Homeರಾಜಕೀಯಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

ಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

- Advertisement -
- Advertisement -

ಕರಾವಳಿಯಲ್ಲಿ ಎಂಪಿಗಿರಿ ಗುಂಗು-ರಂಗು ನಿಧಾನಕ್ಕೆ ಏರತೊಡಗಿದೆ! ದಿಲ್ಲಿ ಕನಸು ಕಟ್ಟಿಕೊಂಡಿರುವ ಲಾಟ್-ಪುಟ್ ಪುಢಾರಿಗಳು ಲಾಬಿ ಶುರುಹಚ್ಚಿಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದಲ್ಲೀಗ ಒಂಥರಾ ಆತುರ-ಕಾತುರ, ಗಡಿಬಿಡಿ, ಗಂಡಾಗುಂಡಿ ಒಟ್ಟೊಟ್ಟಿಗೇ ಭುಗಿಲೆದ್ದುಹೋಗಿದೆ. ಕರಾವಳಿಯ ಮೂರೂ ಕ್ಷೇತ್ರದಲ್ಲಿರುವ ಹಿಂದೂತ್ವದ ಅಮಲೇರಿ ಪಾರ್ಲಿಮೆಂಟಿಗೆ ತೂರಿಕೊಳ್ಳುವ ಆಸೆಯಲ್ಲಿ ಸಂಘಪರಿವಾರದ ಸರದಾರರು ಓಡಾಡುತ್ತಿದ್ದಾರೆ. ಅತ್ತ ಹೈರಾಣಾಗಿರುವ ಕಾಂಗ್ರೆಸ್‍ನಲ್ಲೂ ಸಂಸದನಾಗುವ ಚಟದಾರರಿಗೇನೂ ಕಡಿಮೆಯಿಲ್ಲ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದ ಕೇಸರಿ ಶಾಲಿನ ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿರುವ ನಕಾರಾತ್ಮಕ ಭಾವನೆ ಮತ್ತು ಮೋದಿ ಮಾಮನ ಮೋಸಗಾರಿಕೆಯಿಂದ ಬೇಸತ್ತ ಮಂದಿ ಬದಲಾವಣೆ ಬಯಸಿದ್ದಾರೆಂಬ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್‍ನ ಒಂದಿಷ್ಡು ದಂಡ-ಪಿಂಡಗಳು ಸಂಸದನಾಗುವ ತೆವಲಿಗೆ ಬಿದ್ದಿವೆ.
ದಕ್ಷಿಣ ಕನ್ನಡದ ಹೊಡಿ-ಬಡಿ-ಕಡಿ ಕುಖ್ಯಾತಿಯ ಬೆಂಕಿ ನವಾಬ ನಳಿನ್‍ಕುಮಾರ್ ಕಟೀಲ್‍ಗೆ ಸಂಸದಗಿರಿ ಟಿಕೆಟ್ ತಪ್ಪಿಸಲು ಕಳೆದ ಸಲವೇ ಆರೆಸ್ಸೆಸ್ ಡಾನ್ ಕಲ್ಲಡ್ಕಭಟ್ಟ ಪ್ರಯತ್ನ ನಡೆಸಿದ್ದರು. ಆದರದು ವಿಫಲವಾಗಿ ಆತನಿಗೆ ಉಲ್ಟಾ ಹೊಡೆದಿತ್ತು. ಈ ಬಾರಿಯೂ ಅಂಥದೊಂದು ಸಣ್ಣ ಕರಾಮತ್ತು ಕಲ್ಲಡ್ಕಭಟ್ರು ಚಾಲು ಮಾಡಿದ್ದಾರೆಂಬ ವರ್ತಮಾನ ಚೆಡ್ಡಿ ಬಿಡಾರದಲ್ಲಿದೆ. ಆದರೆ ಗುರುವಿಗೆ ತಿರುಮಂತ್ರ ಹಾಕಿ ಸೆಟೆದುನಿಂತಿರುವ ‘ಕಟೀಲು’ ಸಾಹೇಬರು ಕಳೆದ ಅಸೆಂಬ್ಲಿ ಇಲೆಕ್ಷನ್ ನಂತರ ಮತ್ತೊಂದಿಷ್ಟು ಮಜಬೂತಾಗಿದ್ದಾರೆ. ತಮಗೆ ಬೇಕಾದ ಸ್ವಜಾತಿ ಬಂಟರ ಶಾಸಕನಾಗಿ ಮಾಡಿಕೊಂಡಿರುವ ಕಟೀಲ್‍ನನ್ನು ಕದಲಿಸುವುದು ಅಷ್ಟು ಸುಲಭವಲ್ಲ. ಎಂಬ ಮಾತು ಬಿಜೆಪಿಯಲ್ಲಿ ಅನುರನಿಸುತ್ತಿದೆ. ಆದರೆ ಕಟೀಲು ಬಗ್ಗೆ ಕ್ಷೇತ್ರದ ಜನರಿಗೆ ಸದಭಿಪ್ರಾಯವಿಲ್ಲ. ತನ್ನ ಹಿಂದೂತ್ವದ ಅಸ್ತಿತ್ವ ಕಾಪಾಡಿಕೊಳ್ಳಲು ಇಡೀ ಜಿಲ್ಲೆಗೆ ಬೇಕಿದ್ದರೂ ಬೆಂಕಿ ಹಾಕುವ ವಿದ್ರ್ರೋಹಿ ಮನಸ್ಥಿತಿಯ ಈ ಸ್ವಯಂ ಘೋಷಿತ ದೇಶಭಕ್ತನ ಎದುರು ಕಾಂಗ್ರೆಸ್ ಹೊಸ ಮುಖ ಒಂದಕ್ಕೆ ಅವಕಾಶ ಕೊಟ್ಟರೆ ಬದಲಾವಣೆ ಅಸಾಧ್ಯವೇನಲ್ಲ.
ಎಂಪಿಗಿರಿ ಅಭ್ಯರ್ಥಿ ಆಗಲು ಕಾಂಗ್ರೆಸ್‍ನಲ್ಲಿ ಮಾಜಿಮಂತ್ರಿ ರಮಾನಾಥ ರೈ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್‍ರೈ, ಮಾಜಿ ಮಂತ್ರಿ ವಿನಯ್‍ಕುಮಾರ್‍ಸೊರಕೆ, ಮೊಯ್ಲಿ ಮಹಾತ್ಮನ ಮಗ ಹರ್ಷಮೊಯ್ಲಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಪಿ.ವಿ ಮೋಹನ್ ಸಾಲುಗಟ್ಟಿ ನಿಂತಿದ್ದಾರೆ. ಬಂಟ್ವಾಳದಲ್ಲೇ ಗೆಲ್ಲಲಾಗÀದ ಬಡಾಯಿ ಭೂಪ ಬೇಬಿಯಣ್ಣ ಯಾನÉ ರಮಾನಾÀಥ್‍ರೈಗೆ ಜಿಲ್ಲಾ ಮಟ್ಟದ ಇಮೇಜು ಇಲ್ಲ. ಅಧಿಕಾರ ಇಲ್ಲದೇ ಬದುಕಲಾಗದ ರೈ ಬಂಟ್ವಾಳದಲ್ಲಿ ಸೋತ ಮರುದಿನವೇ ತನಗೆ ಎಮ್ಮೆಲ್ಸಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿಯೆಂದು ಗೋಳಾಡಿದ್ದರು. ತಿಕ್ಕತಿಕ್ಕಲಾಗಿ ಮಾತಾಡಿ ಹಿಂದೂ ವಿರೋಧಾ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರೈ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ! ಕಾಪು ಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವ ವಿನಯ್‍ಕುಮಾರ್‍ಸೊರಕೆ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಎರಡೂ ಕ್ಷೇತ್ರದ ಮೇಲೆ ಒಂದೊಂದು ಕಣ್ಣು