‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ.
ಆರ್ಎಸ್ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಸಂಘಟನೆಯನ್ನು ನೋಂದಾಯಿಸುವುದರಿಂದ ಅಂತಹ ಆರೋಪಗಳು ಉದ್ಭವಿಸಲು ಕಡಿಮೆ ಅವಕಾಶವಿದೆ’ ಎಂದಿದ್ದಾರೆ.
ಉಡುಪಿಯಲ್ಲಿ ‘ಅಯ್ಯೋಧ್ಯೆಯ ರಾಮ ಮಂದಿರ ಹಗರಣದ’ ಕುರಿತು ಮಾತನಾಡಿದ ಪೇಜಾವರ ಮಠದ ಯತಿ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗಳಲ್ಲಿ ಒಬ್ಬರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ‘ರಾಮ ಮಂದಿರದಲ್ಲಿ ನಡೆದ ಆರ್ಥಿಕ ಅಕ್ರಮಗಳ ಆರೋಪಗಳ ಕುರಿತು ಜುಲೈ 11 ರಂದು ನಡೆಯಲಿರುವ ಟ್ರಸ್ಟ್ ಸಭೆಯವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ಸಭೆಯಲ್ಲಿ ಭಾಗವಹಿಸುವುದಾಗಿ, ಆರೋಪಗಳ ಸುತ್ತಲಿನ ವಾಸ್ತವಾಂಶಗಳನ್ನು ಅರ್ಥಮಾಡಿಕೊಂಡು, ವಿಷಯ ಅಧಿಕೃತವಾಗಿ ಚರ್ಚೆಯಾದ ನಂತರವೇ ಪ್ರತಿಕ್ರಿಯಿಸುವುದಾಗಿ ಈ ವೇಳೆ ತಿಳಿಸಿದ್ದಾರೆ.
ದೇವಾಲಯಕ್ಕೆ ಸುಮಾರು 200 ಕೆಜಿ ಬೆಳ್ಳಿಯನ್ನು ದಾನ ಮಾಡಲಾಗಿದೆ ಆದರೆ ದಾನಿಗಳನ್ನು ಸೂಕ್ತವಾಗಿ ಗುರುತಿಸಲಾಗಿಲ್ಲ ಎಂಬ ಸಿಂಧಿ ಸಮುದಾಯದ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂದಿರುವ ಅವರು ಗಣನೀಯ ದೇಣಿಗೆ ನೀಡುವವರು ದೇಣಿಗೆ ನೀಡುವ ಸಮಯದಲ್ಲಿ ಸರಿಯಾದ ರಶೀದಿಗಳನ್ನು ಪಡೆಯಬೇಕು, ಆದರೆ ದೇಣಿಗೆ ಪಡೆಯುವವರು ಅವುಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
“ರಶೀದಿಗಳನ್ನು ನೀಡದಿದ್ದರೆ, ಅದು ಗಂಭೀರ ತಪ್ಪು. ಕೇವಲ ಮೌಖಿಕ ಹೇಳಿಕೆಗಳು ಅಂತಹ ಸಮಸ್ಯೆಗಳಿಗೆ ಆಧಾರವಾಗಿರಬಾರದು. ಆರೋಪಗಳಲ್ಲಿ ಸ್ವಲ್ಪ ಸತ್ಯವಿರಬಹುದು, ಆದರೆ ರಶೀದಿಯನ್ನು ನೀಡಲಾಗಿಲ್ಲ ಎಂದು ನಂಬುವುದು ಕಷ್ಟ” ಎಂದು ಅವರು ಹೇಳಿದ್ದಾರೆ.
ಆಪಾದಿತ ಅಕ್ರಮಗಳ ಕುರಿತು ನಡೆಯುತ್ತಿರುವ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ಸ್ವಾಗತಿಸಿದ ಶ್ರೀಗಳು, ತನಿಖೆಯು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದು, “ಯಾವುದೇ ತಪ್ಪು ಸಂಭವಿಸಿದ್ದರೆ, ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ಹೊಣೆಗಾರರು ಸೂಕ್ತ ಶಿಕ್ಷೆಯನ್ನು ಎದುರಿಸಬೇಕು. ಇದು ಭಾರತ ಮತ್ತು ವಿದೇಶಗಳ ಭಕ್ತರಿಗೆ ನಂಬಿಕೆಯ ಸ್ಥಳವಾಗಿದೆ. ಇಂತಹ ಘಟನೆಗಳು ಇಲ್ಲಿ ಎಂದಿಗೂ ಸಂಭವಿಸಬಾರದು. ಸತ್ಯವು ಆದಷ್ಟು ಬೇಗ ಹೊರಬರಬೇಕು” ಎಂದು ಒತ್ತಾಯಿಸಿದ್ದಾರೆ.
