‘ದಿ ವೈರ್’ ಗಾಗಿ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಚುನಾವಣಾ ಫಲಿತಾಂಶಗಳ ಕುರಿತ ತನ್ನ ಹಳೆಯ ಭವಿಷ್ಯವಾಣಿಗಳ ಬಗ್ಗೆ ಉಲ್ಲೇಖಿಸಿದ್ದಕ್ಕೆ ತೀವ್ರ ಸಿಟ್ಟಾದ ಘಟನೆ ನಡೆದಿದೆ.
ಕರಣ್ ಥಾಪರ್ ಅವರು ಪ್ರಶಾಂತ್ ಕಿಶೋರ್ ಅವರ ಈ ಹಿಂದಿನ ಎಕ್ಸ್ ಪೋಸ್ಟ್ ಒಂದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಪ್ರಶಾಂತ್ ಕಿಶೋರ್ ಮಾತ್ರ ತಾನು ಆ ರೀತಿ ಹೇಳಿಕೆ ನೀಡೇ ಇಲ್ಲ ಎಂದು ವಾದಿಸಿದ್ದಾರೆ. ಈ ವಿಚಾರ ಇಂಟರ್ನೆಟ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮೇ 2022ರಲ್ಲಿ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಪ್ರಶಾಂತ್ ಕಿಶೋರ್ ಈ ಹಿಂದೆ ಭವಿಷ್ಯ ನುಡಿದಿದ್ದರು. ಆದರೆ, ಕಾಂಗ್ರೆಸ್ ಗೆಲುವು ದಾಖಲಿಸಿತ್ತು. ಈ ವಿಚಾರವನ್ನು ಕರಣ್ ಥಾಪರ್ ನೆನಪಿಸಿದಾಗ ಕಿಶೋರ್ ಅವರು ಕಾಂಗ್ರೆಸ್ ಬಗ್ಗೆ ಈ ಹಿಂದೆ ಹೇಳಿದ್ದನ್ನೆಲ್ಲಾ ನಿರಾಕರಿಸಿದ್ದಾರೆ. ಏರುದನಿಯಲ್ಲಿ ಥಾಪರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ತಬ್ಬಿಬ್ಬಾಗಿದ್ದಾರೆ.
During an interview with Karan Thapar, @PrashantKishor says, "Show me a video of me telling Congress will be routed in Himachal Pradesh, I will quit the job".
Here is your tweet @PrashantKishor where you'd mentioned the same. 👋👋 pic.twitter.com/hPbzrFyaIS— Mohammed Zubair (@zoo_bear) May 22, 2024
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಕಾಂಗ್ರೆಸ್ 100 ಸ್ಥಾನಗಳನ್ನು ಕೂಡಾ ಗೆಲ್ಲುವುದು ಕಷ್ಟ ಎಂದು ಸಂದರ್ಶನದಲ್ಲಿ ಕಿಶೋರ್ ಭವಿಷ್ಯ ನುಡಿದಿದ್ದಾರೆ. ಈ ವೇಳೆ ಪ್ರಶಾಂತ್ ಕಿಶೋರ್ ಅವರ ಈ ಹಿಂದಿನ ಭವಿಷ್ಯಗಳು ಸುಳ್ಳಾಗಿರುವುದನ್ನು ಥಾಪರ್ ಉಲ್ಲೇಖಿಸಿದ್ದಾರೆ.
“ಕಾಂಗ್ರೆಸ್ ಹಿಮಾಚಲದಲ್ಲಿ ಸೋಲುತ್ತದೆ ಎಂದು ನಾನು ಹೇಳಿದ ವಿಡಿಯೋ ತೋರಿಸಬೇಕು, ಇಲ್ಲದಿದ್ದರೆ ನೀವು ಕ್ಷಮೆ ಯಾಚಿಸಬೇಕು ” ಎಂದು ಕರಣ್ ಥಾಪರ್ ಮುಂದೆ ಪ್ರಶಾಂತ್ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಮಾಧ್ಯಮಗಳಲ್ಲಿ ಬಂದಿರುವ ಅವರ ಹೇಳಿಕೆಗಳನ್ನು ಕರಣ್ ಥಾಪರ್ ಉಲ್ಲೇಖಿಸಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಆಸ್ಪದವನ್ನೇ ಕೊಡದ ಕಿಶೋರ್, “ಮಾಧ್ಯಮಗಳು ಏನು ಬೇಕಾದರೂ ಬರೆಯುತ್ತವೆ. ಅದಕ್ಕೆ ನಾನು ಜವಾಬ್ದಾರನಲ್ಲ. ನಿಮ್ಮಂತಹ ಪತ್ರಕರ್ತರು ಏನು ಬೇಕಾದರೂ ಬರೀತೀರಿ” ಎಂದು ಕರಣ್ ಥಾಪರ್ ವಿರುದ್ಧವೇ ಆರೋಪ ಮಾಡಿದ್ದಾರೆ.