ಹಾಕಿ ಕುಂತಿದ್ದಾರೆ, ಪಾಪ! ಈ ಸೊರಕೆಯ ಬೇರುಗಳು ಎರಡೂ ಜಿಲ್ಲೆಯಲ್ಲಿ ಒಣಗಿಹೋಗಿ ಅದ್ಯಾವುದೋ ಕಾಲವಾಗಿದೆ. ಕನಿಷ್ಟ ಸ್ವಜಾತಿ ಬಿಲ್ಲವರ ಹುಡುಗರು ಕೇಸರಿ ಖೆಡ್ಡಾಕ್ಕೆ ಹೋಗಿಬೀಳೋದೂ ತಪ್ಪಿಸಲಾಗದ ಈ ಸೊರಕೆ ಗೆಲ್ಲೋದು ಕಷ್ಟ. ಬಿಲ್ಲವರ ಕುಲ ಕಂಠೀರವ ಜನಾರ್ದನ ಪೂಜಾರಿ ವಯೋಸಹಜ ಅರಳು-ಮರಳಿಂದ ಪ್ರಸ್ತುತರಾಗಿರುವುದರಿಂದ ತಾನೇ ಕಾಂಗ್ರೆಸ್‍ನ ಬಿಲ್ಲವ ಮುಖಂಡ ಎಂದು ಭಾವಿಸಿರುವ ಸೊರಕೆ ಬಗ್ಗೆ ಹೈಕಮಾಂಡ್ ಮಾಂಡಲೀಕ ಆಸ್ಕರ್ ಫರ್ನಾಂಡಿಸ್‍ಗೂ ಒಳ್ಳೆಯ ಅಭಿಪ್ರಾಯವಿಲ್ಲ. ಮಂಗಳೂರಿನ ಮಾಜಿ ಮೇಯರಮ್ಮ ಕರಾಟೆರಾಣಿ ಕವಿತಾ ಸನಿಲ್ ತಾನೂ ಬಿಲ್ಲವರ ಕುಡಿಯೆಂದು ಕೂಗು ಹಾಕುತ್ತಿದ್ದಾರೆ. ಈಕೆಗೆ ಟಿಕೆಟ್ ಕೊಟ್ಟರೆ ಮ್ಯಾಜಿಕ್ ಆಗಬಹುದೆಂದು ಹೇಳೋರೂ ಇದ್ದಾರೆ.
ಹರ್ಷ ಮೊಯ್ಲಿ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಆತನಿಗೆ ಟಿಕೆಟ್ ಸಿಗಲಾರದು. ಕಾರ್ಕಳ ಅಸೆಂಬ್ಲಿ ಟಿಕೆಟ್ ಸಿಗಲಾರದೆಂಬ ಹತಾಶೆಯಲ್ಲಿ ಆತ ಪಕ್ಷದ ವಿರುದ್ಧವೇ ಟ್ವೀಟಾಯಿಸಿ ಕಿಮ್ಮತ್ತು ಕಳೆದುಕೊಂಡಿದ್ದಾನೆ. ಅಲ್ಲದೆ ಅವನಪ್ಪ ವೀರಪ್ಪ ಮೊಯ್ಲಿಗೆ ಚಿಕ್ಕಬಳ್ಳಾಪುರದಲ್ಲಿ ಆಭ್ಯರ್ಥಿ ಮಾಡಬೇಕಾಗಿರುವುದರಿಂದ ಹರ್ಷನಿಗೆ ಛಾನ್ಸ್ ಇಲ್ಲ. ಕಾಂಗ್ರೆಸ್‍ನಲ್ಲಿ ಒಂಚೂರು ಗಟ್ಟಿ ಕಾಳೆಂದು ಕಾಣಿಸಿಕೊಂಡಿರುವುದು ಹಿಂದುಳಿದ ವರ್ಗದ ಪಿ.ವಿ ಮೋಹನ್ ಮತ್ತು ಬಂಟರ ಬಹಾದ್ದೂರ ಮಿಥುನ್‍ರೈ ಇಬ್ಬರೇ. ಮಿಥುನ್ ಕ್ಯಾಂಡಿಡೇಟಾದರೆ ಸ್ವಜಾತಿಯ ನಳಿನ್‍ಕಟೀಲ್‍ಗೆ ಸೆಡ್ಡು ಹೊಡೆಯಬಹುದೆಂದು ಜನ ಹೇಳುತ್ತಾರೆ. ಜತೆಗೆ ದುಡ್ಡು ಮಿಥುನ್‍ನಲ್ಲಿ ಸಾಕಷ್ಟಿದೆ. ಕಳೆದ ಅಸೆಂಬ್ಲಿ ಇಲೆಕ್ಷನ್ ಕೊನೆಹಂತದಲ್ಲಿ ಮಾಜಿ ಮಂತ್ರಿ ಅಭಯಚಂದ್ರ ಜೈನ್‍ನ ಹಿಕಮತ್ತಿಗೆ ಬಲಿಯಾಗಿದ್ದರು. ಆ ಅನ್ಯಾಯಕ್ಕೆ ಪರಿಹಾರವಾಗಿ ಮಿಥುನ್‍ಗೆ ಕಾಂಗ್ರೆಸ್ ಟಿಕೆಟೇನಾದರೂ ಸಿಕ್ಕರೆ ನಳಿನ್‍ಗೆ ಟಕ್ಕರ್ ಖಂಡಿತ!
