Homeಎಚ್.ಎಸ್.ದೊರೆಸ್ವಾಮಿಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

ಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

- Advertisement -
- Advertisement -

ಕರ್ನಾಟಕಕ್ಕೊಂದು ಸವಾಲು ಎದುರಾಗಿದೆ- ಇದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ಸು ಒಡೆದ ಮನೆಯಾಗಿದೆ. ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕೋಲಾರದ ಮುನಿಯಪ್ಪನವರ ನಾಯಕತ್ವ ಕೋಲಾರಕ್ಕೆ ಸೀಮಿತವಾಗಿತ್ತು. ಈಗ ಅದೂ ಇಲ್ಲವಾಗಿದೆ. ಅಲ್ಲೂ ಅವರಿಗೆ ಎದುರಾಳಿಗಳು ಹುಟ್ಟಿಕೊಂಡು ಅವರ ವರ್ಚಸ್ಸು ಕಡಿಮೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮತ್ತು ದೊಡ್ಡ ನಾಯಕರಾದರೂ, ಅವರ ಪ್ರಭಾವ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾಗಿತ್ತು. ಅವರು ನಾಯಕತ್ವ ವಿಸ್ತಾರಗೊಳಿಸುವ ಸಾಮಥ್ರ್ಯ ಹೊಂದಿದ್ದಾರೆ. ಎಚ್.ಕೆ.ಪಾಟೀಲರು ಉತ್ತರ ಕರ್ನಾಟಕದ ಎತ್ತರಕ್ಕೆ ಬೆಳೆದ ನಾಯಕರು. ಸಾರ್ವಜನಿಕ ಜೀವನವನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಮಾಜ ಸೇವಕರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯದಲ್ಲಿ ಅವರಿನ್ನೂ ದೊಡ್ಡ ಹೆಜ್ಜೆಗಳನ್ನು ಹಾಕಿಲ್ಲ. ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ ಚುನಾವಣೆ ನಡೆಸುವ ದೊಡ್ಡ ಜವಾಬ್ದಾರಿಯನ್ನು ಪಾಟೀಲರಿಗೆ ವಹಿಸಲಾಗಿತ್ತು. ಅದನ್ನು ನಿಭಾಯಿಸುವುದರಲ್ಲಿ ಅವರು ಫಲಕಾರಿಯಾಗಿಲ್ಲ.

ಪರಮೇಶ್ವರರು ಬುದ್ಧಿವಂತರು, ರಾಜಕೀಯ ಬಲ್ಲವರು. ಅವರು ತಮ್ಮ ತಂದೆಯವರ ಮೂಸೆಯಲ್ಲಿ ಬೆಳೆದವರು. ಆದರೆ ಅವರಿಗೆ Dashing ಸ್ವಭಾವ ಇಲ್ಲ. ಸಂಘಟನೆ ಮಾಡುವ ಅನುಭವವಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 3-4 ಸಾರಿ ಕಾಂಗ್ರೆಸ್ ಜಯಗಳಿಸಿರುವುದು ನಿಜ. ಅದು ಅವರ ಅದೃಷ್ಟ ಎಂದು ಹೇಳಬಹುದೇ ಹೊರತು ಅವರ ರಾಜಕೀಯ ಕೌಶಲದಿಂದ ಆದ ಗೆಲುವು ಎಂದು ಹೇಳಲು ಪುರಾವೆಗಳಿಲ್ಲ.

