Homeಕರ್ನಾಟಕಭಾರತ ಒಕ್ಕೂಟ ವ್ಯವಸ್ಥೆ; ಯಾವುದನ್ನೂ ಹೇರಲು ಸಾಧ್ಯವಿಲ್ಲ: ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ

ಭಾರತ ಒಕ್ಕೂಟ ವ್ಯವಸ್ಥೆ; ಯಾವುದನ್ನೂ ಹೇರಲು ಸಾಧ್ಯವಿಲ್ಲ: ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ

- Advertisement -
- Advertisement -

“ಭಾರತವು ಕೇಂದ್ರೀಯ ವ್ಯವಸ್ಥೆಯಲ್ಲ; ಒಕ್ಕೂಟ ವ್ಯವಸ್ಥೆ. ಯಾರೂ ಯಾರ ಮೇಲೂ ಯಾವುದನ್ನೂ ಹೇರಲು ಸಾಧ್ಯವಿಲ್ಲ” ಎಂದು ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ ಹೇಳಿದರು.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಆಯೋಜಿಸಲಾಗಿದ್ದ ‘ಗಂಡಾಂತರದಲ್ಲಿ ಗಣರಾಜ್ಯ’ ಚಿಂತನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಕವಿರಾಜಮಾರ್ಗದ ಪದ್ಯದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ನಾಡು ಇದೆ ಎಂದು ಹೇಳುತ್ತದೆ. ಕರ್ನಾಟಕಕ್ಕೆ ಕನ್ನಡ ನಾಡು ಎಂದು ಹೇಳುತ್ತದೆ. ಈ ಕನ್ನಡ ನಾಡಿಗೆ ಸಂವಿಧಾನ ಯಾವುದು? ಪರ ಧರ್ಮ, ಪರ ವಿಚಾರಗಳನ್ನು ಸಹಿಸುವುದೇ ಅದರ ನೀತಿ ಎಂದು ಪದ್ಯ ಹೇಳುತ್ತದೆ. ಆ ಒಂದು ಪದ್ಯ, ಕರ್ನಾಟಕದ ಭೂಮಿ, ಜನರು, ವಿಶಿಷ್ಟತೆ, ಹೆಸರು, ಇರಬೇಕಾದ ಪ್ರಮುಖ ನೀತಿಗಳ ಕುರಿತು ವ್ಯಾಖ್ಯಾನ ಮಾಡುತ್ತದೆ” ಎಂದರು.

“ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ಸದಸ್ಯ ರಾಜ್ಯವಾಗಿದೆ. ಪ್ರತಿ ಒಕ್ಕೂಟವು ನೈಸರ್ಗಿಕವಾದ ಹಕ್ಕುಗಳನ್ನು ಹೊಂದಿರುತ್ತದೆ. ಅದರಲ್ಲಿ ಭಾಷೆಯನ್ನ ಕೇಂದ್ರೀಕರಿಸಿ, ರಾಜ್ಯವು ಸಂಘಟಿತವಾಗಬಹುದು. ಹೀಗಾಗಿಯೇ, ಸ್ವಾತಂತ್ರ್ಯ ಹೋರಾಟದ ಜೊತೆಗೆ ನಮ್ಮ ಹಿರಿಕರು ಏಕೀಕರಣ ಚಳುವಳಿಯನ್ನೂ ನಡೆಸಿದರು” ಎಂದು ವಿವರಿಸಿದರು.

“ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಏಕೀಕರಣ ಚಳುವಳಿಯಲ್ಲಿಯೂ ಭಾಗಿಯಾಗಿದ್ದರು. ಕರ್ನಾಟಕದ ರಾಷ್ಟ್ರೀಯತೆ ಬಗ್ಗೆ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯ ಮತ್ತು ರಾಜ್ಯದ ಏಕೀಕರಣ ಎರಡೂ ಒಟ್ಟಿಗೆ ನಡೆಯಬೇಕು ಎಂದು ಹೇಳಿದ್ದರು. ಆಲೂರು ವೆಂಕಟರಾಯರು ‘ಕರ್ನಾಟಕತ್ವದ ಸೂತ್ರಗಳು’ ಎಂದು ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಹಲವು ಸಮಸ್ಯೆಗಳಿದ್ದರೂ, ಅದು ಬಹಳ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣದ ಬಳಿಕ ಅವರು ಕರ್ನಾಟಕತ್ವದ ಬಗ್ಗೆ ಬರೆದಿದದ್ದು ಮಹತ್ವದ್ದು. ಕರ್ನಾಟಕದ ಮೂಲಕವೇ ಜಗತ್ತನ್ನು ನೋಡಬೇಕೆಂದು ಅವರು ಹೇಳಿದ್ದರು. ನಮ್ಮ ಹಿರಿಯರೂ ಕೂಡ ಅದನ್ನೇ ಹೇಳಿದ್ದರು” ಎಂದು ತಿಳಿಸಿದರು.

