Homeಅಂತರಾಷ್ಟ್ರೀಯIMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

IMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

ದಕ್ಷಿಣ ಅಮೇರಿಕಾ ಖಂಡದ ವಾಯವ್ಯ ಕರಾವಳಿಯಲ್ಲಿರುವ ಪುಟ್ಟ ರಾಷ್ಟ್ರ ಈಕ್ವಡೋರ್‌ನ ಮೂಲನಿವಾಸಿ ಜನರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಜೊತೆ ಸೇರಿ ನಡೆಸಿದ ಎರಡು ವಾರಗಳ ಉಗ್ರ ಪ್ರತಿಭಟನೆಯ ಬಳಿಕ ಸರಕಾರವನ್ನು ಮಣಿಸಿ, ಐಎಂಎಫ್ ಹೇರಿದ್ದ ಆರ್ಥಿಕ 'ಸುಧಾರಣೆ'ಗಳನ್ನು ತಿರಸ್ಕರಿಸುವಂತೆ ಮಾಡಿದ್ದಾರೆ.

- Advertisement -
- Advertisement -

ಮೂಲ: ಸ್ವಾತಿ ಶುಕ್ಲಾ

ಅನುವಾದ: ನಿಖಿಲ್ ಕೋಲ್ಪೆ

ಈಕ್ವಡೋರ್ ರಾಜಧಾನಿ ಕ್ವಿಟೋ ಕಳೆದ ಎರಡು ವಾರಗಳಿಂದ ರಣರಂಗವಾಗಿಬಿಟ್ಟಿತ್ತು. ಕಾರಣವೆಂದರೆ, ಇಂಧನ ಸಬ್ಸಿಡಿಯ ಹಿಂತೆಗೆತವನ್ನು ಮೂಲ ನಿವಾಸಿ ಜನರು ಖಂಡತುಂಡವಾಗಿ ಪ್ರತಿಭಟಿಸಿದ್ದರು. ಇಂಧನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದಾಗಿ ಅಧ್ಯಕ್ಷ ಲೆನಿನ್ ಮೊರೆನೊ ಘೋಷಿಸಿದ ಬೆನ್ನಲ್ಲೇ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದೀಗ ಪ್ರತಿಭಟನಕಾರರಿಗೆ ಮಣಿದಿರುವ ಸರಕಾರ, ಐಎಂಎಫ್ ಹೇರಿದ್ದ ಪ್ಯಾಕೇಜನ್ನು ಹಿಂತೆಗೆದುಕೊಂಡಿದೆ.

ಮೊರೆನೊ ಸರಕಾರವು ಪ್ರಸ್ತಾಪಿಸಿದ್ದ ಹಲವಾರು ನವ ‘ಉದಾರವಾದಿ’ ಕ್ರಮಗಳಲ್ಲಿ ತೈಲ ಸಬ್ಸಿಡಿ ಹಿಂತೆಗೆತವೂ ಒಂದಾಗಿತ್ತು. ಮೂಲನಿವಾಸಿ ಗುಂಪುಗಳು ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಚಳವಳಿಗಳ ಜೊತೆ ಸೇರಿ ರಾಷ್ಟ್ರೀಯ ಮುಷ್ಕರವನ್ನು ಆಯೋಜಿಸಿದ್ದು, ಮಿಲಿಟರಿ ಮತ್ತು ಪೊಲೀಸ್ ಪಡೆಗಳು ಅತ್ಯಂತ ದಮನಕಾರಿಯಗಿ ಪ್ರತಿಭಟನೆಯನ್ನು ಬಗ್ಗುಬಡಿಯಲು ಯತ್ನಿಸಿದ್ದವು.

ಮೊದಲಾಗಿ ಇಂಧನ ಸಬ್ಸಿಡಿ ಹಿಂತೆಗೆತದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಮೂಲನಿವಾಸಿ ಗುಂಪುಗಳ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ಅದರ ಧಣಿಗಳು ಹೇರಿರುವ ‘ನವ ಉದಾರವಾದಿ’ ಮಾದರಿಯ ವಿರುದ್ಧದ ಪ್ರತಿಭಟನೆಯಾಗಿ ಪರಿವರ್ತನೆಗೊಂಡು ಉಗ್ರರೂಪ ತಳೆಯಿತು.

ಲೆನಿನ್ ಮೊರೆನೊ

ಮಾರ್ಚ್ 2019ರಲ್ಲಿ ಐಎಂಎಫ್ ಹಲವು ಶರತ್ತುಗಳೊಂದಿಗೆ ಈಕ್ವಡೋರ್‌ಗೆ 4.2 ಬಿಲಿಯನ್ (420 ಕೋಟಿ) ಡಾಲರ್‌ಗಳ ಸಾಲ ನೀಡಿತ್ತು. ಇಂತಹ ಶರತ್ತುಗಳಲ್ಲಿ ಹಲವು ಅಂತರರಾಷ್ಟ್ರೀಯ ಹಗರಣಗಳನ್ನು ಬಯಲು ಮಾಡಿದ ವೀಕೀಲೀಕ್ಸ್ ಸಂಪಾದಕ ಜೂಲಿಯನ್ ಅಸ್ಸಾಂಜೆಯನ್ನು ಯುಎಸ್‌ಎಗೆ ಬಿಟ್ಟುಕೊಡಬೇಕು ಎಂಬುದೂ ಒಂದಾಗಿತ್ತು.