ಇನ್ನುಳಿದಂತೆ ಹಾಳೂರಿಗೆ ಉಳಿದವನೇ ಒಡೆಯ ಎಂಬ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಭಿನ್ನ. ಆಡಳಿತದ ಅನುಭವವುಳ್ಳವರು. ನಾಯಕತ್ವದ ಲಕ್ಷಣ ಉಳ್ಳವರು, ರಾಮಕೃಷ್ಣ ಹೆಗ್ಡೆ, ದೇವೇಗೌಡರ ಮೂಸೆಯಲ್ಲಿ ಬೆಳೆದು ಬಂದವರು. ಸ್ವಲ್ಪ ಮಟ್ಟಿಗೆ ಮೈನಾರಿಟಿಗಳಲ್ಲಿ ಮೈನಾರಿಟಿಗಳಾದ ದೇವರಾಜ ಅರಸರಂತೆ ಅಲ್ಪಸಂಖ್ಯಾತರ ಏಳ್ಗೆಯ ಬಗೆಗೆ ಗಮನ ಹರಿಸುವವರು. ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಹೆಚ್ಚಿನ ವರ್ಚಸ್ಸಿನ ವ್ಯಕ್ತಿ ಸಿದ್ದರಾಮಯ್ಯ. ಆದರೆ ಇವರು ಕೊನೆಯ ಪಕ್ಷ ರಾಮಕೃಷ್ಣ ಹೆಗ್ಡೆ, ದೇವರಾಜ ಅರಸರು, ದೇವೇಗೌಡರಷ್ಟು ದಕ್ಷ ಹೋರಾಟಗಾರರಲ್ಲ ಎಂಬುದು ಕಟುಸತ್ಯ. ಆದ್ದರಿಂದ ಸಿದ್ದರಾಮಯ್ಯ ಮೊದಲುಗೊಂಡು ಇತರ ನಾಯಕರು ತಮ್ಮ Ego ಬಿಟ್ಟು ಸಾಮೂಹಿಕ ನಾಯಕತ್ವ ವಹಿಸಿಕೊಂಡರೆ ಮಾತ್ರ ಕರ್ನಾಟಕ ಕಾಂಗ್ರೆಸ್‍ಗೆ ಭವಿಷ್ಯ ಇರುವುದು. ಇವರು ಸ್ಥಾನಮಾನಗಳನ್ನು ನ್ಯಾಯಯುತವಾಗಿ ಹಂಚಿಕೊಂಡು, ಒಟ್ಟಾಗಿ ನಿಂತು ಸಂಘರ್ಷಕ್ಕೆ ಇಳಿದರೆ ಮಾತ್ರ ಮೋದಿ ಮತ್ತು ಶಾರವರ onslaughtನ್ನು ಎದುರಿಸಲು ಸಾಧ್ಯವಾದೀತು.

ನನ್ನ ದೃಷ್ಟಿಯಲ್ಲಿ ಮೋದಿ ಈಗ ಕರ್ನಾಟಕವನ್ನು ಬಿಜೆಪಿ ವಶಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅವರು ಲಿಂಗಾಯತ, ಒಕ್ಕಲಿಗರ ಎರಡು ರಾಜಕೀಯ ಬಲಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದಾರೆ. ಈ ಎರಡು ಬಣಗಳನ್ನು ಒಡೆದರೆ ತನ್ನ ಗುರಿ ಸಾಧನೆಯಾದೀತೆಂದು ನಂಬಿದ್ದಾರೆ. ಇಂಗ್ಲಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ಶಾ ಮತ್ತು ಮೋದಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಪ್ರಯೋಗ ಮಾಡಲು ತೀರ್ಮಾನಿಸಿರುವಂತಿದೆ. ಯಡಿಯೂರಪ್ಪನವರನ್ನು ಬಹಳಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರು ಬಿಡುವುದಿಲ್ಲ. ಅವರ ರಾಜೀನಾಮೆ ಪಡೆದು, ರಾಷ್ಟ್ರಾಧ್ಯಕ್ಷರ ಆಡಳಿತ ಹೇರಿ ಆರು ತಿಂಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ಅವರದು. ಈ ಪ್ರಯೋಗಕ್ಕೆ ಇದು ಸಕಾಲ ಎಂಬುದು ಅವರ ಲೆಕ್ಕಾಚಾರ.