“ನಮ್ಮ ‘ಜನಗಣಮನ’ ಭಾರತವನ್ನು ಒಂದು ಒಕ್ಕೂಟ ಎಂದೇ ಹೇಳುತ್ತದೆ. ಭಾರತದ ಎಲ್ಲ ರಾಜ್ಯಗಳು, ಭೂಪ್ರದೇಶದ ಬಗ್ಗೆ ಠ್ಯಾಗೂರ್ ಬರೆದಿದ್ದಾರೆ. ಭಾರತದ ಸರ್ಕಾರ ಕೇಂದ್ರ ಸರ್ಕಾರವಲ್ಲ; ಒಕ್ಕೂಟ ಸರ್ಕಾರ. ಯಾರೂ ಯಾವುದೇ ರಾಜ್ಯದ ಮೇಲೆ ಯಾವುದನ್ನೂ ಹೇರಲು ಸಾಧ್ಯವಿಲ್ಲ. ಹಾಗೆ ಹೇರಲು ಯತ್ನಿಸಿದಾಗ, ನಾವು ಅದನ್ನು ವಿರೋಧಿಸುತ್ತೇವೆ. ವಿರೋಧಿಸುವ ಹಕ್ಕು ನಮಗಿದೆ. ಕರ್ನಾಟಕವಾಗಲೀ, ಭಾರತವಾಗಲೀ ಎರಡೂ ಬೇರೆ-ಬೇರೆ ಎಂಟಿಟಿಯನ್ನು ಹೊಂದಿವೆ. ಅವುಗಳಲ್ಲಿರುವ ಸಮಾನ ಸಂಗತಿ ಎಂದರೆ, ಬಹು ಧರ್ಮೀಯ, ಬಹು ಭಾಷಿಕ, ಬಹು ಸಾಂಸ್ಕೃತಿಕ ಹಾಗೂ ಬಹು ಒಳ ಪ್ರಾಂತೀಯತೆಯನ್ನು ಹೊಂದಿವೆ. ಬಹುತ್ವವು ಶಾಪವಲ್ಲ. ಅದು ಪ್ರಜಾಪ್ರಭುತ್ವದ ಮೂಲವಾಗಿದೆ. ಬಹುತ್ವವನ್ನು ಕಳೆದುಕೊಂಡಾಗ ದೇಶವು ಸಮಸ್ಯೆಯನ್ನು ಎದುರಿಸುತ್ತದೆ” ಎಂದು ರಹಮತ್ ತರೀಕೆರೆ ಹೇಳಿದರು.

“ಕುವೆಂಪುಅವರ ‘ಸರ್ವರಿಗೂ ಸಮ ಪಾಲು–ಸರ್ವರಿಗೂ ಸಮ ಬಾಳು’ ಎಂಬುದು ಆರ್ಥಿಕವಾದ ಫೆಡರಲಿಸಂ ಅನ್ನು ವಿವರಿಸುತ್ತದೆ. ಅಂತೆಯೇ, ‘ಇಲ್ಲಿ ಯಾರೂ ಮುಖ್ಯರಲ್ಲ’ ಎಂದು ಹೇಳುವಾಗ, ಕೇವಲ ಮನುಷ್ಯರಷ್ಟೆ ಮುಖ್ಯವಲ್ಲ; ಮನುಷ್ಯೇತರ ಜೀವಿಗಳಿಗೂ ಭೂಮಿಯಲ್ಲಿ ಹಕ್ಕಿದೆ ಎಂದು ಹೇಳುತ್ತಾರೆ. ರಾಮಯಣ, ಮಹಾಭಾರತದಂತಹ ಗ್ರಂಥಗಳು ಭಾರತಕ್ಕಿರಬಹುದು. ಆದರೆ, ಕರ್ನಾಟಕಕ್ಕೆ ಅಂತಹ ಗ್ರಂಥಗಳನ್ನು ನೀಡಿದವರಲ್ಲಿ ಮೊದಲಿಗರು ಪಂಪ. ಸ್ವಂತಿಕೆಯ ಬಗ್ಗೆ ಕನ್ನಡವು ಯಾವಾಗಲೂ ಯೋಚಿಸಿದೆ. ನಮ್ಮ ತನವನ್ನು ನಾವು ಕಾಪಾಡಿಕೊಳ್ಳಬೇಕೆಂದು ಹಲವಾರು ಚಿಂತಕರು ಹೇಳಿದ್ದಾರೆ” ಎಂದು ತಿಳಿಸಿದರು.