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೂಗುಮಾರಿ ಖ್ಯಾತಿಯ ಸಂಸದೆ ಬೇಬಿಯಕ್ಕ ಯಾನೆ ಶೋಭ ಕರಂದ್ಲಾಜೆಗೆ ಮತ್ತೆ ಸ್ಪರ್ದಿಸುವ ಧೈರ್ಯವಿಲ್ಲ. ಸ್ಥಳೀಯ ನಿಷ್ಠಾವಂತ ಕೇಸರಿ ಕಾರ್ಯಕರ್ತರನ್ನೆಲ್ಲಾ ಕಡೆಗಣಿಸಿ ದಿಲ್ಲಿ ಲೆವೆಲ್ ಪುಢಾರಿಯಾಗಿ ತಾನೆಂದು ಹಾರಾಡುತ್ತ ನಾಲ್ಕು ವರ್ಷ ಕಳೆದಿರುವ ಈ ಕರ್ಮಗೇಡಿ ಎಂಪಿಣಿ ಉಡುಪಿ ಅಥವಾ ಚಿಕ್ಕಮಗಳೂರು ಭಾಗದಲ್ಲಿ ಮೂರು ಬಿಲ್ಲೂ ಕೆಲಸ ಮಾಡಿಲ್ಲ. ಆಕೆಗೆ ಕ್ಷೇತ್ರದ ಭೌಗೋಳಿಕ, ಉದ್ದಗಲ, ಜನರ ಕಷ್ಟ-ಸುಖ, ಬೇಕು-ಬೇಡ ಏನೂ ಗೊತ್ತಿಲ್ಲ. “ಯಜಮಾನ” ಯಡ್ಡಿಯನ್ನು ಸಿಎಂ ಮಾಡುವ ಏಕೈಕ ಧ್ಯೇಯೋದ್ದೇಶದ ಬೇಬಿಯಕ್ಕ ಈ ಬಾರಿ ಸ್ಪರ್ಧಿಸಿದರೂ ಗೆಲ್ಲೋದು ಅನುಮಾನ ಎಂದು ಬಿಜೆಪಿಯ ಜನರೇ ಹೇಳುತ್ತಿದ್ದಾರೆ. ಪಾರ್ಟಿಯಲ್ಲಿ ಶಾಸಕ ರಘುಪತಿಭಟ್ಟ, ಸಿ.ಟಿ ರವಿಯಂಥವರಿಗೆ ಆಕೆಯ ಮುಸುಡಿ ಕಂಡರಾಗುವುದಿಲ್ಲ. ಶೋಭಾ ದುರಹಂಕಾರಿ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.
ಇದೆಲ್ಲ ಅಪಶಕುನ ಅರ್ಥಮಾಡಿಕೊಂಡಿರುವ ಯಡ್ಡಿ ಆಕೆಗೆ ರಾಜ್ಯಸಭೆ ಅಥವಾ ವಿಧಾನಪರಿಷತ್‍ಗೆ “ಪ್ಯಾಕ್” ಮಾಡುವ ಯೋಚನೆಯಲ್ಲಿದ್ದಾರೆ. ಕೇಂದ್ರಮಂತ್ರಿ ಡಿ.