ಮುಸ್ಲಿಮರ ವಿರುದ್ಧ 2002ರ ವೇಳೆಗೆ ನಡೆದ ಗುಜರಾತ್ ಗಲಭೆಯ ಸಂತ್ರಸ್ತೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನ್ಯಾಯಾಲಯಕ್ಕೆ ತೆರಳಿದ್ದ ಝಕಿಯಾ ಜಾಫ್ರಿ ಶನಿವಾರ ಅಹಮದಾಬಾದ್ನಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಫೆಬ್ರವರಿ 28, 2002 ರಂದು ಅಹಮದಾಬಾದ್ನ ಮುಸ್ಲಿಮರು ಇರುವ ಗುಲ್ಬರ್ಗ್ ಸೊಸೈಟಿಯೊಳಗೆ ಬಲಪಂಥೀಯ ಗುಂಪೊಂದು ಸುಟ್ಟುಹಾಕಿದ 69 ಜನರಲ್ಲಿ ಝಕಿಯಾ ಅವರ ಪತಿ ಮತ್ತು ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಕೂಡ ಇದ್ದರು. ಗುಜರಾತ್ ಗಲಭೆ
“ನನ್ನ ತಾಯಿ ಅಹಮದಾಬಾದ್ನಲ್ಲಿರುವ ನನ್ನ ಸಹೋದರಿಯ ಮನೆಯಲ್ಲಿದ್ದರು. ಅಲ್ಲಿ ಅವರು ತಮ್ಮ ದೈನಂದಿನ ದಿನಚರಿಯನ್ನು ಪೂರ್ಣಗೊಳಿಸಿ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದಾಗ ಅಸ್ವಸ್ಥರಾದರು. ಈ ವೇಳೆ ವೈದ್ಯರು ಆಗಮಿಸಿ ಅವರಿಗೆ ಚಿಕಿತ್ಸೆಯ ಪ್ರಯತ್ನ ಮಾಡಿದ್ದು, ನಂತರ ಬೆಳಿಗ್ಗೆ 11:30 ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು” ಎಂದು ಅವರ ಮಗ ತನ್ವೀರ್ ಜಾಫ್ರಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಸುಮಾರು 2000 ಜನರನ್ನು, ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಹತ್ಯೆ ಮಾಡಿದ ಗಲಭೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಕ್ಕಾಗಿ ತನಿಖಾ ಸಂಸ್ಥೆಗಳ ವಿರುದ್ಧ ಝಕಿಯಾ ಅವರು ಕಾನೂನು ಹೋರಾಟ ಮಾಡಿದ್ದರು.
ಝಕಿಯಾ ಅವರ ನಿಧನಕ್ಕೆ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಸಂತಾಪ ಸೂಚಿಸಿದ್ದಾರೆ, “ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮುದಾಯದ ಸಹಾನುಭೂತಿಯ ನಾಯಕಿ ‘ಝಕಿಯಾ ಆಪಾ’ 30 ನಿಮಿಷಗಳ ಹಿಂದೆ ನಿಧನರಾದರು! ಅವರ ದೂರದೃಷ್ಟಿಯನ್ನು ದೇಶ, ಕುಟುಂಬ, ಸ್ನೇಹಿತರು ಮತ್ತು ಜಗತ್ತು ಮಿಸ್ ಮಾಡಿಕೊಳ್ಳುತ್ತದೆ!” ಎಂದು ಹೇಳಿದ್ದಾರೆ.
“ತನ್ವೀರ್ ಭಾಯ್, ನಿಶ್ರಿನ್, ದುರೈಯಪ್ಪ, ಮೊಮ್ಮಕ್ಕಳೇ ನಾವು ನಿಮ್ಮೊಂದಿಗಿದ್ದೇವೆ!” ಎಂದು ತೀಸ್ತಾ ಅವರು ಹೇಳಿದ್ದಾರೆ. ತೀಸ್ತಾ ಅವರು ಸುಪ್ರೀಂ ಕೋರ್ಟ್ನಲ್ಲಿ ಝಕಿಯಾ ಅವರ ಅರ್ಜಿಯಲ್ಲಿ ಸಹ-ದೂರುದಾರರಾಗಿದ್ದರು.
Zakia Appa a compassionate leader of d human rights community passed away just 30 minutes ago!Her visionary presence will be missed by d nation family friends & worrld! Tanveernhai, Nishrin, Duraiyaappa, grandkids we are with you! Rest in Power and Peace Zakia appa! #ZakiaJafri pic.twitter.com/D6Un1cj346
— Teesta Setalvad (@TeestaSetalvad) February 1, 2025
ಗುಜರಾತ್ ಪ್ರಕರಣದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (SIT) ಗಲಭೆಯ ಬಗ್ಗೆ ಅಪೂರ್ಣ ಮತ್ತು ಪಕ್ಷಪಾತದ ತನಿಖೆಯನ್ನು ಮಾಡಿದೆ ಎಂದು ಝಕಿಯಾ ಮತ್ತು ತೀಸ್ತಾ ಅರ್ಜಿಯಲ್ಲಿ ಆರೋಪಿಸಿದ್ದರು. ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಜೂನ್ 4, 2022 ರಂದು ತಿರಸ್ಕರಿಸಿತ್ತು.
“ನನ್ನಲ್ಲಿ ಉಸಿರು ಇರುವವರೆಗೂ ನಾನು ಹೋರಾಡುತ್ತಲೇ ಇರುತ್ತೇನೆ” ಎಂದು ಝಾಕಿಯಾ ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಗುಜರಾತ್ ಗಲಭೆ
ಇದನ್ನೂಓದಿ: ಕೇಂದ್ರ ಬಜೆಟ್ 2025 | 12 ಲಕ್ಷ ರೂ.ಗಳವರೆಗೆ ಆದಾಯ ತೆರಿಗೆ ಮನ್ನಾ, ಗಿಗ್ ಕೆಲಸಗಾರರಿಗೆ ವಿಮೆ
ಕೇಂದ್ರ ಬಜೆಟ್ 2025 | 12 ಲಕ್ಷ ರೂ.ಗಳವರೆಗೆ ಆದಾಯ ತೆರಿಗೆ ಮನ್ನಾ, ಗಿಗ್ ಕೆಲಸಗಾರರಿಗೆ ವಿಮೆ