“ಹಲವಾರು ಸಂದರ್ಭಗಳಲ್ಲಿ, ರಾಜರ ಆಳ್ವಿಕೆ ಇದ್ದಾಗ, ಬ್ರಿಟಿಷ್ ಆಳ್ವಿಕೆ ಇದ್ದಾಗ ಕನ್ನಡಿಗರ ಮೇಲೆ ಹಲವಾರು ರೀತಿಯ ಹೇರಿಕೆಗಳು ಕಂಡುಬಂದಿವೆ. ಈಗ, ಸಂಸ್ಕೃತ, ಹಿಂದಿ ಹೇರಿಕೆ ನಡೆಯುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬೋರ್ಡು ಕೆಳಗಿಳಿದು, ಎಸ್‌ಬಿಐ ಬೋರ್ಡು ಮೇಲೇರುವಾಗಲೂ ನಮ್ಮ ಮೇಲಿನ ಹೇರಿಕೆ ಕಾಣಸಿಗುತ್ತಿತ್ತು. ಇಂತಹ ಹೇರಿಕೆಗಳನ್ನು ಕನ್ನಡಿಗರು ನಿರಂತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಈಗಲೂ ವಿರೋಧಿಸುವುದು ನಡೆಯುತ್ತಲೇ ಇದೆ” ಎಂದು ವಿವರಿಸಿದರು.

“ನಮ್ಮದೆರು ಇರುವ ಈ ಸಂದರ್ಭದಲ್ಲಿ ನಾವು ಎದುರಿಸಬೇಕಿರುವ ಬಿಕ್ಕಟ್ಟಿನ ಕುರಿತು ಹೆಚ್ಚು ಚಿಂತನೆ ನಡೆಸಿದವರು ಗೌರಿ ಮತ್ತು ಕಲ್ಬುರ್ಗಿ ಅವರು. ಈ ಇಬ್ಬರೂ ಫೆಡರಲಿಸಂನ ಪ್ರತಿಪಾದಕರು. ಅವರು ಒಂದು ಧರ್ಮ, ಒಂದು ರಾಷ್ಟ್ರ, ಒಂದು ಭಾಷೆಯಂತೆ ಒಂದು ಎಂಬುದನ್ನು ನಿರಂತರವಾಗಿ ವಿರೋಧಿಸುತ್ತಾ ಬಂದವರು. ಅವರ ಆಲೋಚನೆಗಳು ಅರ್ಥಪೂರ್ಣ ಪ್ರಜಾಪ್ರಭುತ್ವವನ್ನು, ಅರ್ಥಪೂರ್ಣ ಭಾರತವನ್ನು ಹಾಗೂ ಆರ್ಥಪೂರ್ಣ ಸಂವಿಧಾನದ ವ್ಯಾಖ್ಯಾನವನ್ನು ಹುಡುಕುತ್ತಿದ್ದವು. ಆ ಕಾರಣಕ್ಕಾಗಿಯೇ ಗೌರಿ ಹತ್ಯೆಯಾದರು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಚರ್ಚಿಸುವ ಅಗತ್ಯವಿದೆ” ಎಂದರು.

ಇದನ್ನೂ ಓದಿ; ತುಮಕೂರು | ಜೀತ ಪದ್ದತಿ ಇನ್ನೂ ಜೀವಂತ : 36 ಕೂಲಿ ಕಾರ್ಮಿಕರ ರಕ್ಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...