ವಿ ಸದಾನಂದಗೌಡ ಅಥವಾ ಮಾಜಿ ಸಂಸದ ಜಯಪ್ರಕಾಶ್‍ಹೆಗ್ಡೆಗೆ ಅಭ್ಯರ್ಥಿ ಮಾಡಿದರೆ ಮಾತ್ರ ಕ್ಷೇತ್ರ ಉಳಿಸಿಕೊಳ್ಳಲು ಸಾಧ್ಯವೆಂಬುದು ಸಂಘಿ ಸರದಾರರಿಗೂ ಖಾತ್ರಿಯಾಗಿದೆ. ಆದರೆ ಸದಾನಂದ ಗೌಡರಿಗೆ ತಾನು ಉಡುಪಿ-ಚಿಕ್ಕಮಗಳೂರಲ್ಲಿ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿಲ್ಲ. ಹಾಗಾಗಿ ಜಯಪ್ರಕಾಶ್‍ಹೆಗ್ಡೆ ಟಿಕೆಟ್‍ಗೆ ಬಾಯಿ ತೆರೆದು ಕುಂತಿದ್ದಾರೆ. ಮೊದಲಿನ ಖದರು ಕಳೆದುಕೊಂಡಿರುವ ವಲಸಿಗ ಜೆಪಿ ಹೆಗ್ಡೆಗೆ ಸಂಘಪರಿವಾರ ಅಷ್ಟು ಸುಲಭಕ್ಕೆ ಛಾನ್ಸ್ ಕೊಡುವುದಿಲ್ಲ! ಹಿಂದುತ್ವ ಪ್ರಣೀತ ನಾಟಕದ ಸುಳ್ಳುಬುರುಡೆ ಪಾತ್ರ ಪ್ರವೀಣೆ ಬೇಬಿಯಕ್ಕನಿಗೆ ಅದ್ಯಾಕೊ ಬಿಜೆಪಿ ಅಡ್ಡಗಾಲು ಹಾಕಿ ಕುಂತಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎದ್ದಿದ್ದ ಹಿಂದೂತ್ವದ ತೂಫಾನ್ ಎದುರಿಸಲಾಗದೆ ಮುಳುಗಿದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ನಿಂದ ಎಂಪಿ ಆಗುವ ಹಗಲುಗನಸು ಕಾಣುತಿದ್ದಾರೆ. ಮಂತ್ರಿಯಾಗಿದ್ದಾಗ ಪಕ್ಷಕ್ಕೆ ನಿಷ್ಠವಾಗದೆ ಎಡಬಿಡಂಗಿ ದರ್ಬಾರು ನಡೆಸಿದ್ದ ಪ್ರಮೋದ್‍ಗೆ ಪಾರ್ಟಿ ಮತ್ತು ಕ್ಷೇತ್ರದಾದ್ಯಂತ ಪ್ರಭಾವಿಗಳೇ ಇಲ್ಲ. ಒಂಥರಾ ಒಣದೌಲತ್ತಿನ ಪ್ರಮೋದ್ ಮಂತ್ರಿಯಾಗಿದ್ದಾಗ ಬರೀ ಉಡುಪಿ ವಿಧಾನಸಭಾ ಕ್ಷೇತ್ರಕ್ಕಷ್ಟೇ ಸೀಮಿತರಾಗಿ “ಕಬ್ಜು” ಎನಿಸಿಕೊಂಡಿದ್ದರು. ಈ ಪ್ರಮೋದ್‍ಗಿಂತ ಬಿಲ್ಲವರ ಬಾಹುಳ್ಯದ ಸÀದ್ರಿ ಕ್ಷೇತ್ರದಲ್ಲಿ ತಾನೇ “ಸ್ಟ್ರಾಂಗ್‍ಗುರು” ಎನ್ನುತ್ತಿದ್ದಾರೆ ವಿನಯ್‍ಕುಮಾರ್ ಸೊರಕೆ.