ಲಿಂಗಾಯತರಿಗೆ ಶಾಸನಸಭೆಗೆ ಸಾಕಷ್ಟು ಸೀಟು ಕೊಟ್ಟಿಲ್ಲ. ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಹಲವು ಲಿಂಗಾಯತ ಮಠಗಳೂ ಡಿಮ್ಯಾಂಡಿಡುವುದು ಸರ್ವೇ ಸಾಮಾನ್ಯ ವಿಷಯ. ಇಷ್ಟರ ಮಟ್ಟಿಗೆ ಲಿಂಗಾಯತ ಮಠಗಳು ರಾಜಕೀಯಕ್ಕೆ ಕೈ ಹಾಕುವುದನ್ನು ಅನೇಕ ಸಾರಿ ಕಂಡಿದ್ದೇವೆ. ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದ್ಯವೇ ಸರಿ. ಅವರೆಡೆಗೆ ಲಿಂಗಾಯಿತ ಮಠಗಳಿಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮೋದಿಯ strategy ಒಕ್ಕಲಿಗ ಲಿಂಗಾಯತರನ್ನು ಬೇರ್ಪಡಿಸುವುದೇ ಆಗಿದೆ. ಲಿಂಗಾಯತರನ್ನು ಒಲಿಸಿಕೊಳ್ಳಲು ಲಿಂಗಾಯತ ಮಠಗಳ ಸಹಾಯ ಪಡೆಯುವುದು, ಒಕ್ಕಲಿಗ ನಾಯಕರನ್ನು ಮೂಲೆ ಗುಂಪು ಮಾಡುವುದು ಮೋದಿ-ಶಾ ಲೆಕ್ಕಾಚಾರ. ಕರ್ನಾಟಕದಲ್ಲಿ ಇರುವ ಪ್ರಭಾವಶಾಲಿ ಜಾತಿಗಳು ಇವೆರಡೇ. ಇವರನ್ನು ಒಡೆದರೆ ನಮ್ಮ ಪತಾಕೆ ಹಾರಿಸಬಹುದು ಎಂಬುದು ಮೋದಿ ಅವರ ಅಂಬೋಣ.

ಕರ್ನಾಟಕದಲ್ಲಿ ಒಕ್ಕಲಿಗರನ್ನು ಒಂದುಗೂಡಿಸುವ ರಾಜಕೀಯ ಶಕ್ತಿಯಾಗಿದ್ದವರು ಎಂದರೆ ದೇವೇಗೌಡರು, ಕುಮಾರಸ್ವಾಮಿಯವರು. ಮನೆತನದ ರಾಜಕೀಯಕ್ಕೆ ಬದ್ಧ ದೇವೇಗೌಡರನ್ನೂ ಇದುವರೆಗೂ ಒಕ್ಕಲಿಗರು ಪ್ರಶ್ನಿಸಿದ್ದಿಲ್ಲ. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ 7 ಸ್ಥಾನಗಳಲ್ಲಿ 3ನ್ನು ದೇವೇಗೌಡರು ತಮ್ಮ ಮನೆಗೆ ಕೊಂಡೊಯ್ದರು. ಅವುಗಳಲ್ಲಿ ಒಂದನ್ನು ಗೆದ್ದು ಎರಡರಲ್ಲಿ ಸೋತರು. ಈಗ ಒಕ್ಕಲಿಗರು ದೇವೇಗೌಡರನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭ ಮಾಡಿದ್ದಾರೆ. ಅವರ ವರ್ಚಸ್ಸು ಕುಗ್ಗುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಪ್ರಾಬಲ್ಯವನ್ನು ಕಡಿಮೆ ಮಾಡುವ ಹುನ್ನಾರ ಮಾಡಲೇಬೇಕೆಂದು ಮೋದಿ ತೀರ್ಮಾನಿಸಿದ್ದಾರೆ. ದೇವೇಗೌಡರಿಗೆ ಅದಕ್ಕಿಂತ ಮುಖ್ಯವಾಗಿ, ಒಕ್ಕಲಿಗ ಜನಾಂಗಕ್ಕೇ ಇದು ಒಂದು ಸವಾಲು.

