ತಿ ಮಯೂರನಂತೆ ಘರ್ಜಿಸಿದ್ದಾರಲ್ಲಾ, ಥೂತ್ತೇರಿ….!

ಯಾರು ಏನೇ ಹೇಳಲಿ ಕನ್ನಡ ಭಾಷೆ ನಶಿಸುತ್ತಿದೆಯಂತಲ್ಲಾ. ಸಿಟಿಗಳಲ್ಲಿನ ನಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಅಕ್ಷರ ಮಾಯವಾಗಿದೆ. ಕರ್ನಾಟಕದ ರಸ್ತೆ ಬದಿಯ ಮೈಲಿ ಕಲ್ಲುಗಳಲ್ಲಿ ಕನ್ನಡ ಮಾಯವಾಗಿದೆ. ಹಳ್ಳಿಗಾಡಿನ ಹೊಟೇಲು ಕೂಡ ತಿಂಡಿ ಚೀಟಿಯನ್ನು ಇಂಗ್ಲಿಷ್‍ನಲ್ಲೇ ಮುದ್ರಿಸಿವೆ. ಬಸ್ಸುಗಳಲ್ಲೂ ಕೂಡ ಸೂಚನಾ ಫಲಕಗಳು ಇಂಗ್ಲಿಷ್‍ನಲ್ಲಿವೆ. ನಮ್ಮ ಅಕ್ಷರಗಳು ಕಣ್ಣಿಂದ ಮರೆಯಾದರೆ, ಮುಂದೆ ಅವನ್ನು ನಾವು ಗುರುತು ಹಿಡಿಯಲಾಗುವುದಿಲ್ಲ. ಇನ್ನ ಕಾನ್ವೆಂಟ್ ಮಕ್ಕಳು ಮನೆಯಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರೆ ತಂದೆ ತಾಯಿಗಳಿಗೆ ಎಲ್ಲಿಲ್ಲದ ಪುಲಕ. ನಾವು ಬರೆದ ಪುಸ್ತಕ ಲೇಖನವನ್ನ ನಮ್ಮ ಮನೆ ಮಕ್ಕಳೇ ಓದುತ್ತಿಲ್ಲ. ಅದಕ್ಕೆ ಸತ್ತ ಸಾಹಿತಿಯ ಮನೆಯವರು ಆ ಪುಸ್ತಕಗಳನ್ನ ಯಾರಾದರೂ ತೆಗೆದುಕೊಂಡು ಹೋಗಿ ಎಂದು ಬೇಡುತ್ತಿರುವುದು. ಹೀಗೆ ಕನ್ನಡದ ಜೊತೆ ಸಾಹಿತಿಗಳೂ ಕೊನೆಯುಸಿರೆಳೆಯುತ್ತಿರುವ ಸಮಯ ನೋಡಿಯೇ ಅಮಿತ್ ಶಾ ಹಾಗಂದಿರುವುದು. ಅವನ ಮಾತಿಗೆ ನಾರಾಯಣಗೌಡ ಏನು ಹೇಳುತ್ತಾನೆಂದು ಹುಡುಕಿದರೆ, ಆತ ಡಿಕೆಸಿ ಅರೆಸ್ಟಾಗಿರುವುದನ್ನ ಅರಗಿಸಿಕೊಳ್ಳಲಾರದೆ ಅಳುತ್ತಾ ಕೂತಿದ್ದಾನಂತಲ್ಲಾ, ಥೂತ್ತೇರಿ!!

ಅಳಿಯನ ಆತ್ಮಹತ್ಯೆ ಸುದ್ದಿ ಕೇಳಿದಾಗಲೂ ಸಾವಧಾನವಾಗಿ ಎದ್ದ ಎಸ್ಸೆಂ ಕೃಷ್ಣರು ಕನ್ನಡಿ ಮುಂದೆ ನಿಂತು ವಿಗ್ ಧರಿಸಿಕೊಂಡು ತಮ್ಮ ಸೊಗಸಿಗೆ ಚ್ಯುತಿ ಬಾರದಂತೆ ವೇಶ ಧರಿಸಿ ನಡೆದ ದುರಂತವನ್ನು ತಾಳ್ಮೆಯಿಂದ ನಿಭಾಯಿಸಿ, ಅಳುಬುರುಕರ ಮನಗೆದ್ದ ಕೃಷ್ಣ ಸ್ಮಾರ್ಟ್ ಸಿಟಿಗಳು ಹೇಗಿರಬೇಕೆಂದು ಮೋದಿಗೆ ಎರಡು ಪುಟದ ಪತ್ರ ಬರೆದಿದ್ದಾರಂತಲ್ಲಾ. ದುಃಖದಲ್ಲೂ ಸಿಟಿಯನ್ನು ಸೊಗಸಾಗಿ ನಿರ್ಮಿಸುವ ಕನಸು ಕಾಣುತ್ತಿರುವ ಕೃಷ್ಣರು ಮೋದಿಗೆ ಎರಡು ಪುಟದ ಪತ್ರ ಬರೆಯುವ ಬದಲು ಸಿದ್ಧಾರ್ಥನಿಗೆ ಒಂದು ಪುಟದ ಧೈರ್ಯದ ಸಾಲು ಬರೆಯಬಹುದಿತ್ತೆಂಬುದು ಮಂಡ್ಯದ ಮುಗ್ದರ ಸಲಹೆಯಾಗಿದೆಯಲ್ಲಾ

