Homeದಲಿತ್ ಫೈಲ್ಸ್ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ

ಜಾತಿ ದೌರ್ಜನ್ಯ ವಿರೋಧಿಸಿ ಪುಣೆಯಿಂದ ಮುಂಬೈಗೆ ದಲಿತ ಕುಟುಂಬದ ಪಾದಯಾತ್ರೆ

- Advertisement -
- Advertisement -

ಕೈಯಲ್ಲಿ ಕೇವಲ ₹70, ನ್ಯಾಯಕ್ಕಾಗಿ ಮನವಿ; 35 ವರ್ಷದ ರತನ್ ತಮ್ಮ ಇಬ್ಬರು ಸಹೋದರಿಯರು ಮತ್ತು ಇಬ್ಬರು ಚಿಕ್ಕ ಮಕ್ಕಳೊಂದಿಗೆ ಪುಣೆಯಿಂದ ಮುಂಬೈಗೆ 150 ಕಿ.ಮೀ.ಗೂ ಹೆಚ್ಚು ನಡೆದುಕೊಂಡು ತಲುಪಿದ್ದಾರೆ. ತಮ್ಮ ಕಷ್ಟದ ಸ್ಥಿತಿಯನ್ನು ವಿವರಿಸುವ ಪೋಸ್ಟರ್‌ಗಳನ್ನು ಹಿಡಿದು, ಫೆಬ್ರವರಿ 7 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಫೆಬ್ರವರಿ 13 ರಂದು ಆಜಾದ್ ಮೈದಾನಕ್ಕೆ ಆಗಮಿಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಲು ಬಯಸಿದರು. ಆದರೆ, ಹತ್ತು ದಿನಗಳ ನಂತರವೂ ಅವರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.

ಅವರ ಈ ಪಾದಯಾತ್ರೆಯು ಜಾತಿ ಆಧಾರಿತ ಹಿಂಸೆ ಮತ್ತು ಸರ್ಕಾರಿ ಸಾಂಸ್ಥಿಕ ನಿರ್ಲಕ್ಷ್ಯದ ವಿರುದ್ಧವಾಗಿದೆ. ಪಿಂಪ್ರಿ-ಚಿಂಚ್‌ವಾಡ್‌ನ ಥೆರ್‌ಗಾಂವ್ ನಿವಾಸಿಗಳಾದ ರತನ್ ಮತ್ತು ಅವರ ಕುಟುಂಬವು ಮತಂಗ್ (ಮಾಂಗ್) ಸಮುದಾಯಕ್ಕೆ ಸೇರಿದವರು; ಈ ಸಮುದಾಯವು ಐತಿಹಾಸಿಕವಾಗಿ ಅಂಚಿನಲ್ಲಿರುವ ಮತ್ತು ತಾರತಮ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿಯಾಗಿದೆ. ಎರಡು ವರ್ಷಗಳ ಹಿಂದೆ ರತನ್ ಅವರ 14 ವರ್ಷದ ಮಗ ಕರಣ್ ಮೇಲೆ ಜಾತಿ ನಿಂದನೆ ಮಾಡಿ, ನೆರೆಹೊರೆಯ ಪ್ರಬಲ ಜಾತಿ ವ್ಯಕ್ತಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದರು. ಬಳಿಕ, ಅವರ ಕುಟುಂಬಕ್ಕೆ ಸಂಕಷ್ಟ ಪ್ರಾರಂಭವಾಯಿತು.

ಅಂದಿನಿಂದ, ಪದೇಪದೆ ಮೇಲ್ಜಾತಿಯ ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಜಾತಿ ಆಧಾರಿತ ಅವಮಾನಗಳನ್ನು ನಡೆಸಿ, ದೈಹಿಕವಾಗಿ ಹಲ್ಲೆ ಮಾಡಿ, ಅವರ ಜೀವನವನ್ನು ಅಸಹನೀಯವಾಗಿಸಿದ್ದಾರೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

“ನನ್ನ ಸೋದರಳಿಯನಿಗೆ, ನೀವು ಮಂಗಿಗಳೇ, ಬೆಳಿಗ್ಗೆ ಯಾಕೆ ನಿಮ್ಮ ಮುಖವನ್ನು ತೋರಿಸುತ್ತೀರಿ ಎಂದು ಅವಮಾಣಿಸಲಾಯಿತು” ಎಂದು ರತನ್ ಅವರ ಸಹೋದರಿ 32 ವರ್ಷದ ರೇಷ್ಮಾ ಚೌಹಾಣ್ ಹೇಳಿದರು. “ಅವರು ಯಾವುದೇ ಕಾರಣವಿಲ್ಲದೆ ಜಗಳವಾಡುತ್ತಾರೆ, ಈಗ ನಮಗೆ ಜೀವ ಭಯವಿದೆ” ಎಂದು ಹೇಳಿದರು.

ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲವಾದಾಗ ಕುಟುಂಬದ ತೊಂದರೆಗಳು ಇನ್ನಷ್ಟು ಹೆಚ್ಚಾದವು. ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೊಲೀಸರಿಗೆ ಹಲವಾರು ದೂರುಗಳನ್ನು ನೀಡಿದ್ದರೂ, ಯಾವುದೇ ಎಫ್‌ಆಐಆರ್‌ ದಾಖಲಾಗಿಲ್ಲ. ಬದಲಾಗಿ, ಆರು ತಿಂಗಳ ಹಿಂದೆ ಯಾವುದೇ ಮುನ್ಸೂಚನೆಯಿಲ್ಲದೆ ನಮ್ಮ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಬಾಪುಜಿ ಬುವಾ ದೇವಸ್ಥಾನದ ಬಳಿಯ ಸಾರ್ವಜನಿಕ ತೊಟ್ಟಿಯಿಂದ ನೀರು ತರಲು ಒತ್ತಾಯಿಸಲಾಯಿತು. ನಾವು ಮತ್ತಷ್ಟು ಅವಮಾನವನ್ನು ಎದುರಿಸಿದೆವು, ಸ್ಥಳೀಯರು ನಮ್ಮನ್ನು ಓಡಿಸಲು ನಮ್ಮ ನೀರಿನ ಪಾತ್ರೆಗಳಿಗೆ ಸತ್ತ ಇಲಿಗಳನ್ನು ಎಸೆದರು” ಎಂದು ರೇಷ್ಮಾ ತಾವು ಅನುಭವಿಸುತ್ತಿರುವ ದೌರ್ಜನ್ಯದ ಕುರಿತು ವಿವರಿಸಿದ್ದಾರೆ.

ರತನ್ ಅವರ ಕಿರಿಯ ಸಹೋದರಿ 23 ವರ್ಷದ ಸೋನಮ್ ಲೊಂಡೆ ಮಾತನಾಡಿ, ತಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸುವುದು ಸೇರಿದಂತೆ ಹಲವು ಭಾರಿ ದೈಹಿಕ ಹಿಂಸೆಯ ಘಟನೆಗಳ ನಂತರ ದೌರ್ಜನ್ಯಗಳನ್ನು ದಾಖಲಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ ಎಂದು ಹೇಳಿದರು. “ದುರದೃಷ್ಟವಶಾತ್, ಅವರು ಕೆಲವು ಅಪರಿಚಿತರೊಂದಿಗೆ ಬಂದು, ಸಿಸಿಟಿವಿಯನ್ನು ಬಟ್ಟೆಯಿಂದ ಮುಚ್ಚಿ, ಕ್ಯಾಮೆರಾದಿಂದ ಮೆಮೊರಿ ಚಿಪ್ ಅನ್ನು ತೆಗೆದರು” ಎಂದು ಅವರು ಹೇಳಿದರು.

ಒಳಚರಂಡಿ ಕಾಮಗಾರಿ ನಮ್ಮ ಆಸ್ತಿಯನ್ನು ಅತಿಕ್ರಮಿಸುತ್ತಿರುವ ಬಗ್ಗೆ ನೆರೆಹೊರೆಯವರಲ್ಲಿ ಒಬ್ಬರನ್ನು ಪ್ರಶ್ನಿಸಿದಾಗ ವಾದವು ಉಲ್ಬಣಗೊಂಡಿತು ಎಂದು ಲೊಂಡೆ ನೆನಪಿಸಿಕೊಂಡರು. “ವಾಕಾಡ್ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದು ಒಂದು ರಾತ್ರಿ ಬಂಧನದಲ್ಲಿಟ್ಟರು” ಎಂದು ಅವರು ಹೇಳಿದರು.