ಇವರಿಬ್ಬರಿಗಿಂತ ಸದ್ಯಕ್ಕೆ ಜಾಸ್ತಿ ಚಾಲ್ತಿಯಲ್ಲಿರೋದು ಅಮೃತಶಣೈ ಎಂಬ ರಿಯಲ್ ಎಸ್ಟೇಟ್‍ಕುಳ. ಬಿಜೆಪಿಯಿಂದ ವಲಸೆ ಬಂದಿರುವ ಈ ಕೊಂಕಣಿಗ ಆಸ್ಕರ್‍ಫರ್ನಾಂಡಿಸ್ ಆಶೀರ್ವಾದದಿಂದ ಎಐಸಿಸಿಯಲ್ಲಿ ಕೆಲಸಕ್ಕೆ ಬಾರದ ಹುದ್ದೆಗೇರಿದ್ದಾರೆ. ಜನಪರ ಸಂಸದ ಎನಿಸಿದ್ದ ರಂಗನಾಥಶಣೈ ವಂಶಸ್ಥನಾದ ತಾನು ಉಡುಪಿ ಎಂಪಿಯಾಗಲು ಅರ್ಹನೆಂದು ತಿಳಿದಂತಿದೆÀ ಅಮೃತ ಶಣೈ. ಅತ್ತ ಚಿಕ್ಕಮಗಳೂರು ಕಡೆಯಿಂದ ಮಾಜಿ ಸಂಸದರಾದ ಡಿ.ಕೆ ತಾರಾದೇವಿ, ಬಿ.ಎಲ್ ಶಂಕರ್ ಹೆಸರುಕೇಳಿ ಬರುತ್ತಿದೆ. ತುಳು ಸುಲಲಿತವಾಗಿ ಮಾತಾಡುವ ಬಿ.ಎಲ್ ಶಂಕರ್ ಈಗ ಟಿಕೆಟ್‍ಗೆ ಕ್ಯೂನÀಲ್ಲಿರುವವರಿಗಿಂತ ಬೇಟರ್. ಎಂಪಿನಿಧಿ ಸರಿಯಾಗಿ ಬಳಸದೆ ಪ್ಲಾಪ್ ಮಾಡುತ್ತಿರುವ ನಾಲಾಯಕ್ ಸಂಸದೆ ಶೋಭ ಕರಂದ್ಲಾಜೆ ಬಿಜೆಪಿಯಿಂದ ಎಕ್ಕುಟ್ಟಿಹೋಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ದೂರದೃಷ್ಟಿಯ ಶಂಕರ್ ಆಶಾಕಿರಣ ಆಗಬಲ್ಲರು. ದುರಂತವೆಂದರೆ ಹಿಂದೂತ್ವದಿಂದ ತಲೆ ತೊಳೆದುಕೊಳ್ಳುತ್ತಿರುವ ಕ್ಷೇತ್ರಕ್ಕಿದು ಅರ್ಥವಾಗೋದು ಅನುಮಾನ!
ಉತ್ತರ ಕನ್ನಡ ಕ್ಷೇತ್ರ ಸತತವಾಗಿ ಶನಿಯಂತೆ ಗಂಟುಬಿದ್ದಿರುವ ಡೋಂಗಿ ಹಿಂದುತ್ವವಾದಿ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗ್ಡೆ ಬಿಜೆಪಿ ಟಿಕೆಟ್ ತರುವಷ್ಟೇ ಸುಲಭವಾಗಿ ಈ ಸಲ ಮತ್ತೇ ಸಂಸದರಾಗಿ ಆಯ್ಕೆಯಾಗಲಾರನೆಂಬ ಅಂದಾಜು ಕಟ್ಟರ್ ಚೆಡ್ಡಿಗಳೇ ಹಾಡುತ್ತಿದ್ದಾರೆ. ಒಂದು ಕಾಲದಲ್ಲಿ ಮಂತ್ರಿ ಅಭ್ಯರ್ಥಿಯಾಗಿ ಭಟ್ಕಳದ ಹಳ್ಳಿಗಳಲ್ಲಿ ಅಂಡಲೆಯುತ್ತಾ ಹಿಂದುತ್ವದ ಹಿಂಸಾ ಪ್ರಚಾರ ಮಾಡುತ್ತಿದ್ದ ಈ ಹಿಂಜಾವೇ ಪುಂಡ ಭಾರತದ ಸಂವಿಧಾನದ ಪವಾಡದಿಂದ ಕೇಂದ್ರ ಮಂತ್ರಿಯಾಗಿದ್ದಾನೆ!
ಅಧಿಕಾರದ ಪಿತ್ಥ ನೆತ್ತಿಗೇರಿರುವ ಮಾಣಿಯ ಬುರ್ನಾಸ್ ಭಾಷೆ, ಭಾವನೆ, ಭಂಗಿಗೆ ಬಿಜೆಪಿ ಕಾರ್ಯಕರ್ತರೇ ಹೇಸಿ ಹೋಗಿದ್ದಾರೆ. ಈತನಿಗೆ ಗುದುಮುರಿಗೆ ಮಾಡಲು ಸಾಬರೇ ಬೇಕೆಂದೇನಿಲ್ಲ ಸ್ವ-ಪಕ್ಷದ ಹಿಂದೂಹಿರಿಯರು, ವೈದ್ಯರು, ಕಾಗೇರಿ, ವಿಎಸ್ ಪಾಟೀಲ್‍ರಂಥ ಶಾಸಕರು, ಅಧಿಕಾರಿಗಳು ಯಾರಾದರೂ ಸರಿ. ರೌಡಿಯಂತೆ ಹೊಡೆದು ಹಲ್ಲೆ ಮಾಡಿ ರಕ್ತ ಹರಿಸಿ ತೀಟೆ ತೀರಿಸಿಕೊಳ್ಳಬಲ್ಲ. ಈ ಪಾತಕ ಹಿನೆÀ್ನಲೆ ನೋಡಿಯೆ ಮಾಣಿಗೆ ಮೋದಿ ಮಂತ್ರಿ ಮಾಡಿದ್ದಾರೆಂದು ಆತನ ಅಭಿಮಾನಿಗಳು ಹೊಗಳೋದು ಮಜಾ ಆಗಿದೆ.