ಏನೆಂದರೆ, “ಸಿದ್ಧಾರ್ಥ ಆದ್ದದ್ದಾಯ್ತು. ನನ್ನ ಸಂಪತ್ತು ಈ ಮೋದಿಯ ನೋಟು ಬ್ಯಾನು, ಜಿಎಸ್‍ಟಿ ಮತ್ತು ಬೇಟೆ ನಾಯಿಗಳಂತಹ ಇನ್‍ಕಮ್ ಟ್ಯಾಕ್ಸ್ ಸಿಬ್ಬಂದಿಯಿಂದ ಮುಳುಗಿಹೋಯ್ತು. ಹೋಗಲಿ ಬಿಡು, ಅದೇನು ನಾನು ಮದ್ದೂರಿನ ಗದ್ದೆ ಹುತ್ತು ಸಂಪಾದಿಸಿದ್ದಲ್ಲ. ನೀನು ಎಲ್ಲವನ್ನು ಮಾರಿ ಸಾಲ ತೀರಿಸಿ ನಿಮ್ಮಪ್ಪನ ಎಸ್ಟೇಟ್ ಉಳಿಸಿಕೊಂಡು ಬದುಕು. ಈ ದೇಶದಲ್ಲಿ ನಿರ್ಗತಿಕರು ಭಿಕ್ಷುಕರು, ಕುಷ್ಟ ರೋಗಿಗಳೂ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನಿನಗೆ ಕಪ್ಪು ಹಣ ಕೊಟ್ಟವರೇ ಮಾಡಿಕೊಳ್ಳಲಿ. ನೀನು ಧೈರ್ಯವಾಗಿ ಬಾ, ಮಾತನಾಡೋಣ” ಎಂದು ಬರೆದಿದ್ದರೆ ಸಿದ್ಧಾರ್ಥ ಮರಳಿ ಬರುತ್ತಿದ್ದರಂತಲ್ಲಾ, ಥೂತ್ತೇರಿ!!

ಮನುಷ್ಯನಿಗೆ ವಯಸ್ಸಾದಂತೆ ಬುದ್ಧಿ ಮಾಗುತ್ತದೆ. ಮಾತಿನಲ್ಲಿ ತೂಕ ಬರುತ್ತದೆ. ಆದರೆ ಸಿದ್ದರಾಮಯ್ಯನ ಎದುರಾಳಿಯಾದ ಈಶ್ವರಪ್ಪನ ಅವತಾರ ನೋಡಿದರೆ ಕುರುಬರು ಹೋಗಲಿ, ಕರ್ನಾಟಕದ ಮಾನವಂತರ ಜೊತೆಗೆ ಸಾಬರೂ ಕೂಡ ಹೆದರುತ್ತಿದ್ದಾರಂತಲ್ಲಾ. ಈತನ ಮಾತು ನೋಡಿದರೆ ನಿಜಕ್ಕೂ ಈಶ್ವರಪ್ಪನೇ ಪಾಕಿಸ್ತಾನಕ್ಕೆ ಯೋಗ್ಯವಾದ ಪ್ರಜೆ. ಅಲ್ಲಿ ಯಾವ ಎಗ್ಗೂ ಇಲ್ಲದೆ ಮತಾಂಧತೆಯ ಮಾತನಾಡಬಹುದು. ಅನ್ಯ ಧರ್ಮೀಯರನ್ನ ಹೀಯಾಳಿಸಬಹುದು. ತನ್ನ ಮಾತಿನ ಪರಿಣಾಮ ಗ್ರಹಿಸಿ ವೈದ್ಯರಲ್ಲಿಗೆ ಹೋಗುವುದರ ಬದಲು ತಾನು ಕೆಲಸ ಮಾಡುವ ಪಾರ್ಟಿ ಆಫೀಸಿಗೆ ಹೋಗಬಹುದು. ಆದ್ದರಿಂದ ಈಶ್ವರಪ್ಪ ಪಾಕೀಸ್ತಾನಕ್ಕೆ ಹೋಗಿ ನೆಲೆಸಲು ಬಹುಯೋಗ್ಯವಾದ ಪ್ರಜೆ ಎಂದು ಇಸ್ಮಾಯಿಲ್ ಖಾನ್ ಹೇಳುತ್ತಿದ್ದಾರಂತಲ್ಲಾ. ಶಿವಮೊಗ್ಗದ ದುರಂತ ನೋಡಿ, ಅಲ್ಲಿ ಈಗ ಪ್ರಖ್ಯಾತ ಮನೋವೈದ್ಯರಿಲ್ಲ. ಅಶೋಕ್ ಪೈ ಇದ್ದಿದ್ದರೆ ಈಶ್ವರಪ್ಪನ ಮೆದುಳು ಮತ್ತು ನಾಲಿಗೆ ನಡುವೆ ಒಂದು ನಿಷ್‍ತಂತು ಅಂಗವನ್ನು ಅಳವಡಿಸಿ ಮಾತಿಗೆ ಮಿತಿಯಿರುವಂತೆ, ತೂಕ ಬರುವಂತೆ ಮಾಡಬಹುದಿತ್ತು. ಆದರೆ ಎಲ್ಲವೂ ಕೈಮೀರಿ ಹೋಗಿದೆ. ಇವತ್ತು ಮುಸ್ಲಿಮರ ಮೇಲೆ ಕೆರಳಿರುವ ಈಶ್ವರಿ, ಮುಂದೆ ದಲಿತರು, ಅಲೆಮಾರಿಗಳು ಮತ್ತೂ ತಿರುಗಿಬಿದ್ದು ಸಾದ ಲಿಂಗಾಯಿತರ ಮೇಲೆ ಎಗರಬಹುದು. ಒಟ್ಟಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆಯಂತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...