ಆ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಜಾತಿವಾದಿಯಾಗಿಲ್ಲ. ಜಾತಿ ಪದ್ಧತಿ ರದ್ದಾಗಬೇಕೆನ್ನುವವನು ನಾನು. ಆದರೆ ಒಂದು ಬಣವನ್ನೇ ನಾಶ ಮಾಡುವುದಕ್ಕೆ ಅಥವಾ ನಿರ್ವೀಯರನ್ನಾಗಿ ಮಾಡುವುದಕ್ಕೆ ನಾನು ಕಡು ವಿರೋಧಿ. ಆದ್ದರಿಂದ ನನ್ನದು ಈ ನಿಲುವು.

ಒಕ್ಕಲಿಗರು ಮೈ ಕೊಡವಿಕೊಂಡು ಎದ್ದು ಮೋದಿಯವರ ಈ ಸವಾಲನ್ನು ಎದುರಿಸಲು ಸೆಡ್ಡು ಹೊಡೆಯಬೇಕು. ಕೂಡಲೇ ಒಕ್ಕಲಿಗ ನಾಯಕರು, ಲಿಂಗಾಯತ ಮಠಗಳ ಸಂಪರ್ಕ ಮಾಡಿ, ನಾವು ಹಿಂದಿನಂತೆಯೇ ಸಾಮರಸ್ಯದಿಂದ ಬಾಳುವ ಸಂಕಲ್ಪ ಮಾಡೋಣವೆಂದು ಪಕ್ಷ ಭೇದ ಮರೆತು ಮನವರಿಕೆ ಮಾಡಿಕೊಡಬೇಕು. ‘ಆಲಸ್ಯಂ ಅಮೃತಂ ವಿಷಂ’.

ಸಿದ್ದರಾಮಯ್ಯನವರಿಗೂ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೂ ಸಖ್ಯ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಕರ್ನಾಟಕ ಕಾಂಗ್ರೆಸ್ಸು ನೆಲ ಕಚ್ಚುವುದು ಹಾಗೂ ದೇವೇಗೌಡರ ವರ್ಚಸ್ಸು ಇಳಿಮುಖವಾಗುವ ಸಾಧ್ಯತೆಗಳಿವೆ. ಆ ಉಭಯರೂ ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಒಬ್ಬರಿಗೊಬ್ಬರು ಸ್ನೇಹಹಸ್ತ ನೀಡಬೇಕು. ಕಾಂಗ್ರೆಸ್ ಮತ್ತು ದೇವೇಗೌಡರ ಪಕ್ಷ ಎರಡೂ ತನ್ನ ಎಡವಟ್ಟುಗಳನ್ನು ಮನಗಂಡು, ಹೊಸ ಒಡಂಬಡಿಕೆ ಮಾಡಿಕೊಂಡು ಕೂಡಿ ಹೋರಾಡಬೇಕು. ನಿನ್ನದು ಎರಡು ಕಣ್ಣು ಹೋಗುವುದಾದರೆ, ನನ್ನದು ಒಂದು ಕಣ್ಣು ಹೋದರು ಸರಿ ಎಂದು ಸಿದ್ದರಾಮಯ್ಯ ಮೊದಲುಗೊಂಡು ಎಲ್ಲರೂ ತೀರ್ಮಾನಕ್ಕೆ ಬಂದಿದ್ದರೆ, ಮೋದಿಯವರ ಕೈಗೆ ಕರ್ನಾಟಕವನ್ನು ನೀವೇ ಕರೆದು ಒಪ್ಪಿಸಿದಂತೆ ಆಗುತ್ತದೆ. ಹೀಗೆ ನೀವಿಬ್ಬರು ಅವಿವೇಕಿಗಳಂತೆ ವರ್ತಿಸಿದರೆ, ಜನ ನಿಮ್ಮನ್ನು ಸುಮ್ಮನೆ ಬಿಡೊಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...