ಆರೆಸ್ಸೆಸ್ ವಲಯದಲ್ಲಿ ಚಿರಪರಿಚಿತನಾಗಿರುವ ಅನಂತ್ಮಾಣಿ ಟಿಕೆಟ್ ತರುವುದು ಕಷ್ಟವಾಗದು. ಆದರೂ ಈತ ನಾಲಾಯಕ್ ಸಂಸದ. ಕ್ಷೇತ್ರ ಬರಡಾಗಿ ತಾನು ಸಮೃದ್ಧನಾಗಿರುವ ಅಯೋಗ್ಯನೆಂದು ಬಿಂಬಿಸಿ ತಾನೇ ಅಭ್ಯರ್ಥಿಯಾಗಲೂ “ಹಿಂದೂತ್ವವಾಗ್ಮಿ” ಸೂಲಿಬೆಲೆ ಚಕ್ರವರ್ತಿಯಾನೆ, ಮಿಥುನ್ ಚಕ್ರವರ್ತಿ, ಡಿ.ಶೇಟ್ ನಾಜೂಕಾಗಿ ಆಟ ಆಡುತ್ತಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹಿಂದುತ್ವದ ಹುಚ್ಚಿರುವುದು ಖರೆ. ಆದರೆ ಕುಮಟಾ, ಭಟ್ಳಳದಂತ ಕಡೆ ಭಜರಂಗಿ ಪಡೆಯು ಅನಂತ್ಮಾಣಿ ವಿರುದ್ದ ತಿರುಗಿ ಬಿದ್ದಿದೆ. ಇದನ್ನು ಸರಿಯಾಗಿ ಬಳಸಿಕೂಳ್ಳುವ ತಂತ್ರಗಾರಿಕೆ ಸದಕ್ಕಂತೂ ಕಾಂಗ್ರೆಸ್‍ನಲ್ಲಿ ಕಾಣಿಸುತ್ತಿಲ್ಲ.
ಎಐಸಿಸಿ ಫ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಉತ್ತರ ಕನ್ನಡ ಅಥÀವಾ ದಕ್ಷಿಣ ಕನ್ನಡದಿಂದ ಪಾರ್ಲಿಮೆಂಟ್ ಪ್ರವೇಶಕ್ಕೆ ಪ್ಲಾನು ಹಾಕಿದ್ದಾರೆ. ಉತ್ತರ ಕನ್ನಡವೇ ಹೆಚ್ಚು ಅನುಕೂಲಕರ ಎಂಬ ಯೋಚನೆ ಅವರದು. ಕ್ಷೇತ್ರದಲ್ಲಿ ದೀನರು(ಈಡಿಗರು) ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇತರ ಹಿಂದುಳಿದವರು ಹಳಿಯಾಳ, ಜೋಯಿಡ, ಕಾರವಾರ, ಮುಂಡಗೋಡದಲ್ಲಿ ಗಣನೀಯವಾಗಿದ್ದಾರೆ. ಈ ಏರಿಯಾದಲ್ಲಿ “ಆ್ಯಂಟಿ ದೀವರು” ಭಾವನೆಯಿಲ್ಲ ಮುಸ್ಲಿಂ ಮತ್ತು ಹಾಲಕ್ಕಿ ಒಕ್ಕಲಿಗರ ಒಲಿಸಿಕೊಂಡರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಹಿಂದುತ್ವದ ಎದುರು ಅಷ್ಟು ಸರಳವೇನಲ್ಲ. ಆದರೂ ಮಂತ್ರಿ ದೇಶಪಾಂಡೆ ಮಗ ಪ್ರಶಾಂತ್ ದೇಶಪಾಂಡೆಗಿಂತ ಹರಿಪ್ರಸಾದ್ ಬಲಾಢ್ಯ ಕ್ಯಾಂಡಿಡೇಟ್ ಎಂಬುದರಲ್ಲಿ ಅನುಮಾನವಿಲ್ಲ. ದೇಶಪಾಂಡೆಯ ಪಾಳೆಗಾರ ರಾಜಕಾರಣ ವಿರೋಧಪಕ್ಷದ ಜೊತೆಗಿನ ಹೊಂದಾಣಿಕೆ ಹಿಕಮತ್ತು ಮತ್ತಾತನ ಹಿಂಬಾಲಕರ ದಾದಾಗಿರಿಯಿಂದ ಕ್ಷೇತ್ರದಲ್ಲಿನ ಎರಡೂ ದೊಡ್ಡ ಜಾತಿಗಳಾದ ಹವ್ಯಕರು ಮತ್ತು ದೀನರು ದೇಶಪಾಂಡೆ ಸಂತಾನಕ್ಕೆ ವಿರುದ್ಧವಾಗಿವೆ.
