Homeಮುಖಪುಟಮುಸ್ಲಿಂ ಮಾರ್ಗದರ್ಶಿಗೆ ಶಿವಾಜಿ ಪ್ರತಿಮೆ ಮುಂದೆ ನಡುಬಗ್ಗಿಸಿ ನೆಲದ ಮೇಲೆ ಮೂಗು ಉಜ್ಜುವಂತೆ ಒತ್ತಾಯಿಸಿದ ಪ್ರವಾಸಿಗರ...

ಮುಸ್ಲಿಂ ಮಾರ್ಗದರ್ಶಿಗೆ ಶಿವಾಜಿ ಪ್ರತಿಮೆ ಮುಂದೆ ನಡುಬಗ್ಗಿಸಿ ನೆಲದ ಮೇಲೆ ಮೂಗು ಉಜ್ಜುವಂತೆ ಒತ್ತಾಯಿಸಿದ ಪ್ರವಾಸಿಗರ ಗುಂಪು

- Advertisement -
- Advertisement -

ಉತ್ತರಪ್ರದೇಶದ ಆಗ್ರಾ ಕೋಟೆಯಲ್ಲಿ ಮಹಾರಾಷ್ಟ್ರದ ಪ್ರವಾಸಿಗರ ಗುಂಪೊಂದು 17ನೇ ಶತಮಾನದಲ್ಲಿ ಆಳಿದ ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮುಂದೆ ಸಗೀರ್ ಬೇಗ್ ಎಂಬ ಸ್ಥಳೀಯ ಮಾರ್ಗದರ್ಶಿಯನ್ನು ನಡುಬಗ್ಗಿಸಿ ನೆಲದ ಮೇಲೆ ಮೂಗು ಉಜ್ಜುವಂತೆ ಒತ್ತಾಯಿಸುವ ಮೂಲಕ ಅವಮಾನಿಸಿದ್ದಾರೆ.

ಬೇಗ್ ಐತಿಹಾಸಿಕ ಮಾಹಿತಿಯನ್ನು ಹಂಚಿಕೊಂಡಾಗ ಉಂಟಾದ ವಾಗ್ವಾದದ ನಂತರ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಇದು ಶಿವಾಜಿ ಕುರಿತು ದಾಖಲಿಸಲ್ಪಟ್ಟ ಐತಿಹಾಸಿಕ ಘಟನೆಯ ಕುರಿತು ಅವರು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಿದ್ದರು. ಬೇಗ್ ಅವರ ಈ ಮಾಹಿತಿಯು ಪ್ರವಾಸಿಗರಲ್ಲಿ ಕೋಪವನ್ನು ಉಂಟುಮಾಡಿತು. ಅವರು ಆಕ್ರಮಣಕಾರಿಯಾಗಿ ಪ್ರತೀಕಾರ ತೀರಿಸಿಕೊಂಡರು, ಮಾರ್ಗದರ್ಶಿಗೆ ಇತಿಹಾಸದಲ್ಲಾದ  “ತಪ್ಪನ್ನು” ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು.

ಫೆಬ್ರವರಿ 26 ರ ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡ ಹಲ್ಲೆಯ ವೀಡಿಯೊದಲ್ಲಿ, ಮಹಾರಾಷ್ಟ್ರದ ಪ್ರವಾಸಿಗರು ಬೇಗ್ ಮೇಲೆ ಕಿರುಚುವುದು, ಆಕ್ರಮಣಕಾರಿಯಾಗಿ ಕೆಳಗೆ ತಳ್ಳುವುದು ಮತ್ತು ಶಿವಾಜಿಯ ಪ್ರತಿಮೆಯ ಮುಂದೆ ಮೂಗು ಉಜ್ಜುವಂತೆ ಒತ್ತಾಯಿಸುವುದು ಕಂಡುಬರುತ್ತದೆ.

ಬೇಗ್ ಅವರನ್ನು ದುಃಖಿತ ಸ್ಥಿತಿಯಲ್ಲಿ ಮತ್ತು ಕ್ಷಮೆಯಾಚಿಸಿದ ನಂತರ ಪ್ರವಾಸಿಗರು ಅವರನ್ನು ಬಿಟ್ಟು ಕಳುಹಿಸಿದರು.