I’ve been repeatedly asked to comment on the outcome of #UdaipurChintanShivir
In my view, it failed to achieve anything meaningful other than prolonging the status-quo and giving some time to the #Congress leadership, at least till the impending electoral rout in Gujarat and HP!
— Prashant Kishor (@PrashantKishor) May 20, 2022
ತೀವ್ರ ಕೋಪಗೊಂಡಂತೆ ಕಂಡ ಪ್ರಶಾಂತ್ ಕಿಶೋರ್ಗೆ “ನೀವು ಸಂದರ್ಶನ ಮುಂದುವರಿಸಲು ಇಚ್ಛಿಸುತ್ತೀರಾ? ಅಥವಾ ಮುಗಿಸಲು ಬಯಸುತ್ತೀರಾ?” ಎಂದು ಕರಣ್ ಥಾಪರ್ ಕೇಳಿದ್ದು, ಇನ್ನಷ್ಟು ಸಿಟ್ಟಾಗಿಸಿದೆ. “ನಿಮ್ಮಂತಹ ಒಬ್ಬರಲ್ಲ ನಾಲ್ವರನ್ನು ನಾನು ಸುಧಾರಿಸಬಲ್ಲೆ, ನನಗೆ ನಿಮ್ಮನ್ನು ಹೇಗೆ ಎದುರಿಸಬೇಕು ಎಂದು ಚೆನ್ನಾಗಿ ಗೊತ್ತಿದೆ. ನಾನೇನೂ ಎದ್ದು ಹೋಗುವುದಿಲ್ಲ. ನೀವೇ ದೊಡ್ಡ ಖಡಕ್ ಸಂದರ್ಶಕ ಎಂಬ ಭ್ರಮೆಯಲ್ಲಿರಬೇಡಿ” ಎಂದು ಕರಣ್ ಥಾಪರ್ ಮೇಲೆ ಎಗರಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತೀವ್ರ ವಿಚಲಿತರಾದಂತೆ ಕಂಡು ಬಂದಿದ್ದು, ಪಕ್ಕದಲ್ಲಿದ್ದ ಲೋಟ ಎತ್ತಿ ನೀರನ್ನೂ ಕುಡಿದಿದ್ದಾರೆ.
Save Water.
Don’t give interviews to Karan Thapar. pic.twitter.com/hHYsKXVPNz
— Team Saath Official🤝 (@TeamSaath) May 23, 2024
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಾಂತ್ ಕಿಶೋರ್ರ ಈ ಹಿಂದಿನ ಎಕ್ಸ್ನ ಪೋಸ್ಟ್ನ ಸ್ಕ್ರೀನ್ಶಾಟ್ ಮತ್ತು ಈ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ಈ ಹಿಂದೆ ಥಾಪರ್ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀರು ಕುಡಿಯುತ್ತಿರುವ ಮತ್ತು ಈಗ ಪ್ರಶಾಂತ್ ಕಿಶೋರ್ ನೀರು ಕುಡಿದ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರು, “ನೀರು ಉಳಿಸಿ, ಕರಣ್ ಥಾಪರ್ಗೆ ಸಂದರ್ಶನ ನೀಡಬೇಡಿ” ಎಂದು ಗೇಲಿ ಮಾಡಿದ್ದಾರೆ.
ಇದನ್ನೂ ಓದಿ : ಕಲ್ಲಿದ್ದಲು ಹಗರಣ: ಅದಾನಿ ವಿರುದ್ಧ ED, CBI ಕ್ರಮ ಯಾಕಿಲ್ಲ? ಮೋದಿ ವಿರುದ್ಧ ಪ್ರತಿಪಕ್ಷಗಳು ವಾಗ್ಧಾಳಿ