ಮ್ಯಾಗಿ ಪುತ್ರರತ್ನ ನಿವೇದಿತಾಆಳ್ವಗೆ ಪಾರ್ಲಿಮೆಂಟ್‍ಗೆ ಸ್ಪರ್ಧಿಸುವ ದಮ್ ಇಲ್ಲ. ದೇಶಪಾಂಡೆ ಪಡೆ ಕಾಲೆಳೆಯುತ್ತದೆ ಮತ್ತು ಅಲ್ಪಸಂಖ್ಯಾತನೆಂಬ ಕಾರ್ಡ್ ಬಿಜೆಪಿ ಹಾಕುತ್ತದೆಂಬ ಆತಂಕ ಅತನದು. ಹಾಗಾಗಿ ಆತ ಎಮ್ಮೆಲ್ಸಿ ಆಗಲು ಕಟಿಪಿಟಿ ನಡೆಸಿದ್ದಾನೆ. ಮ್ಯಾಗಿ-ದೇಶಪಾಂಡೆ ವೈಮನಸ್ಸು ಬಿಟ್ಟು ಬಿಜೆಪಿ ಸೋಲಿಸಬೇಕೆಂಬ ದೃಢನಿರ್ಧಾರ ಮಾಡಿ ತಂತ್ರ ಹೆಣೆದರೆ ಅನಂತ್ಮಾಣಿಯಿಂದ ನತದೃಷ್ಟ ಉತ್ತರ ಕನ್ನಡಕ್ಕೆ ಮೋಕ್ಷ ಕೊಡಿಸುವುದೇನು ಕಷ್ಟವಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿ ಅಥವಾ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಕಾಂಗ್ರೆಸ್ ಹುರಿಯಾಳಾಗಿ ಅಖಾಡಕ್ಕೆ ಇಳಿಸಿದರೆ ಗೆಲುವು ಸುಲಭವಾಗುತ್ತದೆ. ಆದರೆ ಇಂಥ ಸ್ಟ್ರೇಟಜ್ರಿಗಳೆಲ್ಲ ಸ್ವಾರ್ಥಲಾಲಸೆಯ ಮ್ಯಾಗಿ-ದೇಶಪಾಂಡೆಗೆ ಅರ್ಥವಾಗೋದು ಕಷ್ಟವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಕಾರವಾರದ ಖಾಲಿಬರಡು ಪುಢಾರಿ ಆನಂದ ಅಸ್ನೋಟಿಕರ್ ತಾನೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂಬ ಭ್ರಮೆಯಲ್ಲಿ ಅನಂತ್ಮಾಣಿ ಮೇಲೆ ಡೆಡ್ಲಿಯಾಗಿ ಮುಗಿಬಿದ್ದಿದ್ದಾನೆ. ಅನಂತನ ಅನಾಹುತ, ಅಸಹ್ಯ, ಅಧಿಕ ಪ್ರಸಂಗದ ಹೇಳಿಕೆ, ಆನಂದ ಅಸ್ನೋಟಿಕರ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇದೇ ಸದ್ಯಕ್ಕೆ ಕರಾವಳಿಯ ಪೊಲಿಟಿಕಲ್ ಫನ್!!

– ನಹುಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...