“ನಾವು ಇಲ್ಲಿ ವಾಸಿಸುವ ಎರಡನೇ ತಲೆಮಾರಿನವರಾಗಿದ್ದರೂ, ಮಾಲೀಕತ್ವದ ದಾಖಲೆಗಳನ್ನು ತೋರಿಸಲು ನಮ್ಮನ್ನು ಕೇಳಲಾಯಿತು. ಇದು ಜಾತಿ ಆಧಾರಿತ ಹಿಂಸಾಚಾರವನ್ನು ಮುಚ್ಚಿಹಾಕುವ ಪ್ರಯತ್ನವಾಗಿರಬಹುದು ಅಥವಾ ನಮ್ಮಿಂದ ಏನನ್ನಾದರೂ ಪಡೆಯಲು ಜಾತಿ ಆಧಾರಿತ ಘಟನೆಗಳಿಗೆ ನಮ್ಮನ್ನು ಪ್ರಚೋದಿಸಿರಬಹುದು” ಎಂದು ಲೊಂಡೆ ಹೇಳಿದರು.

ಕಳೆದ ನವೆಂಬರ್‌ನಲ್ಲಿ, ಕುಟುಂಬವು ಹೊರಗೆ ಅಡುಗೆ ಮಾಡುತ್ತಿದ್ದಾಗ, ಕಿರುಕುಳ ನೀಡುತಿದ್ದವರು ಪೊಲೀಸರೊಂದಿಗೆ ಬಂದು ಕೂಗಾಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. “ಅವರು ನನ್ನ 10 ವರ್ಷದ ಮಗಳು ನೂತನ್‌ಗೆ ಹೊಡೆದು, ನಾವು ದಾಖಲಿಸಿದ್ದ ಸಾಕ್ಷ್ಯವನ್ನು ಅಳಿಸಲು ನನ್ನ ಫೋನ್ ಕಸಿದುಕೊಂಡರು. ನಮ್ಮ ಮೊಬೈಲ್ ಫೋನ್ ಇನ್ನೂ ಅವರ ಬಳಿಯೇ ಇದೆ” ಎಂದು ರತನ್ ಹೇಳಿದರು.

ಇದರ ನಂತರ, ಸಂತ್ರಸ್ತರು ಆಯುಕ್ತರನ್ನು ಭೇಟಿ ಮಾಡಲು ಪಿಸಿಎಂಸಿ ಕಚೇರಿಗೆ ಹೋದರು. ಆದರೆ, ಅವರು ವಿಫಲರಾದರು ಎಂದು ರತನ್ ಹೇಳಿದರು. “ನಮ್ಮನ್ನು ಕಾಲೇವಾಡಿ ಪೊಲೀಸ್ ಠಾಣೆಗೆ ತೆರಳುವಂತೆ ನಿರ್ದೇಶಿಸಲಾಯಿತು, ಅಲ್ಲಿ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಮಧ್ಯರಾತ್ರಿಯವರೆಗೆ ಬಂಧಿಸಿ, ನೆಲವನ್ನು ಸ್ವಚ್ಛಗೊಳಿಸಲು ಒತ್ತಾಯಿಸಿ, ಪ್ರಕರಣ ದಾಖಲಿಸದೆ ನಮ್ಮನ್ನು ಕಳುಹಿಸಿದರು” ಎಂದು ರೇಷ್ಮಾ ಆರೋಪಿಸಿದರು.

ಫೆಬ್ರವರಿ 5 ರಂದು, ಪೊಲೀಸ್ ದೂರು ದಾಖಲಿಸಲು ಮತ್ತೊಂದು ವಿಫಲ ಪ್ರಯತ್ನದ ನಂತರ, ಕುಟುಂಬವು ಮರುದಿನ ಪಿಸಿಎಂಸಿ ಆಯುಕ್ತರ ಕಚೇರಿಗೆ ಲಿಖಿತ ದೂರು ಸಲ್ಲಿಸಿತು. ಯಾವುದೇ ಆಯ್ಕೆಗಳು ಉಳಿದಿಲ್ಲದ ಕಾರಣ, ಅವರು ನ್ಯಾಯಕ್ಕಾಗಿ ಮುಂಬೈಗೆ ಮೆರವಣಿಗೆ ನಡೆಸಲು ನಿರ್ಧರಿಸಿದರು.

ಇದನ್ನೂ ಓದಿ; ಉತ್ತರ ಪ್ರದೇಶ| ದಲಿತರ ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿದ 8 ಜನರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...