- Advertisement -
- Advertisement -
ದೆಹಲಿಯ ಪ್ರಾಣಿ ಸಂಗ್ರಹಾಲಯದ ಸಿಂಹದ ಗುಹೆಯೊಳಗೆ ಯುವಕನೊಬ್ಬ ಜಿಗಿದಿದ್ದಾನೆ. ಸಿಂಹದ ಎದುರೇ ಕುಳಿತಿದ್ದ ಯುವಕನನ್ನು ರಕ್ಷಿಸಲಾಗಿದೆ. ಯುವಕನ ಹತ್ತಿರಕ್ಕೆ ಬಂದ ಸಿಂಹ ತದೇಕಚಿತ್ತದಿಂದ ಯುವಕನನ್ನೇ ನೋಡುತ್ತಿತ್ತು. ಸ್ವಲ್ಪ ಸಮಯದ ನಂತರ ಯುವಕನನ್ನು ಕಾಲಿನಿಂದ ಹೊಡೆಯಲು ನೋಡಿದೆ. ಆಗಲೂ ಯುವಕ ಭಯಗೊಂಡಿಲ್ಲ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೂನಲ್ಲಿ ನಿಂತಿದ್ದ ಜನ ಯುವಕನನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಸಹ ಪಟ್ಟು ಬಿಡದೇ ಯುವಕ ಸಿಂಹದ ಗುಹೆಯೊಳಗೆ ಜಿಗಿದಿದ್ದಾನೆ. ಅಷ್ಟೇ ಅಲ್ಲದೆ ಸಿಂಹದ ಎದುರೇ ಹೋಗಿ ಕುಳಿತಿದ್ದಾನೆ. ಯುವಕನನ್ನು ರಿಹಾನ್ ಖಾನ್ ಎಂದು ಗುರುತಿಸಲಾಗಿದೆ. ಬಿಹಾರ ನಿವಾಸಿಯಾಗಿರುವ ಈತ ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಯುವಕನನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.