“ನಾವು ಈಕ್ವಡೋರ್‌ಗೆ ನೆರವಾಗಲು ಇಲ್ಲಿದ್ದೇವೆ. ನಮ್ಮ ಉದ್ದೇಶ ಎಂದರೆ, ಆರ್ಥಿಕತೆಯನ್ನು ಆಧುನಿಕರಣಗೊಳಿಸಲು ಈಕ್ವಡೋರಿಗೆ ನೆರವಾಗಿ, ಸುದೃಢ, ಸುಸ್ಥಿರ ಮತ್ತು ನ್ಯಾಯಸಮ್ಮತ ಅಭಿವೃದ್ಧಿಗೆ ದಾರಿಮಾಡಿಕೊಡುವುದು” ಎಂದು ಐಎಂಎಫ್ ಆಡಳಿತ ಮಂಡಳಿ ತನ್ನ ಎಂದಿನ ಬಂಡವಾಳಶಾಹಿ ಶೈಲಿಯಲ್ಲಿ ಬುರುಡೆ ಬಿಟ್ಟಿತ್ತು. ಇದರ ಬೆನ್ನಲ್ಲೇ ಹಲವಾರು “ಸಂಯಮದ” “ಸುಧಾರಣಾ” ಕ್ರಮಗಳನ್ನು ಹೇರಲಾಗಿತ್ತು.

ಐಎಂಎಫ್ ಜೊತೆ ಕಳೆದ ವರ್ಷ ನಡೆಸಿದ ಒಪ್ಪಂದಕ್ಕೆ ಅನುಗುಣವಾಗಿ ಮೊರೆನೊ ಸರಕಾರ ಸೆಪ್ಟೆಂಬರ್ 30ರಂದು ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿತ್ತು. ಇದರಿಂದ ಸಹಜವಾಗಿ ಇವೆರಡರ ಬೆಲೆಗಳು ಗಗನಕ್ಕೇರಿದ್ದವು.

ಇಂಧನ ಸಬ್ಸಿಡಿ ಹಿಂತೆಗೆತದ ಅರ್ಥವೆಂದರೆ, ಬಡವರು ಮತ್ತು ದುಡಿಯುವ ವರ್ಗದವರು ಇಂಧನಕ್ಕೆ ಹೆಚ್ಚು ಬೆಲೆ ತೆರಬೇಕಾದರೆ, ಖಾಸಗಿ ಇಂಧನ ಸಂಸ್ಥೆಗಳು ಹೆಚ್ಚು ಲಾಭವನ್ನು ದೋಚಬಹುದು.

“ಸರಕಾರ ಮಾಡಿರುವುದು ಏನೆಂದರೆ, ದೊಡ್ಡ ಬ್ಯಾಂಕುಗಳು, ಬಂಡವಾಳಶಾಹಿಗಳಿಗೆ ಬಹುಮಾನ ನೀಡಿ, ಬಡ ಈಕ್ವಡೋರಿಯನ್ನರಿಗೆ ಶಿಕ್ಷೆ ನೀಡಿರುವುದು” ಎಂದು ಕಾರ್ಮಿಕರ ಸಂಘಟನೆಗಳ ಒಕ್ಕೂಟವಾಗಿರುವ ವರ್ಕರ್ಸ್ ಯುನೈಟೆಡ್ ಫ್ರಂಟ್‌ನ ಮುಖ್ಯಸ್ಥ ಮೆಸಿಯಾಸ್ ಟಟಮುಯೆಸ್ ಹೇಳಿದ್ದಾರೆ.

ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಏಕೆಂದರೆ, ಇಂಧನ ಬೆಲೆ ಏರಿಕೆಯಿಂದ ಆಹಾರ ಮತ್ತು ಸಾರಿಗೆ ದರಗಳು ಗಗನಕ್ಕೇರಿದ್ದು, ಮೂಲ ನಿವಾಸಿ ಜನರು ಎಲ್ಲರಿಗಿಂತಲೂ ಹೆಚ್ಚು ಬಾಧಿತರಾಗಿದ್ದಾರೆ ಎಂದು ಪ್ರತಿಭಟನೆಯ ನಾಯಕರು ಹೇಳುತ್ತಾರೆ.