ಟ್ರಸ್ಟ್ ಸಭೆಗಳಲ್ಲಿ ಮತ್ತು ಅಯೋಧ್ಯೆಗೆ ಭೇಟಿ ನೀಡಿದಾಗಲೆಲ್ಲಾ ತಾವು ಪದೇ ಪದೇ ಸಲಹೆಗಳನ್ನು ನೀಡುತ್ತಿರುವುದಾಗಿ ಸ್ವಾಮೀಜಿ ಬಹಿರಂಗಪಡಿಸಿದ ಅವರು. “ಸಂಬಂಧಪಟ್ಟವರು ಅವುಗಳನ್ನು ಕಾರ್ಯಗತಗೊಳಿಸುತ್ತಾರೆ ಎಂದು ನಂಬಿ ನಾನು ನನ್ನ ಸಲಹೆಗಳನ್ನು ಉತ್ತಮ ನಂಬಿಕೆಯಿಂದ ನೀಡಿದ್ದೇನೆ. ನಾನು ಸಲಹೆ ನೀಡಬಲ್ಲೆ, ಟ್ರಸ್ಟ್ನ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ಜವಾಬ್ದಾರಿಗಳನ್ನು ವಹಿಸಿಕೊಟ್ಟವರು ವಿಶ್ವಾಸಾರ್ಹರಾಗಿರಬೇಕು” ಎಂದು ಅವರು ಹೇಳಿದ್ದಾರೆ.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳ ಕುರಿತು, ಸ್ವಾಮೀಜಿ ಅವರು ಯಾವುದೇ ಅಧಿಕೃತ ಸಂವಹನವನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದು, “ಟ್ರಸ್ಟ್ನ ವಾಟ್ಸಾಪ್ ಗುಂಪಿನಲ್ಲಿ ಯಾವುದೇ ಸಂದೇಶವನ್ನು ಪೋಸ್ಟ್ ಮಾಡಲಾಗಿಲ್ಲ, ಅಥವಾ ಅವರಿಂದ ನನಗೆ ಯಾವುದೇ ನೇರ ಸಂವಹನವೂ ಬಂದಿಲ್ಲ. ಹಿಂದೆ, ಅವರು ಅಂತಹ ಬೆಳವಣಿಗೆಗಳ ಬಗ್ಗೆ ನಮಗೆ ತಿಳಿಸುತ್ತಿದ್ದರು. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನನಗೆ ತಿಳಿದಿಲ್ಲ” ಎಂದಿದ್ದಾರೆ.
ದಾನಿ ಗುರುತಿಸುವಿಕೆ ಕುರಿತ ಟ್ರಸ್ಟ್ನ ನೀತಿಯನ್ನು ಉಲ್ಲೇಖಿಸಿದ ಸ್ವಾಮೀಜಿ, ಇತರ ಅನೇಕ ದೇವಾಲಯಗಳಿಗಿಂತ ಭಿನ್ನವಾಗಿ ದೇವಾಲಯದಲ್ಲಿ ದಾನಿ ಅಥವಾ ಸೇವಾ ಪಟ್ಟಿಗಳನ್ನು ಪ್ರದರ್ಶಿಸದಿರಲು ಟ್ರಸ್ಟ್ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ದೇವಾಲಯಗಳಿಗೆ ದುಬಾರಿ ಕಾಣಿಕೆಗಳನ್ನು ನೀಡುವ ಬದಲು ಭಕ್ತರು ತಮ್ಮ ಸಂಪನ್ಮೂಲಗಳನ್ನು ಸಮಾಜ ಕಲ್ಯಾಣಕ್ಕಾಗಿ ಬಳಸುವುದನ್ನು ಪರಿಗಣಿಸಬೇಕು ಎಂಬ ತಮ್ಮ ದೀರ್ಘಕಾಲದ ಮನವಿಯನ್ನು ಅವರು ಪುನರುಚ್ಚರಿಸಿದ್ದಾರೆ.
“100 ಕೆಜಿ ಬೆಳ್ಳಿಯನ್ನು ದಾನ ಮಾಡುವ ಬದಲು, ದಾನಿಗಳು, ಬಡವರಿಗಾಗಿ 1,000 ಮನೆಗಳನ್ನು ನಿರ್ಮಿಸಬಹುದು. ಸೌಲಭ್ಯವಂಚಿತರಿಗೆ ಸೇವೆ ಸಲ್ಲಿಸುವುದು ನಿಜವಾದ ರಾಮ ಸೇವೆ. ಸಮಾಜಕ್ಕೆ ಸೇವೆ ಸಲ್ಲಿಸಲು ಹಲವಾರು ಅವಕಾಶಗಳಿವೆ ಮತ್ತು ಅಂತಹ ಸೇವೆಯನ್ನು ಭಗವಾನ್ ರಾಮನಿಗೆ ಅರ್ಪಿಸಬಹುದು” ಎಂದು ಕರೆ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸ್ವಾಮೀಜಿ, ಆರೋಪಗಳ ಬಗ್ಗೆ ಎಸ್ಐಟಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುತ್ತದೆ ಎಂದು ನಂಬುವುದಾಗಿ ಹೇಳಿದ್ದಾರೆ.