ವಿಶೇಷವಾಗಿ 1681ರಿಂದ 1689ರವರೆಗೆ ಮರಾಠಾ ಸಾಮ್ರಾಜ್ಯದ ಎರಡನೇ ರಾಜನಾಗಿ ಆಳಿದ ಶಿವಾಜಿಯ ಹಿರಿಯ ಮಗ ಛತ್ರಪತಿ ಸಂಭಾಜಿಯ ಜೀವನವನ್ನು ಚಿತ್ರಿಸುವ ಐತಿಹಾಸಿಕ ಸಾಹಸ ಚಲನಚಿತ್ರವಾದ ಛಾವಾ ಬಿಡುಗಡೆಯಾದ ನಂತರ ಮರಾಠಾ ಸಾಮ್ರಾಜ್ಯ ಮತ್ತು ಛತ್ರಪತಿ ಶಿವಾಜಿ ಕುರಿತು ನಿರೂಪಣೆಯ ಬಗ್ಗೆ ಈಗ ಸಾರ್ವಜನಿಕ ಚರ್ಚೆಗಳು ಉತ್ತುಂಗಕ್ಕೇರಿವೆ.

ಶಿವಾಜಿಯನ್ನು ಆಗ್ರಾ ಕೋಟೆಯಲ್ಲಿ ಏಕೆ ಸೆರೆಹಿಡಿಯಲಾಯಿತು?

ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅವರ ಮಗ ಸಂಭಾಜಿಯನ್ನು 1666ರಲ್ಲಿ ಆಗ್ರಾ ಕೋಟೆಯ ದಿವಾನ್-ಎ-ಆಮ್‌ನಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಸೆರೆಹಿಡಿದನು.

ಮರಾಠಾ ಸೈನ್ಯ ಮತ್ತು ಮೊಘಲ್ ಸಾಮ್ರಾಜ್ಯದ ನಡುವಿನ ಯುದ್ಧವನ್ನು ಕೊನೆಗೊಳಿಸಲು “ಪುರಂದರ ಒಪ್ಪಂದ” (1665)ದ ಮೂಲಕ ಶಾಂತಿ ಮತ್ತು ಸಹಯೋಗದ ಮಾತುಕತೆಯ ನೆಪದಲ್ಲಿ ಶಿವಾಜಿ ಮತ್ತು ಸಂಭಾಜಿಯನ್ನು ಮೊಘಲ್ ಆಸ್ಥಾನಕ್ಕೆ ಆಹ್ವಾನಿಸಲಾಯಿತು. ಈ ಒಪ್ಪಂದದಡಿಯಲ್ಲಿ ಶಿವಾಜಿ ಪುರಂದರ ಕೋಟೆ ಸೇರಿದಂತೆ 23 ಕೋಟೆಗಳನ್ನು ಮೊಘಲರಿಗೆ ನೀಡಿದನು.

ಆದಾಗ್ಯೂ ಮೊಘಲ್ ಆಸ್ಥಾನವನ್ನು ತಲುಪಿದ ನಂತರ ಅವರನ್ನು ಅವಮಾನಿಸಲಾಯಿತು. ನಂತರ ಅವರನ್ನು ಬಂಧಿಸಲ್ಪಟ್ಟು ಗೃಹಬಂಧನದಲ್ಲಿರಿಸಲಾಯಿತು.

ಶಿವಾಜಿ ಮಹಾರಾಜ ಮತ್ತು ಸಂಭಾಜಿ ಹಣ್ಣಿನ ಬುಟ್ಟಿಯಲ್ಲಿ ಅಡಗಿಕೊಂಡು ಕೋಟೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಔರಂಗಜೇಬನು ಗಾಬರಿಗೊಂಡು ಹುಡುಕಾಟಕ್ಕೆ ಆದೇಶಿಸಿದನು. ಅವರು ಸನ್ಯಾಸಿಯಂತೆ ವೇಷ ಧರಿಸಿ ಮಹಾರಾಷ್ಟ್ರವನ್ನು ತಲುಪಿದರು.

ಹಿಂದೂ ರಕ್ಷಾ ದಳದಿಂದ ಆಜಾನ್ ವಿರುದ್ಧ ರ್‍ಯಾಲಿ : ಪ್ರಚೋದನಕಾರಿ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...