ಪ್ರತಿಭಟನಕಾರರು ಅಧ್ಯಕ್ಷೀಯ ಅರಮನೆಯ ಸುತ್ತಲಿನ ತಡೆಗಳನ್ನು ಭೇದಿಸಿ ಮುನ್ನುಗ್ಗುವ ವಿಫಲ ಪ್ರಯತ್ನ ನಡೆಸಿದ ಬಳಿಕ ಹೆದರಿದ ಮೊರೆನೊ, ತನ್ನ ಸರಕಾರವನ್ನು, ಆಡಳಿತವನ್ನು ಅಕ್ಟೋಬರ್ 7ರಂದು ಬಂದರು ನಗರ ಗ್ವಾಯಾಗುಲಿಗೆ ಸ್ಥಳಾಂತರಿಸಬೇಕಾಗಿ ಬಂದಿತ್ತು.

ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಮೇ, 2017ರಂದು ಅಧಿಕಾರ ತೊರೆದ ಮೇಲೆ ಮೊರೆನೊ ಸರಕಾರ ದೇಶವನ್ನು ಬಲಪಂಥದತ್ತ ಒಯ್ಯುತ್ತಿದೆ. ಈಗ ಮೊರೆನೊ, ಉದ್ಯಮಿಗಳು ಮತ್ತು ಸೇನೆಯ ಬೆಂಬಲ ಹೊಂದಿದ್ದರೂ, ಅವರ ಜನಪ್ರಿಯತೆ 2017ರಲ್ಲಿದ್ದ 70 ಶೇಕಡಾದಿಂದ 30 ಶೇಕಡಾಕ್ಕೆ ಕುಸಿದಿದೆ. ಮೊರೆನೊ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಸರಕಾರ ತಂದಿದ್ದ ಹಲವು ಪ್ರಗತಿಪರ ಕ್ರಮಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಪ್ರತಿಭಟನೆಯು ಎರಡನೇ ವಾರ ಪ್ರವೇಶಿಸುತ್ತಿದ್ದಂತೆ, ಮೂಲ ನಿವಾಸಿ ಪ್ರತಿಭಟನಕಾರರು ತಾವು ವಶಕ್ಕೆ ತೆಗೆದುಕೊಂಡ ಕೆಲವು ಪೊಲೀಸರನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಮೊರೆನೊ ಸರಕಾರಕ್ಕೆ ತಾವು ಅಂಜುವುದಿಲ್ಲ ಎಂಬ ದಿಟ್ಟ ಸಂದೇಶ ನೀಡಿದ್ದರು.

ಮೂಲನಿವಾಸಿಗಳ ಪ್ರತಿಭಟನೆಗಳು 1997ರಲ್ಲಿ ಅಬ್ದಲಾ ಬುಕಾರಮ್, 2000ದಲ್ಲಿ ಜಮಿಲ್ ಮಹುವದ್ ಮತ್ತು 2005ರಲ್ಲಿ ಲೂಸಿಯೋ ಗುಟಿಯೆರೆಝ್ ಸಹಿತ ಹಲವಾರು ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಇದೀಗ ಪ್ರತಿಭಟನೆಗೆ ಮಣಿದಿರುವ ಮೊರೆನೊ ಸರಕಾರವು ಮೂಲನಿವಾಸಿಗಳೊಂದಿಗೆ ಬುಧವಾರ ಒಪ್ಪಂದಕ್ಕೆ ಬಂದಿದ್ದು, ಐಎಂಎಫ್ ಹೇರಿಕೆಯ ‘ಸುಧಾರಣಾ ಕ್ರಮ’ಗಳನ್ನು ಹಿಂತೆದುಕೊಳ್ಳಲು ಒಪ್ಪಿದೆ. ಇದರೊಂದಿಗೆ ಆರ್ಥಿಕತೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಏಳು ಜನರ ಸಾವಿಗೆ ಕಾರಣವಾದ ಹೆಚ್ಚುಕಡಿಮೆ ಎರಡು ವಾರ ಕಾಲದ ಪ್ರತಿಭಟನೆ ಕೊನೆಗೊಳ್ಳಲಿದೆ.

ಒಪ್ಪಂದದ ಪ್ರಕಾರ, ತೈಲ ಬೆಲೆ ತೀವ್ರ ಏರಿಕೆಗೆ ಕಾರಣವಾದ ಡಿಕ್ರಿ 883 ಎಂದು ಕರೆಯಲ್ಪಡುವ ಐಎಂಎಫ್ ಪ್ರೇರಿತ ಪ್ಯಾಕೇಜನ್ನು ಮೊರೆನೊ ಸರಕಾರ ಹಿಂತೆಗೆದುಕೊಳ್ಳಲಿದೆ. ಇದಕ್ಕೆ ಬದಲಾಗಿ, ಪ್ರತಿಭಟನೆ ಮತ್ತು ರಸ್ತೆ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಮೂಲ ನಿವಾಸಿ ಗುಂಪುಗಳ ನಾಯಕರು ತಮ್ಮ ಬೆಂಬಲಿಗರಿಗೆ ಕರೆ ನೀಡಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ: ಆರು ಶಿಕ್ಷಕರು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ...

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...